ನಿನ್ನ ಹೆಸರಿಗೆ ಚ್ಯುತಿ ಬರಬಹುದೆಂದು ಫೆಬ್ರವರಿಯಲ್ಲೇ ದರ್ಶನ್ಗೆ ಹೇಳಿದ್ದೆ
ಚಾಲೆಂಜಿಂಗ್ ಸ್ಟಾರ್ಗೆ ಯಾವಾಗಿನಿಂದ ರಾಜಾಯೋಗ ಕೂಡಿ ಬರುತ್ತದೆ.?
ಅವರು 2 ವಾರ ಮಾತ್ರ ಎಳ್ಳಿನ ದೀಪ ಹಚ್ಚಿ ಆ ಮೇಲೆ ಸುಮ್ಮನಾಗಿದ್ದಾರೆ
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರ ಸುತ್ತ ಸದ್ಯ ಸಮಸ್ಯೆಗಳ ಸರಮಾಲೆಗಳೆ ಇವೆ. ಯಾವ ದಿಕ್ಕಿನಲ್ಲೂ ಹುಡುಕಿದರೂ ಪೊಲೀಸರಿಗೆ ಹತ್ಯೆಯ ಬಗ್ಗೆ ಒಂದಲ್ಲ, ಒಂದು ಸಾಕ್ಷಿ ಸಿಗುತ್ತಿದೆ. ಕೊಲೆ ಕೇಸ್ನಲ್ಲಿ ಜೈಲು ಪಾಲಾಗಿದ್ದಂತು ಅವರಿಗೆ, ಅವರ ಕುಟುಂಬಕ್ಕೆ ತೀವ್ರ ಬೇಸರ ತರಿಸಿದೆ. ಆದರೆ ಇದರ ಬೆನ್ನಲ್ಲೇ ನಟ ದರ್ಶನ್ಗೆ ಶನಿ, ರಾಹು ಕಾಟವಿದೆ ಎಂದು ಬಂಡೆ ಮಹಾಕಾಳಿ ದೇವಾಲಯದ ಪ್ರಧಾನ ಅರ್ಚಕರು ಹೇಳಿದ್ದಾರೆ.
ಇದನ್ನೂ ಓದಿ: ಧೋನಿಯ 100 ಅಡಿ ಕಟೌಟ್.. ಪವರ್ ಸ್ಟಾರ್ ಜೊತೆ ಇರೋ ಪೋಸ್ಟರ್ ಅಂಟಿಸಿ ಸಂಭ್ರಮ
ಈ ಸಂಬಂಧ ನ್ಯೂಸ್ಫಸ್ಟ್ ಜೊತೆ ಮಾತನಾಡಿದ ಬಂಡೆ ಮಹಾಕಾಳಿ ದೇವಾಲಯದ ಪ್ರಧಾನ ಅರ್ಚಕ, ದರ್ಶನ್ ಅವರಿಗೆ ಸದ್ಯ ಶನಿ ಕಾಟವಿದೆ. ಶ್ರವಣ ನಕ್ಷತ್ರ, ಮಕರ ರಾಶಿಗೆ ರಾಹು-ಶನಿಯ ಒಂದೇ ಬಾರಿಗೆ ಕಾಟ ಕೊಡುತ್ತಿದ್ದಾರೆ. 2025ರ ನವೆಂಬರ್ ನಂತರ ಅವರಿಗೆ ರಾಜಯೋಗ ಲಭಿಸುತ್ತದೆ. ಫೆಬ್ರವರಿಯಲ್ಲೇ ದರ್ಶನ್ ಅಣ್ಣನಿಗೆ ಈ ಬಗ್ಗೆ ಪೂರ್ಣ ಮಾಹಿತಿ ತಿಳಿಸಿದ್ದೆ. ಗಂಡಾಂತರ ಇದೆ ಅಂಥ ಹೇಳಿದ್ದೆ ಎಂದು ದರ್ಶನ್ ಆಪ್ತ ಸ್ನೇಹಿತ ಪ್ರಧಾನ ಅರ್ಚಕ ಹೇಳಿದ್ದಾರೆ.
ಇದನ್ನೂ ಓದಿ: ಇಬ್ಬರು ಯೋಧರು ಹುತಾತ್ಮ.. ಗಡಿಯಲ್ಲಿ ಮತ್ತೆ ಬಾಲ ಬಿಚ್ಚಿದ್ದ ನಾಲ್ವರು ಉಗ್ರರು ಫಿನಿಶ್
ದರ್ಶನ್ ಅವರದ್ದು ಶ್ರವಣ ನಕ್ಷತ್ರ, ಮಕರ ರಾಶಿಯಾಗಿದೆ. ಸದ್ಯ ಈ ರಾಶಿಗೆ ಈಗ ರಾಹು ಮತ್ತು ಶನಿ ಕಾಟ ಇದೆ. ಪ್ರತಿವಾರ ಎಳ್ಳಿನ ದೀಪ ಹಚ್ಚೋಕೆ ಅವರಿಗೆ ಹೇಳಿದ್ದೆ. ನಾನು ಹೇಳಿದ್ದನ್ನು ಅವರು 2 ವಾರ ಮಾತ್ರ ಮಾಡಿ ಆ ನಂತರ ಸುಮ್ಮನಾಗಿಬಿಟ್ಟಿದ್ದಾರೆ. ಹೀಗೆ ಮಾಡಬಾರದಿತ್ತು. ಹುಷಾರಾಗಿ ಇರು, ಈ ಸಂದರ್ಭದಲ್ಲಿ ನಿನ್ನ ಹೆಸರಿಗೆ ಚ್ಯುತಿ ಬರುವ, ಆಸ್ಪತ್ರೆ ಸೇರುವ ಸಾಧ್ಯತೆಗಳೆ ಜಾಸ್ತಿ ಇವೆ ಫೆಬ್ರವರಿಯಲ್ಲಿ ಹೇಳಿದ್ದೆ. ಎಚ್ಚರಿಕೆಯಿಂದ ಇರಬೇಕು ಅಂಥ ತಿಳಿಸಿದ್ದೆ. ಇದೇ ರೀತಿ ರಾಜ ವಿಕ್ರಮಾದಿತ್ಯನಿಗೆ ಸಮಸ್ಯೆ ಕಾಡಿತ್ತು. ಈಗ ದರ್ಶನ್ಗೂ ಅಂತಹದ್ದೆ ಪರಿಸ್ಥಿತಿ ಬಂದಿದೆ ಎಂದು ಅರ್ಚಕರು ಮಾಹಿತಿ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿನ್ನ ಹೆಸರಿಗೆ ಚ್ಯುತಿ ಬರಬಹುದೆಂದು ಫೆಬ್ರವರಿಯಲ್ಲೇ ದರ್ಶನ್ಗೆ ಹೇಳಿದ್ದೆ
ಚಾಲೆಂಜಿಂಗ್ ಸ್ಟಾರ್ಗೆ ಯಾವಾಗಿನಿಂದ ರಾಜಾಯೋಗ ಕೂಡಿ ಬರುತ್ತದೆ.?
ಅವರು 2 ವಾರ ಮಾತ್ರ ಎಳ್ಳಿನ ದೀಪ ಹಚ್ಚಿ ಆ ಮೇಲೆ ಸುಮ್ಮನಾಗಿದ್ದಾರೆ
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರ ಸುತ್ತ ಸದ್ಯ ಸಮಸ್ಯೆಗಳ ಸರಮಾಲೆಗಳೆ ಇವೆ. ಯಾವ ದಿಕ್ಕಿನಲ್ಲೂ ಹುಡುಕಿದರೂ ಪೊಲೀಸರಿಗೆ ಹತ್ಯೆಯ ಬಗ್ಗೆ ಒಂದಲ್ಲ, ಒಂದು ಸಾಕ್ಷಿ ಸಿಗುತ್ತಿದೆ. ಕೊಲೆ ಕೇಸ್ನಲ್ಲಿ ಜೈಲು ಪಾಲಾಗಿದ್ದಂತು ಅವರಿಗೆ, ಅವರ ಕುಟುಂಬಕ್ಕೆ ತೀವ್ರ ಬೇಸರ ತರಿಸಿದೆ. ಆದರೆ ಇದರ ಬೆನ್ನಲ್ಲೇ ನಟ ದರ್ಶನ್ಗೆ ಶನಿ, ರಾಹು ಕಾಟವಿದೆ ಎಂದು ಬಂಡೆ ಮಹಾಕಾಳಿ ದೇವಾಲಯದ ಪ್ರಧಾನ ಅರ್ಚಕರು ಹೇಳಿದ್ದಾರೆ.
ಇದನ್ನೂ ಓದಿ: ಧೋನಿಯ 100 ಅಡಿ ಕಟೌಟ್.. ಪವರ್ ಸ್ಟಾರ್ ಜೊತೆ ಇರೋ ಪೋಸ್ಟರ್ ಅಂಟಿಸಿ ಸಂಭ್ರಮ
ಈ ಸಂಬಂಧ ನ್ಯೂಸ್ಫಸ್ಟ್ ಜೊತೆ ಮಾತನಾಡಿದ ಬಂಡೆ ಮಹಾಕಾಳಿ ದೇವಾಲಯದ ಪ್ರಧಾನ ಅರ್ಚಕ, ದರ್ಶನ್ ಅವರಿಗೆ ಸದ್ಯ ಶನಿ ಕಾಟವಿದೆ. ಶ್ರವಣ ನಕ್ಷತ್ರ, ಮಕರ ರಾಶಿಗೆ ರಾಹು-ಶನಿಯ ಒಂದೇ ಬಾರಿಗೆ ಕಾಟ ಕೊಡುತ್ತಿದ್ದಾರೆ. 2025ರ ನವೆಂಬರ್ ನಂತರ ಅವರಿಗೆ ರಾಜಯೋಗ ಲಭಿಸುತ್ತದೆ. ಫೆಬ್ರವರಿಯಲ್ಲೇ ದರ್ಶನ್ ಅಣ್ಣನಿಗೆ ಈ ಬಗ್ಗೆ ಪೂರ್ಣ ಮಾಹಿತಿ ತಿಳಿಸಿದ್ದೆ. ಗಂಡಾಂತರ ಇದೆ ಅಂಥ ಹೇಳಿದ್ದೆ ಎಂದು ದರ್ಶನ್ ಆಪ್ತ ಸ್ನೇಹಿತ ಪ್ರಧಾನ ಅರ್ಚಕ ಹೇಳಿದ್ದಾರೆ.
ಇದನ್ನೂ ಓದಿ: ಇಬ್ಬರು ಯೋಧರು ಹುತಾತ್ಮ.. ಗಡಿಯಲ್ಲಿ ಮತ್ತೆ ಬಾಲ ಬಿಚ್ಚಿದ್ದ ನಾಲ್ವರು ಉಗ್ರರು ಫಿನಿಶ್
ದರ್ಶನ್ ಅವರದ್ದು ಶ್ರವಣ ನಕ್ಷತ್ರ, ಮಕರ ರಾಶಿಯಾಗಿದೆ. ಸದ್ಯ ಈ ರಾಶಿಗೆ ಈಗ ರಾಹು ಮತ್ತು ಶನಿ ಕಾಟ ಇದೆ. ಪ್ರತಿವಾರ ಎಳ್ಳಿನ ದೀಪ ಹಚ್ಚೋಕೆ ಅವರಿಗೆ ಹೇಳಿದ್ದೆ. ನಾನು ಹೇಳಿದ್ದನ್ನು ಅವರು 2 ವಾರ ಮಾತ್ರ ಮಾಡಿ ಆ ನಂತರ ಸುಮ್ಮನಾಗಿಬಿಟ್ಟಿದ್ದಾರೆ. ಹೀಗೆ ಮಾಡಬಾರದಿತ್ತು. ಹುಷಾರಾಗಿ ಇರು, ಈ ಸಂದರ್ಭದಲ್ಲಿ ನಿನ್ನ ಹೆಸರಿಗೆ ಚ್ಯುತಿ ಬರುವ, ಆಸ್ಪತ್ರೆ ಸೇರುವ ಸಾಧ್ಯತೆಗಳೆ ಜಾಸ್ತಿ ಇವೆ ಫೆಬ್ರವರಿಯಲ್ಲಿ ಹೇಳಿದ್ದೆ. ಎಚ್ಚರಿಕೆಯಿಂದ ಇರಬೇಕು ಅಂಥ ತಿಳಿಸಿದ್ದೆ. ಇದೇ ರೀತಿ ರಾಜ ವಿಕ್ರಮಾದಿತ್ಯನಿಗೆ ಸಮಸ್ಯೆ ಕಾಡಿತ್ತು. ಈಗ ದರ್ಶನ್ಗೂ ಅಂತಹದ್ದೆ ಪರಿಸ್ಥಿತಿ ಬಂದಿದೆ ಎಂದು ಅರ್ಚಕರು ಮಾಹಿತಿ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ