ಕೆಸರು, ಬಂಡೆಗಳ ನಡುವೆ ಮೃತದೇಹಗಳು ಹುಡುಕುವಾಗ ಪತ್ತೆ
ಮೃತದೇಹ ಹುಡುಕುವಾಗ ಚಿನ್ನದ ಮಾಂಗಲ್ಯ ಸರಗಳು ಸಿಕ್ಕವು
ಪ್ರಾಮಾಣಿಕತೆ ಮೆರೆದ ಸ್ವಯಂಸೇವಕರು, ರಕ್ಷಣಾ ಸಿಬ್ಬಂದಿ ತಂಡ
ಭಯಾನಕ ಗುಡ್ಡ ಕುಸಿತದಿಂದ ಸರ್ವನಾಶವಾಗಿರುವ ವಯನಾಡಿನ 4 ಗ್ರಾಮಗಳಲ್ಲಿ ಕಳೆದ 6 ದಿನದಿಂದ ರಕ್ಷಣಾ ಕಾರ್ಯ ನಡೆಯುತ್ತಲೇ ಇದೆ. ವಯನಾಡು ಜನರ ಜೀವನಾಡಿ ಎನಿಸಿದ್ದ ಚಾಲಿಯಾರ್ ನದಿಯಲ್ಲಿ ಮೃತದೇಹಗಳು ತೇಲಿ ಬರುತ್ತಿವೆ. ರಕ್ಷಣಾ ಕಾರ್ಯಾಚರಣೆ ವೇಳೆ ಸ್ವಯಂ ಸೇವಕರಿಗೆ ಮಾಂಗಲ್ಯದ ಸರಗಳು ಸೇರಿದಂತೆ ಭಾರೀ ಮೌಲ್ಯದ ಚಿನ್ನದ ಒಡೆವೆಗಳು ಸಿಕ್ಕಿವೆ.
ಇದನ್ನೂ ಓದಿ: BJP ಅವಧಿಯ ಭ್ರಷ್ಟಾಚಾರ, ಹಗರಣಗಳ ಟಾರ್ಗೆಟ್ ಮಾಡಿದ ‘ಕೈ’ ಹೈಕಮಾಂಡ್; ಮಾಜಿ ಸಿಎಂಗೆ ಸಂಕಷ್ಟ?
ವಯನಾಡಿನ ಮುಂಡಕೈ ಗ್ರಾಮದ ಸುತ್ತಮುತ್ತ ಸ್ವಯಂ ಸೇವಕ ತಂಡದವರು ಮೃತದೇಹಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದರು. ಈ ವೇಳೆ ಅವರಿಗೆ ಲಕ್ಷಾಂತರ ರೂಪಾಯಿ ಬೆಳೆಬಾಳುವ ಚಿನ್ನಾಭರಣಗಳು ಸಿಕ್ಕಿವೆ. ಕೆಸರು, ಬಂಡೆಗಳ ನಡುವೆ ಮೃತದೇಹಗಳು ಸಿಕ್ಕಿಕೊಂಡಿರಬಹುದೆಂದು ಹುಡುಕುವಾಗ ಚಿನ್ನದ ಚೈನ್ಗಳು, ಮಾಂಗಲ್ಯದ ಸರಗಳು, ಓಲೆ, ಉಂಗುರುಗಳು, ಬಳೆಗಳು ಕಾಣಿಸಿಕೊಂಡಿವೆ. ತಕ್ಷಣ ಸ್ವಯಂಸೇವಕರ ಟೀಮ್ ಅವುಗಳನ್ನು ತೆಗೆದುಕೊಂಡು ನೇರ ಪೊಲೀಸರಿಗೆ ಒಪ್ಪಿಸಿ, ಪ್ರಾಮಾಣಿಕತೆ ಮೆರೆದಿದ್ದಾರೆ.
ಇದನ್ನೂ ಓದಿ: ಕಾಮುಕನ ಅಟ್ಟಹಾಸ, ತಬ್ಬಿಕೊಂಡು ಬಲವಂತ ಚುಂಬನ.. ಮಹಿಳೆಯರಿಗೆ ಸಿಲಿಕಾನ್ ಸಿಟಿ ಎಷ್ಟು ಸೇಫ್?
ಗುಡ್ಡ ಕುಸಿತದಿಂದ ವಯನಾಡಿನ ನಾಲ್ಕು ಗ್ರಾಮಗಳು ಸರ್ವನಾಶವಾಗಿವೆ. ಕಳೆದ 6 ದಿನಗಳಿಂದ ರಕ್ಷಣಾ ಕಾರ್ಯ ನಡೆಯುತ್ತಿದ್ದು ಜನರ ಜೀವನಾಡಿ ಎನಿಸಿರುವ ಚಾಲಿಯಾರ್ ನದಿಯಲ್ಲಿ ಇನ್ನೂ ಮೃತದೇಹಗಳು ತೇಲಿಬರುತ್ತಿವೆ. ನದಿಯು ಈಗ ದುಃಖದ ಸಾಗರವಾಗಿ ಮಾರ್ಪಟ್ಟಿದೆ. 6ನೇ ದಿನದ ಕಾರ್ಯಾಚರಣೆ ವೇಳೆ ಚಾಲಿಯಾರ್ ನದಿಯಲ್ಲಿ ಮತ್ತೆ 18 ಶವಗಳು ಸಿಕ್ಕಿದ್ದು ಸಾವಿನ ಸಂಖ್ಯೆ 369ಕ್ಕೆ ಏರಿಕೆ ಆಗಿದೆ. ಮುಂಡಕೈ ಪ್ರದೇಶದಲ್ಲಿ ಇನ್ನೂ 64 ಜನರು ನಾಪತ್ತೆ ಆಗಿದ್ದಾರೆ. ಸದ್ಯ ನಾಪತ್ತೆ ಆದವರಿಗಾಗಿ ಶೋಧ ಕಾರ್ಯ ನಡೆಯುತ್ತಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಕೆಸರು, ಬಂಡೆಗಳ ನಡುವೆ ಮೃತದೇಹಗಳು ಹುಡುಕುವಾಗ ಪತ್ತೆ
ಮೃತದೇಹ ಹುಡುಕುವಾಗ ಚಿನ್ನದ ಮಾಂಗಲ್ಯ ಸರಗಳು ಸಿಕ್ಕವು
ಪ್ರಾಮಾಣಿಕತೆ ಮೆರೆದ ಸ್ವಯಂಸೇವಕರು, ರಕ್ಷಣಾ ಸಿಬ್ಬಂದಿ ತಂಡ
ಭಯಾನಕ ಗುಡ್ಡ ಕುಸಿತದಿಂದ ಸರ್ವನಾಶವಾಗಿರುವ ವಯನಾಡಿನ 4 ಗ್ರಾಮಗಳಲ್ಲಿ ಕಳೆದ 6 ದಿನದಿಂದ ರಕ್ಷಣಾ ಕಾರ್ಯ ನಡೆಯುತ್ತಲೇ ಇದೆ. ವಯನಾಡು ಜನರ ಜೀವನಾಡಿ ಎನಿಸಿದ್ದ ಚಾಲಿಯಾರ್ ನದಿಯಲ್ಲಿ ಮೃತದೇಹಗಳು ತೇಲಿ ಬರುತ್ತಿವೆ. ರಕ್ಷಣಾ ಕಾರ್ಯಾಚರಣೆ ವೇಳೆ ಸ್ವಯಂ ಸೇವಕರಿಗೆ ಮಾಂಗಲ್ಯದ ಸರಗಳು ಸೇರಿದಂತೆ ಭಾರೀ ಮೌಲ್ಯದ ಚಿನ್ನದ ಒಡೆವೆಗಳು ಸಿಕ್ಕಿವೆ.
ಇದನ್ನೂ ಓದಿ: BJP ಅವಧಿಯ ಭ್ರಷ್ಟಾಚಾರ, ಹಗರಣಗಳ ಟಾರ್ಗೆಟ್ ಮಾಡಿದ ‘ಕೈ’ ಹೈಕಮಾಂಡ್; ಮಾಜಿ ಸಿಎಂಗೆ ಸಂಕಷ್ಟ?
ವಯನಾಡಿನ ಮುಂಡಕೈ ಗ್ರಾಮದ ಸುತ್ತಮುತ್ತ ಸ್ವಯಂ ಸೇವಕ ತಂಡದವರು ಮೃತದೇಹಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದರು. ಈ ವೇಳೆ ಅವರಿಗೆ ಲಕ್ಷಾಂತರ ರೂಪಾಯಿ ಬೆಳೆಬಾಳುವ ಚಿನ್ನಾಭರಣಗಳು ಸಿಕ್ಕಿವೆ. ಕೆಸರು, ಬಂಡೆಗಳ ನಡುವೆ ಮೃತದೇಹಗಳು ಸಿಕ್ಕಿಕೊಂಡಿರಬಹುದೆಂದು ಹುಡುಕುವಾಗ ಚಿನ್ನದ ಚೈನ್ಗಳು, ಮಾಂಗಲ್ಯದ ಸರಗಳು, ಓಲೆ, ಉಂಗುರುಗಳು, ಬಳೆಗಳು ಕಾಣಿಸಿಕೊಂಡಿವೆ. ತಕ್ಷಣ ಸ್ವಯಂಸೇವಕರ ಟೀಮ್ ಅವುಗಳನ್ನು ತೆಗೆದುಕೊಂಡು ನೇರ ಪೊಲೀಸರಿಗೆ ಒಪ್ಪಿಸಿ, ಪ್ರಾಮಾಣಿಕತೆ ಮೆರೆದಿದ್ದಾರೆ.
ಇದನ್ನೂ ಓದಿ: ಕಾಮುಕನ ಅಟ್ಟಹಾಸ, ತಬ್ಬಿಕೊಂಡು ಬಲವಂತ ಚುಂಬನ.. ಮಹಿಳೆಯರಿಗೆ ಸಿಲಿಕಾನ್ ಸಿಟಿ ಎಷ್ಟು ಸೇಫ್?
ಗುಡ್ಡ ಕುಸಿತದಿಂದ ವಯನಾಡಿನ ನಾಲ್ಕು ಗ್ರಾಮಗಳು ಸರ್ವನಾಶವಾಗಿವೆ. ಕಳೆದ 6 ದಿನಗಳಿಂದ ರಕ್ಷಣಾ ಕಾರ್ಯ ನಡೆಯುತ್ತಿದ್ದು ಜನರ ಜೀವನಾಡಿ ಎನಿಸಿರುವ ಚಾಲಿಯಾರ್ ನದಿಯಲ್ಲಿ ಇನ್ನೂ ಮೃತದೇಹಗಳು ತೇಲಿಬರುತ್ತಿವೆ. ನದಿಯು ಈಗ ದುಃಖದ ಸಾಗರವಾಗಿ ಮಾರ್ಪಟ್ಟಿದೆ. 6ನೇ ದಿನದ ಕಾರ್ಯಾಚರಣೆ ವೇಳೆ ಚಾಲಿಯಾರ್ ನದಿಯಲ್ಲಿ ಮತ್ತೆ 18 ಶವಗಳು ಸಿಕ್ಕಿದ್ದು ಸಾವಿನ ಸಂಖ್ಯೆ 369ಕ್ಕೆ ಏರಿಕೆ ಆಗಿದೆ. ಮುಂಡಕೈ ಪ್ರದೇಶದಲ್ಲಿ ಇನ್ನೂ 64 ಜನರು ನಾಪತ್ತೆ ಆಗಿದ್ದಾರೆ. ಸದ್ಯ ನಾಪತ್ತೆ ಆದವರಿಗಾಗಿ ಶೋಧ ಕಾರ್ಯ ನಡೆಯುತ್ತಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ