ಟೀಂ ಇಂಡಿಯಾದ ಮತ್ತಿಬ್ಬರು ಹಿರಿಯ ಆಟಗಾರರು ಆಡಲ್ಲ
ಅಜಿತ್ ಅಗರ್ಕರ್ ನೇತೃತ್ವದ ಸೆಲೆಕ್ಷನ್ ಸಮಿತಿ ಟೀಮ್ ಅನೌನ್ಸ್
ದುಲೀಪ್ ಟ್ರೋಫಿಯಲ್ಲಿ ಮಿಂಚಿದವ್ರಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ಸ್ಥಾನ
ಶ್ರೀಲಂಕಾ ಪ್ರವಾಸದಲ್ಲಿ ಮುಖಭಂಗ ಅನುಭವಿಸಿದ ಬಳಿಕ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಎಚ್ಚರಿಕೆಯ ಹೆಜ್ಜೆ ಇಡಲು ಮುಂದಾಗಿದೆ. ಮುಂಬರೋ ಬಾಂಗ್ಲಾದೇಶ ಸರಣಿಗೆ ಇನ್ನೂ ತಿಂಗಳಿಗೂ ಹೆಚ್ಚು ಕಾಲ ಅಂತರವಿದೆ. ಈ ಗ್ಯಾಪ್ನಲ್ಲಿ ರೆಸ್ಟ್ ಮಾಡೋ ಲೆಕ್ಕಾಚಾರದಲ್ಲಿದ್ದ ಆಟಗಾರರಿಗೆ ನಿರೀಕ್ಷೆಯಂತೆ ಹೊಸ ಟಾಸ್ಕ್ ನೀಡಿದ್ದು ಟೀಮ್ ಇಂಡಿಯಾದ ಖಾಯಂ ಸ್ಟಾರ್ಗಳನ್ನ ದುಲೀಪ್ ಟ್ರೋಫಿಯಲ್ಲಿ ಆಡಿಸಲು ಮುಂದಾಗಿದೆ.
ಬಹು ವರ್ಷಗಳ ಬಳಿಕ ಟೀಮ್ ಇಂಡಿಯಾದ ಸ್ಟಾರ್ಗಳಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಡೊಮೆಸ್ಟಿಕ್ ಅಂಗಳಕ್ಕೆ ಮರಳ್ತಾರೆ ಎನ್ನಲಾಗಿತ್ತು. ಬಿಸಿಸಿಐ ಕೂಡ ಈ ಬಗ್ಗೆ ಸೂಚನೆ ನೀಡಿತ್ತು. ರೋಹಿತ್-ಕೊಹ್ಲಿ ದುಲೀಪ್ ಟ್ರೋಫಿಯಿಂದ ಹಿಂದೆ ಸರಿದಿದ್ದಾರೆ. ಇವ್ರ ಜೊತೆಗೆ ಸೀನಿಯರ್ಗಳಾದ ಜಸ್ಪ್ರಿತ್ ಬೂಮ್ರಾ, ಆರ್.ಅಶ್ವಿನ್ ಕೂಡ ಈ ಟೂರ್ನಿಯಿಂದ ಹೊರಗುಳಿದಿದ್ದಾರೆ.
ಇದನ್ನೂ ಓದಿ:ದುಲೀಪ್ ಟ್ರೋಫಿಗೆ ತಂಡ ಪ್ರಕಟ; ತಂಡದಲ್ಲಿ ಟೀಂ ಇಂಡಿಯಾ ಸೂಪರ್ ಸ್ಟಾರ್ಗಳೇ ಹೆಚ್ಚು..!
ಕೆಲ ದಿನಗಳ ಹಿಂದಷ್ಟೇ ಬಿಗ್ಬಾಸ್ಗಳ ಜೊತೆ ಸಭೆ ನಡೆಸಿದ್ದ ಕೋಚ್ ಗೌತಮ್ ಗಂಭೀರ್, ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಮುಂಬರೋ ಟೆಸ್ಟ್ ಸರಣಿಗಳ ಸಿದ್ಧತೆಯ ಬಗ್ಗೆ ಚರ್ಚಿಸಿದ್ದರು. ಸಿದ್ಧತೆಯ ಭಾಗವಾಗಿ ದುಲೀಪ್ ಟ್ರೋಫಿಯಲ್ಲಿ ಸ್ಟಾರ್ ಆಟಗಾರರನ್ನ ಆಡಿಸೋ ನಿರ್ಧಾರ ಮಾಡಿದ್ದರು. ಸೆಪ್ಟೆಂಬರ್ 5 ರಿಂದ ಆರಂಭವಾಗೋ ಟೂರ್ನಿಗೆ ಅಜಿತ್ ಅಗರ್ಕರ್ ನೇತೃತ್ವದ ಸೆಲೆಕ್ಷನ್ ಕಮಿಟಿ ಟೀಮ್ ಅನೌನ್ಸ್ ಮಾಡಿದೆ.
ಇದನ್ನೂ ಓದಿ: ಲಿಂಗ ವಿವಾದದಲ್ಲಿ ಸಿಲುಕಿ ಚಿನ್ನ ಗೆದ್ದ ಬಾಕ್ಸರ್.. ಪ್ಯಾರಿಸ್ನಿಂದ ಮೂರು F-16 ಜೆಟ್ಗಳ ರಕ್ಷಣೆಯಲ್ಲಿ ತವರಿಗೆ ವಾಪಸ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಟೀಂ ಇಂಡಿಯಾದ ಮತ್ತಿಬ್ಬರು ಹಿರಿಯ ಆಟಗಾರರು ಆಡಲ್ಲ
ಅಜಿತ್ ಅಗರ್ಕರ್ ನೇತೃತ್ವದ ಸೆಲೆಕ್ಷನ್ ಸಮಿತಿ ಟೀಮ್ ಅನೌನ್ಸ್
ದುಲೀಪ್ ಟ್ರೋಫಿಯಲ್ಲಿ ಮಿಂಚಿದವ್ರಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ಸ್ಥಾನ
ಶ್ರೀಲಂಕಾ ಪ್ರವಾಸದಲ್ಲಿ ಮುಖಭಂಗ ಅನುಭವಿಸಿದ ಬಳಿಕ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಎಚ್ಚರಿಕೆಯ ಹೆಜ್ಜೆ ಇಡಲು ಮುಂದಾಗಿದೆ. ಮುಂಬರೋ ಬಾಂಗ್ಲಾದೇಶ ಸರಣಿಗೆ ಇನ್ನೂ ತಿಂಗಳಿಗೂ ಹೆಚ್ಚು ಕಾಲ ಅಂತರವಿದೆ. ಈ ಗ್ಯಾಪ್ನಲ್ಲಿ ರೆಸ್ಟ್ ಮಾಡೋ ಲೆಕ್ಕಾಚಾರದಲ್ಲಿದ್ದ ಆಟಗಾರರಿಗೆ ನಿರೀಕ್ಷೆಯಂತೆ ಹೊಸ ಟಾಸ್ಕ್ ನೀಡಿದ್ದು ಟೀಮ್ ಇಂಡಿಯಾದ ಖಾಯಂ ಸ್ಟಾರ್ಗಳನ್ನ ದುಲೀಪ್ ಟ್ರೋಫಿಯಲ್ಲಿ ಆಡಿಸಲು ಮುಂದಾಗಿದೆ.
ಬಹು ವರ್ಷಗಳ ಬಳಿಕ ಟೀಮ್ ಇಂಡಿಯಾದ ಸ್ಟಾರ್ಗಳಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಡೊಮೆಸ್ಟಿಕ್ ಅಂಗಳಕ್ಕೆ ಮರಳ್ತಾರೆ ಎನ್ನಲಾಗಿತ್ತು. ಬಿಸಿಸಿಐ ಕೂಡ ಈ ಬಗ್ಗೆ ಸೂಚನೆ ನೀಡಿತ್ತು. ರೋಹಿತ್-ಕೊಹ್ಲಿ ದುಲೀಪ್ ಟ್ರೋಫಿಯಿಂದ ಹಿಂದೆ ಸರಿದಿದ್ದಾರೆ. ಇವ್ರ ಜೊತೆಗೆ ಸೀನಿಯರ್ಗಳಾದ ಜಸ್ಪ್ರಿತ್ ಬೂಮ್ರಾ, ಆರ್.ಅಶ್ವಿನ್ ಕೂಡ ಈ ಟೂರ್ನಿಯಿಂದ ಹೊರಗುಳಿದಿದ್ದಾರೆ.
ಇದನ್ನೂ ಓದಿ:ದುಲೀಪ್ ಟ್ರೋಫಿಗೆ ತಂಡ ಪ್ರಕಟ; ತಂಡದಲ್ಲಿ ಟೀಂ ಇಂಡಿಯಾ ಸೂಪರ್ ಸ್ಟಾರ್ಗಳೇ ಹೆಚ್ಚು..!
ಕೆಲ ದಿನಗಳ ಹಿಂದಷ್ಟೇ ಬಿಗ್ಬಾಸ್ಗಳ ಜೊತೆ ಸಭೆ ನಡೆಸಿದ್ದ ಕೋಚ್ ಗೌತಮ್ ಗಂಭೀರ್, ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಮುಂಬರೋ ಟೆಸ್ಟ್ ಸರಣಿಗಳ ಸಿದ್ಧತೆಯ ಬಗ್ಗೆ ಚರ್ಚಿಸಿದ್ದರು. ಸಿದ್ಧತೆಯ ಭಾಗವಾಗಿ ದುಲೀಪ್ ಟ್ರೋಫಿಯಲ್ಲಿ ಸ್ಟಾರ್ ಆಟಗಾರರನ್ನ ಆಡಿಸೋ ನಿರ್ಧಾರ ಮಾಡಿದ್ದರು. ಸೆಪ್ಟೆಂಬರ್ 5 ರಿಂದ ಆರಂಭವಾಗೋ ಟೂರ್ನಿಗೆ ಅಜಿತ್ ಅಗರ್ಕರ್ ನೇತೃತ್ವದ ಸೆಲೆಕ್ಷನ್ ಕಮಿಟಿ ಟೀಮ್ ಅನೌನ್ಸ್ ಮಾಡಿದೆ.
ಇದನ್ನೂ ಓದಿ: ಲಿಂಗ ವಿವಾದದಲ್ಲಿ ಸಿಲುಕಿ ಚಿನ್ನ ಗೆದ್ದ ಬಾಕ್ಸರ್.. ಪ್ಯಾರಿಸ್ನಿಂದ ಮೂರು F-16 ಜೆಟ್ಗಳ ರಕ್ಷಣೆಯಲ್ಲಿ ತವರಿಗೆ ವಾಪಸ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ