ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಟೂರ್ನಿ!
ಆಕ್ಷನ್ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಭರ್ಜರಿ ತಯಾರಿ
ಆರ್ಸಿಬಿಗೆ ಎಂಟ್ರಿ ಕೊಟಲಿದ್ದಾರೆ ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್
2025ರ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಭರ್ಜರಿ ತಯಾರಿ ನಡೆಯುತ್ತಿದೆ. ಯಾರನ್ನು ತಂಡದಿಂದ ಕೈ ಬಿಡಬೇಕು? ಯಾರನ್ನು ರಿಲೀಸ್ ಮಾಡಬೇಕು? ಅನ್ನೋ ಚರ್ಚೆಗಳು ಕೂಡ ಜೋರಾಗಿವೆ. ಆರ್ಸಿಬಿ ಕೂಡ ಎಷ್ಟು ಆಟಗಾರರನ್ನು ಉಳಿಸಿಕೊಳ್ಳಲಿದೆ ಎಂಬ ಕುತೂಹಲ ಫ್ಯಾನ್ಸ್ಗೆ ಇದೆ.
ಐಪಿಎಲ್ 18ನೇ ಸೀಸನ್ಗೂ ಮುನ್ನ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ಹರಾಜಿಗೆ ಮುನ್ನ ಮಾಲೀಕರು ರೀಟೈನ್ ಮತ್ತು ರಿಲೀಸ್ ಲಿಸ್ಟ್ ರೆಡಿ ಮಾಡಿ ಬಿಸಿಸಿಐಗೆ ಸಲ್ಲಿಸಬೇಕಿದೆ. ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಫಾಫ್ ಡುಪ್ಲೆಸಿಸ್, ರಿಷಭ್ ಪಂತ್ ಸೇರಿ ಹಲವರನ್ನು ಐಪಿಎಲ್ ತಂಡಗಳು ರಿಲೀಸ್ ಮಾಡಲಿವೆ. ಈಗಿನ ವರದಿಗಳ ಪ್ರಕಾರ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ಬಿಡುವ ಸಾಧ್ಯತೆ ಇದೆ ಎಂಬ ಸುದ್ದಿ ಕೇಳಿ ಬಂದಿದೆ.
ಹಾರ್ದಿಕ್ ಪಾಂಡ್ಯ ಕೈ ಬಿಡಲು ಕಾರಣವೇನು?
ಕಳೆದ ಆವೃತ್ತಿಯ ಹರಾಜಿನ ವೇಳೆ ಗುಜರಾತ್ ಟೈಟನ್ಸ್ನಿಂದ ಮುಂಬೈ ಇಂಡಿಯನ್ಸ್ ಹಾರ್ದಿಕ್ ಪಾಂಡ್ಯ ಅವರನ್ನು ಟ್ರೇಡ್ ಮಾಡಿಕೊಂಡಿತ್ತು. ಆದರೆ, ಹಾರ್ದಿಕ್ ಅವರ ಪ್ರತಿ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡಿಲ್ಲ ಎನ್ನಲಾಗುತ್ತಿದೆ. ಈ ಕಾರಣದಿಂದಾಗಿ, ತಂಡದ ನಿರ್ವಹಣಾ ಮಂಡಳಿ ಅವರ ಬಗ್ಗೆ ಅಸಮಾಧಾನ ಹೊಂದಿದೆ. ಮುಂಬೈ ಮುಂದಿನ ಆವೃತ್ತಿಗೆ ತನ್ನ ನಾಯಕನನ್ನು ಬದಲಾಯಿಸುವ ನಿರೀಕ್ಷೆಯಲ್ಲಿದೆ.
ಹಾರ್ದಿಕ್ ಪಾಂಡ್ಯ ಮೇಲೆ ಆರ್ಸಿಬಿ ಕಣ್ಣು
ಆರ್ಸಿಬಿ ತಂಡದ ನಾಯಕ ಫಾಫ್ ಡುಪ್ಲೇಸಿಸ್ ಅವರನ್ನು ರಿಲೀಸ್ ಮಾಡಲಿದೆ. ಹೀಗಾಗಿ ಆರ್ಸಿಬಿ ಭವಿಷ್ಯದ ದೃಷ್ಟಿಯಿಂದ ಹಾರ್ದಿಕ್ ಪಾಂಡ್ಯ ಅವರನ್ನು ಆರ್ಸಿಬಿ ಖರೀದಿ ಮಾಡಬೇಕು ಎಂದು ಪ್ಲಾನ್ ಮಾಡಿಕೊಂಡಿದೆ. ಹಾರ್ದಿಕ್ ಪಾಂಡ್ಯ ಆರ್ಸಿಬಿ ತಂಡ ಸೇರಿಕೊಂಡರೆ ಮಿಡ್ಲ್ ಆರ್ಡರ್ ಬ್ಯಾಟಿಂಗ್ ಬಲಗೊಳ್ಳಲಿದೆ. ಇವರು ಆಲ್ರೌಂಡರ್ ಆಗಿದ್ದು, ಬೌಲಿಂಗ್ ಕೂಡ ಮಾಡಬಹುದು. ಜತೆಗೆ ನಾಯಕತ್ವದ ಸಮಸ್ಯೆಗಳಿಗೆ ಪರಿಹಾರ ಕಂಡುಬರುವ ಸಾಧ್ಯತೆ ಇದೆ. ಆದಾಗ್ಯೂ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇನ್ನೂ ಲಭ್ಯವಿಲ್ಲ. ಇದು ನಿಜವಾಗದಿದ್ದರೆ, ಅಭಿಮಾನಿಗಳಿಗೆ ಅತಿ ದೊಡ್ಡ ಸಂತೋಷವಾಗಲಿದೆ.
ಇದನ್ನೂ ಓದಿ: ಆರ್ಸಿಬಿಗೆ ಗುಡ್ನ್ಯೂಸ್.. ಕ್ಯಾಪ್ಟನ್ ಫಾಫ್ ಸ್ಥಾನ ತುಂಬಲಿದ್ದಾರೆ ಈ ಸ್ಟಾರ್ ಆಟಗಾರ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಟೂರ್ನಿ!
ಆಕ್ಷನ್ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಭರ್ಜರಿ ತಯಾರಿ
ಆರ್ಸಿಬಿಗೆ ಎಂಟ್ರಿ ಕೊಟಲಿದ್ದಾರೆ ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್
2025ರ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಭರ್ಜರಿ ತಯಾರಿ ನಡೆಯುತ್ತಿದೆ. ಯಾರನ್ನು ತಂಡದಿಂದ ಕೈ ಬಿಡಬೇಕು? ಯಾರನ್ನು ರಿಲೀಸ್ ಮಾಡಬೇಕು? ಅನ್ನೋ ಚರ್ಚೆಗಳು ಕೂಡ ಜೋರಾಗಿವೆ. ಆರ್ಸಿಬಿ ಕೂಡ ಎಷ್ಟು ಆಟಗಾರರನ್ನು ಉಳಿಸಿಕೊಳ್ಳಲಿದೆ ಎಂಬ ಕುತೂಹಲ ಫ್ಯಾನ್ಸ್ಗೆ ಇದೆ.
ಐಪಿಎಲ್ 18ನೇ ಸೀಸನ್ಗೂ ಮುನ್ನ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ಹರಾಜಿಗೆ ಮುನ್ನ ಮಾಲೀಕರು ರೀಟೈನ್ ಮತ್ತು ರಿಲೀಸ್ ಲಿಸ್ಟ್ ರೆಡಿ ಮಾಡಿ ಬಿಸಿಸಿಐಗೆ ಸಲ್ಲಿಸಬೇಕಿದೆ. ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಫಾಫ್ ಡುಪ್ಲೆಸಿಸ್, ರಿಷಭ್ ಪಂತ್ ಸೇರಿ ಹಲವರನ್ನು ಐಪಿಎಲ್ ತಂಡಗಳು ರಿಲೀಸ್ ಮಾಡಲಿವೆ. ಈಗಿನ ವರದಿಗಳ ಪ್ರಕಾರ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ಬಿಡುವ ಸಾಧ್ಯತೆ ಇದೆ ಎಂಬ ಸುದ್ದಿ ಕೇಳಿ ಬಂದಿದೆ.
ಹಾರ್ದಿಕ್ ಪಾಂಡ್ಯ ಕೈ ಬಿಡಲು ಕಾರಣವೇನು?
ಕಳೆದ ಆವೃತ್ತಿಯ ಹರಾಜಿನ ವೇಳೆ ಗುಜರಾತ್ ಟೈಟನ್ಸ್ನಿಂದ ಮುಂಬೈ ಇಂಡಿಯನ್ಸ್ ಹಾರ್ದಿಕ್ ಪಾಂಡ್ಯ ಅವರನ್ನು ಟ್ರೇಡ್ ಮಾಡಿಕೊಂಡಿತ್ತು. ಆದರೆ, ಹಾರ್ದಿಕ್ ಅವರ ಪ್ರತಿ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡಿಲ್ಲ ಎನ್ನಲಾಗುತ್ತಿದೆ. ಈ ಕಾರಣದಿಂದಾಗಿ, ತಂಡದ ನಿರ್ವಹಣಾ ಮಂಡಳಿ ಅವರ ಬಗ್ಗೆ ಅಸಮಾಧಾನ ಹೊಂದಿದೆ. ಮುಂಬೈ ಮುಂದಿನ ಆವೃತ್ತಿಗೆ ತನ್ನ ನಾಯಕನನ್ನು ಬದಲಾಯಿಸುವ ನಿರೀಕ್ಷೆಯಲ್ಲಿದೆ.
ಹಾರ್ದಿಕ್ ಪಾಂಡ್ಯ ಮೇಲೆ ಆರ್ಸಿಬಿ ಕಣ್ಣು
ಆರ್ಸಿಬಿ ತಂಡದ ನಾಯಕ ಫಾಫ್ ಡುಪ್ಲೇಸಿಸ್ ಅವರನ್ನು ರಿಲೀಸ್ ಮಾಡಲಿದೆ. ಹೀಗಾಗಿ ಆರ್ಸಿಬಿ ಭವಿಷ್ಯದ ದೃಷ್ಟಿಯಿಂದ ಹಾರ್ದಿಕ್ ಪಾಂಡ್ಯ ಅವರನ್ನು ಆರ್ಸಿಬಿ ಖರೀದಿ ಮಾಡಬೇಕು ಎಂದು ಪ್ಲಾನ್ ಮಾಡಿಕೊಂಡಿದೆ. ಹಾರ್ದಿಕ್ ಪಾಂಡ್ಯ ಆರ್ಸಿಬಿ ತಂಡ ಸೇರಿಕೊಂಡರೆ ಮಿಡ್ಲ್ ಆರ್ಡರ್ ಬ್ಯಾಟಿಂಗ್ ಬಲಗೊಳ್ಳಲಿದೆ. ಇವರು ಆಲ್ರೌಂಡರ್ ಆಗಿದ್ದು, ಬೌಲಿಂಗ್ ಕೂಡ ಮಾಡಬಹುದು. ಜತೆಗೆ ನಾಯಕತ್ವದ ಸಮಸ್ಯೆಗಳಿಗೆ ಪರಿಹಾರ ಕಂಡುಬರುವ ಸಾಧ್ಯತೆ ಇದೆ. ಆದಾಗ್ಯೂ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇನ್ನೂ ಲಭ್ಯವಿಲ್ಲ. ಇದು ನಿಜವಾಗದಿದ್ದರೆ, ಅಭಿಮಾನಿಗಳಿಗೆ ಅತಿ ದೊಡ್ಡ ಸಂತೋಷವಾಗಲಿದೆ.
ಇದನ್ನೂ ಓದಿ: ಆರ್ಸಿಬಿಗೆ ಗುಡ್ನ್ಯೂಸ್.. ಕ್ಯಾಪ್ಟನ್ ಫಾಫ್ ಸ್ಥಾನ ತುಂಬಲಿದ್ದಾರೆ ಈ ಸ್ಟಾರ್ ಆಟಗಾರ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ