newsfirstkannada.com

ಪ್ರಿಯಕರನ ಜೊತೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಹೆಂಡತಿಯಿಂದ ಗಂಡನ ಕೊಲೆ; ಆಮೇಲೇನಾಯ್ತು?

Share :

Published August 11, 2024 at 4:01pm

    ಪ್ರಿಯಕರನ ಜೊತೆ ಇರುವಾಗಲೇ ಸಿಕ್ಕಿಬಿದ್ದ ಹೆಂಡತಿ ಮಾಡಿದ್ದೇನು?

    ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯ ಕತ್ತು ಹಿಸುಕಿ ಕೊಂದ್ರಾ?

    ಗಂಡನನ್ನು ಕೊಂದ ಹೆಂಡತಿ ಮಾಡಿದ ಡ್ರಾಮಾ ನೋಡಿ ಅನುಮಾನ!

ಬೆಂಗಳೂರು: ಪ್ರಿಯಕರನ ಜೊತೆ ಇರುವಾಗಲೇ ಸಿಕ್ಕಿಬಿದ್ದ ಹೆಂಡತಿಯೇ ಗಂಡನನ್ನು ಕತ್ತು ಹಿಸುಕಿ ಕೊಂದಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿ ಮಹೇಶ್ ಕೊಲೆಯಾದ ದುರ್ದೈವಿ.

ಇದನ್ನೂ ಓದಿ: ಇಂದೇ ತರುಣ್​ ಜೊತೆ ಬನಾರಸ್ ಬ್ಯೂಟಿ ಮದುವೆ ಆಗಿದ್ದೇಕೆ? ರಿವೀಲ್ ಮಾಡಿದ ಸೋನಲ್; ಏನದು?

ಹಾಸನ ಮೂಲದ ಮಹೇಶ್ ಹಾಗೂ ತೇಜಸ್ವಿನಿ ಕೆಲ ವರ್ಷಗಳ ಹಿಂದೆ ಮದುವೆಯಾಗಿ ಬೆಂಗಳೂರಿಗೆ ಬಂದಿದ್ದರು. ಮಹೇಶ್ ಆಟೋ ಚಾಲಕನಾಗಿದ್ದ. ತೇಜಸ್ವಿನಿ ಖಾಸಗಿ ಫೈನಾನ್ಸ್‌ನಲ್ಲಿ ಸಾಲ ವಸೂಲಾತಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಇವರಿಬ್ಬರ ಮಧ್ಯೆ ಕಳೆದ ಒಂದು ವರ್ಷದಿಂದ ಇಬ್ಬರ ನಡುವೆ ಕೌಟುಂಬಿಕ ಕಲಹವಿತ್ತು.

ಗಂಡ, ಹೆಂಡತಿ ಈ ಜಗಳದ ಮಧ್ಯೆ ತೇಜಸ್ವಿನಿ ತನ್ನ ಆಫೀಸ್‌ನ ಗಜೇಂದ್ರನ ಜೊತೆ ಸ್ನೇಹ ಬೆಳೆಸಿದ್ದಳು. ಈ ವಿಚಾರ ಗೊತ್ತಾಗಿ ಗಂಡ ಮಹೇಶ್, ತೇಜಸ್ವಿನಿಗೆ ಬುದ್ಧಿವಾದ ಹೇಳಿದ್ದ. ಆದರೂ ತೇಜಸ್ವಿನಿ ಬುದ್ಧಿ ಕಲಿತಿರಲಿಲ್ಲ.

ಇದನ್ನೂ ಓದಿ: ದರ್ಶನ್​ ಬಗ್ಗೆ ಮಾತಾಡುತ್ತಿದ್ದಂತೆ ಭಾವುಕರಾದ ತರುಣ್​ ಸುಧೀರ್​; ಮತ್ತೆ ಕಾಟೇರನ ಭೇಟಿ ಬಗ್ಗೆ ಹೇಳಿದ್ದೇನು?

ಕಳೆದ ಆಗಸ್ಟ್ 9ರಂದು ಮಹೇಶ್ ಕೆಲಸಕ್ಕೆ ಹೋಗಿದ್ದಾಗ ಗಜೇಂದ್ರ ಮನೆಗೆ ಬಂದಿದ್ದಾನೆ. ಮಧ್ಯಾಹ್ನ ಮಹೇಶ್ ಮನೆಗೆ ಬಂದಾಗ ಗಜೇಂದ್ರ ಹೆಂಡತಿ ಜೊತೆ ಮನೆಯಲ್ಲಿದ್ದ. ಈ ವೇಳೆ ಮಹೇಶ್ ತನ್ನ ಪತ್ನಿ ಮೇಲೆ ಹಲ್ಲೆ ಮಾಡಿದ್ದಾನೆ. ಗಜೇಂದ್ರ ಜಗಳ ಬಿಡಿಸಲು ಬಂದಾಗ ಆತನಿಗೂ ಥಳಿಸಿದ್ದಾನೆ. ಆಗ ಗಜೇಂದ್ರ ಹಾಗೂ ತೇಜಸ್ವಿನಿ ಸೇರಿ ಮಹೇಶ್ ಕುತ್ತಿಗೆ ಹಿಡಿದು ಹತ್ಯೆ ಮಾಡಿದ್ದಾರೆ.

ತೇಜಸ್ವಿನಿ ಗಂಡ ಮಹೇಶ್ ಕೊಲೆಯಾದ ಬಳಿಕ ಗಜೇಂದ್ರ ಮನೆಯಿಂದ ಎಸ್ಕೇಪ್ ಆಗಿದ್ದಾನೆ. ಪತ್ನಿ, ನನ್ನ ಗಂಡ ಮಹೇಶ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ ಎಂದು ನಾಟಕ ಮಾಡಿದ್ದಾಳೆ. ಜೋರಾಗಿ ಚೀರಾಡುತ್ತಾ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ ಎಂದು ಡ್ರಾಮಾ ಮಾಡಿದ್ದಾಳೆ. ವೈಟ್ ಫೀಲ್ಡ್ ಪೊಲೀಸರು ಈ ಘಟನೆಯ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದರು. ಪೊಲೀಸರ ವಿಚಾರಣೆ ವೇಳೆ ಪ್ರಿಯತಮ ಹಾಗೂ ಪತ್ನಿಯ ಕಳ್ಳಾಟ ಬಯಲಾಗಿದೆ. 28 ವರ್ಷದ ತೇಜಸ್ವಿನಿ ಹಾಗೂ 36 ವರ್ಷದ ಪ್ರಿಯಕರ ಗಜೇಂದ್ರನನ್ನು ಪೊಲೀಸರು ಬಂಧಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಿಯಕರನ ಜೊತೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಹೆಂಡತಿಯಿಂದ ಗಂಡನ ಕೊಲೆ; ಆಮೇಲೇನಾಯ್ತು?

https://newsfirstlive.com/wp-content/uploads/2024/08/Bangalore-Wife-Murder-2.jpg

    ಪ್ರಿಯಕರನ ಜೊತೆ ಇರುವಾಗಲೇ ಸಿಕ್ಕಿಬಿದ್ದ ಹೆಂಡತಿ ಮಾಡಿದ್ದೇನು?

    ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯ ಕತ್ತು ಹಿಸುಕಿ ಕೊಂದ್ರಾ?

    ಗಂಡನನ್ನು ಕೊಂದ ಹೆಂಡತಿ ಮಾಡಿದ ಡ್ರಾಮಾ ನೋಡಿ ಅನುಮಾನ!

ಬೆಂಗಳೂರು: ಪ್ರಿಯಕರನ ಜೊತೆ ಇರುವಾಗಲೇ ಸಿಕ್ಕಿಬಿದ್ದ ಹೆಂಡತಿಯೇ ಗಂಡನನ್ನು ಕತ್ತು ಹಿಸುಕಿ ಕೊಂದಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿ ಮಹೇಶ್ ಕೊಲೆಯಾದ ದುರ್ದೈವಿ.

ಇದನ್ನೂ ಓದಿ: ಇಂದೇ ತರುಣ್​ ಜೊತೆ ಬನಾರಸ್ ಬ್ಯೂಟಿ ಮದುವೆ ಆಗಿದ್ದೇಕೆ? ರಿವೀಲ್ ಮಾಡಿದ ಸೋನಲ್; ಏನದು?

ಹಾಸನ ಮೂಲದ ಮಹೇಶ್ ಹಾಗೂ ತೇಜಸ್ವಿನಿ ಕೆಲ ವರ್ಷಗಳ ಹಿಂದೆ ಮದುವೆಯಾಗಿ ಬೆಂಗಳೂರಿಗೆ ಬಂದಿದ್ದರು. ಮಹೇಶ್ ಆಟೋ ಚಾಲಕನಾಗಿದ್ದ. ತೇಜಸ್ವಿನಿ ಖಾಸಗಿ ಫೈನಾನ್ಸ್‌ನಲ್ಲಿ ಸಾಲ ವಸೂಲಾತಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಇವರಿಬ್ಬರ ಮಧ್ಯೆ ಕಳೆದ ಒಂದು ವರ್ಷದಿಂದ ಇಬ್ಬರ ನಡುವೆ ಕೌಟುಂಬಿಕ ಕಲಹವಿತ್ತು.

ಗಂಡ, ಹೆಂಡತಿ ಈ ಜಗಳದ ಮಧ್ಯೆ ತೇಜಸ್ವಿನಿ ತನ್ನ ಆಫೀಸ್‌ನ ಗಜೇಂದ್ರನ ಜೊತೆ ಸ್ನೇಹ ಬೆಳೆಸಿದ್ದಳು. ಈ ವಿಚಾರ ಗೊತ್ತಾಗಿ ಗಂಡ ಮಹೇಶ್, ತೇಜಸ್ವಿನಿಗೆ ಬುದ್ಧಿವಾದ ಹೇಳಿದ್ದ. ಆದರೂ ತೇಜಸ್ವಿನಿ ಬುದ್ಧಿ ಕಲಿತಿರಲಿಲ್ಲ.

ಇದನ್ನೂ ಓದಿ: ದರ್ಶನ್​ ಬಗ್ಗೆ ಮಾತಾಡುತ್ತಿದ್ದಂತೆ ಭಾವುಕರಾದ ತರುಣ್​ ಸುಧೀರ್​; ಮತ್ತೆ ಕಾಟೇರನ ಭೇಟಿ ಬಗ್ಗೆ ಹೇಳಿದ್ದೇನು?

ಕಳೆದ ಆಗಸ್ಟ್ 9ರಂದು ಮಹೇಶ್ ಕೆಲಸಕ್ಕೆ ಹೋಗಿದ್ದಾಗ ಗಜೇಂದ್ರ ಮನೆಗೆ ಬಂದಿದ್ದಾನೆ. ಮಧ್ಯಾಹ್ನ ಮಹೇಶ್ ಮನೆಗೆ ಬಂದಾಗ ಗಜೇಂದ್ರ ಹೆಂಡತಿ ಜೊತೆ ಮನೆಯಲ್ಲಿದ್ದ. ಈ ವೇಳೆ ಮಹೇಶ್ ತನ್ನ ಪತ್ನಿ ಮೇಲೆ ಹಲ್ಲೆ ಮಾಡಿದ್ದಾನೆ. ಗಜೇಂದ್ರ ಜಗಳ ಬಿಡಿಸಲು ಬಂದಾಗ ಆತನಿಗೂ ಥಳಿಸಿದ್ದಾನೆ. ಆಗ ಗಜೇಂದ್ರ ಹಾಗೂ ತೇಜಸ್ವಿನಿ ಸೇರಿ ಮಹೇಶ್ ಕುತ್ತಿಗೆ ಹಿಡಿದು ಹತ್ಯೆ ಮಾಡಿದ್ದಾರೆ.

ತೇಜಸ್ವಿನಿ ಗಂಡ ಮಹೇಶ್ ಕೊಲೆಯಾದ ಬಳಿಕ ಗಜೇಂದ್ರ ಮನೆಯಿಂದ ಎಸ್ಕೇಪ್ ಆಗಿದ್ದಾನೆ. ಪತ್ನಿ, ನನ್ನ ಗಂಡ ಮಹೇಶ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ ಎಂದು ನಾಟಕ ಮಾಡಿದ್ದಾಳೆ. ಜೋರಾಗಿ ಚೀರಾಡುತ್ತಾ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ ಎಂದು ಡ್ರಾಮಾ ಮಾಡಿದ್ದಾಳೆ. ವೈಟ್ ಫೀಲ್ಡ್ ಪೊಲೀಸರು ಈ ಘಟನೆಯ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದರು. ಪೊಲೀಸರ ವಿಚಾರಣೆ ವೇಳೆ ಪ್ರಿಯತಮ ಹಾಗೂ ಪತ್ನಿಯ ಕಳ್ಳಾಟ ಬಯಲಾಗಿದೆ. 28 ವರ್ಷದ ತೇಜಸ್ವಿನಿ ಹಾಗೂ 36 ವರ್ಷದ ಪ್ರಿಯಕರ ಗಜೇಂದ್ರನನ್ನು ಪೊಲೀಸರು ಬಂಧಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More