ಸರ್ಕಾರದ ಅನುದಾನಗಳು ಸಹಾಯಕ್ಕೆ ಅಡ್ಡಿಯಾಗಿ ಬೇಸರವಾಗಬಹುದು
ಬುದ್ಧಿವಂತಿಕೆಯ ದೃಷ್ಟಿಯಿಂದ ಸವಾಲುಗಳನ್ನು ಎದುರಿಸಲು ಸಿದ್ಧರಾಗುತ್ತೀರಿ
ನಿಮ್ಮ ಮಕ್ಕಳ ಶೈಕ್ಷಣಿಕ ಖರ್ಚು ಮನಸ್ಸಿಗೆ ಬೇಸರ ತರಬಹುದು, ತಾಳ್ಮೆ ಇರಲಿ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಜೇಷ್ಠ ಮಾಸ, ಕೃಷ್ಣ ಪಕ್ಷ, ಚತುರ್ದಶಿ ತಿಥಿ, ಮೃಗಶಿರಾ ನಕ್ಷತ್ರ ರಾಹುಕಾಲ ಶುಕ್ರವಾರ ಬೆಳಗ್ಗೆ 10:30 ರಿಂದ 12:00 ರವರೆಗೆ ಇರಲಿದೆ.
ಮೇಷ ರಾಶಿ
- ನಿಮ್ಮ ಕಾರ್ಯಕ್ಷೇತ್ರದಲ್ಲಿ ಹೆಚ್ಚು ತಲ್ಲೀನತೆ ಇರುತ್ತದೆ
- ವಿದ್ಯಾರ್ಥಿಗಳಿಗೆ ಈ ದಿನ ಎಲ್ಲಿಲ್ಲದ ಕಾಳಜಿ ಕಾಣಬಹುದು
- ವ್ಯವಹಾರದ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತದೆ
- ಕೋಪ ಮತ್ತು ಆತುರದ ನಿರ್ಧಾರ ಬೇಡ
- ಬೇರೆಯವರ ಮೇಲಿನ ಕೋಪಕ್ಕಾಗಿ ಯಾವ ವ್ಯವಹಾರದಲ್ಲಿಯೂ ಮಾತಾಡಬಾರದು
- ಪ್ರೇಮಿಗಳಿಗೆ ಶುಭವಿದೆ ಸದುಪಯೋಗ ಮಾಡಿಕೊಳ್ಳಿ
ವೃಷಭ
- ಆಲಸ್ಯ ಸ್ವಭಾವವನ್ನು ದೂರ ಮಾಡಿ ಚಟುವಟಿಕೆಯಿಂದಿರಿ
- ಆಲಸ್ಯವೇ ರೋಗವಾಗಿ ಪರಿಣಮಿಸಬಹುದು
- ಪರಿಶ್ರಮ ಪಡುವವರಿಗೆ ಈ ದಿನ ಶುಭವಿದೆ
- ವ್ಯವಹಾರದಲ್ಲಿ ದೂರದೃಷ್ಟಿಯಿಂದ ಅಲ್ಪ ಲಾಭವಿದೆ
- ಉತ್ತಮ ಆಹಾರ ಸೇವಿಸಬಹುದು
- ಮಕ್ಕಳು ಶಾಲೆಗೆ ಹೋಗಲು ನಿರ್ಲಕ್ಷಿಸಬಹುದು
- ಇಷ್ಟದೇವತಾ ಆರಾಧನೆ ಮಾಡಿ
ಮಿಥುನ
- ತುಂಬಾ ಬೌದ್ಧಿಕವಾಗಿ, ಪ್ರೌಢವಾಗಿ ಯೋಚಿಸಿ ನಿರ್ಧಾರ ಮಾಡುತ್ತೀರಿ
- ಪಿತ್ರಾರ್ಜಿತ ಆಸ್ತಿಯ ಪಾಲಿನಿಂದ ಲಾಭ ದೊರೆಯಬಹುದು
- ನಿಮ್ಮೆಲ್ಲ ಕೆಲಸಗಳು ಸಕಾಲದಲ್ಲಿ ಪೂರ್ಣವಾಗಲಿವೆ
- ವ್ಯವಹಾರಿಕವಾಗಿ ಧನಾತ್ಮಕ ಬದಲಾವಣೆಯಾಗಲಿದೆ
- ಮನೆಯವರ, ಸ್ನೇಹಿತರ ಪ್ರೋತ್ಸಾಹದಿಂದ ಉತ್ಸಾಹಿಗಳಾಗುತ್ತೀರಿ
- ತಾಯಿಯವರ ಬಗ್ಗೆ ಸ್ವಲ್ಪ ಎಚ್ಚರಿಕೆವಹಿಸಿ ತೊಂದರೆಯಾಗುವ ಸಾಧ್ಯತೆಯಿದೆ
- ಅಮೃತ ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ
ಕಟಕ
- ತಿದ್ದಲು ಸಾಧ್ಯವಾಗದ ಸ್ನೇಹಿತರು ನಿಮ್ಮ ಸಂಪರ್ಕದಲ್ಲಿರುವುದರಿಂದ ತೊಂದರೆಯಾಗಬಹುದು
- ಕುಟುಂಬದಲ್ಲಿ ವಿನಾಕಾರಣ ಆತಂಕಗಳು ಸೃಷ್ಟಿಯಾಗಬಹುದು
- ನಿಮ್ಮ ನಡವಳಿಕೆಯಿಂದ ಪೊಲೀಸ್, ಕೋರ್ಟ್ ವ್ಯವಹಾರ ಸಂಭವ
- ಹಣ ಅಥವಾ ಯಾವುದೋ ನಿರೀಕ್ಷೆಯಿಂದ ದುರ್ಮಾರ್ಗ ಅನುಸರಿಸಬಾರದು
- ಹಣಕ್ಕಿಂತ ಮರ್ಯಾದೆ ಮುಖ್ಯ ಎಂದು ಅರಿಯಬೇಕಾದ ದಿನ
- ವಿದ್ಯಾರ್ಥಿಗಳಿಗೆ ಕಳ್ಳತನದ ಆರೋಪ ಬರಬಹುದು
- ದುರ್ಗಾಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ
ಸಿಂಹ
- ಕುಟುಂಬದಲ್ಲಿ ಹಬ್ಬದ ವಾತಾವರಣ
- ಕೆಲಸ ಕಾರ್ಯಗಳೆಲ್ಲ ಸಕಾಲಕ್ಕೆ ಪೂರ್ಣವಾಗಿ ಸಮಾಧಾನ ಇರುತ್ತದೆ
- ಕುಟುಂಬದಲ್ಲಿ ಅನ್ಯೋನ್ಯತೆ ತನ್ನಿಂದ ತಾನೇ ವೃದ್ಧಿಯಾಗುತ್ತದೆ
- ಹೊಸ ಯೋಜನೆಗಳಿಗೆ ಮಾತುಕತೆ ನಡೆಯುತ್ತವೆ
- ವಿಹಾರಕ್ಕಾಗಿ ಹೊರಗೆ ಹೋಗುವ ಸಾಧ್ಯತೆಗಳಿರುತ್ತವೆ ಪ್ರಾಣಿಗಳಿಂದ ಎಚ್ಚರಿಕೆ
- ಪುಬ್ಬಾ ನಕ್ಷತ್ರದವರಿಗೆ ಶನಿದೆಸೆ, ಶನಿಭಕ್ತಿ ನಡೆಯುತ್ತಿದ್ದರೆ ತೊಂದರೆಯಿದೆ
- ಈಶ್ವರನ ಆರಾಧನೆ ಮಾಡಿ
ಕನ್ಯಾ
- ನೀವು ತಪ್ಪು ಮಾಡಿರುವುದಿಲ್ಲ ಆದರೆ ನಿಮ್ಮ ಮಾತಿನ ಶೈಲಿ ಅವಮಾನಿಸುತ್ತದೆ
- ವ್ಯಾಪಾರ, ವ್ಯವಹಾರದಲ್ಲಿ ಜಾಗರೂಕರಾಗಿರಿ
- ಖರೀದಿಸಿದ ಪದಾರ್ಥವನ್ನು ಮಾತಿನಿಂದ ಬಿಟ್ಟು ಬರುವ ಸಾಧ್ಯತೆಗಳು ಇರುತ್ತವೆ
- ವಾಹನಕ್ಕೆ ಹಾನಿ ಇದೆ ಎಚ್ಚರಿಕೆ
- ವಿನಾಕಾರಣ ವಾದ-ವಿವಾದಕ್ಕೆ ಕಾರಣರಾಗುತ್ತೀರಿ
- ಬಿಡುವಿನ ಸಮಯದಲ್ಲಿ ಯಾವುದಾದರೂ ಉತ್ತಮ ಪುಸ್ತಕಗಳನ್ನು ಓದಿ
- ಬೇರೆಯವರ ವಿಚಾರ ಪ್ರಸ್ತಾಪ ಮಾಡದಿರಿ
- ಮಹಾವಿಷ್ಣುವಿನ ಪ್ರಾರ್ಥನೆ ಮಾಡಿ
ತುಲಾ
- ಕೇಳಿರದ ಧಾರ್ಮಿಕ ಕ್ಷೇತ್ರಗಳ ವೈಶಿಷ್ಟ ನಿಮ್ಮ ಮನಸ್ಸಿನ ಮೇಲೆ ಪ್ರಭಾವ ಬೀರಬಹುದು
- ಕೆಲಸದಲ್ಲಿ ಅರ್ಧ ಮನಸ್ಸು ಆಲಸ್ಯ ಕಾಡುತ್ತದೆ
- ವಿದ್ಯಾರ್ಥಿಗಳಿಗೆ ತಪ್ಪಿನಿಂದ ಅವಮಾನ ಸರಿಪಡಿಸಿಕೊಳ್ಳುವ ಪ್ರಯತ್ನ ಮಾಡಿ
- ಮನೆಯ ಅಲಂಕಾರ ವಸ್ತು ಕರೆದ ವಿಚಾರ ವಾಗ್ವಾದ ವಾಗಬಹುದು
- ನಿಮ್ಮ ಗುರಿಯ ಬಗ್ಗೆ ಹೆಚ್ಚು ಗಮನ ಹರಿಸಿ
- ಕಾನೂನಿಗೆ ವಿರುದ್ಧವಾದ ಯಾವುದೇ ಕೆಲಸದಲ್ಲಿ ಜಯ ಇರುವುದಿಲ್ಲ, ದಂಡ ಕಟ್ಟುವ ಸಾಧ್ಯತೆಯಿದೆ
- ಗಣಪತಿಯನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ
- ಪ್ರಪಂಚದ ಜೊತೆಯಲ್ಲಿ ನಾವು ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ ಎಂಬ ಹತಾಶೆ ಕಾಡಬಹುದು
- ವಿದ್ಯಾರ್ಥಿಗಳಿಗೆ ಅಧ್ಯಯನದ ದೃಷ್ಟಿಯಿಂದ ಗೊಂದಲ
- ಮಕ್ಕಳ ಶೈಕ್ಷಣಿಕ ಖರ್ಚು ಮನಸ್ಸಿಗೆ ಬೇಸರ ತರಬಹುದು ತಾಳ್ಮೆ ಇರಲಿ
- ಬೇರೆಯವರ ಕೆಲಸಗಳಲ್ಲಿ ಹಸ್ತಕ್ಷೇಪ ಬೇಡ
- ನಿಮ್ಮ ಅನುಮಾನಾಸ್ಪದ ನಡವಳಿಕೆಯಿಂದ ಪರಿಚಿತಸ್ಥರು ನಿಮ್ಮ ಮೇಲೆ ಸಿಟ್ಟಿಗೇಳಬಹುದು ಗಮನಿಸಿ
- ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಧನುಸ್ಸು
- ಮನೆಯಲ್ಲಿ, ಕಾರ್ಯಕ್ಷೇತ್ರದಲ್ಲಿ ಹಲವರು ನಿಮ್ಮ ಮೇಲೆ ಇಂದು ಅವಲಂಬಿತರಾಗುತ್ತಾರೆ
- ವಿದೇಶ ಪ್ರಯಾಣದ ಸೂಚನೆಯಿದೆ
- ಬುದ್ಧಿವಂತಿಕೆಯ ದೃಷ್ಟಿಯಿಂದ ಸವಾಲುಗಳನ್ನು ಎದುರಿಸಲು ಸಿದ್ಧರಾಗುತ್ತೀರಿ
- ನಿಮ್ಮ ಕೆಲಸಗಳನ್ನ ವ್ಯವಸ್ಥಿತವಾಗಿ ನಿಭಾಯಿಸಲು ನೀವು ಶಕ್ತರು ಮನಸ್ಸು ಮಾಡಬೇಕು
- ಬೇರೆಯವರ ಮಾತಿಗೆ, ಶಾಪಕ್ಕೆ ಗುರಿಯಾಗಬಹುದು
- ಕರ್ತವ್ಯ ಪ್ರಜ್ಞೆ ಎಲ್ಲವನ್ನು ದೂರ ಮಾಡುತ್ತದೆ
- ನರಸಿಂಹನನ್ನು ಪ್ರಾರ್ಥನೆ ಮಾಡಿ
ಮಕರ
- ವಿದ್ಯಾರ್ಥಿಗಳಿಗೆ ಹೊರ ಪ್ರಪಂಚದ ಆಕರ್ಷಣೆ ತೊಂದರೆಗೆ ಕಾರಣವಾಗುತ್ತದೆ
- ಓದು, ಬರಹಕ್ಕೆ ಈ ದಿನ ವಿಶ್ರಾಂತಿ ಆದರೆ ತೊಂದರೆಯಾಗಬಹುದು
- ಸ್ತ್ರೀಯರಿಗೆ ಆರೋಗ್ಯ ಸಮಸ್ಯೆ ಕಾಡಬಹುದು
- ಸರಕಾರದ ಅನುದಾನಗಳು ಸಹಾಯಕ್ಕೆ ಅಡ್ಡಿಯಾಗಿ ಬೇಸರವಾಗಬಹುದು
- ಸಮೂಹ ಸಹಕಾರದಿಂದ ಮಾತ್ರ ನಿಮ್ಮ ಪರಿಶ್ರಮಕ್ಕೆ ಫಲವಿದೆ
- ಅನುಪಯುಕ್ತ ಮಾತು, ಸಭೆ ಯಾವುದೂ ಉಪಯೋಗವಿಲ್ಲ
- ಗುರು ದತ್ತಾತ್ರೇಯರನ್ನು ಪ್ರಾರ್ಥನೆ ಮಾಡಿ
ಕುಂಭ
- ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ ನಿರ್ವಹಿಸುವವರಿಗೆ ಉದ್ಯೋಗ ಭೀತಿ
- ಭವಿಷ್ಯದಲ್ಲಿ ನೌಕರಿಯ ಅರಿವಿಲ್ಲದ ನೀವು ಇಂದು ಹೆಚ್ಚು ಖರ್ಚು ಮಾಡುತ್ತೀರಿ
- ಹಣದ ಸಮಸ್ಯೆ ಎದುರಲ್ಲಿ ಕಾಣದೆ ಮುಂದೆ ಕಷ್ಟವಾಗಬಹುದು
- ಹಲವು ಕಾರ್ಯಗಳ ಪ್ರಾರಂಭ ಮುಂಗಡ ಹಣ ನೀಡುವುದು ಇತ್ಯಾದಿಗಳಿಂದ ತೊಂದರೆಯಿದೆ
- ಧಾರ್ಮಿಕ ಕಾರ್ಯಗಳಲ್ಲಿ ನಂಬಿಕೆ ಇರುವುದಿಲ್ಲ
- ನಿಮ್ಮ ತಪ್ಪಿನ ಅರಿವು ಈ ದಿನ ನಿಮಗಾಗುವುದಿಲ್ಲ ಗಮನಿಸಿ
- ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ
ಮೀನ
- ರಾಜಕೀಯದಲ್ಲಿ ಪಳಗಿರುವವರಿಗೆ ಅಪಮಾನವಾಗಬಹುದು
- ಹೊಸಬರ ಪರ ಮಾತನಾಡಲು ಹೋಗಿ ಮೇಲಿನವರ ಅವಕೃಪೆಗೆ ಪಾತ್ರರಾಗಬಹುದು
- ಭೂ ಸಂಬಂಧವಾದ ವ್ಯವಹಾರ ಕೈಗೂಡುವುದಿಲ್ಲ ಜಗಳ ಸಾಧ್ಯತೆ
- ಹೆಣ್ಣು ಮಕ್ಕಳಗೆ ಪಿತ್ರಾರ್ಜಿತ ಆಸ್ತಿ ಲಭ್ಯವಾಗಬಹುದು
- ಮಕ್ಕಳ ಭವಿಷ್ಯ ಉಜ್ವಲವಾಗುವ ಹಲವು ಸೂಚನೆಗಳಿವೆ
- ಮಾನಸಿಕ ಸಮಾಧಾನವಿರಲಿ, ಜಗಳ ಗಲಭೆಗಳಲ್ಲಿ ಭಾಗಿಯಾಗಬೇಡಿ
- ಶ್ರೀರಾಮಚಂದ್ರನನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ