ಸಿಂಹಳೀಯರ ಬಲೆಗೆ ಬಿದ್ದ ಇಂಡಿಯನ್ ಟೈಗರ್ಸ್
32 ರನ್ಗಳಿಂದ ಟೀಮ್ ಇಂಡಿಯಾಗೆ ಸೋಲು
ದಿಟ್ಟ ಹೋರಾಟ ನಡೆಸಿದ ಆತಿಥೇಯ ಶ್ರೀಲಂಕಾ
ಸಿಂಹಳೀಯರ ನಾಡಲ್ಲಿ ಗೆಲುವಿನ ಕನಸು ಕಾಣ್ತಿದ್ದ ಟೀಮ್ ಇಂಡಿಯಾಗೆ ಸೋಲಿನ ದರ್ಶನವಾಗಿದೆ. ತಿಣುಕಾಟ ನಡೆಸಿ ಮೊದಲ ಏಕದಿನದಲ್ಲಿ ಡ್ರಾ ಸಾಧಿಸಿದ್ದ, ಟೀಮ್ ಇಂಡಿಯಾ 2ನೇ ಪಂದ್ಯದಲ್ಲಿ ಮಕಾಡೆ ಮಲಗಿದೆ.
ಶಾಕ್.. ಶಾಕ್.. ಶಾಕ್..! ಟೀಮ್ ಇಂಡಿಯಾದ ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದ ದಿನದಿಂದ ಕನಿಷ್ಟ ಯಾರೂ ಊಹೆ ಕೂಡ ಮಾಡಿರಲಿಲ್ಲ. ಸಿಂಹಳೀಯರ ಎದುರು ಟೀಮ್ ಇಂಡಿಯಾ ಸೋಲುತ್ತೆ ಎಂದು. ಕೆರಳಿದ ಲಂಕನ್ ಲಯನ್ಸ್ ಅಕ್ಷರಶಃ ಶಾಕ್ ಕೊಟ್ಟಿದ್ದಾರೆ. 2ನೇ ಏಕದಿನದಲ್ಲಿ ಬಲಿಷ್ಟ ಇಂಡಿಯಾಗೆ ಸೋಲಿನ ರುಚಿ ತೋರಿಸಿದ್ದಾರೆ.
ಮೊದಲ ಎಸೆತದಲ್ಲೇ ಲಂಕಾಗೆ ಶಾಕ್
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡು ಕಣಕ್ಕಿಳಿದ ಶ್ರೀಲಂಕಾ ಮೊದಲ ಎಸೆತದಲ್ಲೇ ಶಾಕ್ ಎದುರಿಸಿತು. ಮೊಹಮ್ಮದ್ ಸಿರಾಜ್ ವೇಗಕ್ಕೆ ಫಾತುಮ್ ನಿಸ್ಸಾಂಕ ಬಲಿಯಾದ್ರು. ಬಳಿಕ ಕ್ರಿಸ್ನಲ್ಲಿ ಜೊತೆಯಾದ ಅವಿಷ್ಕಾ ಫರ್ನಾಂಡೋ-ಕುಸಾಲ್ ಮೆಂಡಿಸ್ 74 ರನ್ಗಳ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದ್ರು.
ಲಂಕಾಗೆ ಡಬಲ್ ಶಾಕ್ ಕೊಟ್ಟ ವಾಷಿಂಗ್ಟನ್ ಸುಂದರ್
ಈ ಜೊತೆಯಾಟ ಹೆಚ್ಚು ಹೊತ್ತು ಬೆಳೆಯಲು ವಾಷಿಂಗ್ಟನ್ ಸುಂದರ್ ಬಿಡಲಿಲ್ಲ. ಸುಂದರ್ ಮೋಡಿಗೆ ಬಲಿಯಾದ ಅವಿಷ್ಕಾ, ಕುಸಾಲ್ ಬ್ಯಾಕ್ ಟು ಬ್ಯಾಕ್ ಪೆವಿಲಿಯನ್ ಸೇರಿದ್ರು. ಸದೀರಾ ಸಮರವಿಕ್ರಮ ಬಂದಷ್ಟೇ ವೇಗವಾಗಿ ಔಟಾದ್ರು. ಜನಿತ್ ಲಿಯನಗೆ 12 ರನ್ಗಳಿಸುವಷ್ಟರಲ್ಲಿ ಸುಸ್ತಾದ್ರು. ನಾಯಕ ಚರಿತ್ ಅಸಲಂಕ ಆಟ 25 ರನ್ಗಳಿಗೆ ಅಂತ್ಯವಾಯ್ತು.
ಇದನ್ನೂ ಓದಿ:ಸೂರ್ಯ, ಬೂಮ್ರಾ ಗ್ಯಾರಂಟಿ.. ಈ ನಾಲ್ಕು ಆಟಗಾರರ ರಿಟೈನ್ ಮಾಡಿಕೊಳ್ಳಲು MI ನಿರ್ಧಾರ
ಕಮಿಂದು ಮೆಂಡಿಸ್-ಧುನಿತ್ ವೆಲ್ಲಲಗೆ ದಿಟ್ಟ ಹೋರಾಟ
7ನೇ ವಿಕೆಟ್ಗೆ ಜೊತೆಯಾದ ಕಮಿಂದು ಮೆಂಡೀಸ್, ಧುನಿಲ್ ವೆಲ್ಲಲಗೆ ಶ್ರೀಲಂಕಾಗೆ ಆಸರೆಯಾದ್ರು. ಇಂಡಿಯನ್ ಬೌಲರ್ಸ್ನ ದಿಟ್ಟವಾಗಿ ಎದುರಿಸಿದ ಈ ಜೋಡಿ 72 ರನ್ಗಳ ಜೊತೆಯಾಟವಾಡಿತು. 39 ರನ್ಗಳ ಉತ್ತಮ ಇನ್ನಿಂಗ್ಸ್ ಕಟ್ಟಿದ ದುನಿಲ್ ವೆಲ್ಲಲಗೆ, ಕುಲ್ದೀಪ್ ಮೋಡಿಗೆ ಬಲಿಯಾದರು. ಕಮಿಂದು ಮೆಂಡೀಸ್, ಶ್ರೇಯಸ್ ಅಯ್ಯರ್ ಎಸೆದ ಶರವೇಗದ ಥ್ರೋಗೆ ರನೌಟ್ ಆದ್ರು. ಅಂತಿಮವಾಗಿ 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡ ಶ್ರೀಲಂಕಾ 240 ರನ್ ಕಲೆಹಾಕಿತು.
ಬೌಂಡರಿ-ಸಿಕ್ಸರ್ ಸಿಡಿಸಿದ ಹಿಟ್ಮ್ಯಾನ್
241 ರನ್ಗಳ ಟಾರ್ಗೆಟ್ ಬೆನ್ನತ್ತಿದ ಟೀಮ್ ಇಂಡಿಯಾಗೆ ಒನ್ಸ್ ಅಗೇನ್ ಕ್ಯಾಪ್ಟನ್ ರೋಹಿತ್ ಶರ್ಮಾ ಅಬ್ಬರದ ಆರಂಭ ಒದಗಿಸಿದ್ರು. ಬೌಂಡರಿ, ಸಿಕ್ಸರ್ಗಳಲ್ಲೇ ರನ್ ಡೀಲ್ ಮಾಡಿದ ಹಿಟ್ಮ್ಯಾನ್, 5 ಬೌಂಡರಿ, 4 ಸಿಕ್ಸರ್ ಸಿಡಿಸಿ ಘರ್ಜಿಸಿದ್ರು. ಕೇವಲ 29 ಎಸೆತಗಳಲ್ಲೇ ಹಾಫ್ ಸೆಂಚುರಿ ಚಚ್ಚಿದ್ರು.
ಇದನ್ನೂ ಓದಿ:ಮ್ಯಾಕ್ಸ್ವೆಲ್ಗೆ ಗೇಟ್ಪಾಸ್.. ರಿಲೀಸ್ಗೆ ಇಲ್ಲಿದೆ ಪ್ರಮುಖ 3 ಕಾರಣ..!
64 ರನ್ಗಳಿಸಿದ್ದ ರೋಹಿತ್ ಶರ್ಮಾ ರಿವರ್ಸ್ಸ್ವೀಪ್ ಮಾಡೋ ಯತ್ನದಲ್ಲಿ ವಿಕೆಟ್ ಕೈ ಚೆಲ್ಲಿದ್ರು. ಅಲ್ಲಿಂದ ಶುರುವಾಯ್ತು ಟೀಮ್ ಇಂಡಿಯಾದ ಪತನ. ಉತ್ತಮ ಆಟವಾಡ್ತಿದ್ದ ಶುಭ್ಮನ್ ಗಿಲ್ 35 ರನ್ಗಳಿಸಿ ನಿರ್ಗಮಿಸಿದ್ರು. 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶಿವಂ ದುಬೆ ಮತ್ತೊಂದು ಫ್ಲಾಪ್ ಶೋ ನೀಡಿದ್ರು.
ಲಂಕನ್ನರಿಗೆ ಸುಲಭಕ್ಕೆ ಶರಣಾದ ಕಿಂಗ್ ಕೊಹ್ಲಿ
ಶಿವಂ ದುಬೆ ಬೆನ್ನಲ್ಲೇ ವಿರಾಟ್ ಕೊಹ್ಲಿ ಮತ್ತೊಮ್ಮೆ ನಿರಾಸೆ ಮೂಡಿಸಿದ್ರು. ಕೊಹ್ಲಿ 14 ರನ್ಗಳಿಸಿ ಔಟಾದ್ರೆ, ಶ್ರೇಯಸ್ ಅಯ್ಯರ್ 7 ರನ್ಗಳಿಸುವಷ್ಟರಲ್ಲಿ ಸುಸ್ತಾದ್ರು. ಕೆ.ಎಲ್.ರಾಹುಲ್ ಡಕೌಟ್ ಆಗಿ ನಿರ್ಗಮಿಸಿದರು.
ಬಳಿಕ ಕಣಕ್ಕಿಳಿದ ಅಕ್ಷರ್ ಪಟೇಲ್ ಉತ್ತಮ ಆಟವಾಡಿದ್ರು. ವಾಷಿಂಗ್ಟನ್ ಸುಂದರ್ ಜೊತೆಗೂಡಿ ಕುಸಿದ ತಂಡಕ್ಕೆ ಆಸರೆಯಾದ್ರು. 44 ರನ್ಗಳ ಉತ್ತಮ ಇನ್ನಿಂಗ್ಸ್ ಕಟ್ಟಿ ಗೆಲುವಿನ ಭರವಸೆ ಹುಟ್ಟು ಹಾಕಿದ್ರು. 33.1ನೇ ಓವರ್ನಲ್ಲಿ ಲಂಕಾ ಕ್ಯಾಪ್ಟನ್ ಅಸಲಂಕ ಅಕ್ಷರ್ ಆಟಕ್ಕೆ ಬ್ರೇಕ್ ಹಾಕಿದರು. ಅಕ್ಷರ್ ಬೆನ್ನಲ್ಲೇ ಸುಂದರ್ ಆಟವೂ ಅಂತ್ಯವಾಯ್ತು. ಅಂತಿಮವಾಗಿ 208 ರನ್ಗಳಿಗೆ ಟೀಮ್ ಇಂಡಿಯಾ ಆಲೌಟ್ ಆಯ್ತು. ಹೋರಾಟ ನಡೆಸಿದ ಲಂಕಾ 32 ರನ್ಗಳ ಗೆಲುವು ದಾಖಲಿಸಿತು. ಶಿವಂ ದುಬೆ, ಕೆ.ಎಲ್.ರಾಹುಲ್ ಝೀರೋ ಸುತ್ತಿ ಔಟ್ ಆಗಿದ್ದಕ್ಕೆ ಪಂತ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಸುಖಾಸುಮ್ಮನೆ ಫಾರ್ಮ್ನಲ್ಲಿದ್ದ ಪಂತ್ರನ್ನು ಬೆಂಚ್ನಲ್ಲಿ ಕೂರಿಸಲಾಗಿದೆ. ರಾಹುಲ್ ಬದಲಿಗೆ ಪಂತ್ ಆಡಿಸಿದ್ದರೆ ಇಂಡಿಯಾ ಮೊದಲ ಪಂದ್ಯದಿಂದಲೇ ಗೆಲುವು ಸಾಧಿಸುತ್ತಿತ್ತು ಎಂಬ ಮಾತುಗಳು ಕೇಳಿಬಂದಿವೆ.
ಇದನ್ನೂ ಓದಿ:ವಯನಾಡಿನ ಪ್ರಳಯದ ಭವಿಷ್ಯ ನುಡಿದಿದ್ದ ಗಿಳಿ.. ವರ್ಷದ ಹಿಂದೆ ಪುಟ್ಟ ಹುಡುಗಿ ಬರೆದಿದ್ದ ಕಥೆ ನಿಜವಾಗಿದ್ದೇಗೆ..?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಸಿಂಹಳೀಯರ ಬಲೆಗೆ ಬಿದ್ದ ಇಂಡಿಯನ್ ಟೈಗರ್ಸ್
32 ರನ್ಗಳಿಂದ ಟೀಮ್ ಇಂಡಿಯಾಗೆ ಸೋಲು
ದಿಟ್ಟ ಹೋರಾಟ ನಡೆಸಿದ ಆತಿಥೇಯ ಶ್ರೀಲಂಕಾ
ಸಿಂಹಳೀಯರ ನಾಡಲ್ಲಿ ಗೆಲುವಿನ ಕನಸು ಕಾಣ್ತಿದ್ದ ಟೀಮ್ ಇಂಡಿಯಾಗೆ ಸೋಲಿನ ದರ್ಶನವಾಗಿದೆ. ತಿಣುಕಾಟ ನಡೆಸಿ ಮೊದಲ ಏಕದಿನದಲ್ಲಿ ಡ್ರಾ ಸಾಧಿಸಿದ್ದ, ಟೀಮ್ ಇಂಡಿಯಾ 2ನೇ ಪಂದ್ಯದಲ್ಲಿ ಮಕಾಡೆ ಮಲಗಿದೆ.
ಶಾಕ್.. ಶಾಕ್.. ಶಾಕ್..! ಟೀಮ್ ಇಂಡಿಯಾದ ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದ ದಿನದಿಂದ ಕನಿಷ್ಟ ಯಾರೂ ಊಹೆ ಕೂಡ ಮಾಡಿರಲಿಲ್ಲ. ಸಿಂಹಳೀಯರ ಎದುರು ಟೀಮ್ ಇಂಡಿಯಾ ಸೋಲುತ್ತೆ ಎಂದು. ಕೆರಳಿದ ಲಂಕನ್ ಲಯನ್ಸ್ ಅಕ್ಷರಶಃ ಶಾಕ್ ಕೊಟ್ಟಿದ್ದಾರೆ. 2ನೇ ಏಕದಿನದಲ್ಲಿ ಬಲಿಷ್ಟ ಇಂಡಿಯಾಗೆ ಸೋಲಿನ ರುಚಿ ತೋರಿಸಿದ್ದಾರೆ.
ಮೊದಲ ಎಸೆತದಲ್ಲೇ ಲಂಕಾಗೆ ಶಾಕ್
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡು ಕಣಕ್ಕಿಳಿದ ಶ್ರೀಲಂಕಾ ಮೊದಲ ಎಸೆತದಲ್ಲೇ ಶಾಕ್ ಎದುರಿಸಿತು. ಮೊಹಮ್ಮದ್ ಸಿರಾಜ್ ವೇಗಕ್ಕೆ ಫಾತುಮ್ ನಿಸ್ಸಾಂಕ ಬಲಿಯಾದ್ರು. ಬಳಿಕ ಕ್ರಿಸ್ನಲ್ಲಿ ಜೊತೆಯಾದ ಅವಿಷ್ಕಾ ಫರ್ನಾಂಡೋ-ಕುಸಾಲ್ ಮೆಂಡಿಸ್ 74 ರನ್ಗಳ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದ್ರು.
ಲಂಕಾಗೆ ಡಬಲ್ ಶಾಕ್ ಕೊಟ್ಟ ವಾಷಿಂಗ್ಟನ್ ಸುಂದರ್
ಈ ಜೊತೆಯಾಟ ಹೆಚ್ಚು ಹೊತ್ತು ಬೆಳೆಯಲು ವಾಷಿಂಗ್ಟನ್ ಸುಂದರ್ ಬಿಡಲಿಲ್ಲ. ಸುಂದರ್ ಮೋಡಿಗೆ ಬಲಿಯಾದ ಅವಿಷ್ಕಾ, ಕುಸಾಲ್ ಬ್ಯಾಕ್ ಟು ಬ್ಯಾಕ್ ಪೆವಿಲಿಯನ್ ಸೇರಿದ್ರು. ಸದೀರಾ ಸಮರವಿಕ್ರಮ ಬಂದಷ್ಟೇ ವೇಗವಾಗಿ ಔಟಾದ್ರು. ಜನಿತ್ ಲಿಯನಗೆ 12 ರನ್ಗಳಿಸುವಷ್ಟರಲ್ಲಿ ಸುಸ್ತಾದ್ರು. ನಾಯಕ ಚರಿತ್ ಅಸಲಂಕ ಆಟ 25 ರನ್ಗಳಿಗೆ ಅಂತ್ಯವಾಯ್ತು.
ಇದನ್ನೂ ಓದಿ:ಸೂರ್ಯ, ಬೂಮ್ರಾ ಗ್ಯಾರಂಟಿ.. ಈ ನಾಲ್ಕು ಆಟಗಾರರ ರಿಟೈನ್ ಮಾಡಿಕೊಳ್ಳಲು MI ನಿರ್ಧಾರ
ಕಮಿಂದು ಮೆಂಡಿಸ್-ಧುನಿತ್ ವೆಲ್ಲಲಗೆ ದಿಟ್ಟ ಹೋರಾಟ
7ನೇ ವಿಕೆಟ್ಗೆ ಜೊತೆಯಾದ ಕಮಿಂದು ಮೆಂಡೀಸ್, ಧುನಿಲ್ ವೆಲ್ಲಲಗೆ ಶ್ರೀಲಂಕಾಗೆ ಆಸರೆಯಾದ್ರು. ಇಂಡಿಯನ್ ಬೌಲರ್ಸ್ನ ದಿಟ್ಟವಾಗಿ ಎದುರಿಸಿದ ಈ ಜೋಡಿ 72 ರನ್ಗಳ ಜೊತೆಯಾಟವಾಡಿತು. 39 ರನ್ಗಳ ಉತ್ತಮ ಇನ್ನಿಂಗ್ಸ್ ಕಟ್ಟಿದ ದುನಿಲ್ ವೆಲ್ಲಲಗೆ, ಕುಲ್ದೀಪ್ ಮೋಡಿಗೆ ಬಲಿಯಾದರು. ಕಮಿಂದು ಮೆಂಡೀಸ್, ಶ್ರೇಯಸ್ ಅಯ್ಯರ್ ಎಸೆದ ಶರವೇಗದ ಥ್ರೋಗೆ ರನೌಟ್ ಆದ್ರು. ಅಂತಿಮವಾಗಿ 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡ ಶ್ರೀಲಂಕಾ 240 ರನ್ ಕಲೆಹಾಕಿತು.
ಬೌಂಡರಿ-ಸಿಕ್ಸರ್ ಸಿಡಿಸಿದ ಹಿಟ್ಮ್ಯಾನ್
241 ರನ್ಗಳ ಟಾರ್ಗೆಟ್ ಬೆನ್ನತ್ತಿದ ಟೀಮ್ ಇಂಡಿಯಾಗೆ ಒನ್ಸ್ ಅಗೇನ್ ಕ್ಯಾಪ್ಟನ್ ರೋಹಿತ್ ಶರ್ಮಾ ಅಬ್ಬರದ ಆರಂಭ ಒದಗಿಸಿದ್ರು. ಬೌಂಡರಿ, ಸಿಕ್ಸರ್ಗಳಲ್ಲೇ ರನ್ ಡೀಲ್ ಮಾಡಿದ ಹಿಟ್ಮ್ಯಾನ್, 5 ಬೌಂಡರಿ, 4 ಸಿಕ್ಸರ್ ಸಿಡಿಸಿ ಘರ್ಜಿಸಿದ್ರು. ಕೇವಲ 29 ಎಸೆತಗಳಲ್ಲೇ ಹಾಫ್ ಸೆಂಚುರಿ ಚಚ್ಚಿದ್ರು.
ಇದನ್ನೂ ಓದಿ:ಮ್ಯಾಕ್ಸ್ವೆಲ್ಗೆ ಗೇಟ್ಪಾಸ್.. ರಿಲೀಸ್ಗೆ ಇಲ್ಲಿದೆ ಪ್ರಮುಖ 3 ಕಾರಣ..!
64 ರನ್ಗಳಿಸಿದ್ದ ರೋಹಿತ್ ಶರ್ಮಾ ರಿವರ್ಸ್ಸ್ವೀಪ್ ಮಾಡೋ ಯತ್ನದಲ್ಲಿ ವಿಕೆಟ್ ಕೈ ಚೆಲ್ಲಿದ್ರು. ಅಲ್ಲಿಂದ ಶುರುವಾಯ್ತು ಟೀಮ್ ಇಂಡಿಯಾದ ಪತನ. ಉತ್ತಮ ಆಟವಾಡ್ತಿದ್ದ ಶುಭ್ಮನ್ ಗಿಲ್ 35 ರನ್ಗಳಿಸಿ ನಿರ್ಗಮಿಸಿದ್ರು. 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶಿವಂ ದುಬೆ ಮತ್ತೊಂದು ಫ್ಲಾಪ್ ಶೋ ನೀಡಿದ್ರು.
ಲಂಕನ್ನರಿಗೆ ಸುಲಭಕ್ಕೆ ಶರಣಾದ ಕಿಂಗ್ ಕೊಹ್ಲಿ
ಶಿವಂ ದುಬೆ ಬೆನ್ನಲ್ಲೇ ವಿರಾಟ್ ಕೊಹ್ಲಿ ಮತ್ತೊಮ್ಮೆ ನಿರಾಸೆ ಮೂಡಿಸಿದ್ರು. ಕೊಹ್ಲಿ 14 ರನ್ಗಳಿಸಿ ಔಟಾದ್ರೆ, ಶ್ರೇಯಸ್ ಅಯ್ಯರ್ 7 ರನ್ಗಳಿಸುವಷ್ಟರಲ್ಲಿ ಸುಸ್ತಾದ್ರು. ಕೆ.ಎಲ್.ರಾಹುಲ್ ಡಕೌಟ್ ಆಗಿ ನಿರ್ಗಮಿಸಿದರು.
ಬಳಿಕ ಕಣಕ್ಕಿಳಿದ ಅಕ್ಷರ್ ಪಟೇಲ್ ಉತ್ತಮ ಆಟವಾಡಿದ್ರು. ವಾಷಿಂಗ್ಟನ್ ಸುಂದರ್ ಜೊತೆಗೂಡಿ ಕುಸಿದ ತಂಡಕ್ಕೆ ಆಸರೆಯಾದ್ರು. 44 ರನ್ಗಳ ಉತ್ತಮ ಇನ್ನಿಂಗ್ಸ್ ಕಟ್ಟಿ ಗೆಲುವಿನ ಭರವಸೆ ಹುಟ್ಟು ಹಾಕಿದ್ರು. 33.1ನೇ ಓವರ್ನಲ್ಲಿ ಲಂಕಾ ಕ್ಯಾಪ್ಟನ್ ಅಸಲಂಕ ಅಕ್ಷರ್ ಆಟಕ್ಕೆ ಬ್ರೇಕ್ ಹಾಕಿದರು. ಅಕ್ಷರ್ ಬೆನ್ನಲ್ಲೇ ಸುಂದರ್ ಆಟವೂ ಅಂತ್ಯವಾಯ್ತು. ಅಂತಿಮವಾಗಿ 208 ರನ್ಗಳಿಗೆ ಟೀಮ್ ಇಂಡಿಯಾ ಆಲೌಟ್ ಆಯ್ತು. ಹೋರಾಟ ನಡೆಸಿದ ಲಂಕಾ 32 ರನ್ಗಳ ಗೆಲುವು ದಾಖಲಿಸಿತು. ಶಿವಂ ದುಬೆ, ಕೆ.ಎಲ್.ರಾಹುಲ್ ಝೀರೋ ಸುತ್ತಿ ಔಟ್ ಆಗಿದ್ದಕ್ಕೆ ಪಂತ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಸುಖಾಸುಮ್ಮನೆ ಫಾರ್ಮ್ನಲ್ಲಿದ್ದ ಪಂತ್ರನ್ನು ಬೆಂಚ್ನಲ್ಲಿ ಕೂರಿಸಲಾಗಿದೆ. ರಾಹುಲ್ ಬದಲಿಗೆ ಪಂತ್ ಆಡಿಸಿದ್ದರೆ ಇಂಡಿಯಾ ಮೊದಲ ಪಂದ್ಯದಿಂದಲೇ ಗೆಲುವು ಸಾಧಿಸುತ್ತಿತ್ತು ಎಂಬ ಮಾತುಗಳು ಕೇಳಿಬಂದಿವೆ.
ಇದನ್ನೂ ಓದಿ:ವಯನಾಡಿನ ಪ್ರಳಯದ ಭವಿಷ್ಯ ನುಡಿದಿದ್ದ ಗಿಳಿ.. ವರ್ಷದ ಹಿಂದೆ ಪುಟ್ಟ ಹುಡುಗಿ ಬರೆದಿದ್ದ ಕಥೆ ನಿಜವಾಗಿದ್ದೇಗೆ..?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್