ಟೀಮ್ ಇಂಡಿಯಾ ಕಮ್ಬ್ಯಾಕ್ ಹಾದಿ ಕಿಶನ್ಗೆ ಸುಲಭನಾ..?
ಹೆಜ್ಜೆ ಹೆಜ್ಜೆಗೂ ಸವಾಲಿನ ಚಕ್ರವ್ಯೂಹ, ಹೇಗೆದೆ ಬಿಗ್ ಚಾಲೆಂಜ್?
ಬಿಸಿಸಿಐ ಆಜ್ಞೆಗೆ ತಲೆ ಬಾಗಿರುವ ಭಾರತದ ಯಂಗ್ ಬ್ಯಾಟರ್
ಯಂಗ್ ಕ್ರಿಕೆಟರ್ ಇಶನ್ ಕಿಶನ್ಗೆ ಕೆಟ್ಟ ಮೇಲೆ ಕೊನೆಗೂ ಬುದ್ಧಿ ಬಂದಂತಿದೆ. ಬಿಸಿಸಿಐ ಮಾತನ್ನೇ ದಿಕ್ಕರಿಸಿದ್ದ ಕಿಶನ್, ವಿಧಿಯಿಲ್ಲದೇ ಇದೀಗ ಅದೇ ಬಿಗ್ಬಾಸ್ಗಳಿಗೆ ಬೆಂಡ್ ಆಗಿದ್ದಾರೆ. ಬಿಸಿಸಿಐ ಆಜ್ಞೆಯಂತೆ ಡೊಮೆಸ್ಟಿಕ್ ಕ್ರಿಕೆಟ್ ಆಡಲು ಸಜ್ಜಾಗಿದ್ದಾರೆ. ಆ ಮೂಲಕ ಟೀಮ್ ಇಂಡಿಯಾಗೆ ಎಂಟ್ರಿಕೊಡುವ ತವಕದಲ್ಲಿದ್ದಾರೆ. ಆದ್ರೆ ಅದು ಕಲ್ಲು ಮುಳ್ಳಿನ ಹಾದಿಯಾಗಿದೆ. ಹೆಜ್ಜೆ ಹೆಜ್ಜೆಗೂ ಸವಾಲಿನ ಚಕ್ರವ್ಯೂಹವಿದೆ.
ಕೆಟ್ಟ ಮೇಲೆ ಬುದ್ಧಿ ಕಲಿತ್ರಾ ಜಾರ್ಖಂಡ್ ಪುತ್ತರ್..?
ಸ್ವಯಂಕೃತ ಅಪರಾಧದಿಂದ ಯಂಗ್ಗನ್ ಕಿಶನ್ ಟೀಮ್ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. ಬಿಸಿಸಿಐ ಸೆಂಟರ್ ಕಾಂಟ್ರ್ಯಾಕ್ಟ್ ಲಿಸ್ಟ್ನಿಂದಲೂ ಔಟ್ ಆಗಿದ್ದಾರೆ. ಎಲ್ಲೂ ಸಲ್ಲದ ಕಿಶನ್ ಕೆಟ್ಟ ಮೇಲೆ ಬುದ್ಧಿ ಕಲಿತಿದ್ದಾರೆ. ಅಂದು ಯಾವ ಬಿಸಿಸಿಐ ಮಾತನ್ನ ತಿರಸ್ಕರಿಸಿ ಟೀಮ್ ಇಂಡಿಯಾದಿಂದ ಹೊರಬಿದ್ರೋ, ಅದೇ ಕಿಶನ್ ಇದೀಗ ಬಿಗ್ಬಾಸ್ಗಳ ಮಾತಿಗೆ ಬೆಲೆ ಕೊಟ್ಟು ಡೊಮೆಸ್ಟಿಕ್ ಕ್ರಿಕೆಟ್ ಆಡಲು ಸಜ್ಜಾಗಿದ್ದಾರೆ.
ಇದನ್ನೂ ಓದಿ: ಕೇರಳದ ಕಣ್ಣೀರು.. ಮೃತದೇಹದ ಜೊತೆ ಲಕ್ಷ, ಲಕ್ಷ ಮೌಲ್ಯದ ಮಾಂಗಲ್ಯ ಸರ, ಚಿನ್ನಾಭರಣ ಪತ್ತೆ; ಆಮೇಲೇನಾಯ್ತು?
ಯಂಗ್ ಪ್ಲೇಯರ್ ಮುಂದಿವೆ ಸಾಲು ಸಾಲು ಚಾಲೆಂಜ್ಗಳು
2024-25ನೇ ಸಾಲಿನ ಡೊಮೆಸ್ಟಿಕ್ ಸೀಸನ್ ಸೆಪ್ಟೆಂಬರ್ನಿಂದ ಅರಂಭಗೊಳ್ಳಲಿದೆ. ಅಕ್ಟೊಬರ್ 11 ರಿಂದ ಶುರುವಾಗಲಿರೋ ರಣಜಿ ಟ್ರೋಫಿಯಲ್ಲಿ ತಾವು ಜಾರ್ಖಂಡ್ ಪರ ಆಡುವುದಾಗಿ ಹೇಳಿದ್ದಾರೆ. ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ ಅಬ್ಬರಿಸಿ ಮತ್ತೆ ಭಾರತ ತಂಡಕ್ಕೆ ಎಂಟ್ರಿ ಕೊಡುವ ಇರಾದೆಯಲ್ಲಿದ್ದಾರೆ. ಕಿಶನ್ ಏನೋ ಡೊಮೆಸ್ಟಿಕ್ ಕ್ರಿಕೆಟ್ ಆಡಿ ಮತ್ತೆ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಲು ಹಂಬಲಿಸ್ತಿದ್ದಾರೆ. ಆದರೆ ಕಮ್ಬ್ಯಾಕ್ ಹಾದಿ ಸುಲಭವಿಲ್ಲ. ಹೆಜ್ಜೆ ಹೆಜ್ಜೆಗೂ ಹೊಸ ಸವಾಲುಗಳಿವೆ.
ಚಾಲೆಂಜ್ ನಂ.1- ಫಾರ್ಮ್ ಕಂಡುಕೊಳ್ಳುವಿಕೆ
ಕಿಶನ್ ಸ್ಪರ್ಧಾತ್ಮಕ ಕ್ರಿಕೆಟ್ನಿಂದ ದೂರ ಉಳಿದು 9 ತಿಂಗಳಾಗಿದೆ. ಸುದೀರ್ಘ ಕಾಲ ಕ್ರಿಕೆಟ್ ಆಡದ ಲೆಫ್ಟಿ ಬ್ಯಾಟರ್ ಡೊಮೆಸ್ಟಿಕ್ನಲ್ಲಿ ಫಾರ್ಮ್ ಕಂಡುಕೊಳ್ಳುವುದು ಬಹುಮುಖ್ಯ. ರಣಜಿ, ವಿಜಯ್ ಹಜಾರೆ ಹಾಗೂ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ರನ್ ಗಳಿಸಿ ಆಯ್ಕೆಗಾರರನ್ನ ಇಂಪ್ರೆಸ್ ಮಾಡಬೇಕಿದೆ.
ಚಾಲೆಂಜ್ ನಂ.2- ಫಿಟ್ನೆಸ್ ಪ್ರೂವ್ ಮಾಡುವುದು
ಟೀಮ್ ಇಂಡಿಯಾಗೆ ಕಮ್ಬ್ಯಾಕ್ಗೆ ಫಾರ್ಮ್ ಒಂದೇ ಸಾಕಾಗಲ್ಲ. ಫಿಟ್ನೆಸ್ ಕೂಡ ಪ್ರೂವ್ ಮಾಡುವ ಅಗತ್ಯವಿದೆ. ನೂತನ ಹೆಡ್ಕೋಚ್ ಗಂಭೀರ್ ಫಿಟ್ನೆಸ್ಗೆ ಹೆಚ್ಚು ಒತ್ತು ಕೊಡ್ತಿದ್ದಾರೆ. ಫಾರ್ಮ್ ಇದ್ದೂ ಫಿಟ್ ಇಲ್ಲವಾದ್ರೆ ತಂಡದಲ್ಲಿ ಜಾಗವಿಲ್ಲ. ಹೀಗಾಗಿ ಕಿಶನ್ ಎರಡನ್ನೂ ಕಾಯ್ದುಕೊಳ್ಳಬೇಕಿದೆ.
ಚಾಲೆಂಜ್ ನಂ.3- ನಡವಳಿಕೆಯಲ್ಲಿ ಬದಲಾವಣೆ
ಕಿಶನ್ ತಂಡದಿಂದ ಹೊರಬೀಳಲು ಅವರ ನಡವಳಿಕೆ ಕಾರಣವಾಗಿತ್ತು. ಕಳೆದ ವರ್ಷ ದಕ್ಷಿಣ ಪ್ರವಾಸದ ನಡುವೆ ತಂಡ ತೊರೆದು ದೇಶಕ್ಕೆ ವಾಪಸಾಗಿದ್ರು. ಬಳಿಕ ಬಿಸಿಸಿಐ ಡೊಮೆಸ್ಟಿಕ್ ಕ್ರಿಕೆಟ್ ಆಡುವಂತೆ ಸೂಚಿಸಿದ್ರು ಕ್ಯಾರೇ ಅಂದಿರ್ಲಿಲ್ಲ. ಈ ನಡವಳಿಕೆ ಬಿಸಿಸಿಐ ಕಣ್ಣು ಕೆಂಪಾಗಿಸಿತ್ತು. ಇನ್ಮುಂದೆ ಇಂತಹ ನಡವಳಿಕೆ ರಿಪೀಟ್ ಆಗದಂತೆ ಎಚ್ಚರವಹಿಸಬೇಕಿದೆ.
ಇದನ್ನೂ ಓದಿ: ಕೊನೆಗೂ ಟೀಮ್ ಇಂಡಿಯಾದ ವೀಕ್ನೆಸ್ ಬಟಾ ಬಯಲು.. ರೋಹಿತ್ ಪಡೆಗೆ ಕಾಡ್ತಿದೆ ಆ ಒಂದು ಸಮಸ್ಯೆ!
ಚಾಲೆಂಜ್ ನಂ.4- ಸ್ಥಾನಕ್ಕಾಗಿ ತೀವ್ರ ಪೈಪೋಟಿ
ಕಿಶನ್ ಡೊಮೆಸ್ಟಿಕ್ನಲ್ಲಿ ಸಾಲಿಡ್ ಪರ್ಫಾಮೆನ್ಸ್ ನೀಡಿದ್ರೂ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಲು ಪ್ರಬಲ ಪೈಪೋಟಿ ಎದುರಿಸಬೇಕಿದೆ. ಈಗಾಗ್ಲೇ ತಂಡದಲ್ಲಿ ಸಿಕ್ಕಾಪಟ್ಟೆ ಸ್ಫರ್ದೆ ಇದೆ. ವಿಕೆಟ್ ಕೀಪರ್ಗಳಾಗಿ ರಿಷಬ್ ಪಂತ್, ಕೆಎಲ್ ರಾಹುಲ್ ಹಾಗೂ ಸಂಜು ಸ್ಯಾಮ್ಸನ್ ತಂಡದಲ್ಲಿದ್ದಾರೆ. ಇವರನ್ನ ಓವರ್ಟೇಕ್ ಮಾಡಿ ಚಾನ್ಸ್ ಗಿಟ್ಟಿಸಿಕೊಳ್ಳುವುದು ಸುಲಭವಿಲ್ಲ. ಕಿಶನ್ರಿಂದ EXTRAORDINARY ಪರ್ಫಾಮೆನ್ಸ್ ಮೂಡಿ ಬಂದರಷ್ಟೇ ಅದು ಸಾಧ್ಯ.
ಇದನ್ನೂ ಓದಿ: ವಯನಾಡು ದುರಂತದ ಬಗ್ಗೆ ಗಿಣಿ ಎಚ್ಚರಿಕೆ.. ಮಾಲೀಕನ ಕುಟುಂಬ, ಅವರ ಸ್ನೇಹಿತರ ಬಚಾವ್ ಮಾಡಿದ ಕಿಂಗಿಣಿ
ಕಮ್ಬ್ಯಾಕ್ಗೆ ಪಣತೊಟ್ಟಿರೋ ರೆಬೆಲ್ ಇಶನ್ ಕಿಶನ್ ಮುಂದೆ ಸಾಲು ಸಾಲು ಸವಾಲಿದೆ. ಆ ಚಾಲೆಂಜಸ್ಗಳನ್ನ ಯಶಸ್ವಿಯಾಗಿ ಮೆಟ್ಟಿ ನಿಲ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಟೀಮ್ ಇಂಡಿಯಾ ಕಮ್ಬ್ಯಾಕ್ ಹಾದಿ ಕಿಶನ್ಗೆ ಸುಲಭನಾ..?
ಹೆಜ್ಜೆ ಹೆಜ್ಜೆಗೂ ಸವಾಲಿನ ಚಕ್ರವ್ಯೂಹ, ಹೇಗೆದೆ ಬಿಗ್ ಚಾಲೆಂಜ್?
ಬಿಸಿಸಿಐ ಆಜ್ಞೆಗೆ ತಲೆ ಬಾಗಿರುವ ಭಾರತದ ಯಂಗ್ ಬ್ಯಾಟರ್
ಯಂಗ್ ಕ್ರಿಕೆಟರ್ ಇಶನ್ ಕಿಶನ್ಗೆ ಕೆಟ್ಟ ಮೇಲೆ ಕೊನೆಗೂ ಬುದ್ಧಿ ಬಂದಂತಿದೆ. ಬಿಸಿಸಿಐ ಮಾತನ್ನೇ ದಿಕ್ಕರಿಸಿದ್ದ ಕಿಶನ್, ವಿಧಿಯಿಲ್ಲದೇ ಇದೀಗ ಅದೇ ಬಿಗ್ಬಾಸ್ಗಳಿಗೆ ಬೆಂಡ್ ಆಗಿದ್ದಾರೆ. ಬಿಸಿಸಿಐ ಆಜ್ಞೆಯಂತೆ ಡೊಮೆಸ್ಟಿಕ್ ಕ್ರಿಕೆಟ್ ಆಡಲು ಸಜ್ಜಾಗಿದ್ದಾರೆ. ಆ ಮೂಲಕ ಟೀಮ್ ಇಂಡಿಯಾಗೆ ಎಂಟ್ರಿಕೊಡುವ ತವಕದಲ್ಲಿದ್ದಾರೆ. ಆದ್ರೆ ಅದು ಕಲ್ಲು ಮುಳ್ಳಿನ ಹಾದಿಯಾಗಿದೆ. ಹೆಜ್ಜೆ ಹೆಜ್ಜೆಗೂ ಸವಾಲಿನ ಚಕ್ರವ್ಯೂಹವಿದೆ.
ಕೆಟ್ಟ ಮೇಲೆ ಬುದ್ಧಿ ಕಲಿತ್ರಾ ಜಾರ್ಖಂಡ್ ಪುತ್ತರ್..?
ಸ್ವಯಂಕೃತ ಅಪರಾಧದಿಂದ ಯಂಗ್ಗನ್ ಕಿಶನ್ ಟೀಮ್ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. ಬಿಸಿಸಿಐ ಸೆಂಟರ್ ಕಾಂಟ್ರ್ಯಾಕ್ಟ್ ಲಿಸ್ಟ್ನಿಂದಲೂ ಔಟ್ ಆಗಿದ್ದಾರೆ. ಎಲ್ಲೂ ಸಲ್ಲದ ಕಿಶನ್ ಕೆಟ್ಟ ಮೇಲೆ ಬುದ್ಧಿ ಕಲಿತಿದ್ದಾರೆ. ಅಂದು ಯಾವ ಬಿಸಿಸಿಐ ಮಾತನ್ನ ತಿರಸ್ಕರಿಸಿ ಟೀಮ್ ಇಂಡಿಯಾದಿಂದ ಹೊರಬಿದ್ರೋ, ಅದೇ ಕಿಶನ್ ಇದೀಗ ಬಿಗ್ಬಾಸ್ಗಳ ಮಾತಿಗೆ ಬೆಲೆ ಕೊಟ್ಟು ಡೊಮೆಸ್ಟಿಕ್ ಕ್ರಿಕೆಟ್ ಆಡಲು ಸಜ್ಜಾಗಿದ್ದಾರೆ.
ಇದನ್ನೂ ಓದಿ: ಕೇರಳದ ಕಣ್ಣೀರು.. ಮೃತದೇಹದ ಜೊತೆ ಲಕ್ಷ, ಲಕ್ಷ ಮೌಲ್ಯದ ಮಾಂಗಲ್ಯ ಸರ, ಚಿನ್ನಾಭರಣ ಪತ್ತೆ; ಆಮೇಲೇನಾಯ್ತು?
ಯಂಗ್ ಪ್ಲೇಯರ್ ಮುಂದಿವೆ ಸಾಲು ಸಾಲು ಚಾಲೆಂಜ್ಗಳು
2024-25ನೇ ಸಾಲಿನ ಡೊಮೆಸ್ಟಿಕ್ ಸೀಸನ್ ಸೆಪ್ಟೆಂಬರ್ನಿಂದ ಅರಂಭಗೊಳ್ಳಲಿದೆ. ಅಕ್ಟೊಬರ್ 11 ರಿಂದ ಶುರುವಾಗಲಿರೋ ರಣಜಿ ಟ್ರೋಫಿಯಲ್ಲಿ ತಾವು ಜಾರ್ಖಂಡ್ ಪರ ಆಡುವುದಾಗಿ ಹೇಳಿದ್ದಾರೆ. ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ ಅಬ್ಬರಿಸಿ ಮತ್ತೆ ಭಾರತ ತಂಡಕ್ಕೆ ಎಂಟ್ರಿ ಕೊಡುವ ಇರಾದೆಯಲ್ಲಿದ್ದಾರೆ. ಕಿಶನ್ ಏನೋ ಡೊಮೆಸ್ಟಿಕ್ ಕ್ರಿಕೆಟ್ ಆಡಿ ಮತ್ತೆ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಲು ಹಂಬಲಿಸ್ತಿದ್ದಾರೆ. ಆದರೆ ಕಮ್ಬ್ಯಾಕ್ ಹಾದಿ ಸುಲಭವಿಲ್ಲ. ಹೆಜ್ಜೆ ಹೆಜ್ಜೆಗೂ ಹೊಸ ಸವಾಲುಗಳಿವೆ.
ಚಾಲೆಂಜ್ ನಂ.1- ಫಾರ್ಮ್ ಕಂಡುಕೊಳ್ಳುವಿಕೆ
ಕಿಶನ್ ಸ್ಪರ್ಧಾತ್ಮಕ ಕ್ರಿಕೆಟ್ನಿಂದ ದೂರ ಉಳಿದು 9 ತಿಂಗಳಾಗಿದೆ. ಸುದೀರ್ಘ ಕಾಲ ಕ್ರಿಕೆಟ್ ಆಡದ ಲೆಫ್ಟಿ ಬ್ಯಾಟರ್ ಡೊಮೆಸ್ಟಿಕ್ನಲ್ಲಿ ಫಾರ್ಮ್ ಕಂಡುಕೊಳ್ಳುವುದು ಬಹುಮುಖ್ಯ. ರಣಜಿ, ವಿಜಯ್ ಹಜಾರೆ ಹಾಗೂ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ರನ್ ಗಳಿಸಿ ಆಯ್ಕೆಗಾರರನ್ನ ಇಂಪ್ರೆಸ್ ಮಾಡಬೇಕಿದೆ.
ಚಾಲೆಂಜ್ ನಂ.2- ಫಿಟ್ನೆಸ್ ಪ್ರೂವ್ ಮಾಡುವುದು
ಟೀಮ್ ಇಂಡಿಯಾಗೆ ಕಮ್ಬ್ಯಾಕ್ಗೆ ಫಾರ್ಮ್ ಒಂದೇ ಸಾಕಾಗಲ್ಲ. ಫಿಟ್ನೆಸ್ ಕೂಡ ಪ್ರೂವ್ ಮಾಡುವ ಅಗತ್ಯವಿದೆ. ನೂತನ ಹೆಡ್ಕೋಚ್ ಗಂಭೀರ್ ಫಿಟ್ನೆಸ್ಗೆ ಹೆಚ್ಚು ಒತ್ತು ಕೊಡ್ತಿದ್ದಾರೆ. ಫಾರ್ಮ್ ಇದ್ದೂ ಫಿಟ್ ಇಲ್ಲವಾದ್ರೆ ತಂಡದಲ್ಲಿ ಜಾಗವಿಲ್ಲ. ಹೀಗಾಗಿ ಕಿಶನ್ ಎರಡನ್ನೂ ಕಾಯ್ದುಕೊಳ್ಳಬೇಕಿದೆ.
ಚಾಲೆಂಜ್ ನಂ.3- ನಡವಳಿಕೆಯಲ್ಲಿ ಬದಲಾವಣೆ
ಕಿಶನ್ ತಂಡದಿಂದ ಹೊರಬೀಳಲು ಅವರ ನಡವಳಿಕೆ ಕಾರಣವಾಗಿತ್ತು. ಕಳೆದ ವರ್ಷ ದಕ್ಷಿಣ ಪ್ರವಾಸದ ನಡುವೆ ತಂಡ ತೊರೆದು ದೇಶಕ್ಕೆ ವಾಪಸಾಗಿದ್ರು. ಬಳಿಕ ಬಿಸಿಸಿಐ ಡೊಮೆಸ್ಟಿಕ್ ಕ್ರಿಕೆಟ್ ಆಡುವಂತೆ ಸೂಚಿಸಿದ್ರು ಕ್ಯಾರೇ ಅಂದಿರ್ಲಿಲ್ಲ. ಈ ನಡವಳಿಕೆ ಬಿಸಿಸಿಐ ಕಣ್ಣು ಕೆಂಪಾಗಿಸಿತ್ತು. ಇನ್ಮುಂದೆ ಇಂತಹ ನಡವಳಿಕೆ ರಿಪೀಟ್ ಆಗದಂತೆ ಎಚ್ಚರವಹಿಸಬೇಕಿದೆ.
ಇದನ್ನೂ ಓದಿ: ಕೊನೆಗೂ ಟೀಮ್ ಇಂಡಿಯಾದ ವೀಕ್ನೆಸ್ ಬಟಾ ಬಯಲು.. ರೋಹಿತ್ ಪಡೆಗೆ ಕಾಡ್ತಿದೆ ಆ ಒಂದು ಸಮಸ್ಯೆ!
ಚಾಲೆಂಜ್ ನಂ.4- ಸ್ಥಾನಕ್ಕಾಗಿ ತೀವ್ರ ಪೈಪೋಟಿ
ಕಿಶನ್ ಡೊಮೆಸ್ಟಿಕ್ನಲ್ಲಿ ಸಾಲಿಡ್ ಪರ್ಫಾಮೆನ್ಸ್ ನೀಡಿದ್ರೂ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಲು ಪ್ರಬಲ ಪೈಪೋಟಿ ಎದುರಿಸಬೇಕಿದೆ. ಈಗಾಗ್ಲೇ ತಂಡದಲ್ಲಿ ಸಿಕ್ಕಾಪಟ್ಟೆ ಸ್ಫರ್ದೆ ಇದೆ. ವಿಕೆಟ್ ಕೀಪರ್ಗಳಾಗಿ ರಿಷಬ್ ಪಂತ್, ಕೆಎಲ್ ರಾಹುಲ್ ಹಾಗೂ ಸಂಜು ಸ್ಯಾಮ್ಸನ್ ತಂಡದಲ್ಲಿದ್ದಾರೆ. ಇವರನ್ನ ಓವರ್ಟೇಕ್ ಮಾಡಿ ಚಾನ್ಸ್ ಗಿಟ್ಟಿಸಿಕೊಳ್ಳುವುದು ಸುಲಭವಿಲ್ಲ. ಕಿಶನ್ರಿಂದ EXTRAORDINARY ಪರ್ಫಾಮೆನ್ಸ್ ಮೂಡಿ ಬಂದರಷ್ಟೇ ಅದು ಸಾಧ್ಯ.
ಇದನ್ನೂ ಓದಿ: ವಯನಾಡು ದುರಂತದ ಬಗ್ಗೆ ಗಿಣಿ ಎಚ್ಚರಿಕೆ.. ಮಾಲೀಕನ ಕುಟುಂಬ, ಅವರ ಸ್ನೇಹಿತರ ಬಚಾವ್ ಮಾಡಿದ ಕಿಂಗಿಣಿ
ಕಮ್ಬ್ಯಾಕ್ಗೆ ಪಣತೊಟ್ಟಿರೋ ರೆಬೆಲ್ ಇಶನ್ ಕಿಶನ್ ಮುಂದೆ ಸಾಲು ಸಾಲು ಸವಾಲಿದೆ. ಆ ಚಾಲೆಂಜಸ್ಗಳನ್ನ ಯಶಸ್ವಿಯಾಗಿ ಮೆಟ್ಟಿ ನಿಲ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ