ಜೈಲಿನಲ್ಲಿ ಕೊಲೆ ಆರೋಪಿಗಳ ಜೊತೆ ಮಾತಾಡಿ ಮಾತಾಡಿ ಬೇಜಾರು
ಜೈಲಿನಲ್ಲಿ ಪ್ರತಿ ಕ್ಷಣ, ಪ್ರತಿ ದಿನವನ್ನೂ ಒಂದೊಂದು ವರ್ಷ, ಒಂದು ಯುಗ
ಹೊಸ ಸ್ನೇಹಿತ ಸಹವಾಸದಿಂದ ದರ್ಶನ್ಗೆ ಹೊಸ ಚೈತನ್ಯ, ಹೊಸ ಸಂತೋಷ
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ಇಷ್ಟು ದಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರತಿ ಕ್ಷಣ, ಪ್ರತಿ ದಿನವನ್ನೂ ಒಂದೊಂದು ವರ್ಷ, ಯುಗದಂತೆ ಕಳೆಯುತ್ತಿದ್ದರು. ಆದ್ರೀಗ ಕಂಬಿ ಹಿಂದಿರುವ ನಟ ದರ್ಶನ್ ಅವರು ಬದಲಾಗಿದ್ದಾರಂತೆ. ಇದಕ್ಕೆ ಕಾರಣ ದರ್ಶನ್ಗೆ ಸಿಕ್ಕಿರುವ ಹೊಸ ಸ್ನೇಹಿತ.
ಜೈಲಿನಲ್ಲಿರುವ ದರ್ಶನ್ ಅವರಿಗೆ ಸಹಕೈದಿಗಳು, ಕೊಲೆ ಆರೋಪಿಗಳ ಜೊತೆ ಮಾತಾಡಿ ಮಾತಾಡಿ ಬೇಜಾರು ಆಗಿದ್ಯಂತೆ. ಈ ಹಿನ್ನೆಲೆಯಲ್ಲಿ ದರ್ಶನ್ ಹೊಸ ಸ್ನೇಹಿತನ ಹುಡುಕಾಟ ನಡೆಸಿದ್ದಾರೆ. ಆ ಸ್ನೇಹಿತ ಬೇರೆ ಯಾರು ಅಲ್ಲ. ಅದು ಕಥೆ & ಕಾದಂಬರಿಯ ಪುಸ್ತಕಗಳು.
ಹೌದು.. ದರ್ಶನ್ ಅವರು ಈಗ ಕಥೆ & ಕಾದಂಬರಿ ಪುಸ್ತಕಗಳ ಮೊರೆ ಹೋಗಿದ್ದಾರೆ. ಈಗಂತೂ ಬಿಡುವಿನ ಸಮಯವನ್ನು ಹೆಚ್ಚು, ಹೆಚ್ಚು ಬುಕ್ಗಳ ಜೊತೆ ಕಳೆಯುತ್ತಿದ್ದಾರೆ. ನ್ಯೂಸ್ ಫಸ್ಟ್ಗೆ ಜೈಲು ಸಿಬ್ಬಂದಿಯಿಂದ ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ಜೈಲೂಟ ತಿಂದ್ರೆ ಅತಿಸಾರ.. ಮನೆ ಊಟ, ಬಟ್ಟೆ.. ಹೈಕೋರ್ಟ್ ಮೆಟ್ಟಿಲೇರಿದ ದರ್ಶನ್ ಬೇಡಿಕೆಗಳೇನು?
ಪ್ರತಿ ದಿನ ದರ್ಶನ್ ಅವರು ಲೈಬ್ರರಿಯಿಂದ ಬೇರೆ, ಬೇರೆ ಬುಕ್ ಪಡೆಯುತ್ತಿದ್ದಾರೆ. ಕನ್ನಡದ ಹಳೆ ಕಥೆ & ಕಾದಂಬರಿಗಳ ಮೊರೆ ಹೋಗಿದ್ದಾರೆ. ಬುಕ್ ಸ್ನೇಹದಿಂದ ಜೈಲಿಗೆ ಬರುವ ವಾರ್ಡನ್ಗಳ ಜೊತೆ ನಗು ನಗುತ್ತಾ ದರ್ಶನ್ ಕಾಲ ಕಳೆಯುತ್ತಿದ್ದಾರೆ ಎನ್ನಲಾಗಿದೆ.
ಒಳ್ಳೆ ಕಥೆಗಾರ ಆಗ್ತಾರಾ ದರ್ಶನ್!?
ಕೊಲೆ ಕೇಸ್ನಲ್ಲಿ ಜೈಲು ಸೇರಿರುವ ದರ್ಶನ್ ಅವರಿಗೆ ಪೊಲೀಸರು ಚಾರ್ಜ್ಶೀಟ್ ಸಲ್ಲಿಸುವ ತನಕ ನೆಮ್ಮದಿಯೇ ಇಲ್ಲ. ಯಾಕಂದ್ರೆ, ಚಾರ್ಜ್ಶೀಟ್ ಹಾಕುವ ತನಕ ಬೇಲ್ಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇಲ್ಲ. ಜಾರ್ಜ್ಶೀಟ್ ಸಲ್ಲಿಸಲು 2 ತಿಂಗಳು ಬೇಕಾಗಬಹುದು. ದರ್ಶನ್ ಅವರು ಜೈಲಿನಲ್ಲಿ ಇನ್ನೂ ಎರಡೂವರೆ ತಿಂಗಳು ಕಳೆಯುವ ಸಾಧ್ಯತೆ ಹೆಚ್ಚಾಗಿದೆ. ಇದನ್ನ ಸ್ಪಷ್ಟವಾಗಿ ಅರಿತಿರುವ ದರ್ಶನ್ ಅವರು ಕಥೆ-ಕಾದಂಬರಿ ಪುಸ್ತಕಗಳ ಮೊರೆ ಹೋಗಿದ್ದಾರೆ. ಜೈಲಿನಿಂದ ಹೊರ ಬರುವ ದರ್ಶನ್ ಅವರು ಒಳ್ಳೆ ಕಥೆಗಾರ ಆದರೂ ಅಚ್ಚರಿಪಡಬೇಕಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಜೈಲಿನಲ್ಲಿ ಕೊಲೆ ಆರೋಪಿಗಳ ಜೊತೆ ಮಾತಾಡಿ ಮಾತಾಡಿ ಬೇಜಾರು
ಜೈಲಿನಲ್ಲಿ ಪ್ರತಿ ಕ್ಷಣ, ಪ್ರತಿ ದಿನವನ್ನೂ ಒಂದೊಂದು ವರ್ಷ, ಒಂದು ಯುಗ
ಹೊಸ ಸ್ನೇಹಿತ ಸಹವಾಸದಿಂದ ದರ್ಶನ್ಗೆ ಹೊಸ ಚೈತನ್ಯ, ಹೊಸ ಸಂತೋಷ
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ಇಷ್ಟು ದಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರತಿ ಕ್ಷಣ, ಪ್ರತಿ ದಿನವನ್ನೂ ಒಂದೊಂದು ವರ್ಷ, ಯುಗದಂತೆ ಕಳೆಯುತ್ತಿದ್ದರು. ಆದ್ರೀಗ ಕಂಬಿ ಹಿಂದಿರುವ ನಟ ದರ್ಶನ್ ಅವರು ಬದಲಾಗಿದ್ದಾರಂತೆ. ಇದಕ್ಕೆ ಕಾರಣ ದರ್ಶನ್ಗೆ ಸಿಕ್ಕಿರುವ ಹೊಸ ಸ್ನೇಹಿತ.
ಜೈಲಿನಲ್ಲಿರುವ ದರ್ಶನ್ ಅವರಿಗೆ ಸಹಕೈದಿಗಳು, ಕೊಲೆ ಆರೋಪಿಗಳ ಜೊತೆ ಮಾತಾಡಿ ಮಾತಾಡಿ ಬೇಜಾರು ಆಗಿದ್ಯಂತೆ. ಈ ಹಿನ್ನೆಲೆಯಲ್ಲಿ ದರ್ಶನ್ ಹೊಸ ಸ್ನೇಹಿತನ ಹುಡುಕಾಟ ನಡೆಸಿದ್ದಾರೆ. ಆ ಸ್ನೇಹಿತ ಬೇರೆ ಯಾರು ಅಲ್ಲ. ಅದು ಕಥೆ & ಕಾದಂಬರಿಯ ಪುಸ್ತಕಗಳು.
ಹೌದು.. ದರ್ಶನ್ ಅವರು ಈಗ ಕಥೆ & ಕಾದಂಬರಿ ಪುಸ್ತಕಗಳ ಮೊರೆ ಹೋಗಿದ್ದಾರೆ. ಈಗಂತೂ ಬಿಡುವಿನ ಸಮಯವನ್ನು ಹೆಚ್ಚು, ಹೆಚ್ಚು ಬುಕ್ಗಳ ಜೊತೆ ಕಳೆಯುತ್ತಿದ್ದಾರೆ. ನ್ಯೂಸ್ ಫಸ್ಟ್ಗೆ ಜೈಲು ಸಿಬ್ಬಂದಿಯಿಂದ ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ಜೈಲೂಟ ತಿಂದ್ರೆ ಅತಿಸಾರ.. ಮನೆ ಊಟ, ಬಟ್ಟೆ.. ಹೈಕೋರ್ಟ್ ಮೆಟ್ಟಿಲೇರಿದ ದರ್ಶನ್ ಬೇಡಿಕೆಗಳೇನು?
ಪ್ರತಿ ದಿನ ದರ್ಶನ್ ಅವರು ಲೈಬ್ರರಿಯಿಂದ ಬೇರೆ, ಬೇರೆ ಬುಕ್ ಪಡೆಯುತ್ತಿದ್ದಾರೆ. ಕನ್ನಡದ ಹಳೆ ಕಥೆ & ಕಾದಂಬರಿಗಳ ಮೊರೆ ಹೋಗಿದ್ದಾರೆ. ಬುಕ್ ಸ್ನೇಹದಿಂದ ಜೈಲಿಗೆ ಬರುವ ವಾರ್ಡನ್ಗಳ ಜೊತೆ ನಗು ನಗುತ್ತಾ ದರ್ಶನ್ ಕಾಲ ಕಳೆಯುತ್ತಿದ್ದಾರೆ ಎನ್ನಲಾಗಿದೆ.
ಒಳ್ಳೆ ಕಥೆಗಾರ ಆಗ್ತಾರಾ ದರ್ಶನ್!?
ಕೊಲೆ ಕೇಸ್ನಲ್ಲಿ ಜೈಲು ಸೇರಿರುವ ದರ್ಶನ್ ಅವರಿಗೆ ಪೊಲೀಸರು ಚಾರ್ಜ್ಶೀಟ್ ಸಲ್ಲಿಸುವ ತನಕ ನೆಮ್ಮದಿಯೇ ಇಲ್ಲ. ಯಾಕಂದ್ರೆ, ಚಾರ್ಜ್ಶೀಟ್ ಹಾಕುವ ತನಕ ಬೇಲ್ಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇಲ್ಲ. ಜಾರ್ಜ್ಶೀಟ್ ಸಲ್ಲಿಸಲು 2 ತಿಂಗಳು ಬೇಕಾಗಬಹುದು. ದರ್ಶನ್ ಅವರು ಜೈಲಿನಲ್ಲಿ ಇನ್ನೂ ಎರಡೂವರೆ ತಿಂಗಳು ಕಳೆಯುವ ಸಾಧ್ಯತೆ ಹೆಚ್ಚಾಗಿದೆ. ಇದನ್ನ ಸ್ಪಷ್ಟವಾಗಿ ಅರಿತಿರುವ ದರ್ಶನ್ ಅವರು ಕಥೆ-ಕಾದಂಬರಿ ಪುಸ್ತಕಗಳ ಮೊರೆ ಹೋಗಿದ್ದಾರೆ. ಜೈಲಿನಿಂದ ಹೊರ ಬರುವ ದರ್ಶನ್ ಅವರು ಒಳ್ಳೆ ಕಥೆಗಾರ ಆದರೂ ಅಚ್ಚರಿಪಡಬೇಕಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ