newsfirstkannada.com

ದರ್ಶನ್​​ಗೆ ಅಧಿಕಾರಿಗಳು ವಾರ್ನಿಂಗ್.. ಬಳ್ಳಾರಿ ಜೈಲಿಗೆ ಬಂದರೂ ಬುದ್ಧಿ ಕಲಿಯಲಿಲ್ಲ ಎಂದು ಬೇಸರ.. ಆಗಿದ್ದೇನು..?

Share :

Published September 14, 2024 at 11:15am

Update September 17, 2024 at 1:23pm

    ದರ್ಶನ್ ನಡೆ ಮೇಲೆ ಅಧಿಕಾರಿಗಳು ಬೇಸರ ಯಾಕೆ?

    ಇರುವಷ್ಟು ದಿನ ನಿಯಮ ಫಾಲಿಸಿ ಎಂದ ಅಧಿಕಾರಿಗಳು

    ಪರಪ್ಪನ ಅಗ್ರಹಾರದಿಂದ ಬಳ್ಳಾರಿಗೆ ಶಿಫ್ಟ್ ಆಗಿರುವ ದಾಸ

ಬಳ್ಳಾರಿ: ರೇಣುಕಾಸ್ವಾಮಿ ಕೇಸ್​ನಲ್ಲಿ ಜೈಲು ಸೇರಿರುವ ದರ್ಶನ್ ನಡೆ ಮೇಲೆ ಪೊಲೀಸರು ಬೇಸತ್ತಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.

ಅದೇ ಕಾರಣಕ್ಕೆ ಜೈಲಿನಲ್ಲಿ ಇರುವಷ್ಟು ದಿನ ನಿಯಮ ಫಾಲೋ ಮಾಡಿ. ನ್ಯಾಯಾಲಯವು ಕೈದಿಗಳಿಗೆ ಶಿಕ್ಷೆ ಜೊತೆಗೆ ನಡವಳಿಕೆ ಸರಿಯಾಗತ್ತೆ ಎಂದು ಜೈಲಿಗೆ ಕಳಿಸುತ್ತದೆ. ಆದ್ರೆ ನೀವು ಜೈಲಿನ ಶಿಸ್ತನ್ನು ಉಲ್ಲಂಘನೆ ಮಾಡ್ತಿದ್ದೀರ. ಪದೇ ಪದೆ ಸೌಲಭ್ಯಗಳಿಗಾಗಿ ಸಿಬ್ಬಂದಿಗೆ ಕಿರಿ ಕಿರಿ ಮಾಡ್ತಿದ್ದೀರಿ. ನಾವು ಕಾನುನು ಪ್ರಕಾರ ಏನು ಸಾಧ್ಯ, ಅಷ್ಟು ಮಾತ್ರ ಕೊಡ್ತೇವೆ. ಹೆಚ್ಚಿನದು ಬೇಕು ಅಂದ್ರೇ ಕೋರ್ಟ್​ಗೆ ಅರ್ಜಿ ಹಾಕಿ ಎಂದು ವಾರ್ನಿಂಗ್ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಪ್ರಕರಣದಲ್ಲಿ ದರ್ಶನ್ ಮೊದಲು ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಅಲ್ಲಿ ರಾಜಾತಿಥ್ಯ ಸ್ವೀಕರಿಸಿದ ಆರೋಪ ಕೇಳಿಬಂದಿತ್ತು. ಬೆನ್ನಲ್ಲೇ ದರ್ಶನ್, ರಾಜಾತಿಥ್ಯದ ಫೋಟೋ, ವಿಡಿಯೋ ವೈರಲ್ ಆಗಿತ್ತು. ಹಾಗಾಗಿ ಸರ್ಕಾರ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿಗೆ ಕಳುಹಿಸಿದೆ. ಇದೀಗ ಅಲ್ಲಿಯೂ ಕೂಡ ಕೆಲವು ವರ್ತನೆಗಳಿಂದ ದರ್ಶನ್ ಜೈಲು ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ಅಯ್ಯೋ..ಹಸಿವು..ಹಸಿವು! ಬಳ್ಳಾರಿಯಲ್ಲಿ ತೂಕದ ಲೆಕ್ಕಚಾರದಲ್ಲಿ ಊಟ.. ಜೈಲೂಟ ಸಾಲದೆ ಪರದಾಡುತ್ತಿರೋ ದಾಸ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್​​ಗೆ ಅಧಿಕಾರಿಗಳು ವಾರ್ನಿಂಗ್.. ಬಳ್ಳಾರಿ ಜೈಲಿಗೆ ಬಂದರೂ ಬುದ್ಧಿ ಕಲಿಯಲಿಲ್ಲ ಎಂದು ಬೇಸರ.. ಆಗಿದ್ದೇನು..?

https://newsfirstlive.com/wp-content/uploads/2024/09/Darshan-Bellary-Jail-2.jpg

    ದರ್ಶನ್ ನಡೆ ಮೇಲೆ ಅಧಿಕಾರಿಗಳು ಬೇಸರ ಯಾಕೆ?

    ಇರುವಷ್ಟು ದಿನ ನಿಯಮ ಫಾಲಿಸಿ ಎಂದ ಅಧಿಕಾರಿಗಳು

    ಪರಪ್ಪನ ಅಗ್ರಹಾರದಿಂದ ಬಳ್ಳಾರಿಗೆ ಶಿಫ್ಟ್ ಆಗಿರುವ ದಾಸ

ಬಳ್ಳಾರಿ: ರೇಣುಕಾಸ್ವಾಮಿ ಕೇಸ್​ನಲ್ಲಿ ಜೈಲು ಸೇರಿರುವ ದರ್ಶನ್ ನಡೆ ಮೇಲೆ ಪೊಲೀಸರು ಬೇಸತ್ತಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.

ಅದೇ ಕಾರಣಕ್ಕೆ ಜೈಲಿನಲ್ಲಿ ಇರುವಷ್ಟು ದಿನ ನಿಯಮ ಫಾಲೋ ಮಾಡಿ. ನ್ಯಾಯಾಲಯವು ಕೈದಿಗಳಿಗೆ ಶಿಕ್ಷೆ ಜೊತೆಗೆ ನಡವಳಿಕೆ ಸರಿಯಾಗತ್ತೆ ಎಂದು ಜೈಲಿಗೆ ಕಳಿಸುತ್ತದೆ. ಆದ್ರೆ ನೀವು ಜೈಲಿನ ಶಿಸ್ತನ್ನು ಉಲ್ಲಂಘನೆ ಮಾಡ್ತಿದ್ದೀರ. ಪದೇ ಪದೆ ಸೌಲಭ್ಯಗಳಿಗಾಗಿ ಸಿಬ್ಬಂದಿಗೆ ಕಿರಿ ಕಿರಿ ಮಾಡ್ತಿದ್ದೀರಿ. ನಾವು ಕಾನುನು ಪ್ರಕಾರ ಏನು ಸಾಧ್ಯ, ಅಷ್ಟು ಮಾತ್ರ ಕೊಡ್ತೇವೆ. ಹೆಚ್ಚಿನದು ಬೇಕು ಅಂದ್ರೇ ಕೋರ್ಟ್​ಗೆ ಅರ್ಜಿ ಹಾಕಿ ಎಂದು ವಾರ್ನಿಂಗ್ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಪ್ರಕರಣದಲ್ಲಿ ದರ್ಶನ್ ಮೊದಲು ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಅಲ್ಲಿ ರಾಜಾತಿಥ್ಯ ಸ್ವೀಕರಿಸಿದ ಆರೋಪ ಕೇಳಿಬಂದಿತ್ತು. ಬೆನ್ನಲ್ಲೇ ದರ್ಶನ್, ರಾಜಾತಿಥ್ಯದ ಫೋಟೋ, ವಿಡಿಯೋ ವೈರಲ್ ಆಗಿತ್ತು. ಹಾಗಾಗಿ ಸರ್ಕಾರ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿಗೆ ಕಳುಹಿಸಿದೆ. ಇದೀಗ ಅಲ್ಲಿಯೂ ಕೂಡ ಕೆಲವು ವರ್ತನೆಗಳಿಂದ ದರ್ಶನ್ ಜೈಲು ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ಅಯ್ಯೋ..ಹಸಿವು..ಹಸಿವು! ಬಳ್ಳಾರಿಯಲ್ಲಿ ತೂಕದ ಲೆಕ್ಕಚಾರದಲ್ಲಿ ಊಟ.. ಜೈಲೂಟ ಸಾಲದೆ ಪರದಾಡುತ್ತಿರೋ ದಾಸ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More