ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ಗೂ ಬಹುಮಾನದ ಹಣ
ಹೆಡ್ ಕೋಚ್ ರಾಹುಲ್ ದ್ರಾವಿಡ್ಗೆ 5 ಕೋಟಿ ರೂಪಾಯಿ
ಟೀಂ ಇಂಡಿಯಾ ಜೊತೆ ಪ್ರವಾಸಕ್ಕೆ ಹೋಗಿದ್ದು ಒಟ್ಟು 42 ಮಂದಿ
ಟಿ20 ವಿಶ್ವಕಪ್ ಗೆದ್ದ ಟೀಂ ಇಂಡಿಯಾಗೆ ಬಿಸಿಸಿಐ 125 ಕೋಟಿ ರೂಪಾಯಿ ಬಹುಮಾನ ಘೋಷಣೆ ಮಾಡಿತ್ತು. ಈ ಬಹುಮಾನವು ಸಹಾಯಕ ಸಿಬ್ಬಂದಿ ಮತ್ತು ಆಯ್ಕೆದಾರರು ಸೇರಿ ಎಲ್ಲಾ ಆಟಗಾರರಿಗೂ ಸೇರಿದೆ ಎಂದು ತಿಳಿಸಿತ್ತು. ಟೀಮ್ ಇಂಡಿಯಾದ ಆಟಗಾರರು, ಕೋಚ್ಗಳು ಮತ್ತು ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯಲ್ಲಿ ಒಳಗೊಂಡಿರುವ 5 ಆಯ್ಕೆಗಾರರು ಸೇರಿದಂತೆ ಒಟ್ಟು 42 ಮಂದಿಗೆ ಹಣ ಹಂಚಿಕೆ ಮಾಡಲಾಗುತ್ತದೆ.
ಯಾರಿಗೆ ಎಷ್ಟು ಹಣ ನೀಡಲಾಗುತ್ತದೆ..?
ಒಟ್ಟು 42 ಮಂದಿ ಒಳಗೊಂಡ ಟೀಂ ಇಂಡಿಯಾ ವಿಶ್ವಕಪ್ ಆಡಲು ಅಮೆರಿಕ ಮತ್ತು ವೆಸ್ಟ್ ವಿಂಡೀಸ್ಗೆ ಪ್ರಯಾಣ ಬೆಳೆಸಿತ್ತು. ಅವರೆಲ್ಲರಿಗೂ ಬಿಸಿಸಿಐ ಹಣವನ್ನು ನೀಡಲಿದೆ. ತಂಡದಲ್ಲಿದ್ದ 15 ಆಟಗಾರರಿಗೆ ತಲಾ ಐದು ಕೋಟಿ ರೂಪಾಯಿ ಹಾಗೂ ಮುಖ್ಯ ಕೋಚ್ ರಾಹುಲ್ ದ್ರಾವಿಡ್ಗೂ ಐದು ಕೋಟಿ ರೂಪಾಯಿ ಬಹುಮಾನ ನೀಡಲಾಗುತ್ತದೆ.
ಇನ್ನು ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋಡ್, ಫೀಲ್ಡಿಂಗ್ ಕೋಚ್ ಟಿ.ದಿಲೀಪ್ ಮತ್ತು ಬೌಲಿಂಗ್ ಕೋಚ್ ಪರಸ್ ಮಾಂಬ್ರೆ ( Paras Mhambrey) ಸೇರಿದಂತೆ ಇತರೆ ಕೋಚಿಂಗ್ ಸಿಬ್ಬಂದಿಗೆ ತಲಾ 2.5 ಕೋಟಿ ರೂಪಾಯಿ ಸಿಗಲಿದೆ.
ಟಿ-20 ವಿಶ್ವಕಪ್ ತಂಡವನ್ನು ಆಯ್ಕೆ ಮಾಡಿದ ಅಜಿತ್ ಅಗರ್ಕರ್ ಸೇರಿದಂತೆ ಐವರು ಆಯ್ಕೆ ಸಮಿತಿ ಸದಸ್ಯರಿಗೆ ತಲಾ 1 ಕೋಟಿ ರೂಪಾಯಿ ಹಣವನ್ನು ಬಿಸಿಸಿಐ ನೀಡಲಿದೆ. ಮಾತ್ರವಲ್ಲ, ಮೀಸಲು ಆಟಗಾರರಾದ ರಿಂಕು ಸಿಂಗ್, ಶುಬ್ಮನ್ ಗಿಲ್, ಆವೇಶ್ ಖಾನ್, ಖಲೀಲ್ ಅಹ್ಮದ್ಗೂ ಬಹುಮಾನದ ಪಾಲು ಹೋಗಲಿದೆ. ಇವರಿಗೆ ತಲಾ ಒಂದು ಕೋಟಿ ರೂಪಾಯಿ ಬಹುಮಾನ ಸಿಗಲಿದೆ. ಅಷ್ಟೇ ಅಲ್ಲ.. ಮೂವರು ಫಿಸಿಯೋಥೆರಪಿಸ್ಟ್ಗಳು, ಮೂವರು ಥ್ರೋಡೌನ್ ತಜ್ಞರು ಸೇರಿ ಟೀಂ ಇಂಡಿಯಾದ ಇತರೆ ಸಿಬ್ಬಂದಿಗೆ ತಲಾ ಎರಡು ಕೋಟಿ ರೂಪಾಯಿ ಹಣವನ್ನು ನೀಡಲಿದೆ.
ಇದನ್ನೂ ಓದಿ:22 ಬಾಲ್ನಲ್ಲಿ 48 ರನ್..! ನಿನ್ನೆಯ ಪಂದ್ಯದಲ್ಲಿ ರಿಂಕು ಸಿಂಗ್ ಆರ್ಭಟ ಯಾರೂ ಮರೆಯುವಂತಿಲ್ಲ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ಗೂ ಬಹುಮಾನದ ಹಣ
ಹೆಡ್ ಕೋಚ್ ರಾಹುಲ್ ದ್ರಾವಿಡ್ಗೆ 5 ಕೋಟಿ ರೂಪಾಯಿ
ಟೀಂ ಇಂಡಿಯಾ ಜೊತೆ ಪ್ರವಾಸಕ್ಕೆ ಹೋಗಿದ್ದು ಒಟ್ಟು 42 ಮಂದಿ
ಟಿ20 ವಿಶ್ವಕಪ್ ಗೆದ್ದ ಟೀಂ ಇಂಡಿಯಾಗೆ ಬಿಸಿಸಿಐ 125 ಕೋಟಿ ರೂಪಾಯಿ ಬಹುಮಾನ ಘೋಷಣೆ ಮಾಡಿತ್ತು. ಈ ಬಹುಮಾನವು ಸಹಾಯಕ ಸಿಬ್ಬಂದಿ ಮತ್ತು ಆಯ್ಕೆದಾರರು ಸೇರಿ ಎಲ್ಲಾ ಆಟಗಾರರಿಗೂ ಸೇರಿದೆ ಎಂದು ತಿಳಿಸಿತ್ತು. ಟೀಮ್ ಇಂಡಿಯಾದ ಆಟಗಾರರು, ಕೋಚ್ಗಳು ಮತ್ತು ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯಲ್ಲಿ ಒಳಗೊಂಡಿರುವ 5 ಆಯ್ಕೆಗಾರರು ಸೇರಿದಂತೆ ಒಟ್ಟು 42 ಮಂದಿಗೆ ಹಣ ಹಂಚಿಕೆ ಮಾಡಲಾಗುತ್ತದೆ.
ಯಾರಿಗೆ ಎಷ್ಟು ಹಣ ನೀಡಲಾಗುತ್ತದೆ..?
ಒಟ್ಟು 42 ಮಂದಿ ಒಳಗೊಂಡ ಟೀಂ ಇಂಡಿಯಾ ವಿಶ್ವಕಪ್ ಆಡಲು ಅಮೆರಿಕ ಮತ್ತು ವೆಸ್ಟ್ ವಿಂಡೀಸ್ಗೆ ಪ್ರಯಾಣ ಬೆಳೆಸಿತ್ತು. ಅವರೆಲ್ಲರಿಗೂ ಬಿಸಿಸಿಐ ಹಣವನ್ನು ನೀಡಲಿದೆ. ತಂಡದಲ್ಲಿದ್ದ 15 ಆಟಗಾರರಿಗೆ ತಲಾ ಐದು ಕೋಟಿ ರೂಪಾಯಿ ಹಾಗೂ ಮುಖ್ಯ ಕೋಚ್ ರಾಹುಲ್ ದ್ರಾವಿಡ್ಗೂ ಐದು ಕೋಟಿ ರೂಪಾಯಿ ಬಹುಮಾನ ನೀಡಲಾಗುತ್ತದೆ.
ಇನ್ನು ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋಡ್, ಫೀಲ್ಡಿಂಗ್ ಕೋಚ್ ಟಿ.ದಿಲೀಪ್ ಮತ್ತು ಬೌಲಿಂಗ್ ಕೋಚ್ ಪರಸ್ ಮಾಂಬ್ರೆ ( Paras Mhambrey) ಸೇರಿದಂತೆ ಇತರೆ ಕೋಚಿಂಗ್ ಸಿಬ್ಬಂದಿಗೆ ತಲಾ 2.5 ಕೋಟಿ ರೂಪಾಯಿ ಸಿಗಲಿದೆ.
ಟಿ-20 ವಿಶ್ವಕಪ್ ತಂಡವನ್ನು ಆಯ್ಕೆ ಮಾಡಿದ ಅಜಿತ್ ಅಗರ್ಕರ್ ಸೇರಿದಂತೆ ಐವರು ಆಯ್ಕೆ ಸಮಿತಿ ಸದಸ್ಯರಿಗೆ ತಲಾ 1 ಕೋಟಿ ರೂಪಾಯಿ ಹಣವನ್ನು ಬಿಸಿಸಿಐ ನೀಡಲಿದೆ. ಮಾತ್ರವಲ್ಲ, ಮೀಸಲು ಆಟಗಾರರಾದ ರಿಂಕು ಸಿಂಗ್, ಶುಬ್ಮನ್ ಗಿಲ್, ಆವೇಶ್ ಖಾನ್, ಖಲೀಲ್ ಅಹ್ಮದ್ಗೂ ಬಹುಮಾನದ ಪಾಲು ಹೋಗಲಿದೆ. ಇವರಿಗೆ ತಲಾ ಒಂದು ಕೋಟಿ ರೂಪಾಯಿ ಬಹುಮಾನ ಸಿಗಲಿದೆ. ಅಷ್ಟೇ ಅಲ್ಲ.. ಮೂವರು ಫಿಸಿಯೋಥೆರಪಿಸ್ಟ್ಗಳು, ಮೂವರು ಥ್ರೋಡೌನ್ ತಜ್ಞರು ಸೇರಿ ಟೀಂ ಇಂಡಿಯಾದ ಇತರೆ ಸಿಬ್ಬಂದಿಗೆ ತಲಾ ಎರಡು ಕೋಟಿ ರೂಪಾಯಿ ಹಣವನ್ನು ನೀಡಲಿದೆ.
ಇದನ್ನೂ ಓದಿ:22 ಬಾಲ್ನಲ್ಲಿ 48 ರನ್..! ನಿನ್ನೆಯ ಪಂದ್ಯದಲ್ಲಿ ರಿಂಕು ಸಿಂಗ್ ಆರ್ಭಟ ಯಾರೂ ಮರೆಯುವಂತಿಲ್ಲ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್