ತಂದೆಯ ಸಮಾಧಿ ಪಕ್ಕದಲ್ಲೇ ಪ್ರತಾಪ್ ಅಂತ್ಯಕ್ರಿಯೆ
ಪ್ರತಾಪ್ನನ್ನು ಕಂಡು ಕಣ್ಣೀರು ಹಾಕಿದ ಪತ್ನಿ ಸೌಮ್ಯ
ಅಂತಿಮ ದರ್ಶನ ಪಡೆದ ಹಿರೇಕೆರೂರು ಶಾಸಕ ಯು.ಬಿ ಬಣಕಾರ್
ದಾವಣಗೆರೆ: ಮಾಜಿ ಸಚಿವ ಬಿ ಸಿ ಪಾಟೀಲ್ ಅಳಿಯ ಪ್ರತಾಪ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಕುಟುಂಬವಂತೂ ಅಳಿಯನ ಸಾವಿನಿಂದ ನೊಂದು ಕಣ್ಣಿರು ಹಾಕುತ್ತಿದ್ದಾರೆ. ಸದ್ಯ ಕತ್ತಲಗೆರೆ ಗ್ರಾಮಕ್ಕೆ ಮೃತ ಪ್ರತಾಪ್ ಪತ್ನಿ ಸೌಮ್ಯ, ತಂಗಿ ಸೃಷ್ಟಿ ಆಗಮಿಸಿದ್ದಾರೆ.
ಪತ್ನಿ ಸೌಮ್ಯ ಪತಿ ಪ್ರತಾಪ್ಗೆ ಪೂಜೆ ಸಲ್ಲಿಸಿದ್ದಾರೆ. ಬಳಿಕ ಮಾವ ಬಿ ಸಿ ಪಾಟೀಲ್ ಆಗಮಿಸಿ ಅಳಿಯನ ಪಾರ್ಥಿವ ಶರೀರಕ್ಕೆ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಪತಿಯ ಪಾರ್ಥಿವ ಶರೀರ ಮುಂದೆ ಪತ್ನಿ ಕಣ್ಣೀರು ಹಾಕಿದ್ದಾರೆ.
ಬಿ .ಸಿ ಪಾಟೀಲ್ ಜೊತೆ ಹಿರೇಕೆರೂರು ಶಾಸಕ ಯು.ಬಿ ಬಣಕಾರ್ ಆಗಮಿಸಿದ್ದಾರೆ. ಮೃತ ಪ್ರತಾಪ್ ಗೆ ಶಾಸಕ ಬಣಕಾರ್ ಅಂತಿಮ ನಮನ ಸಲ್ಲಿಸಿದ್ದಾರೆ.
ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಪ್ರತಾಪ್ ಅಂತ್ಯಕ್ರಿಯೆ ನೆರವೇರಲಿದೆ. ವೀರಶೈವ ಸಂಪ್ರದಾಯದಂತೆ, ಅವರ ತೋಟದಲ್ಲಿರುವ ತಂದೆಯ ಸಮಾಧಿ ಪಕ್ಕದಲ್ಲೇ ಅಂತ್ಯಕ್ರಿಯೆ ನೆರವೇರಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ತಂದೆಯ ಸಮಾಧಿ ಪಕ್ಕದಲ್ಲೇ ಪ್ರತಾಪ್ ಅಂತ್ಯಕ್ರಿಯೆ
ಪ್ರತಾಪ್ನನ್ನು ಕಂಡು ಕಣ್ಣೀರು ಹಾಕಿದ ಪತ್ನಿ ಸೌಮ್ಯ
ಅಂತಿಮ ದರ್ಶನ ಪಡೆದ ಹಿರೇಕೆರೂರು ಶಾಸಕ ಯು.ಬಿ ಬಣಕಾರ್
ದಾವಣಗೆರೆ: ಮಾಜಿ ಸಚಿವ ಬಿ ಸಿ ಪಾಟೀಲ್ ಅಳಿಯ ಪ್ರತಾಪ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಕುಟುಂಬವಂತೂ ಅಳಿಯನ ಸಾವಿನಿಂದ ನೊಂದು ಕಣ್ಣಿರು ಹಾಕುತ್ತಿದ್ದಾರೆ. ಸದ್ಯ ಕತ್ತಲಗೆರೆ ಗ್ರಾಮಕ್ಕೆ ಮೃತ ಪ್ರತಾಪ್ ಪತ್ನಿ ಸೌಮ್ಯ, ತಂಗಿ ಸೃಷ್ಟಿ ಆಗಮಿಸಿದ್ದಾರೆ.
ಪತ್ನಿ ಸೌಮ್ಯ ಪತಿ ಪ್ರತಾಪ್ಗೆ ಪೂಜೆ ಸಲ್ಲಿಸಿದ್ದಾರೆ. ಬಳಿಕ ಮಾವ ಬಿ ಸಿ ಪಾಟೀಲ್ ಆಗಮಿಸಿ ಅಳಿಯನ ಪಾರ್ಥಿವ ಶರೀರಕ್ಕೆ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಪತಿಯ ಪಾರ್ಥಿವ ಶರೀರ ಮುಂದೆ ಪತ್ನಿ ಕಣ್ಣೀರು ಹಾಕಿದ್ದಾರೆ.
ಬಿ .ಸಿ ಪಾಟೀಲ್ ಜೊತೆ ಹಿರೇಕೆರೂರು ಶಾಸಕ ಯು.ಬಿ ಬಣಕಾರ್ ಆಗಮಿಸಿದ್ದಾರೆ. ಮೃತ ಪ್ರತಾಪ್ ಗೆ ಶಾಸಕ ಬಣಕಾರ್ ಅಂತಿಮ ನಮನ ಸಲ್ಲಿಸಿದ್ದಾರೆ.
ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಪ್ರತಾಪ್ ಅಂತ್ಯಕ್ರಿಯೆ ನೆರವೇರಲಿದೆ. ವೀರಶೈವ ಸಂಪ್ರದಾಯದಂತೆ, ಅವರ ತೋಟದಲ್ಲಿರುವ ತಂದೆಯ ಸಮಾಧಿ ಪಕ್ಕದಲ್ಲೇ ಅಂತ್ಯಕ್ರಿಯೆ ನೆರವೇರಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ