newsfirstkannada.com

ಕೊಹ್ಲಿ, ರೋಹಿತ್ ಬೆನ್ನಲ್ಲೇ ದುಲೀಪ್ ಟ್ರೋಫಿಗೆ ಕೈಕೊಟ್ಟ ಇನ್ನಿಬ್ಬರು ಸ್ಟಾರ್​​..!

Share :

Published August 15, 2024 at 12:13pm

    ಟೀಂ ಇಂಡಿಯಾದ ಮತ್ತಿಬ್ಬರು ಹಿರಿಯ ಆಟಗಾರರು ಆಡಲ್ಲ

    ಅಜಿತ್​ ಅಗರ್ಕರ್​ ನೇತೃತ್ವದ ಸೆಲೆಕ್ಷನ್​ ಸಮಿತಿ ಟೀಮ್​ ಅನೌನ್ಸ್​

    ದುಲೀಪ್ ಟ್ರೋಫಿಯಲ್ಲಿ ಮಿಂಚಿದವ್ರಿಗೆ ಟೆಸ್ಟ್​ ಕ್ರಿಕೆಟ್​ನಲ್ಲಿ ಸ್ಥಾನ

ಶ್ರೀಲಂಕಾ ಪ್ರವಾಸದಲ್ಲಿ ಮುಖಭಂಗ ಅನುಭವಿಸಿದ ಬಳಿಕ ಟೀಮ್​ ಇಂಡಿಯಾ ಮ್ಯಾನೇಜ್​ಮೆಂಟ್​ ಎಚ್ಚರಿಕೆಯ ಹೆಜ್ಜೆ ಇಡಲು ಮುಂದಾಗಿದೆ. ಮುಂಬರೋ ಬಾಂಗ್ಲಾದೇಶ ಸರಣಿಗೆ ಇನ್ನೂ ತಿಂಗಳಿಗೂ ಹೆಚ್ಚು ಕಾಲ ಅಂತರವಿದೆ. ಈ ಗ್ಯಾಪ್​ನಲ್ಲಿ ರೆಸ್ಟ್​ ಮಾಡೋ ಲೆಕ್ಕಾಚಾರದಲ್ಲಿದ್ದ ಆಟಗಾರರಿಗೆ ನಿರೀಕ್ಷೆಯಂತೆ ಹೊಸ ಟಾಸ್ಕ್​ ನೀಡಿದ್ದು ಟೀಮ್​ ಇಂಡಿಯಾದ ಖಾಯಂ ಸ್ಟಾರ್​ಗಳನ್ನ ದುಲೀಪ್​ ಟ್ರೋಫಿಯಲ್ಲಿ ಆಡಿಸಲು ಮುಂದಾಗಿದೆ.

ಬಹು ವರ್ಷಗಳ ಬಳಿಕ ಟೀಮ್​ ಇಂಡಿಯಾದ ಸ್ಟಾರ್​ಗಳಾದ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ ಡೊಮೆಸ್ಟಿಕ್​ ಅಂಗಳಕ್ಕೆ ಮರಳ್ತಾರೆ ಎನ್ನಲಾಗಿತ್ತು. ಬಿಸಿಸಿಐ ಕೂಡ ಈ ಬಗ್ಗೆ ಸೂಚನೆ ನೀಡಿತ್ತು. ರೋಹಿತ್​-ಕೊಹ್ಲಿ ದುಲೀಪ್​ ಟ್ರೋಫಿಯಿಂದ ಹಿಂದೆ ಸರಿದಿದ್ದಾರೆ. ಇವ್ರ ಜೊತೆಗೆ ಸೀನಿಯರ್​ಗಳಾದ ಜಸ್​ಪ್ರಿತ್​ ಬೂಮ್ರಾ, ಆರ್​.ಅಶ್ವಿನ್​ ಕೂಡ ಈ ಟೂರ್ನಿಯಿಂದ ಹೊರಗುಳಿದಿದ್ದಾರೆ.

ಇದನ್ನೂ ಓದಿ:ದುಲೀಪ್​ ಟ್ರೋಫಿಗೆ ತಂಡ ಪ್ರಕಟ; ತಂಡದಲ್ಲಿ ಟೀಂ ಇಂಡಿಯಾ ಸೂಪರ್​​ ಸ್ಟಾರ್​​ಗಳೇ ಹೆಚ್ಚು..!

ಕೆಲ ದಿನಗಳ ಹಿಂದಷ್ಟೇ ಬಿಗ್​ಬಾಸ್​ಗಳ ಜೊತೆ ಸಭೆ ನಡೆಸಿದ್ದ ಕೋಚ್​ ಗೌತಮ್​​ ಗಂಭೀರ್​​, ಚೀಫ್​ ಸೆಲೆಕ್ಟರ್​ ಅಜಿತ್​ ಅಗರ್ಕರ್​ ಮುಂಬರೋ ಟೆಸ್ಟ್​ ಸರಣಿಗಳ ಸಿದ್ಧತೆಯ ಬಗ್ಗೆ ಚರ್ಚಿಸಿದ್ದರು. ಸಿದ್ಧತೆಯ ಭಾಗವಾಗಿ ದುಲೀಪ್​ ಟ್ರೋಫಿಯಲ್ಲಿ ಸ್ಟಾರ್​ ಆಟಗಾರರನ್ನ ಆಡಿಸೋ ನಿರ್ಧಾರ ಮಾಡಿದ್ದರು. ಸೆಪ್ಟೆಂಬರ್​ 5 ರಿಂದ ಆರಂಭವಾಗೋ ಟೂರ್ನಿಗೆ ಅಜಿತ್​ ಅಗರ್ಕರ್​ ನೇತೃತ್ವದ ಸೆಲೆಕ್ಷನ್​ ಕಮಿಟಿ ಟೀಮ್​ ಅನೌನ್ಸ್​ ಮಾಡಿದೆ.

ಇದನ್ನೂ ಓದಿ: ಲಿಂಗ ವಿವಾದದಲ್ಲಿ ಸಿಲುಕಿ ಚಿನ್ನ ಗೆದ್ದ ಬಾಕ್ಸರ್.. ಪ್ಯಾರಿಸ್​ನಿಂದ ಮೂರು F-16 ಜೆಟ್​ಗಳ ರಕ್ಷಣೆಯಲ್ಲಿ ತವರಿಗೆ ವಾಪಸ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊಹ್ಲಿ, ರೋಹಿತ್ ಬೆನ್ನಲ್ಲೇ ದುಲೀಪ್ ಟ್ರೋಫಿಗೆ ಕೈಕೊಟ್ಟ ಇನ್ನಿಬ್ಬರು ಸ್ಟಾರ್​​..!

https://newsfirstlive.com/wp-content/uploads/2023/10/Kohli_Rohit_123.jpg

    ಟೀಂ ಇಂಡಿಯಾದ ಮತ್ತಿಬ್ಬರು ಹಿರಿಯ ಆಟಗಾರರು ಆಡಲ್ಲ

    ಅಜಿತ್​ ಅಗರ್ಕರ್​ ನೇತೃತ್ವದ ಸೆಲೆಕ್ಷನ್​ ಸಮಿತಿ ಟೀಮ್​ ಅನೌನ್ಸ್​

    ದುಲೀಪ್ ಟ್ರೋಫಿಯಲ್ಲಿ ಮಿಂಚಿದವ್ರಿಗೆ ಟೆಸ್ಟ್​ ಕ್ರಿಕೆಟ್​ನಲ್ಲಿ ಸ್ಥಾನ

ಶ್ರೀಲಂಕಾ ಪ್ರವಾಸದಲ್ಲಿ ಮುಖಭಂಗ ಅನುಭವಿಸಿದ ಬಳಿಕ ಟೀಮ್​ ಇಂಡಿಯಾ ಮ್ಯಾನೇಜ್​ಮೆಂಟ್​ ಎಚ್ಚರಿಕೆಯ ಹೆಜ್ಜೆ ಇಡಲು ಮುಂದಾಗಿದೆ. ಮುಂಬರೋ ಬಾಂಗ್ಲಾದೇಶ ಸರಣಿಗೆ ಇನ್ನೂ ತಿಂಗಳಿಗೂ ಹೆಚ್ಚು ಕಾಲ ಅಂತರವಿದೆ. ಈ ಗ್ಯಾಪ್​ನಲ್ಲಿ ರೆಸ್ಟ್​ ಮಾಡೋ ಲೆಕ್ಕಾಚಾರದಲ್ಲಿದ್ದ ಆಟಗಾರರಿಗೆ ನಿರೀಕ್ಷೆಯಂತೆ ಹೊಸ ಟಾಸ್ಕ್​ ನೀಡಿದ್ದು ಟೀಮ್​ ಇಂಡಿಯಾದ ಖಾಯಂ ಸ್ಟಾರ್​ಗಳನ್ನ ದುಲೀಪ್​ ಟ್ರೋಫಿಯಲ್ಲಿ ಆಡಿಸಲು ಮುಂದಾಗಿದೆ.

ಬಹು ವರ್ಷಗಳ ಬಳಿಕ ಟೀಮ್​ ಇಂಡಿಯಾದ ಸ್ಟಾರ್​ಗಳಾದ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ ಡೊಮೆಸ್ಟಿಕ್​ ಅಂಗಳಕ್ಕೆ ಮರಳ್ತಾರೆ ಎನ್ನಲಾಗಿತ್ತು. ಬಿಸಿಸಿಐ ಕೂಡ ಈ ಬಗ್ಗೆ ಸೂಚನೆ ನೀಡಿತ್ತು. ರೋಹಿತ್​-ಕೊಹ್ಲಿ ದುಲೀಪ್​ ಟ್ರೋಫಿಯಿಂದ ಹಿಂದೆ ಸರಿದಿದ್ದಾರೆ. ಇವ್ರ ಜೊತೆಗೆ ಸೀನಿಯರ್​ಗಳಾದ ಜಸ್​ಪ್ರಿತ್​ ಬೂಮ್ರಾ, ಆರ್​.ಅಶ್ವಿನ್​ ಕೂಡ ಈ ಟೂರ್ನಿಯಿಂದ ಹೊರಗುಳಿದಿದ್ದಾರೆ.

ಇದನ್ನೂ ಓದಿ:ದುಲೀಪ್​ ಟ್ರೋಫಿಗೆ ತಂಡ ಪ್ರಕಟ; ತಂಡದಲ್ಲಿ ಟೀಂ ಇಂಡಿಯಾ ಸೂಪರ್​​ ಸ್ಟಾರ್​​ಗಳೇ ಹೆಚ್ಚು..!

ಕೆಲ ದಿನಗಳ ಹಿಂದಷ್ಟೇ ಬಿಗ್​ಬಾಸ್​ಗಳ ಜೊತೆ ಸಭೆ ನಡೆಸಿದ್ದ ಕೋಚ್​ ಗೌತಮ್​​ ಗಂಭೀರ್​​, ಚೀಫ್​ ಸೆಲೆಕ್ಟರ್​ ಅಜಿತ್​ ಅಗರ್ಕರ್​ ಮುಂಬರೋ ಟೆಸ್ಟ್​ ಸರಣಿಗಳ ಸಿದ್ಧತೆಯ ಬಗ್ಗೆ ಚರ್ಚಿಸಿದ್ದರು. ಸಿದ್ಧತೆಯ ಭಾಗವಾಗಿ ದುಲೀಪ್​ ಟ್ರೋಫಿಯಲ್ಲಿ ಸ್ಟಾರ್​ ಆಟಗಾರರನ್ನ ಆಡಿಸೋ ನಿರ್ಧಾರ ಮಾಡಿದ್ದರು. ಸೆಪ್ಟೆಂಬರ್​ 5 ರಿಂದ ಆರಂಭವಾಗೋ ಟೂರ್ನಿಗೆ ಅಜಿತ್​ ಅಗರ್ಕರ್​ ನೇತೃತ್ವದ ಸೆಲೆಕ್ಷನ್​ ಕಮಿಟಿ ಟೀಮ್​ ಅನೌನ್ಸ್​ ಮಾಡಿದೆ.

ಇದನ್ನೂ ಓದಿ: ಲಿಂಗ ವಿವಾದದಲ್ಲಿ ಸಿಲುಕಿ ಚಿನ್ನ ಗೆದ್ದ ಬಾಕ್ಸರ್.. ಪ್ಯಾರಿಸ್​ನಿಂದ ಮೂರು F-16 ಜೆಟ್​ಗಳ ರಕ್ಷಣೆಯಲ್ಲಿ ತವರಿಗೆ ವಾಪಸ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More