ಜಿಂಬಾಬ್ವೆ ಪ್ರವಾಸಕ್ಕೆ ಟೀಮ್ ಇಂಡಿಯಾ ಪ್ರಕಟ
15 ಆಟಗಾರರ ‘ಯಂಗ್ ಇಂಡಿಯಾ’ ಆಯ್ಕೆ
ಸರ್ಪ್ರೈಸ್ ಜೊತೆಗೆ ಶಾಕ್ ಕೊಟ್ಟ ಆಯ್ಕೆ ಸಮಿತಿ
ಚುಟುಕು ವಿಶ್ವಕಪ್ ಟೂರ್ನಿಯ ಅಬ್ಬರದ ನಡುವೆ ಜಿಂಬಾಬ್ವೆ ಟೂರ್ಗೆ ಟೀಮ್ ಇಂಡಿಯಾ ಅನೌನ್ಸ್ ಆಗಿದೆ. ಭವಿಷ್ಯದ ಲೆಕ್ಕಾಚಾರ ಹಾಕಿರೋ ಅಜಿತ್ ಅಗರ್ಕರ್ ನೇತೃತ್ವದ ಸೆಲೆಕ್ಷನ್ ಕಮಿಟಿ ‘ಯಂಗ್ ಇಂಡಿಯಾ’ಗೆ ಮಣೆ ಹಾಕಿದೆ. ಶುಭ್ಮನ್ ಗಿಲ್ಗೆ ನಾಯಕತ್ವ ನೀಡಿ ಸರ್ಪ್ರೈಸ್ ಕೊಟ್ಟಿರೋ ಆಯ್ಕೆ ಸಮಿತಿ, ಹಲವರಿಗೆ ಕೊಕ್ ಕೊಟ್ಟು ಬಿಗ್ಶಾಕ್ ನೀಡಿದೆ.
ಟಿ20 ವಿಶ್ವಕಪ್ನ ಅಬ್ಬರದ ನಡುವೆ ಮುಂದಿನ ಸರಣಿಗೆ ಟೀಮ್ ಇಂಡಿಯಾದ ಸಿದ್ಧತೆ ಆರಂಭವಾಗಿದೆ. ಜಿಂಬಾಬ್ವೆ ಪ್ರವಾಸಕ್ಕೆ ಅಳೆದು ತೂಗಿ ಲೆಕ್ಕಾಚಾರ ಹಾಕಿ ಸೆಲೆಕ್ಷನ್ ಕಮಿಟಿ ಟೀಮ್ ಅನೌನ್ಸ್ ಮಾಡಿದೆ. ಜುಲೈ 6ರಿಂದ ಆರಂಭವಾಗಲಿರುವ 5 ಪಂದ್ಯಗಳ ಟಿ20 ಸರಣಿಗೆ 15 ಆಟಗಾರರನ್ನ ಆಯ್ಕೆ ಮಾಡಲಾಗಿದೆ.
ಇದನ್ನೂ ಓದಿ:ಇವರ ಭೇಟಿಯಿಂದ ಜೈಲಿನಲ್ಲಿ ಕೊಂಚ ರಿಲೀಫ್.. ದರ್ಶನ್ ಜೈಲ್ ಡೈರಿ..!
ಸೀನಿಯರ್ಸ್ಗೆ ರೆಸ್ಟ್.. ಯುವಕರಿಗೆ ಚಾನ್ಸ್..!
ನಿರೀಕ್ಷೆಯಂತೆ ಜಿಂಬಾಬ್ವೆ ಪ್ರವಾಸದ ತಂಡದಲ್ಲಿ ಸೀನಿಯರ್ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರಿತ್ ಬೂಮ್ರಾ ಸೇರಿದಂತೆ ಟಿ20 ವಿಶ್ವಕಪ್ ತಂಡದಲ್ಲಿರೋ ಹಿರಿಯ ಆಟಗಾರರಿಗೆಲ್ಲಾ ರೆಸ್ಟ್ ನೀಡಲಾಗಿದೆ. ಯುವ ಆಟಗಾರರಿಗೆ ಮಣೆ ಹಾಕಿರುವ ಸೆಲೆಕ್ಷನ್ ಕಮಿಟಿ ಪಂಜಾಬ್ ಪುತ್ತರ್ ಶುಭ್ಮನ್ ಗಿಲ್ಗೆ ನಾಯಕನ ಪಟ್ಟ ಕಟ್ಟಿದೆ. ಇದ್ರೊಂದಿಗೆ ಶುಭ್ಮನ್ ಗಿಲ್ ಭವಿಷ್ಯದ ನಾಯಕ ಅನ್ನೋ ಚರ್ಚೆ ಶುರುವಾಗಿದೆ.
IPL ಸ್ಟಾರ್ಗಳಿಗೆ ಮಣೆ ಹಾಕಿದ ಸೆಲೆಕ್ಷನ್ ಕಮಿಟಿ
ಶುಭ್ಮನ್ ಗಿಲ್ ಸಾರಥ್ಯದ ತಂಡದಲ್ಲಿ ಟೆರರ್ ಬ್ಯಾಟರ್ಗಳಿಗೆ ಸ್ಥಾನ ಕಲ್ಪಿಸಲಾಗಿದೆ. ಐಪಿಎಲ್ನಲ್ಲಿ ಅಬ್ಬರಿಸಿ ಬೊಬ್ಬಿರಿದ ಆಟಗಾರರಿಗೆ ಮಣೆ ಹಾಕಲಾಗಿದೆ. ಸರ್ರೈಸರ್ಸ್ ಹೈದ್ರಾಬಾದ್ ಪರ ಮಿಂಚಿದ ಅಭಿಶೇಕ್ ಶರ್ಮಾಗೆ ಚೊಚ್ಚಲ ಕರೆ ಬಂದಿದೆ. ಅಭಿಶೇಕ್ ಜೊತೆಗೆ ಹಲ ಡೇರ್ ಡೆವಿಲ್ ಆಟಗಾರರು, ತಂಡದಲ್ಲಿರೋ ಸ್ಪೆಷಲಿಸ್ಟ್ ಬ್ಯಾಟರ್ಗಳಾಗಿದ್ದಾರೆ.
ಇದನ್ನೂ ಓದಿ:ಟಿ20 ವಿಶ್ವಕಪ್ ಸೆಮಿಫೈನಲ್ ಹೇಗಿರುತ್ತೆ..? ಯಾರು ಯಾರ ವಿರುದ್ಧ ಸೆಣಸಾಟ ಮಾಡ್ತಾರೆ..?
ಜಿಂಬಾಬ್ವೆ ಪ್ರವಾಸದ ತಂಡದ ಬ್ಯಾಟರ್ಸ್
ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್ ಜಿಂಬಾಬ್ವೆ ಪ್ರವಾಸದ ತಂಡದಲ್ಲಿರೋ ಅನುಭವಿ ಟಾಪ್ ಆರ್ಡರ್ ಬ್ಯಾಟರ್ಗಳಾಗಿದ್ದಾರೆ. ಇವ್ರ ಜೊತೆಗೆ ಅಭಿಶೇಕ್ ಶರ್ಮಾ, ರಿಯಾನ್ ಪರಾಗ್, ರಿಂಕು ಸಿಂಗ್ ಕೂಡ ಸ್ಪೆಷಲಿಸ್ಟ್ ಬ್ಯಾಟರ್ಗಳಾಗಿ ಸ್ಥಾನ ಪಡೆದುಕೊಂಡಿದ್ದಾರೆ.
ಕೀಪರ್ ಕೋಟಾದಲ್ಲಿ ಸಂಜು, ಜುರೇಲ್ಗೆ ಮಣೆ
ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕೋಟಾದಲ್ಲಿ ವಿಶ್ವಕಪ್ ತಂಡದಲ್ಲಿರೋ ಸಂಜು ಸ್ಯಾಮ್ಸನ್ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸಂಜು ಜೊತೆಗೆ ದೃವ್ ಜುರೇಲ್ಗೆ ಮಣೆ ಹಾಕಲಾಗಿದೆ. ಇನ್ನು, ಸನ್ರೈಸರ್ಸ್ ಹೈದ್ರಾಬಾದ್ ತಂಡದ ಆಲ್ರೌಂಡರ್ ನಿತೀಶ್ ರೆಡ್ಡಿ, ಚೊಚ್ಚಲ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ವಾಷಿಂಗ್ಟರ್ ಸುಂದರ್ ಕಮ್ಬ್ಯಾಕ್ ಮಾಡಿದ್ದು, ಸ್ಪೆಷಲಿಸ್ಟ್ ಸ್ಪಿನ್ನರ್ ಆಗಿ ರವಿ ಬಿಷ್ನೋಯ್ಗೆ ಸೆಲೆಕ್ಷನ್ ಕಮಿಟಿ ಮಣೆ ಹಾಕಿದೆ.
ದನ್ನೂ ಓದಿ:ಡೆಡ್ಲಿ ಸ್ಪೆಲ್ಗೆ ಆಸಿಸ್ ಕಕ್ಕಾಬಿಕ್ಕಿ.. ಆಸ್ಟ್ರೇಲಿಯಾ ಕನಸಿಗೆ ರೋಹಿತ್ ಕೊಳ್ಳಿ ಇಟ್ಟಿದ್ದು ಹೀಗೆ..!
ಸಖತ್ ಬಲಿಷ್ಠವಾಗಿದೆ ವೇಗದ ವಿಭಾಗ
ಜಿಂಬಾಬ್ವೆ ಟೂರ್ಗೆ ಆಯ್ಕೆ ಮಾಡಿರುವ ತಂಡದ ವೇಗದ ವಿಭಾಗ ಸಖತ್ ಸ್ಟ್ರಾಂಗ್ ಆಗಿದೆ. ವಿಶ್ವಕಪ್ ತಂಡದ ರಿಸರ್ವ್ ಪ್ಲೇಯರ್ಗಳಾಗಿದ್ದ ಖಲೀಲ್ ಅಹ್ಮದ್, ಆವೇಶ್ ಖಾನ್ ಜೊತೆಗೆ ಮುಖೇಶ್ ಕುಮಾರ್ ಹಾಗೂ ತುಷಾರ್ ದೇಶಪಾಂಡೆಗೆ ಅವಕಾಶ ನೀಡಲಾಗಿದೆ.
ಸ್ಥಾನದ ನಿರೀಕ್ಷೆಯಲ್ಲಿದ್ದ ಹಲವರಿಗೆ ಶಾಕ್
ಅಳೆದು ತೂಗಿ ಯುವ ಆಟಗಾರರಿಗೆ ಮಣೆ ಹಾಕಿರುವ ಸೆಲೆಕ್ಷನ್ ಕಮಿಟಿ, ಅವಕಾಶದ ನಿರೀಕ್ಷೆಯಲ್ಲಿದ್ದ ಹಲವರಿಗೆ ಶಾಕ್ ನೀಡಿದೆ. ತಂಡದಿಂದ ಇಶಾನ್ ಕಿಶನ್ರನ್ನ ಕೈ ಬಿಟ್ಟಿರೋದು ಸರ್ಪ್ರೈಸ್ ಮೂಡಿಸಿದೆ. ಜೊತೆಗೆ ಸ್ಥಾನದ ನಿರೀಕ್ಷೆಯಲ್ಲಿದ್ದ ತಿಲಕ್ ವರ್ಮಾ, ಹರ್ಷಿತ್ ರಾಣಾ, ರಜತ್ ಪಟಿದಾರ್ಗೆ ಶಾಕ್ ನೀಡಲಾಗಿದೆ. ಹಿರಿಯ ಆಟಗಾರರಿಗೆ ಕೈಬಿಟ್ಟಿರುವ ಬೆನ್ನಲ್ಲೇ ಹೊಸ ಚರ್ಚೆ ಶುರುವಾಗಿದೆ. ಟಿ-20 ವಿಶ್ವಕಪ್ ಬಳಿಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಚುಟುಕು ಕ್ರಿಕೆಟ್ಗೆ ಗುಡ್ಬೈ ಹೇಳ್ತಾರಾ ಎಂಬ ಪ್ರಶ್ನೆ ಎದ್ದಿದೆ. ಜೊತೆಗೆ ಹಾರ್ದಿಕ್ ಪಾಂಡ್ಯ, ಪಂತ್ನಂತಹ ಅನುಭವಿ ಆಟಗಾರರಿಗೂ ಎಚ್ಚರಿಕೆ ನೀಡಲಾಗುತ್ತಿದೆ ಎನ್ನಲಾಗಿದೆ.
ಇದನ್ನೂ ಓದಿ:ಜೈಲಲ್ಲಿ ದರ್ಶನ್ಗೆ ಆತಿಥ್ಯ ನೀಡಲು ಕುಖ್ಯಾತ ರೌಡಿಗಳಿಂದ ಪೈಪೋಟಿ..? ಅಚ್ಚರಿಯ ವಿಷಯ ಬಹಿರಂಗ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಜಿಂಬಾಬ್ವೆ ಪ್ರವಾಸಕ್ಕೆ ಟೀಮ್ ಇಂಡಿಯಾ ಪ್ರಕಟ
15 ಆಟಗಾರರ ‘ಯಂಗ್ ಇಂಡಿಯಾ’ ಆಯ್ಕೆ
ಸರ್ಪ್ರೈಸ್ ಜೊತೆಗೆ ಶಾಕ್ ಕೊಟ್ಟ ಆಯ್ಕೆ ಸಮಿತಿ
ಚುಟುಕು ವಿಶ್ವಕಪ್ ಟೂರ್ನಿಯ ಅಬ್ಬರದ ನಡುವೆ ಜಿಂಬಾಬ್ವೆ ಟೂರ್ಗೆ ಟೀಮ್ ಇಂಡಿಯಾ ಅನೌನ್ಸ್ ಆಗಿದೆ. ಭವಿಷ್ಯದ ಲೆಕ್ಕಾಚಾರ ಹಾಕಿರೋ ಅಜಿತ್ ಅಗರ್ಕರ್ ನೇತೃತ್ವದ ಸೆಲೆಕ್ಷನ್ ಕಮಿಟಿ ‘ಯಂಗ್ ಇಂಡಿಯಾ’ಗೆ ಮಣೆ ಹಾಕಿದೆ. ಶುಭ್ಮನ್ ಗಿಲ್ಗೆ ನಾಯಕತ್ವ ನೀಡಿ ಸರ್ಪ್ರೈಸ್ ಕೊಟ್ಟಿರೋ ಆಯ್ಕೆ ಸಮಿತಿ, ಹಲವರಿಗೆ ಕೊಕ್ ಕೊಟ್ಟು ಬಿಗ್ಶಾಕ್ ನೀಡಿದೆ.
ಟಿ20 ವಿಶ್ವಕಪ್ನ ಅಬ್ಬರದ ನಡುವೆ ಮುಂದಿನ ಸರಣಿಗೆ ಟೀಮ್ ಇಂಡಿಯಾದ ಸಿದ್ಧತೆ ಆರಂಭವಾಗಿದೆ. ಜಿಂಬಾಬ್ವೆ ಪ್ರವಾಸಕ್ಕೆ ಅಳೆದು ತೂಗಿ ಲೆಕ್ಕಾಚಾರ ಹಾಕಿ ಸೆಲೆಕ್ಷನ್ ಕಮಿಟಿ ಟೀಮ್ ಅನೌನ್ಸ್ ಮಾಡಿದೆ. ಜುಲೈ 6ರಿಂದ ಆರಂಭವಾಗಲಿರುವ 5 ಪಂದ್ಯಗಳ ಟಿ20 ಸರಣಿಗೆ 15 ಆಟಗಾರರನ್ನ ಆಯ್ಕೆ ಮಾಡಲಾಗಿದೆ.
ಇದನ್ನೂ ಓದಿ:ಇವರ ಭೇಟಿಯಿಂದ ಜೈಲಿನಲ್ಲಿ ಕೊಂಚ ರಿಲೀಫ್.. ದರ್ಶನ್ ಜೈಲ್ ಡೈರಿ..!
ಸೀನಿಯರ್ಸ್ಗೆ ರೆಸ್ಟ್.. ಯುವಕರಿಗೆ ಚಾನ್ಸ್..!
ನಿರೀಕ್ಷೆಯಂತೆ ಜಿಂಬಾಬ್ವೆ ಪ್ರವಾಸದ ತಂಡದಲ್ಲಿ ಸೀನಿಯರ್ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರಿತ್ ಬೂಮ್ರಾ ಸೇರಿದಂತೆ ಟಿ20 ವಿಶ್ವಕಪ್ ತಂಡದಲ್ಲಿರೋ ಹಿರಿಯ ಆಟಗಾರರಿಗೆಲ್ಲಾ ರೆಸ್ಟ್ ನೀಡಲಾಗಿದೆ. ಯುವ ಆಟಗಾರರಿಗೆ ಮಣೆ ಹಾಕಿರುವ ಸೆಲೆಕ್ಷನ್ ಕಮಿಟಿ ಪಂಜಾಬ್ ಪುತ್ತರ್ ಶುಭ್ಮನ್ ಗಿಲ್ಗೆ ನಾಯಕನ ಪಟ್ಟ ಕಟ್ಟಿದೆ. ಇದ್ರೊಂದಿಗೆ ಶುಭ್ಮನ್ ಗಿಲ್ ಭವಿಷ್ಯದ ನಾಯಕ ಅನ್ನೋ ಚರ್ಚೆ ಶುರುವಾಗಿದೆ.
IPL ಸ್ಟಾರ್ಗಳಿಗೆ ಮಣೆ ಹಾಕಿದ ಸೆಲೆಕ್ಷನ್ ಕಮಿಟಿ
ಶುಭ್ಮನ್ ಗಿಲ್ ಸಾರಥ್ಯದ ತಂಡದಲ್ಲಿ ಟೆರರ್ ಬ್ಯಾಟರ್ಗಳಿಗೆ ಸ್ಥಾನ ಕಲ್ಪಿಸಲಾಗಿದೆ. ಐಪಿಎಲ್ನಲ್ಲಿ ಅಬ್ಬರಿಸಿ ಬೊಬ್ಬಿರಿದ ಆಟಗಾರರಿಗೆ ಮಣೆ ಹಾಕಲಾಗಿದೆ. ಸರ್ರೈಸರ್ಸ್ ಹೈದ್ರಾಬಾದ್ ಪರ ಮಿಂಚಿದ ಅಭಿಶೇಕ್ ಶರ್ಮಾಗೆ ಚೊಚ್ಚಲ ಕರೆ ಬಂದಿದೆ. ಅಭಿಶೇಕ್ ಜೊತೆಗೆ ಹಲ ಡೇರ್ ಡೆವಿಲ್ ಆಟಗಾರರು, ತಂಡದಲ್ಲಿರೋ ಸ್ಪೆಷಲಿಸ್ಟ್ ಬ್ಯಾಟರ್ಗಳಾಗಿದ್ದಾರೆ.
ಇದನ್ನೂ ಓದಿ:ಟಿ20 ವಿಶ್ವಕಪ್ ಸೆಮಿಫೈನಲ್ ಹೇಗಿರುತ್ತೆ..? ಯಾರು ಯಾರ ವಿರುದ್ಧ ಸೆಣಸಾಟ ಮಾಡ್ತಾರೆ..?
ಜಿಂಬಾಬ್ವೆ ಪ್ರವಾಸದ ತಂಡದ ಬ್ಯಾಟರ್ಸ್
ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್ ಜಿಂಬಾಬ್ವೆ ಪ್ರವಾಸದ ತಂಡದಲ್ಲಿರೋ ಅನುಭವಿ ಟಾಪ್ ಆರ್ಡರ್ ಬ್ಯಾಟರ್ಗಳಾಗಿದ್ದಾರೆ. ಇವ್ರ ಜೊತೆಗೆ ಅಭಿಶೇಕ್ ಶರ್ಮಾ, ರಿಯಾನ್ ಪರಾಗ್, ರಿಂಕು ಸಿಂಗ್ ಕೂಡ ಸ್ಪೆಷಲಿಸ್ಟ್ ಬ್ಯಾಟರ್ಗಳಾಗಿ ಸ್ಥಾನ ಪಡೆದುಕೊಂಡಿದ್ದಾರೆ.
ಕೀಪರ್ ಕೋಟಾದಲ್ಲಿ ಸಂಜು, ಜುರೇಲ್ಗೆ ಮಣೆ
ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕೋಟಾದಲ್ಲಿ ವಿಶ್ವಕಪ್ ತಂಡದಲ್ಲಿರೋ ಸಂಜು ಸ್ಯಾಮ್ಸನ್ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸಂಜು ಜೊತೆಗೆ ದೃವ್ ಜುರೇಲ್ಗೆ ಮಣೆ ಹಾಕಲಾಗಿದೆ. ಇನ್ನು, ಸನ್ರೈಸರ್ಸ್ ಹೈದ್ರಾಬಾದ್ ತಂಡದ ಆಲ್ರೌಂಡರ್ ನಿತೀಶ್ ರೆಡ್ಡಿ, ಚೊಚ್ಚಲ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ವಾಷಿಂಗ್ಟರ್ ಸುಂದರ್ ಕಮ್ಬ್ಯಾಕ್ ಮಾಡಿದ್ದು, ಸ್ಪೆಷಲಿಸ್ಟ್ ಸ್ಪಿನ್ನರ್ ಆಗಿ ರವಿ ಬಿಷ್ನೋಯ್ಗೆ ಸೆಲೆಕ್ಷನ್ ಕಮಿಟಿ ಮಣೆ ಹಾಕಿದೆ.
ದನ್ನೂ ಓದಿ:ಡೆಡ್ಲಿ ಸ್ಪೆಲ್ಗೆ ಆಸಿಸ್ ಕಕ್ಕಾಬಿಕ್ಕಿ.. ಆಸ್ಟ್ರೇಲಿಯಾ ಕನಸಿಗೆ ರೋಹಿತ್ ಕೊಳ್ಳಿ ಇಟ್ಟಿದ್ದು ಹೀಗೆ..!
ಸಖತ್ ಬಲಿಷ್ಠವಾಗಿದೆ ವೇಗದ ವಿಭಾಗ
ಜಿಂಬಾಬ್ವೆ ಟೂರ್ಗೆ ಆಯ್ಕೆ ಮಾಡಿರುವ ತಂಡದ ವೇಗದ ವಿಭಾಗ ಸಖತ್ ಸ್ಟ್ರಾಂಗ್ ಆಗಿದೆ. ವಿಶ್ವಕಪ್ ತಂಡದ ರಿಸರ್ವ್ ಪ್ಲೇಯರ್ಗಳಾಗಿದ್ದ ಖಲೀಲ್ ಅಹ್ಮದ್, ಆವೇಶ್ ಖಾನ್ ಜೊತೆಗೆ ಮುಖೇಶ್ ಕುಮಾರ್ ಹಾಗೂ ತುಷಾರ್ ದೇಶಪಾಂಡೆಗೆ ಅವಕಾಶ ನೀಡಲಾಗಿದೆ.
ಸ್ಥಾನದ ನಿರೀಕ್ಷೆಯಲ್ಲಿದ್ದ ಹಲವರಿಗೆ ಶಾಕ್
ಅಳೆದು ತೂಗಿ ಯುವ ಆಟಗಾರರಿಗೆ ಮಣೆ ಹಾಕಿರುವ ಸೆಲೆಕ್ಷನ್ ಕಮಿಟಿ, ಅವಕಾಶದ ನಿರೀಕ್ಷೆಯಲ್ಲಿದ್ದ ಹಲವರಿಗೆ ಶಾಕ್ ನೀಡಿದೆ. ತಂಡದಿಂದ ಇಶಾನ್ ಕಿಶನ್ರನ್ನ ಕೈ ಬಿಟ್ಟಿರೋದು ಸರ್ಪ್ರೈಸ್ ಮೂಡಿಸಿದೆ. ಜೊತೆಗೆ ಸ್ಥಾನದ ನಿರೀಕ್ಷೆಯಲ್ಲಿದ್ದ ತಿಲಕ್ ವರ್ಮಾ, ಹರ್ಷಿತ್ ರಾಣಾ, ರಜತ್ ಪಟಿದಾರ್ಗೆ ಶಾಕ್ ನೀಡಲಾಗಿದೆ. ಹಿರಿಯ ಆಟಗಾರರಿಗೆ ಕೈಬಿಟ್ಟಿರುವ ಬೆನ್ನಲ್ಲೇ ಹೊಸ ಚರ್ಚೆ ಶುರುವಾಗಿದೆ. ಟಿ-20 ವಿಶ್ವಕಪ್ ಬಳಿಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಚುಟುಕು ಕ್ರಿಕೆಟ್ಗೆ ಗುಡ್ಬೈ ಹೇಳ್ತಾರಾ ಎಂಬ ಪ್ರಶ್ನೆ ಎದ್ದಿದೆ. ಜೊತೆಗೆ ಹಾರ್ದಿಕ್ ಪಾಂಡ್ಯ, ಪಂತ್ನಂತಹ ಅನುಭವಿ ಆಟಗಾರರಿಗೂ ಎಚ್ಚರಿಕೆ ನೀಡಲಾಗುತ್ತಿದೆ ಎನ್ನಲಾಗಿದೆ.
ಇದನ್ನೂ ಓದಿ:ಜೈಲಲ್ಲಿ ದರ್ಶನ್ಗೆ ಆತಿಥ್ಯ ನೀಡಲು ಕುಖ್ಯಾತ ರೌಡಿಗಳಿಂದ ಪೈಪೋಟಿ..? ಅಚ್ಚರಿಯ ವಿಷಯ ಬಹಿರಂಗ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್