ಶ್ರಾವಣ ಮಾಸದ 4ನೇ ಸೋಮವಾರದಂದು ಭಕ್ತರಿಂದ ತುಂಬಿದ ದೇವಸ್ಥಾನ
ದೇವಾಲಯಕ್ಕೆ ಜಲಾಭಿಷೇಕ ಮಾಡಿಸಲು ಅಪಾರ ಸಂಖ್ಯೆಯ ಭಕ್ತರು ಆಗಮನ
ಲಾಠಿ ಪ್ರಹಾರದಿಂದ ನಡೆಯಿತೇ ಈ ಕಾಲ್ತುಳಿತ.. ಇದಕ್ಕೆ ಹೊಣೆ ಯಾರು?
ಇಂದು ಬೆಳಗ್ಗೆ ಸಿದ್ಧೇಶ್ವರನಾಥ ದೇವಸ್ಥಾನದಲ್ಲಿ ಕಾಲ್ತುಳಿತ ಸಂಭವಿಸಿದೆ. ಕಾಲ್ತುಳಿತದಿಂದಾಗಿ 3 ಮಹಿಳೆಯರು ಸೇರಿ ಒಟ್ಟು 7 ಜನರು ಸಾವನ್ನಪ್ಪಿದ್ದಾರೆ. 35 ಮಂದಿ ಗಾಯಗೊಂಡಿದ್ದಾರೆ.
ಬಿಹಾರದ ಜೆಹಾನಾಬಾದ್ನಲ್ಲಿರುವ ದೇವಸ್ಥಾನದ ಮಖ್ದುಂಪುರ ಬ್ಲಾಕ್ನ ಬಳಿ ಇರುವ ವನವರ್ ಬೆಟ್ಟದಲ್ಲಿ ಈ ಘಟನೆ ನಡೆದಿದೆ. ಗಾಯಾಳುಗಳನ್ನು ಮಖ್ದುಂಪುರ ಮತ್ತು ಜೆಹಾನಾಬಾದ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ತುಂಗಭದ್ರಾ ಡ್ಯಾಂ ಅಧಿಕಾರಿಗಳ ಯಡವಟ್ಟು, ರೈತರಿಗೆ ಸಂಕಟ.. ಖಾಲಿಯಾಗುತ್ತಿದೆ ನೀರು! ರಿಪೇರಿ ಯಾವಾಗ?
ಶ್ರಾವಣ ಮಾಸದ 4ನೇ ಸೋಮವಾರದಂದು ದೇವಸ್ಥಾನದಲ್ಲಿ ಜನದಟ್ಟಣೆ ಹೆಚ್ಚಾಗಿದೆ. ಜಲಾಭಿಷೇಕ ಮಾಡಿಸಲು ಅಪಾರ ಸಂಖ್ಯೆಯ ಭಕ್ತರು ಆಗಮಿಸಿದ್ದಾರೆ. ಈ ವೇಳೆ ಕಾಲ್ತುಳಿತ ಸಂಭವಿಸಿದೆ.
ಇದನ್ನೂ ಓದಿ: ಕೋಸ್ಟಾ ಹಾಟ್ ಚಾಕೊಲೇಟ್ ಸೇವಿಸೋ ಮುನ್ನ ಹುಷಾರ್.. ಸಾವಿಗೆ ಕಾರಣವಾಯ್ತು ಒಂದೇ ಒಂದು ಸಿಪ್!
ಕಾಲ್ತುಳಿತ ವೇಳೆ ಸಂಬಂಧಿಕರನ್ನು ಕಳೆದುಕೊಂಡ ವ್ಯಕ್ತಿಯೊಬ್ಬರು ಈ ಘಟನೆ ಬಗ್ಗೆ ಮಾತನಾಡಿದ್ದು, ಆಡಳಿತದ ಕೊರತೆಯಿಂದ ಕಾಲ್ತುಳಿತ ಸಂಭವಿಸಿದೆ. ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ನ ಸಿಬ್ಬಂದಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಆದರೆ ಅವರು ಭಕ್ತರ ಮೇಲೆ ಲಾಠಿ ಪ್ರಹಾರ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕೊಲೆ ಕೇಸ್ಗೆ ಟ್ವಿಸ್ಟ್.. 50 ದಿನವಾದ್ರೂ ಬಯಲಾಗದ ನಟ ದರ್ಶನ್ ಐಫೋನ್ ರಹಸ್ಯ; ಮುಂದೇನು?
ನಂತರ ಮಾತು ಮುಂದುವರೆಸಿದ ಅವರು, ಲಾಠಿ ಪ್ರಹಾರದ ವೇಳೆ ಜನರು ಓಡಲು ಶುರು ಮಾಡಿದ್ದಾರೆ. ಈ ವೇಳೆ ಕೆಲವರು ಬಿದ್ದಿದ್ದಾರೆ. ಇದು ಸಂಪೂರ್ಣ ಆಡಳಿತದ ತಪ್ಪು. ಶ್ರಾವಣ ಸಮಯದಲ್ಲಿ ದೇವಾಲಯದಲ್ಲಿ ಸಾಕಷ್ಟು ಜನರು ಸೇರುತ್ತಾರೆ, ವಿವಿಧ ಊರುಗಳಿಂದ ಜನರು ಇಲ್ಲಿಗೆ ಬರುತ್ತಾರೆ. ಆದರೆ ಪೂಜೆಗೆಂದು ಭಕ್ತರಿಗೆ ಈ ರೀತಿಯ ಘಟನೆ ಎದುರಾಗಿರೋದು ವಿಪರ್ಯಾಸ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಶ್ರಾವಣ ಮಾಸದ 4ನೇ ಸೋಮವಾರದಂದು ಭಕ್ತರಿಂದ ತುಂಬಿದ ದೇವಸ್ಥಾನ
ದೇವಾಲಯಕ್ಕೆ ಜಲಾಭಿಷೇಕ ಮಾಡಿಸಲು ಅಪಾರ ಸಂಖ್ಯೆಯ ಭಕ್ತರು ಆಗಮನ
ಲಾಠಿ ಪ್ರಹಾರದಿಂದ ನಡೆಯಿತೇ ಈ ಕಾಲ್ತುಳಿತ.. ಇದಕ್ಕೆ ಹೊಣೆ ಯಾರು?
ಇಂದು ಬೆಳಗ್ಗೆ ಸಿದ್ಧೇಶ್ವರನಾಥ ದೇವಸ್ಥಾನದಲ್ಲಿ ಕಾಲ್ತುಳಿತ ಸಂಭವಿಸಿದೆ. ಕಾಲ್ತುಳಿತದಿಂದಾಗಿ 3 ಮಹಿಳೆಯರು ಸೇರಿ ಒಟ್ಟು 7 ಜನರು ಸಾವನ್ನಪ್ಪಿದ್ದಾರೆ. 35 ಮಂದಿ ಗಾಯಗೊಂಡಿದ್ದಾರೆ.
ಬಿಹಾರದ ಜೆಹಾನಾಬಾದ್ನಲ್ಲಿರುವ ದೇವಸ್ಥಾನದ ಮಖ್ದುಂಪುರ ಬ್ಲಾಕ್ನ ಬಳಿ ಇರುವ ವನವರ್ ಬೆಟ್ಟದಲ್ಲಿ ಈ ಘಟನೆ ನಡೆದಿದೆ. ಗಾಯಾಳುಗಳನ್ನು ಮಖ್ದುಂಪುರ ಮತ್ತು ಜೆಹಾನಾಬಾದ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ತುಂಗಭದ್ರಾ ಡ್ಯಾಂ ಅಧಿಕಾರಿಗಳ ಯಡವಟ್ಟು, ರೈತರಿಗೆ ಸಂಕಟ.. ಖಾಲಿಯಾಗುತ್ತಿದೆ ನೀರು! ರಿಪೇರಿ ಯಾವಾಗ?
ಶ್ರಾವಣ ಮಾಸದ 4ನೇ ಸೋಮವಾರದಂದು ದೇವಸ್ಥಾನದಲ್ಲಿ ಜನದಟ್ಟಣೆ ಹೆಚ್ಚಾಗಿದೆ. ಜಲಾಭಿಷೇಕ ಮಾಡಿಸಲು ಅಪಾರ ಸಂಖ್ಯೆಯ ಭಕ್ತರು ಆಗಮಿಸಿದ್ದಾರೆ. ಈ ವೇಳೆ ಕಾಲ್ತುಳಿತ ಸಂಭವಿಸಿದೆ.
ಇದನ್ನೂ ಓದಿ: ಕೋಸ್ಟಾ ಹಾಟ್ ಚಾಕೊಲೇಟ್ ಸೇವಿಸೋ ಮುನ್ನ ಹುಷಾರ್.. ಸಾವಿಗೆ ಕಾರಣವಾಯ್ತು ಒಂದೇ ಒಂದು ಸಿಪ್!
ಕಾಲ್ತುಳಿತ ವೇಳೆ ಸಂಬಂಧಿಕರನ್ನು ಕಳೆದುಕೊಂಡ ವ್ಯಕ್ತಿಯೊಬ್ಬರು ಈ ಘಟನೆ ಬಗ್ಗೆ ಮಾತನಾಡಿದ್ದು, ಆಡಳಿತದ ಕೊರತೆಯಿಂದ ಕಾಲ್ತುಳಿತ ಸಂಭವಿಸಿದೆ. ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ನ ಸಿಬ್ಬಂದಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಆದರೆ ಅವರು ಭಕ್ತರ ಮೇಲೆ ಲಾಠಿ ಪ್ರಹಾರ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕೊಲೆ ಕೇಸ್ಗೆ ಟ್ವಿಸ್ಟ್.. 50 ದಿನವಾದ್ರೂ ಬಯಲಾಗದ ನಟ ದರ್ಶನ್ ಐಫೋನ್ ರಹಸ್ಯ; ಮುಂದೇನು?
ನಂತರ ಮಾತು ಮುಂದುವರೆಸಿದ ಅವರು, ಲಾಠಿ ಪ್ರಹಾರದ ವೇಳೆ ಜನರು ಓಡಲು ಶುರು ಮಾಡಿದ್ದಾರೆ. ಈ ವೇಳೆ ಕೆಲವರು ಬಿದ್ದಿದ್ದಾರೆ. ಇದು ಸಂಪೂರ್ಣ ಆಡಳಿತದ ತಪ್ಪು. ಶ್ರಾವಣ ಸಮಯದಲ್ಲಿ ದೇವಾಲಯದಲ್ಲಿ ಸಾಕಷ್ಟು ಜನರು ಸೇರುತ್ತಾರೆ, ವಿವಿಧ ಊರುಗಳಿಂದ ಜನರು ಇಲ್ಲಿಗೆ ಬರುತ್ತಾರೆ. ಆದರೆ ಪೂಜೆಗೆಂದು ಭಕ್ತರಿಗೆ ಈ ರೀತಿಯ ಘಟನೆ ಎದುರಾಗಿರೋದು ವಿಪರ್ಯಾಸ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ