ಘಟಾನುಘಟಿ ಕುಸ್ತಿಪಟುಗಳನ್ನು ಮಕಾಡೆ ಮಲಗಿಸಿದ್ದ ಪೋಗಟ್
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ವಿನೇಶ್ಗೆ ಎದುರಾದ ಸವಾಲುಗಳಾವುವು?
ಪಿ.ಟಿ. ಉಷಾ ಅವರ ಜೊತೆ ಪ್ರಧಾನಿ ಮೋದಿ ಮಹತ್ವದ ಮಾತುಕತೆ
ಪ್ಯಾರಿಸ್: ಒಲಿಂಪಿಕ್ಸ್ ಅಂಗಳದಲ್ಲಿ ಮಹಾ ಘಟಾಘಟಿಗಳನ್ನು ಚಿತ್ ಕೆಡವಿ ಮೊಟ್ಟ ಮೊದಲ ಬಾರಿಗೆ ಒಲಿಂಪಿಕ್ಸ್ ಅಂಗಳದಲ್ಲಿ ಭಾರತೀಯ ಹೆಮ್ಮೆಯ ನಾರಿಯೊಬ್ಬಳು ಕುಸ್ತಿ ಪಂದ್ಯಾವಳಿಯಲ್ಲಿ ಫೈನಲ್ ಪ್ರವೇಶಿಸಿದ್ದರು. ಪ್ಯಾರಿಸ್ ಅಖಾಡದಲ್ಲಿ ಭಾರತದ ಗರಿಮೆಗೆ ಮತ್ತಷ್ಟು ಗರಿ ಮೂಡಿಸಿದ್ದ ವಿನೇಶ್ ಪೋಗಟ್ ಈಗ ಫೈನಲ್ ಪಂದ್ಯದಿಂದ ಅನರ್ಹಗೊಂಡಿದ್ದಾರೆ. 100 ಗ್ರಾಂ ತೂಕ ಹೆಚ್ಚಾಗಿದ್ದೊಂದೇ ಕಾರಣವನ್ನು ಮುಂದಿಟ್ಟುಕೊಂಡು ಈಗ ಪೋಗಟ್ರನ್ನ ಆಚೆ ಇಡಲಾಗಿದೆ.
ಇದನ್ನೂ ಓದಿ: ವಿನೇಶ್ ಫೋಗಟ್ 100 ಗ್ರಾಂ ತೂಕ ಹೆಚ್ಚಾಗಿದ್ದು ಹೇಗೆ? ಒಲಿಂಪಿಕ್ಸ್ನಲ್ಲೂ ಕುಸ್ತಿಪಟುಗೆ ಮೋಸ ಆಯ್ತಾ?
ಒಲಿಂಪಿಕ್ಸ್ ಕಣದಲ್ಲಿ ಕುಸ್ತಿಪಟು ವಿನೇಶ್ ಎದುರಿಸಿದ್ದ ಸವಾಲುಗಳು ಸಾಮಾನ್ಯಗಳಲ್ಲ. ವಿಶ್ವದ ನಂಬರ್ ಒನ್ ಕುಸ್ತಿ ಪಟುಗಳನ್ನು ನೆಲಕ್ಕೆ ಕೆಡವಿ ಅಂತಿಮ ಪಂದ್ಯಕ್ಕೆ ಪ್ರವೇಶ ಪಡೆದಿದ್ದರು. 2020ರಲ್ಲಿ ಟೋಕಿಯೊ ಚಾಂಪಿಯನ್ ಯುಯಿ ಸುಸಾಕಿಯನ್ನ ಚಿತ್ ಕೆಡುವುವ ಮೂಲಕ ಅವರು ಕ್ವಾರ್ಟರ್ಫೈನಲ್ಗೆ ಅರ್ಹತೆ ಪಡೆದಿದ್ದರು.
ಇದನ್ನೂ ಓದಿ: ವಿನೇಶ್ ಫೋಗಟ್ ಆಸ್ಪತ್ರೆಗೆ ದಾಖಲು.. ದೇಹದ ತೂಕ ದಿಢೀರ್ ಹೆಚ್ಚಾಗಲು ಕಾರಣವೇನು? ಅಸಲಿಗೆ ಆಗಿದ್ದೇನು?
ನಂತರ ಕ್ವಾರ್ಟರ್ ಫೈನಲ್ನಲ್ಲಿ ವಿನೇಶ್ ಉಕ್ರೇನ್ ಒಕ್ಸಾನಾ ಲಿವಾಚ್ ಅವರನ್ನು ಎದುರಿಸಿದ್ದರು. ಲಿವಾಚ್ಳನ್ನ 7-5 ಅಂತರದಲ್ಲಿ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದ್ದ ಕುಸ್ತಿ ವೀರಾಂಗಣಿ, ಅಂತಿಮ ಸುತ್ತಿನ ಪಂದ್ಯದಲ್ಲಿ ಕ್ಯೂಬಾದ ಯುಸ್ನೆಲಿಸ್ ಗುಜ್ಮಾನ್ ಲೋಪೆಜ್ ಅವರನ್ನು ಸೋಲಿಸಿದ್ರು ಆ ಸಂದರ್ಭದಲ್ಲಿಯೇ ಪೋಗಾಟ್ ಅವರ ಕೊರಳಿಗೆ ಪದಕ ಬೀಳುವುದು ಖಚಿತವಾಗಿ ಹೋಗಿತ್ತು. ಆದ್ರೆ ಅದು ಚಿನ್ನವಾ, ಬೆಳ್ಳಿಯಾ ಅನ್ನೋದು ನಿರ್ಧಾರವಾಗುವ ಮುನ್ನವೇ ವಿನೇಶ್ ಪೋಗಟ್ ತೂಕದ ಕಾರಣವಾಗಿ ಫೈನಲ್ನ ಅಖಾಡದಲ್ಲಿ ಸೆಣೆಸಾಡುವುದರಿಂದ ಅನರ್ಹಗೊಂಡಿದ್ದಾರೆ.
ಸುಮ್ಮನೆ ಕುಳಿತಿಲ್ಲ ಭಾರತ: ಕೇಂದ್ರ ಸರ್ಕಾರದ ಮುಂದಿನ ನಡೆಯೇನು?
ವಿನೇಶ್ ಪೋಗಟ್ ಅನರ್ಹತೆಯ ವಿಷಯ ಈಗ ಇಡೀ ದೇಶಾದ್ಯಂತ ಸುದ್ದಿಯಾಗಿದೆ. ಎಲ್ಲಾ ಸವಾಲುಗಳನ್ನು ಟೀಕೆಗಳನ್ನು ಮೆಟ್ಟಿ ನಿಂತು ಕುಸ್ತಿ ಅಂಗಳದಲ್ಲಿಯೇ ತನ್ನ ಸಾಮರ್ಥ್ಯವನ್ನು ಸಾಬೀತು ಮಾಡಿದ ವಿನೇಶ್ಗೆ ಹೀಗಾಗಿದ್ದು ಎಲ್ಲರಿಗೂ ಬೇಸರ ತರಿಸಿದೆ. ಇದನ್ನು ಮನಗಂಡಿರುವ ಪ್ರಧಾನಿ ನರೇಂದ್ರ ಮೋದಿ, ಇಂಡಿಯನ್ ಒಲಿಂಪಿಕ್ಸ್ ಅಸೋಸಿಯೇಷನ್ನ ಅಧ್ಯಕ್ಷೆ ಪಿ.ಟಿ ಉಷಾ ಅವರೊಂದಿಗೆ ಮಾತನಾಡಿದ್ದಾರೆ. ಪಿ.ಟಿ.ಉಷಾರಿಂದ ಸಂಪೂರ್ಣ ಮಾಹಿತಿ ಪಡೆದಿರುವ ಪ್ರಧಾನಿ ನರೇಂದ್ರ ಮೋದಿ ವಿನೇಶ್ ಪೋಗಟ್ಗೆ ಬೆಂಬಲಕ್ಕೆ ನಿಲ್ಲಲು ಏನೆಲ್ಲಾ ಸಾಧ್ಯವೋ ಅದನ್ನೆಲ್ಲಾ ಮಾಡಲು ಸೂಚನೆ ನೀಡಿದ್ದಾರೆ. ಅಗತ್ಯ ಬಿದ್ದಲ್ಲಿ ಪ್ರಬಲ ಪ್ರತಿಭಟನೆ ದಾಖಲಿಸಲೂ ಮುಂದಾಗಿ ಎಂದು ಸೂಚನೆ ನೀಡಿದ್ದಾರೆ. ಆದ್ರೆ ಸದ್ಯಕ್ಕೆ ಒಲಿಂಪಿಕ್ಸ್ ನಿಯಮದ ಅನ್ವಯ ಅನರ್ಹತೆಯ ವಿರುದ್ಧ ಮೇಲ್ಮನವಿ ಸಲ್ಲಿಸಲು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯಲ್ಲಿ ಅವಕಾಶವಿಲ್ಲ. ಹೀಗಾಗಿ ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಅನ್ನೋದು ಸದ್ಯಕ್ಕೆ ಕುತೂಹಲ ಮೂಡಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಘಟಾನುಘಟಿ ಕುಸ್ತಿಪಟುಗಳನ್ನು ಮಕಾಡೆ ಮಲಗಿಸಿದ್ದ ಪೋಗಟ್
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ವಿನೇಶ್ಗೆ ಎದುರಾದ ಸವಾಲುಗಳಾವುವು?
ಪಿ.ಟಿ. ಉಷಾ ಅವರ ಜೊತೆ ಪ್ರಧಾನಿ ಮೋದಿ ಮಹತ್ವದ ಮಾತುಕತೆ
ಪ್ಯಾರಿಸ್: ಒಲಿಂಪಿಕ್ಸ್ ಅಂಗಳದಲ್ಲಿ ಮಹಾ ಘಟಾಘಟಿಗಳನ್ನು ಚಿತ್ ಕೆಡವಿ ಮೊಟ್ಟ ಮೊದಲ ಬಾರಿಗೆ ಒಲಿಂಪಿಕ್ಸ್ ಅಂಗಳದಲ್ಲಿ ಭಾರತೀಯ ಹೆಮ್ಮೆಯ ನಾರಿಯೊಬ್ಬಳು ಕುಸ್ತಿ ಪಂದ್ಯಾವಳಿಯಲ್ಲಿ ಫೈನಲ್ ಪ್ರವೇಶಿಸಿದ್ದರು. ಪ್ಯಾರಿಸ್ ಅಖಾಡದಲ್ಲಿ ಭಾರತದ ಗರಿಮೆಗೆ ಮತ್ತಷ್ಟು ಗರಿ ಮೂಡಿಸಿದ್ದ ವಿನೇಶ್ ಪೋಗಟ್ ಈಗ ಫೈನಲ್ ಪಂದ್ಯದಿಂದ ಅನರ್ಹಗೊಂಡಿದ್ದಾರೆ. 100 ಗ್ರಾಂ ತೂಕ ಹೆಚ್ಚಾಗಿದ್ದೊಂದೇ ಕಾರಣವನ್ನು ಮುಂದಿಟ್ಟುಕೊಂಡು ಈಗ ಪೋಗಟ್ರನ್ನ ಆಚೆ ಇಡಲಾಗಿದೆ.
ಇದನ್ನೂ ಓದಿ: ವಿನೇಶ್ ಫೋಗಟ್ 100 ಗ್ರಾಂ ತೂಕ ಹೆಚ್ಚಾಗಿದ್ದು ಹೇಗೆ? ಒಲಿಂಪಿಕ್ಸ್ನಲ್ಲೂ ಕುಸ್ತಿಪಟುಗೆ ಮೋಸ ಆಯ್ತಾ?
ಒಲಿಂಪಿಕ್ಸ್ ಕಣದಲ್ಲಿ ಕುಸ್ತಿಪಟು ವಿನೇಶ್ ಎದುರಿಸಿದ್ದ ಸವಾಲುಗಳು ಸಾಮಾನ್ಯಗಳಲ್ಲ. ವಿಶ್ವದ ನಂಬರ್ ಒನ್ ಕುಸ್ತಿ ಪಟುಗಳನ್ನು ನೆಲಕ್ಕೆ ಕೆಡವಿ ಅಂತಿಮ ಪಂದ್ಯಕ್ಕೆ ಪ್ರವೇಶ ಪಡೆದಿದ್ದರು. 2020ರಲ್ಲಿ ಟೋಕಿಯೊ ಚಾಂಪಿಯನ್ ಯುಯಿ ಸುಸಾಕಿಯನ್ನ ಚಿತ್ ಕೆಡುವುವ ಮೂಲಕ ಅವರು ಕ್ವಾರ್ಟರ್ಫೈನಲ್ಗೆ ಅರ್ಹತೆ ಪಡೆದಿದ್ದರು.
ಇದನ್ನೂ ಓದಿ: ವಿನೇಶ್ ಫೋಗಟ್ ಆಸ್ಪತ್ರೆಗೆ ದಾಖಲು.. ದೇಹದ ತೂಕ ದಿಢೀರ್ ಹೆಚ್ಚಾಗಲು ಕಾರಣವೇನು? ಅಸಲಿಗೆ ಆಗಿದ್ದೇನು?
ನಂತರ ಕ್ವಾರ್ಟರ್ ಫೈನಲ್ನಲ್ಲಿ ವಿನೇಶ್ ಉಕ್ರೇನ್ ಒಕ್ಸಾನಾ ಲಿವಾಚ್ ಅವರನ್ನು ಎದುರಿಸಿದ್ದರು. ಲಿವಾಚ್ಳನ್ನ 7-5 ಅಂತರದಲ್ಲಿ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದ್ದ ಕುಸ್ತಿ ವೀರಾಂಗಣಿ, ಅಂತಿಮ ಸುತ್ತಿನ ಪಂದ್ಯದಲ್ಲಿ ಕ್ಯೂಬಾದ ಯುಸ್ನೆಲಿಸ್ ಗುಜ್ಮಾನ್ ಲೋಪೆಜ್ ಅವರನ್ನು ಸೋಲಿಸಿದ್ರು ಆ ಸಂದರ್ಭದಲ್ಲಿಯೇ ಪೋಗಾಟ್ ಅವರ ಕೊರಳಿಗೆ ಪದಕ ಬೀಳುವುದು ಖಚಿತವಾಗಿ ಹೋಗಿತ್ತು. ಆದ್ರೆ ಅದು ಚಿನ್ನವಾ, ಬೆಳ್ಳಿಯಾ ಅನ್ನೋದು ನಿರ್ಧಾರವಾಗುವ ಮುನ್ನವೇ ವಿನೇಶ್ ಪೋಗಟ್ ತೂಕದ ಕಾರಣವಾಗಿ ಫೈನಲ್ನ ಅಖಾಡದಲ್ಲಿ ಸೆಣೆಸಾಡುವುದರಿಂದ ಅನರ್ಹಗೊಂಡಿದ್ದಾರೆ.
ಸುಮ್ಮನೆ ಕುಳಿತಿಲ್ಲ ಭಾರತ: ಕೇಂದ್ರ ಸರ್ಕಾರದ ಮುಂದಿನ ನಡೆಯೇನು?
ವಿನೇಶ್ ಪೋಗಟ್ ಅನರ್ಹತೆಯ ವಿಷಯ ಈಗ ಇಡೀ ದೇಶಾದ್ಯಂತ ಸುದ್ದಿಯಾಗಿದೆ. ಎಲ್ಲಾ ಸವಾಲುಗಳನ್ನು ಟೀಕೆಗಳನ್ನು ಮೆಟ್ಟಿ ನಿಂತು ಕುಸ್ತಿ ಅಂಗಳದಲ್ಲಿಯೇ ತನ್ನ ಸಾಮರ್ಥ್ಯವನ್ನು ಸಾಬೀತು ಮಾಡಿದ ವಿನೇಶ್ಗೆ ಹೀಗಾಗಿದ್ದು ಎಲ್ಲರಿಗೂ ಬೇಸರ ತರಿಸಿದೆ. ಇದನ್ನು ಮನಗಂಡಿರುವ ಪ್ರಧಾನಿ ನರೇಂದ್ರ ಮೋದಿ, ಇಂಡಿಯನ್ ಒಲಿಂಪಿಕ್ಸ್ ಅಸೋಸಿಯೇಷನ್ನ ಅಧ್ಯಕ್ಷೆ ಪಿ.ಟಿ ಉಷಾ ಅವರೊಂದಿಗೆ ಮಾತನಾಡಿದ್ದಾರೆ. ಪಿ.ಟಿ.ಉಷಾರಿಂದ ಸಂಪೂರ್ಣ ಮಾಹಿತಿ ಪಡೆದಿರುವ ಪ್ರಧಾನಿ ನರೇಂದ್ರ ಮೋದಿ ವಿನೇಶ್ ಪೋಗಟ್ಗೆ ಬೆಂಬಲಕ್ಕೆ ನಿಲ್ಲಲು ಏನೆಲ್ಲಾ ಸಾಧ್ಯವೋ ಅದನ್ನೆಲ್ಲಾ ಮಾಡಲು ಸೂಚನೆ ನೀಡಿದ್ದಾರೆ. ಅಗತ್ಯ ಬಿದ್ದಲ್ಲಿ ಪ್ರಬಲ ಪ್ರತಿಭಟನೆ ದಾಖಲಿಸಲೂ ಮುಂದಾಗಿ ಎಂದು ಸೂಚನೆ ನೀಡಿದ್ದಾರೆ. ಆದ್ರೆ ಸದ್ಯಕ್ಕೆ ಒಲಿಂಪಿಕ್ಸ್ ನಿಯಮದ ಅನ್ವಯ ಅನರ್ಹತೆಯ ವಿರುದ್ಧ ಮೇಲ್ಮನವಿ ಸಲ್ಲಿಸಲು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯಲ್ಲಿ ಅವಕಾಶವಿಲ್ಲ. ಹೀಗಾಗಿ ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಅನ್ನೋದು ಸದ್ಯಕ್ಕೆ ಕುತೂಹಲ ಮೂಡಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ