ಅಗ್ನಿಸಾಕ್ಷಿ ಮೂಲಕ ಕನ್ನಡಿಗರ ಮನೆಮಾತಾದ ವಿಜಯ ಸೂರ್ಯ
2ನೇ ಮಗುವಿಗೆ ತಂದೆಯಾದ 'ಪ್ರೇಮಲೋಕ' ಸೀರಿಯಲ್ ನಟ..!
2 ವರ್ಷಗಳ ಹಿಂದೆ ಮೊದಲ ಮಗುವಿಗೆ ಜನ್ಮ ನೀಡಿದ್ದ ದಂಪತಿ
ಅಗ್ನಿಸಾಕ್ಷಿ ಸೀರಿಯಲ್ ಮೂಲಕ ಖ್ಯಾತಿ ಪಡೆದಿರೋ ನಟ ವಿಜಯ ಸೂರ್ಯ ಕನ್ನಡ ಹಾಗೂ ತೆಲುಗು ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ನಟ ವಿಜಯ ಸೂರ್ಯ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿದ್ದಾರೆ ನಟ ವಿಜಯ್. ಈಗಾಗಲೇ ನಟ ವಿಜಯ್ ಸೂರ್ಯ ಅವರಿಗೆ ಸೋಹನ್ ಎಂಬ ಮುದ್ದಾದ ಮಗು ಇದೆ. ಸದ್ಯ ಎರಡನೇ ಮಗುವಿಗೆ ತಂದೆ ತಾಯಿಯಾಗಿದ್ದಾರೆ ವಿಜಯ ಸೂರ್ಯ ಹಾಗೂ ಚೈತ್ರಾ ದಂಪತಿ. ಜೂನ್ 2ನೇ ತಾರಿಖು ಎರಡನೇ ಮಗುವನ್ನ ವೆಲ್ಕಮ್ ಮಾಡಿದ್ದಾರೆ.
ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತಾಡಿದ ನಟ ವಿಜಯ ಸೂರ್ಯ, ನಾನು ಚೈತ್ರಾ ಜೊತೆ ಹೆಚ್ಚು ಸಮಯ ಕಳೆಯೋಕೆ ಆಗುತ್ತಿರಲಿಲ್ಲ. ಬ್ಯಾಕ್ ಟು ಬ್ಯಾಕ್ ಶೂಟಿಂಗ್ನಲ್ಲಿದ್ದೆ. ಕೃಷ್ಣಮ್ಮ ಕಲಿಪಿಂದಿ ಇದ್ದರನಿ ಸೀರಿಯಲ್ಗಾಗಿ ಹೈದ್ರಾಬಾದ್ನಲ್ಲಿ ಶೂಟಿಂಗ್ ಮಾಡುತ್ತಿದ್ದೆ. ಆಗ ನನ್ನ ಅಣ್ಣನಿಂದ ಕರೆ ಬಂತು. ಚೈತ್ರಾಗೆ ಲೈಟ್ ಆಗಿ ಪೇನ್ ಶುರುವಾಗಿದೆ ಎಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೇವೆ ಅಂದ್ರು. 15 ನಿಮಿಷದ ನಂತರ ಕಾಲ್ ಮಾಡಿ ಗುಂಡು ಮಗು ಆಗಿದೆ ಅಂತಾ ಹೇಳಿದರು. ಆ ಸಮಯದಲ್ಲಿ ನಾನು ಅಲ್ಲಿ ಇರಬೇಕಿತ್ತು. ಡೇಟ್ಗಿಂತ ಮೊದಲೇ ಪೇನ್ ಶುರುವಾಗಿದ್ರಿಂದ ಹಾಗೂ ಶೂಟಿಂಗ್ ಕಾರಣದಿಂದ ನಾನು ಆ ಕ್ಷಣವನ್ನ ಮಿಸ್ ಮಾಡಿಕೊಂಡೆ ಎಂದು ತಂದೆಯಾದ ಸುದ್ದಿಯನ್ನ ನೀಡಿದ್ದಾರೆ.
ಇನ್ನು, ಮಗು ಬಗ್ಗೆ ಯಾಕೆ ರಿವೀಲ್ ಮಾಡಿರಲಿಲ್ಲ ಎಂಬುವುದಕ್ಕೂ ಉತ್ತರ ಕೊಟ್ಟಿರುವ ವಿಜಯ್ ಸೂರ್ಯ ಅವರು ಮಗುವನ್ನ ಸ್ಪೆಷಲ್ ಆಗಿ, ಗ್ರ್ಯಾಂಡ್ ಆಗಿ ರಿವೀಲ್ ಮಾಡೋಣ ಅಂದು ಕೊಂಡಿದ್ದೇವೆ. ಹೀಗಾಗಿ ಈ ಬಗ್ಗೆ ಎಲ್ಲಿಯೂ ಹಂಚಿಕೊಂಡಿರಲಿಲ್ಲ ಎಂದಿದ್ದಾರೆ. ಒಟ್ಟಿನಲ್ಲಿ ತಾಯಿ-ಮಗು ಆರೋಗ್ಯವಾಗಿದ್ದು, ವಿಜಯ ಸೂರ್ಯ ಕುಟುಂಬಕ್ಕೆ ಶುಭಾಶಗಳ ಮಹಾಪೂರವೇ ಹರಿದು ಬರ್ತಿದೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ
ಅಗ್ನಿಸಾಕ್ಷಿ ಮೂಲಕ ಕನ್ನಡಿಗರ ಮನೆಮಾತಾದ ವಿಜಯ ಸೂರ್ಯ
2ನೇ ಮಗುವಿಗೆ ತಂದೆಯಾದ 'ಪ್ರೇಮಲೋಕ' ಸೀರಿಯಲ್ ನಟ..!
2 ವರ್ಷಗಳ ಹಿಂದೆ ಮೊದಲ ಮಗುವಿಗೆ ಜನ್ಮ ನೀಡಿದ್ದ ದಂಪತಿ
ಅಗ್ನಿಸಾಕ್ಷಿ ಸೀರಿಯಲ್ ಮೂಲಕ ಖ್ಯಾತಿ ಪಡೆದಿರೋ ನಟ ವಿಜಯ ಸೂರ್ಯ ಕನ್ನಡ ಹಾಗೂ ತೆಲುಗು ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ನಟ ವಿಜಯ ಸೂರ್ಯ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿದ್ದಾರೆ ನಟ ವಿಜಯ್. ಈಗಾಗಲೇ ನಟ ವಿಜಯ್ ಸೂರ್ಯ ಅವರಿಗೆ ಸೋಹನ್ ಎಂಬ ಮುದ್ದಾದ ಮಗು ಇದೆ. ಸದ್ಯ ಎರಡನೇ ಮಗುವಿಗೆ ತಂದೆ ತಾಯಿಯಾಗಿದ್ದಾರೆ ವಿಜಯ ಸೂರ್ಯ ಹಾಗೂ ಚೈತ್ರಾ ದಂಪತಿ. ಜೂನ್ 2ನೇ ತಾರಿಖು ಎರಡನೇ ಮಗುವನ್ನ ವೆಲ್ಕಮ್ ಮಾಡಿದ್ದಾರೆ.
ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತಾಡಿದ ನಟ ವಿಜಯ ಸೂರ್ಯ, ನಾನು ಚೈತ್ರಾ ಜೊತೆ ಹೆಚ್ಚು ಸಮಯ ಕಳೆಯೋಕೆ ಆಗುತ್ತಿರಲಿಲ್ಲ. ಬ್ಯಾಕ್ ಟು ಬ್ಯಾಕ್ ಶೂಟಿಂಗ್ನಲ್ಲಿದ್ದೆ. ಕೃಷ್ಣಮ್ಮ ಕಲಿಪಿಂದಿ ಇದ್ದರನಿ ಸೀರಿಯಲ್ಗಾಗಿ ಹೈದ್ರಾಬಾದ್ನಲ್ಲಿ ಶೂಟಿಂಗ್ ಮಾಡುತ್ತಿದ್ದೆ. ಆಗ ನನ್ನ ಅಣ್ಣನಿಂದ ಕರೆ ಬಂತು. ಚೈತ್ರಾಗೆ ಲೈಟ್ ಆಗಿ ಪೇನ್ ಶುರುವಾಗಿದೆ ಎಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೇವೆ ಅಂದ್ರು. 15 ನಿಮಿಷದ ನಂತರ ಕಾಲ್ ಮಾಡಿ ಗುಂಡು ಮಗು ಆಗಿದೆ ಅಂತಾ ಹೇಳಿದರು. ಆ ಸಮಯದಲ್ಲಿ ನಾನು ಅಲ್ಲಿ ಇರಬೇಕಿತ್ತು. ಡೇಟ್ಗಿಂತ ಮೊದಲೇ ಪೇನ್ ಶುರುವಾಗಿದ್ರಿಂದ ಹಾಗೂ ಶೂಟಿಂಗ್ ಕಾರಣದಿಂದ ನಾನು ಆ ಕ್ಷಣವನ್ನ ಮಿಸ್ ಮಾಡಿಕೊಂಡೆ ಎಂದು ತಂದೆಯಾದ ಸುದ್ದಿಯನ್ನ ನೀಡಿದ್ದಾರೆ.
ಇನ್ನು, ಮಗು ಬಗ್ಗೆ ಯಾಕೆ ರಿವೀಲ್ ಮಾಡಿರಲಿಲ್ಲ ಎಂಬುವುದಕ್ಕೂ ಉತ್ತರ ಕೊಟ್ಟಿರುವ ವಿಜಯ್ ಸೂರ್ಯ ಅವರು ಮಗುವನ್ನ ಸ್ಪೆಷಲ್ ಆಗಿ, ಗ್ರ್ಯಾಂಡ್ ಆಗಿ ರಿವೀಲ್ ಮಾಡೋಣ ಅಂದು ಕೊಂಡಿದ್ದೇವೆ. ಹೀಗಾಗಿ ಈ ಬಗ್ಗೆ ಎಲ್ಲಿಯೂ ಹಂಚಿಕೊಂಡಿರಲಿಲ್ಲ ಎಂದಿದ್ದಾರೆ. ಒಟ್ಟಿನಲ್ಲಿ ತಾಯಿ-ಮಗು ಆರೋಗ್ಯವಾಗಿದ್ದು, ವಿಜಯ ಸೂರ್ಯ ಕುಟುಂಬಕ್ಕೆ ಶುಭಾಶಗಳ ಮಹಾಪೂರವೇ ಹರಿದು ಬರ್ತಿದೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ