newsfirstkannada.com

ನಾಳೆ ದರ್ಶನ್​​​ ರಿಲೀಸ್​​ಗಾಗಿ ಪರಪ್ಪನ ಅಗ್ರಹಾರ ಜೈಲು ಮುಂದೆ ಉರುಳು ಸೇವೆ; 101 ತೆಂಗಿನ ಕಾಯಿ ಹೊಡೆದು ಪೂಜೆ

Share :

Published August 21, 2024 at 9:14pm

    ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್​ ಜೈಲು ಸೇರಿ 2 ತಿಂಗಳು

    ನಟ ದರ್ಶನ್ ಅರೆಸ್ಟ್ ಆದ ಮೇಲೆ ಭಾರೀ ಬೇಸರದಲ್ಲಿರೋ ಫ್ಯಾನ್ಸ್​

    ನಾಳೆ ದರ್ಶನ್​ ರಿಲೀಸ್​ಗಾಗಿ ಜೈಲು ಮುಂದೆಯೇ ಉರುಳು ಸೇವೆ..!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಚಾಲೆಂಜಿಂಗ್​ ಸ್ಟಾರ್​​​ ದರ್ಶನ್​ ಜೈಲು ಸೇರಿ ಬರೋಬ್ಬರಿ 2 ತಿಂಗಳು ಕಳೆದಿವೆ. ನಟ ದರ್ಶನ್ ಅರೆಸ್ಟ್ ಆದ ಮೇಲೆ ಅಭಿಮಾನಿಗಳು ಭಾರೀ ಬೇಸರದಲ್ಲಿ ಇದ್ದಾರೆ. ನಿತ್ಯ ದರ್ಶನ್​ ರಿಲೀಸ್​ಗಾಗಿ ಪ್ರಾರ್ಥನೆ ಮಾಡುತ್ತಿದ್ದಾರೆ. ಕೆಲವು ಅಭಿಮಾನಿಗಳು ಅಂತೂ ಹೋಮ ಮಾಡಿಸಿದ್ದು ಉಂಟು. ಈಗ ಮತ್ತೋರ್ವ ದರ್ಶನ್​ ಅಭಿಮಾನಿ ಪರಪ್ಪನ ಅಗ್ರಹಾರದ ಮುಂದೆಯೇ ಉರುಳು ಸೇವೆ ಮಾಡಲು ಮುಂದಾಗಿದ್ದಾರೆ.

ಈ ಸಂಬಂಧ ವಿಡಿಯೋ ಮಾಡಿ ಮಾತಾಡಿರೋ ನಮ್ಮ ಕರುನಾಡು ಯುವ ಸೇನೆ ರಾಜ್ಯಾಧ್ಯಕ್ಷ ರವಿಕುಮಾರ್​ ಎಂಬುವರು ನಾಳೆ ದರ್ಶನ್​ ಅವರನ್ನು ರಿಲೀಸ್​ ಮಾಡಬೇಕು ಎಂದು ಉರುಳು ಸೇವೆ ಮಾಡುತ್ತೇವೆ. 101 ತೆಂಗಿನ ಕಾಯಿ ಹೊಡೆದು ಪರಪ್ಪನ ಅಗ್ರಹಾರದ ಜೈಲು ಮುಂದೆಯೇ ಉರುಳು ಸೇವೆ ಮಾಡುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಡಿ ಬಾಸ್​ ಅಭಿಮಾನಿಗಳು ಭಾಗಿಯಾಗಬೇಕು ಎಂದು ಮನವಿ ಮಾಡಿದ್ದಾರೆ.

ಇತ್ತೀಚೆಗಷ್ಟೇ ದರ್ಶನ್​ ರಿಲೀಸ್​ಗೆ ಪತ್ನಿ ವಿಜಯಲಕ್ಷ್ಮೀ ಅವರು ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದಲ್ಲಿ ಹೋಮ ಮಾಡಿಸಿದ್ರು. ಇದಾದ ಬೆನ್ನಲ್ಲೇ ನಟ ದರ್ಶನ್ ಬಿಡುಗಡೆಗಾಗಿ ಕಲಾವಿದರ ಸಂಘದಲ್ಲಿ ಹೋಮ-ಹವನ ಮಾಡಲಾಗುತ್ತಿದೆ ಎಂಬ ಸುದ್ದಿ ಹರಿದಾಡಿತ್ತು. ಆದರೆ, ಇದು ಇಂಡಸ್ಟ್ರಿಗಾಗಿ ಮಾಡಿದ ಹೋಮ ಎಂದು ಸ್ಪಷ್ಟನೆ ನೀಡಿದ್ದರು ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​​.

ಇದನ್ನೂ ಓದಿ: ‘ದರ್ಶನ್‌ಗೆ ಹಾಲು, ಮೊಟ್ಟೆ, ಬ್ರೆಡ್ ಕೊಡುತ್ತಿದ್ದೇವೆ’- ಮನೆ ಊಟದ ಅರ್ಜಿಗೆ ಹೊಸ ಟ್ವಿಸ್ಟ್ ಕೊಟ್ಟ ಜೈಲಾಧಿಕಾರಿಗಳು!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಾಳೆ ದರ್ಶನ್​​​ ರಿಲೀಸ್​​ಗಾಗಿ ಪರಪ್ಪನ ಅಗ್ರಹಾರ ಜೈಲು ಮುಂದೆ ಉರುಳು ಸೇವೆ; 101 ತೆಂಗಿನ ಕಾಯಿ ಹೊಡೆದು ಪೂಜೆ

https://newsfirstlive.com/wp-content/uploads/2024/08/darshan.jpg

    ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್​ ಜೈಲು ಸೇರಿ 2 ತಿಂಗಳು

    ನಟ ದರ್ಶನ್ ಅರೆಸ್ಟ್ ಆದ ಮೇಲೆ ಭಾರೀ ಬೇಸರದಲ್ಲಿರೋ ಫ್ಯಾನ್ಸ್​

    ನಾಳೆ ದರ್ಶನ್​ ರಿಲೀಸ್​ಗಾಗಿ ಜೈಲು ಮುಂದೆಯೇ ಉರುಳು ಸೇವೆ..!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಚಾಲೆಂಜಿಂಗ್​ ಸ್ಟಾರ್​​​ ದರ್ಶನ್​ ಜೈಲು ಸೇರಿ ಬರೋಬ್ಬರಿ 2 ತಿಂಗಳು ಕಳೆದಿವೆ. ನಟ ದರ್ಶನ್ ಅರೆಸ್ಟ್ ಆದ ಮೇಲೆ ಅಭಿಮಾನಿಗಳು ಭಾರೀ ಬೇಸರದಲ್ಲಿ ಇದ್ದಾರೆ. ನಿತ್ಯ ದರ್ಶನ್​ ರಿಲೀಸ್​ಗಾಗಿ ಪ್ರಾರ್ಥನೆ ಮಾಡುತ್ತಿದ್ದಾರೆ. ಕೆಲವು ಅಭಿಮಾನಿಗಳು ಅಂತೂ ಹೋಮ ಮಾಡಿಸಿದ್ದು ಉಂಟು. ಈಗ ಮತ್ತೋರ್ವ ದರ್ಶನ್​ ಅಭಿಮಾನಿ ಪರಪ್ಪನ ಅಗ್ರಹಾರದ ಮುಂದೆಯೇ ಉರುಳು ಸೇವೆ ಮಾಡಲು ಮುಂದಾಗಿದ್ದಾರೆ.

ಈ ಸಂಬಂಧ ವಿಡಿಯೋ ಮಾಡಿ ಮಾತಾಡಿರೋ ನಮ್ಮ ಕರುನಾಡು ಯುವ ಸೇನೆ ರಾಜ್ಯಾಧ್ಯಕ್ಷ ರವಿಕುಮಾರ್​ ಎಂಬುವರು ನಾಳೆ ದರ್ಶನ್​ ಅವರನ್ನು ರಿಲೀಸ್​ ಮಾಡಬೇಕು ಎಂದು ಉರುಳು ಸೇವೆ ಮಾಡುತ್ತೇವೆ. 101 ತೆಂಗಿನ ಕಾಯಿ ಹೊಡೆದು ಪರಪ್ಪನ ಅಗ್ರಹಾರದ ಜೈಲು ಮುಂದೆಯೇ ಉರುಳು ಸೇವೆ ಮಾಡುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಡಿ ಬಾಸ್​ ಅಭಿಮಾನಿಗಳು ಭಾಗಿಯಾಗಬೇಕು ಎಂದು ಮನವಿ ಮಾಡಿದ್ದಾರೆ.

ಇತ್ತೀಚೆಗಷ್ಟೇ ದರ್ಶನ್​ ರಿಲೀಸ್​ಗೆ ಪತ್ನಿ ವಿಜಯಲಕ್ಷ್ಮೀ ಅವರು ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದಲ್ಲಿ ಹೋಮ ಮಾಡಿಸಿದ್ರು. ಇದಾದ ಬೆನ್ನಲ್ಲೇ ನಟ ದರ್ಶನ್ ಬಿಡುಗಡೆಗಾಗಿ ಕಲಾವಿದರ ಸಂಘದಲ್ಲಿ ಹೋಮ-ಹವನ ಮಾಡಲಾಗುತ್ತಿದೆ ಎಂಬ ಸುದ್ದಿ ಹರಿದಾಡಿತ್ತು. ಆದರೆ, ಇದು ಇಂಡಸ್ಟ್ರಿಗಾಗಿ ಮಾಡಿದ ಹೋಮ ಎಂದು ಸ್ಪಷ್ಟನೆ ನೀಡಿದ್ದರು ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​​.

ಇದನ್ನೂ ಓದಿ: ‘ದರ್ಶನ್‌ಗೆ ಹಾಲು, ಮೊಟ್ಟೆ, ಬ್ರೆಡ್ ಕೊಡುತ್ತಿದ್ದೇವೆ’- ಮನೆ ಊಟದ ಅರ್ಜಿಗೆ ಹೊಸ ಟ್ವಿಸ್ಟ್ ಕೊಟ್ಟ ಜೈಲಾಧಿಕಾರಿಗಳು!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More