ಸರ್ಕಾರದ ಕಾರ್ಯಾಚರಣೆಗೂ ಮೊದಲೇ ಕಾಪಾಡಿದ್ದ ಯುವಕ
ಮೃತದೇಹ ಸಿಕ್ಕರೂ ಅದು ಆ ಯುವಕನದ್ದಲ್ಲ ಎಂದ ಸ್ಥಳೀಯರು
ಟೀ ಎಸ್ಟೇಟ್ಗಳಲ್ಲಿದ್ದ ಕುಟುಂಬಗಳ 30 ಜನರನ್ನ ಕಾಪಾಡಿದ್ದನು
ದೇವರನಾಡು ಸಾವಿನಕೂಪವಾಗಿದೆ. ತಮ್ಮವರನ್ನ ಕಳೆದುಕೊಂಡವರ ಸಂತ್ರಸ್ಥರ ರೋಧನೆ ಹೇಳತೀರದಾಗಿದೆ. ಮೃತದೇಹಗಳ ರಾಶಿಯ ನಡುವೆ ಕುಟುಂಬಸ್ಥರ ಕಣ್ಣೀರು ಬಿಟ್ಟು ಎಲ್ಲ ಕೊಚ್ಚಿ ಹೋಗಿದೆ. ಇಂತಹ ಭಯಾನಕ ಭೂಕುಸಿತದಲ್ಲಿ 30 ಜನರನ್ನು ಕಾಪಾಡಿದ್ದ ಕೇರಳದ ಚೂರಾಲ್ಮಾಲದ ರಿಯಲ್ ಹೀರೋ ಕಾರು ಸಮೇತ ಕೊಚ್ಚಿ ಹೋಗಿದ್ದಾನೆ.
ಇದನ್ನೂ ಓದಿ: ಜಿಮ್ ವಸ್ತುಗಳ ಸೇಲ್ಸ್ಮ್ಯಾನ್ ಮೃತದೇಹ ಪತ್ತೆ.. ಪ್ರಕರಣ ಬೆನ್ನ ಹತ್ತಿದ್ದ ಪೊಲೀಸರಿಗೆ ಶಾಕ್ ಮೇಲೆ ಶಾಕ್!
ವಯನಾಡಿನ ಭೂ ಕುಸಿತವಾದಗ 30 ಮಂದಿಯನ್ನು ಕಾಪಾಡಿದ್ದ ಚೂರಾಲ್ಮಾಲದ ನಿವಾಸಿ ಪ್ರಜೀಶ್ ಮೃತಪಟ್ಟ ಯುವಕ. ಸದ್ಯ ಇವರ ಮೃತದೇಹಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ. ಈ ರೀತಿ ಹುಡುಕುವಾಗ ಶವವೊಂದು ಸಿಕ್ಕಿದೆ. ಆದರೆ ಪ್ರಜೀಶ್ ದೇಹವಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಇಂದಿಗೆ 5 ದಿನಗಳು ಕಳೆಯುತ್ತ ಬಂದರೂ ಮೃತದೇಹ ಮಾತ್ರ ಪತ್ತೆ ಆಗುತ್ತಿಲ್ಲ ಎಂದು ಹೇಳಲಾಗ್ತಿದೆ.
ಇದನ್ನೂ ಓದಿ: Olympics; ಗ್ರೇಟ್ ಬ್ರಿಟನ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು.. ಸೆಮಿಸ್ಗೆ ಎಂಟ್ರಿ ಕೊಟ್ಟ ಟೀಮ್ ಇಂಡಿಯಾ
ಸರ್ಕಾರದ ಕಾರ್ಯಾಚರಣೆ ನಡೆಯುವ ಮೊದಲೇ ಯುವಕ ತನ್ನ ಚಾಣಕ್ಷತನದಿಂದ ಸಂತ್ರಸ್ತರನ್ನು ರಕ್ಷಣೆ ಮಾಡಿದ್ದನು. ಟೀ ಎಸ್ಟೇಟ್ಗಳಲ್ಲಿ ಇದ್ದಂತಹ ಸುಮಾರು 18 ಕುಟುಂಬಗಳ 30 ಜನರನ್ನು ಮುಂಡಕೈ ರಸ್ತೆಯಿಂದ ಚೂರಲ್ಮಾಲದ ಶಾಲೆಯ ಮೇಲ್ಭಾಗಕ್ಕೆ ಜೀಪ್ನಲ್ಲಿ ತಂದು ಬಿಟ್ಟಿದ್ದನು. ತನ್ನದೇ ಆಗಿದ್ದ ಜೀಪ್ನಲ್ಲಿ 30 ಮಂದಿಯನ್ನು ದಡ ಸೇರಿಸಿದ್ದ ರಿಯಲ್ ಹೀರೋ. ಆದರೆ ರಕ್ಷಣೆ ಮಾಡುತ್ತಿರುವಾಗಲೇ ಪ್ರಜೀಶ್ ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಕಾರು ಸಮೇತ ಕೊಚ್ಚಿ ಹೋಗಿದ್ದಾನೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಕಾವೇರಿ ದಡದ ಮೇಲೆ ಕುಡುಕರ ಅಟ್ಟಹಾಸ.. ಕಾಲೇಜು ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿ, ಕೊಂದ ಗ್ಯಾಂಗ್
ಸದ್ಯ ಪ್ರಜೀಶ್ ಮೃತದೇಹಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ. ಈ ವೇಳೆ ಒಂದು ಮೃತದೇಹ ಸಿಕ್ಕಿದ್ದು ಅದು ಯಾರೆಂದು ಪತ್ತೆ ಮಾಡಲು ಸಾಧ್ಯವಾಗದಷ್ಟು ಕೊಳೆತು ಹೋಗಿದೆ. ಆದರೆ ಅದು ಯುವಕನದ್ದಲ್ಲ ಎಂದು ಸ್ಥಳೀಯರ ವಾದವಾಗಿದೆ. ಚೂರಲ್ಮಾಲದ ಸುತ್ತಮುತ್ತ ಯಾವುದೇ ಕಾರ್ಯಾಚರಣೆ ನಡೆದರೂ ಯುವಕ ಮುಂಚೂಣಿಯಲ್ಲಿ ಇರುತ್ತಿದ್ದನು. ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕ ಕಣ್ಮರೆ ಆಗಿರುವುದು ತುಂಬಾ ನೋವು ಕೊಡುತ್ತಿದೆ ಎಂದು ಅಲ್ಲಿನ ಸಂತ್ರಸ್ತರು ಹೇಳುತ್ತಿದ್ದಾರೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಸರ್ಕಾರದ ಕಾರ್ಯಾಚರಣೆಗೂ ಮೊದಲೇ ಕಾಪಾಡಿದ್ದ ಯುವಕ
ಮೃತದೇಹ ಸಿಕ್ಕರೂ ಅದು ಆ ಯುವಕನದ್ದಲ್ಲ ಎಂದ ಸ್ಥಳೀಯರು
ಟೀ ಎಸ್ಟೇಟ್ಗಳಲ್ಲಿದ್ದ ಕುಟುಂಬಗಳ 30 ಜನರನ್ನ ಕಾಪಾಡಿದ್ದನು
ದೇವರನಾಡು ಸಾವಿನಕೂಪವಾಗಿದೆ. ತಮ್ಮವರನ್ನ ಕಳೆದುಕೊಂಡವರ ಸಂತ್ರಸ್ಥರ ರೋಧನೆ ಹೇಳತೀರದಾಗಿದೆ. ಮೃತದೇಹಗಳ ರಾಶಿಯ ನಡುವೆ ಕುಟುಂಬಸ್ಥರ ಕಣ್ಣೀರು ಬಿಟ್ಟು ಎಲ್ಲ ಕೊಚ್ಚಿ ಹೋಗಿದೆ. ಇಂತಹ ಭಯಾನಕ ಭೂಕುಸಿತದಲ್ಲಿ 30 ಜನರನ್ನು ಕಾಪಾಡಿದ್ದ ಕೇರಳದ ಚೂರಾಲ್ಮಾಲದ ರಿಯಲ್ ಹೀರೋ ಕಾರು ಸಮೇತ ಕೊಚ್ಚಿ ಹೋಗಿದ್ದಾನೆ.
ಇದನ್ನೂ ಓದಿ: ಜಿಮ್ ವಸ್ತುಗಳ ಸೇಲ್ಸ್ಮ್ಯಾನ್ ಮೃತದೇಹ ಪತ್ತೆ.. ಪ್ರಕರಣ ಬೆನ್ನ ಹತ್ತಿದ್ದ ಪೊಲೀಸರಿಗೆ ಶಾಕ್ ಮೇಲೆ ಶಾಕ್!
ವಯನಾಡಿನ ಭೂ ಕುಸಿತವಾದಗ 30 ಮಂದಿಯನ್ನು ಕಾಪಾಡಿದ್ದ ಚೂರಾಲ್ಮಾಲದ ನಿವಾಸಿ ಪ್ರಜೀಶ್ ಮೃತಪಟ್ಟ ಯುವಕ. ಸದ್ಯ ಇವರ ಮೃತದೇಹಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ. ಈ ರೀತಿ ಹುಡುಕುವಾಗ ಶವವೊಂದು ಸಿಕ್ಕಿದೆ. ಆದರೆ ಪ್ರಜೀಶ್ ದೇಹವಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಇಂದಿಗೆ 5 ದಿನಗಳು ಕಳೆಯುತ್ತ ಬಂದರೂ ಮೃತದೇಹ ಮಾತ್ರ ಪತ್ತೆ ಆಗುತ್ತಿಲ್ಲ ಎಂದು ಹೇಳಲಾಗ್ತಿದೆ.
ಇದನ್ನೂ ಓದಿ: Olympics; ಗ್ರೇಟ್ ಬ್ರಿಟನ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು.. ಸೆಮಿಸ್ಗೆ ಎಂಟ್ರಿ ಕೊಟ್ಟ ಟೀಮ್ ಇಂಡಿಯಾ
ಸರ್ಕಾರದ ಕಾರ್ಯಾಚರಣೆ ನಡೆಯುವ ಮೊದಲೇ ಯುವಕ ತನ್ನ ಚಾಣಕ್ಷತನದಿಂದ ಸಂತ್ರಸ್ತರನ್ನು ರಕ್ಷಣೆ ಮಾಡಿದ್ದನು. ಟೀ ಎಸ್ಟೇಟ್ಗಳಲ್ಲಿ ಇದ್ದಂತಹ ಸುಮಾರು 18 ಕುಟುಂಬಗಳ 30 ಜನರನ್ನು ಮುಂಡಕೈ ರಸ್ತೆಯಿಂದ ಚೂರಲ್ಮಾಲದ ಶಾಲೆಯ ಮೇಲ್ಭಾಗಕ್ಕೆ ಜೀಪ್ನಲ್ಲಿ ತಂದು ಬಿಟ್ಟಿದ್ದನು. ತನ್ನದೇ ಆಗಿದ್ದ ಜೀಪ್ನಲ್ಲಿ 30 ಮಂದಿಯನ್ನು ದಡ ಸೇರಿಸಿದ್ದ ರಿಯಲ್ ಹೀರೋ. ಆದರೆ ರಕ್ಷಣೆ ಮಾಡುತ್ತಿರುವಾಗಲೇ ಪ್ರಜೀಶ್ ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಕಾರು ಸಮೇತ ಕೊಚ್ಚಿ ಹೋಗಿದ್ದಾನೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಕಾವೇರಿ ದಡದ ಮೇಲೆ ಕುಡುಕರ ಅಟ್ಟಹಾಸ.. ಕಾಲೇಜು ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿ, ಕೊಂದ ಗ್ಯಾಂಗ್
ಸದ್ಯ ಪ್ರಜೀಶ್ ಮೃತದೇಹಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ. ಈ ವೇಳೆ ಒಂದು ಮೃತದೇಹ ಸಿಕ್ಕಿದ್ದು ಅದು ಯಾರೆಂದು ಪತ್ತೆ ಮಾಡಲು ಸಾಧ್ಯವಾಗದಷ್ಟು ಕೊಳೆತು ಹೋಗಿದೆ. ಆದರೆ ಅದು ಯುವಕನದ್ದಲ್ಲ ಎಂದು ಸ್ಥಳೀಯರ ವಾದವಾಗಿದೆ. ಚೂರಲ್ಮಾಲದ ಸುತ್ತಮುತ್ತ ಯಾವುದೇ ಕಾರ್ಯಾಚರಣೆ ನಡೆದರೂ ಯುವಕ ಮುಂಚೂಣಿಯಲ್ಲಿ ಇರುತ್ತಿದ್ದನು. ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕ ಕಣ್ಮರೆ ಆಗಿರುವುದು ತುಂಬಾ ನೋವು ಕೊಡುತ್ತಿದೆ ಎಂದು ಅಲ್ಲಿನ ಸಂತ್ರಸ್ತರು ಹೇಳುತ್ತಿದ್ದಾರೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ