newsfirstkannada.com

ಏಕದಿನ ಸರಣಿಗೆ ಆಯ್ಕೆ ಮಾಡದೆ ಭಾರೀ ಮೋಸ; ಕೊನೆಗೂ ಮೌನಮುರಿದ ಸಂಜು ಸ್ಯಾಮ್ಸನ್​​!

Share :

Published August 11, 2024 at 5:52pm

    ಶ್ರೀಲಂಕಾ ವಿರುದ್ಧ ಏಕದಿನ ಸರಣಿಗೆ ಭಾರತ ತಂಡದಲ್ಲಿ ಸಿಗಲಿಲ್ಲ ಸ್ಥಾನ

    ನಾನು ಈ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ ಎಂದ ವಿಕೆಟ್​ ಕೀಪರ್ ಸ್ಯಾಮ್ಸನ್..​​!​​

    ದಕ್ಷಿಣ ಆಫ್ರಿಕಾ ವಿರುದ್ದ ಅಬ್ಬರದ ಶತಕ ಸಿಡಿಸಿದ್ದ ಸ್ಟಾರ್​ ಪ್ಲೇಯರ್​​ ಸಂಜು

ಶ್ರೀಲಂಕಾ ವಿರುದ್ಧ ಏಕದಿನ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದ ಬಗ್ಗೆ ಸ್ಟಾರ್​ ವಿಕೆಟ್​ ಕೀಪರ್​ ಬ್ಯಾಟರ್​​​ ಸಂಜು ಸ್ಯಾಮ್ಸನ್​ ರಿಯಾಕ್ಟ್​ ಮಾಡಿದ್ದಾರೆ. ಅವಕಾಶ ನೀಡಿದ್ರೆ ಆಡುತ್ತೇನೆ. ಇಲ್ಲದೆ ಹೋದಲ್ಲಿ ಸುಮ್ಮನೆ ಇರುತ್ತೇನೆ. ನಾನು ಯಾವುದರ ಬಗ್ಗೆ ಕೂಡ ಹೆಚ್ಚು ಯೋಚನೆ ಮಾಡುವುದಿಲ್ಲ ಎಂದರು ಸಂಜು ಸ್ಯಾಮ್ಸನ್​​.

ಕಳೆದ ವರ್ಷ ದಕ್ಷಿಣ ಆಫ್ರಿಕಾ ವಿರುದ್ದ ನಡೆದ ಏಕದಿನ ಪಂದ್ಯದಲ್ಲಿ ಸಂಜು ಸ್ಯಾಮ್ಸನ್​ ಶತಕ ಬಾರಿಸಿದ್ದರು. ಈ ಮೂಲಕ ಟೀಮ್​ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಟ್ರೋಫಿ ಗೆಲ್ಲಲು ಪ್ರಮುಖ ಪಾತ್ರವಹಿಸಿದ್ದರು. ಹಾಗಾಗಿ ಏಕದಿನ ತಂಡದಲ್ಲಿ ಸಂಜು ಸ್ಯಾಮ್ಸನ್​ಗೆ ಸ್ಥಾನ ಸಿಗಬಹುದು ಎಂದು ಭಾವಿಸಲಾಗಿತ್ತು. ಆದರೆ, ಟೀಮ್​ ಇಂಡಿಯಾ ಸೆಲೆಕ್ಷನ್​ ಕಮಿಟಿ ಕೆ.ಎಲ್​ ರಾಹುಲ್​ ಮತ್ತು ಪಂತ್​ ಅವರನ್ನು ಆಯ್ಕೆ ಮಾಡಿದ್ದರು.

ಸಂಜು ಸ್ಯಾಮ್ಸನ್​ ರಿಯಾಕ್ಷನ್​ ಹೇಗಿತ್ತು..?

ಇನ್ನು, ಇತ್ತೀಚೆಗೆ ಖಾಸಗಿ ಚಾನೆಲ್​ ಒಂದರಲ್ಲಿ ಭಾಗಿವಾಹಿಸಿದ್ದ ಸಂಜು ಸ್ಯಾಮ್ಸನ್​​ ಈ ಬಗ್ಗೆ ಮಾತಾಡಿದ್ದಾರೆ. ನಾನು ಇದರ ಬಗ್ಗೆ ಯೋಚಿಸುವುದಿಲ್ಲ. ಅವಕಾಶ ಸಿಕ್ಕರೆ ಆಡುತ್ತೇನೆ, ಇಲ್ಲವಾದಲ್ಲಿ ಇಲ್ಲ. ಯಾವಾಗಲೂ ನನಗೆ ತಂಡದ ಮುಖ್ಯ ಎಂದರು.

ಟೀಮ್​ ಇಂಡಿಯಾ ಪರ ಯಾವಾಗ ಬೇಕಾದ್ರೂ ಆಡುತ್ತೇನೆ. ನನ್ನನ್ನು ಅವರು ಕರೆಯಲೇಬೇಕು ಎಂದು ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಹಾಗಾಗಿ ನನಗೆ ಯಾವುದೇ ಸಮಸ್ಯೆ ಇಲ್ಲ. ಸದಾ ಸಕಾರಾತ್ಮಕವಾಗಿ ಇರಲು ಪ್ರಯತ್ನಿಸುತ್ತೇನೆ ಎಂದರು.

ಇದನ್ನೂ ಓದಿ: IPL 2025: ಆರ್​​​ಸಿಬಿಗೆ ಸ್ಫೋಟಕ ಬ್ಯಾಟರ್​ ಎಂಟ್ರಿ.. ಬೆಂಗಳೂರು ತಂಡದಿಂದ ಮಾಸ್ಟರ್​ ಪ್ಲಾನ್​​!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಏಕದಿನ ಸರಣಿಗೆ ಆಯ್ಕೆ ಮಾಡದೆ ಭಾರೀ ಮೋಸ; ಕೊನೆಗೂ ಮೌನಮುರಿದ ಸಂಜು ಸ್ಯಾಮ್ಸನ್​​!

https://newsfirstlive.com/wp-content/uploads/2024/07/Sanju-Samson_Gambhir.jpg

    ಶ್ರೀಲಂಕಾ ವಿರುದ್ಧ ಏಕದಿನ ಸರಣಿಗೆ ಭಾರತ ತಂಡದಲ್ಲಿ ಸಿಗಲಿಲ್ಲ ಸ್ಥಾನ

    ನಾನು ಈ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ ಎಂದ ವಿಕೆಟ್​ ಕೀಪರ್ ಸ್ಯಾಮ್ಸನ್..​​!​​

    ದಕ್ಷಿಣ ಆಫ್ರಿಕಾ ವಿರುದ್ದ ಅಬ್ಬರದ ಶತಕ ಸಿಡಿಸಿದ್ದ ಸ್ಟಾರ್​ ಪ್ಲೇಯರ್​​ ಸಂಜು

ಶ್ರೀಲಂಕಾ ವಿರುದ್ಧ ಏಕದಿನ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದ ಬಗ್ಗೆ ಸ್ಟಾರ್​ ವಿಕೆಟ್​ ಕೀಪರ್​ ಬ್ಯಾಟರ್​​​ ಸಂಜು ಸ್ಯಾಮ್ಸನ್​ ರಿಯಾಕ್ಟ್​ ಮಾಡಿದ್ದಾರೆ. ಅವಕಾಶ ನೀಡಿದ್ರೆ ಆಡುತ್ತೇನೆ. ಇಲ್ಲದೆ ಹೋದಲ್ಲಿ ಸುಮ್ಮನೆ ಇರುತ್ತೇನೆ. ನಾನು ಯಾವುದರ ಬಗ್ಗೆ ಕೂಡ ಹೆಚ್ಚು ಯೋಚನೆ ಮಾಡುವುದಿಲ್ಲ ಎಂದರು ಸಂಜು ಸ್ಯಾಮ್ಸನ್​​.

ಕಳೆದ ವರ್ಷ ದಕ್ಷಿಣ ಆಫ್ರಿಕಾ ವಿರುದ್ದ ನಡೆದ ಏಕದಿನ ಪಂದ್ಯದಲ್ಲಿ ಸಂಜು ಸ್ಯಾಮ್ಸನ್​ ಶತಕ ಬಾರಿಸಿದ್ದರು. ಈ ಮೂಲಕ ಟೀಮ್​ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಟ್ರೋಫಿ ಗೆಲ್ಲಲು ಪ್ರಮುಖ ಪಾತ್ರವಹಿಸಿದ್ದರು. ಹಾಗಾಗಿ ಏಕದಿನ ತಂಡದಲ್ಲಿ ಸಂಜು ಸ್ಯಾಮ್ಸನ್​ಗೆ ಸ್ಥಾನ ಸಿಗಬಹುದು ಎಂದು ಭಾವಿಸಲಾಗಿತ್ತು. ಆದರೆ, ಟೀಮ್​ ಇಂಡಿಯಾ ಸೆಲೆಕ್ಷನ್​ ಕಮಿಟಿ ಕೆ.ಎಲ್​ ರಾಹುಲ್​ ಮತ್ತು ಪಂತ್​ ಅವರನ್ನು ಆಯ್ಕೆ ಮಾಡಿದ್ದರು.

ಸಂಜು ಸ್ಯಾಮ್ಸನ್​ ರಿಯಾಕ್ಷನ್​ ಹೇಗಿತ್ತು..?

ಇನ್ನು, ಇತ್ತೀಚೆಗೆ ಖಾಸಗಿ ಚಾನೆಲ್​ ಒಂದರಲ್ಲಿ ಭಾಗಿವಾಹಿಸಿದ್ದ ಸಂಜು ಸ್ಯಾಮ್ಸನ್​​ ಈ ಬಗ್ಗೆ ಮಾತಾಡಿದ್ದಾರೆ. ನಾನು ಇದರ ಬಗ್ಗೆ ಯೋಚಿಸುವುದಿಲ್ಲ. ಅವಕಾಶ ಸಿಕ್ಕರೆ ಆಡುತ್ತೇನೆ, ಇಲ್ಲವಾದಲ್ಲಿ ಇಲ್ಲ. ಯಾವಾಗಲೂ ನನಗೆ ತಂಡದ ಮುಖ್ಯ ಎಂದರು.

ಟೀಮ್​ ಇಂಡಿಯಾ ಪರ ಯಾವಾಗ ಬೇಕಾದ್ರೂ ಆಡುತ್ತೇನೆ. ನನ್ನನ್ನು ಅವರು ಕರೆಯಲೇಬೇಕು ಎಂದು ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಹಾಗಾಗಿ ನನಗೆ ಯಾವುದೇ ಸಮಸ್ಯೆ ಇಲ್ಲ. ಸದಾ ಸಕಾರಾತ್ಮಕವಾಗಿ ಇರಲು ಪ್ರಯತ್ನಿಸುತ್ತೇನೆ ಎಂದರು.

ಇದನ್ನೂ ಓದಿ: IPL 2025: ಆರ್​​​ಸಿಬಿಗೆ ಸ್ಫೋಟಕ ಬ್ಯಾಟರ್​ ಎಂಟ್ರಿ.. ಬೆಂಗಳೂರು ತಂಡದಿಂದ ಮಾಸ್ಟರ್​ ಪ್ಲಾನ್​​!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More