newsfirstkannada.com

ಟೀಮ್​ ಇಂಡಿಯಾಗೆ ಬಿಗ್​ ಶಾಕ್​​; ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್​​ ಸೀರೀಸ್​ನಿಂದ ದ್ರಾವಿಡ್​​ ಪುತ್ರ ಔಟ್​​

Share :

Published September 30, 2024 at 10:59pm

    ಟೀಮ್​ ಇಂಡಿಯಾಗೆ ಬಿಗ್​ ಶಾಕ್​ ಕೊಟ್ಟ ದ್ರಾವಿಡ್​​ ಪುತ್ರ

    ಸಮಿತ್​ ದ್ರಾವಿಡ್​ ದಿಢೀರ್​ ಕೈ ಕೊಡಲು ಕಾರಣವೇನು..?

    ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​​ನಿಂದ ಹೊರಬಿದ್ದ ಸಮಿತ್​​​

ಇತ್ತೀಚೆಗೆ ನಡೆದ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಟೀಮ್ ಇಂಡಿಯಾ ಮಾಜಿ ಮುಖ್ಯ ಕೋಚ್​​ ರಾಹುಲ್​ ದ್ರಾವಿಡ್​ ಪುತ್ರ ಭಾರೀ ಸದ್ದು ಮಾಡಿದ್ದರು. ಮೈಸೂರು ವಾರಿಯರ್ಸ್ ಪರ ಸಮಿತ್ ದ್ರಾವಿಡ್ ಅದ್ಭುತ ಪ್ರರ್ದಶನ ನೀಡುವ ಮೂಲಕ ಕ್ರೀಡಾ ಲೋಕದ ಗಮನ ಸೆಳೆದಿದ್ದರು.

ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಕಾರಣಕ್ಕಾಗಿ ಸಮಿತ್ ದ್ರಾವಿಡ್ ಆಸ್ಟ್ರೇಲಿಯಾ ವಿರುದ್ಧದ ಸರಣಿಗಾಗಿ ಭಾರತ ಅಂಡರ್-19 ತಂಡಕ್ಕೆ ಆಯ್ಕೆಯಾಗಿದ್ದರು. ಆದರೀಗ, ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಿಂದ ಹೊರಗುಳಿದಿದ್ದ ಸಮಿತ್​​ ತೀವ್ರ ಗಾಯದಿಂದ ಇನ್ನೂ ಚೇತರಿಕೆ ಕಂಡಿಲ್ಲ. ಇದರ ಪರಿಣಾಮ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಿಂದ ಸಮಿತ್ ಹೊರಬಿದ್ದಿದ್ದಾರೆ.

ಸಮಿತ್​ ಬಗ್ಗೆ ಕೋಚ್​ ಏನಂದ್ರು?

ಇನ್ನು, ಸಮಿತ್ ದ್ರಾವಿಡ್ ಅಲಭ್ಯತೆ ಬಗ್ಗೆ ಭಾರತ ಅಂಡರ್-19 ತಂಡದ ಹೆಡ್ ಕೋಚ್ ಹೃಷಿಕೇಶ್ ಕಾನಿಟ್ಕರ್ ಮಾತಾಡಿದ್ದಾರೆ. ಸಮಿತ್ ಪ್ರಸ್ತುತ ಎನ್‌ಸಿಎಯಲ್ಲಿದ್ದು, ಮೊಣಕಾಲಿನ ಗಾಯದಿಂದ ಬಳಲುತ್ತಿದ್ದಾರೆ. ಅವನು ಸದ್ಯಕ್ಕೆ ಆಡುವುದು ಕಷ್ಟ ಎಂದರು.

ಇದನ್ನೂ ಓದಿ: BBK11: ಬಿಗ್​​ಬಾಸ್​​ನ ಈ ಸ್ಪರ್ಧಿ ರಾಜ್ಯದ ಸಿಎಂ ಆಗಬೇಕಂತೆ; ಯಾರದು ಗೊತ್ತಾ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟೀಮ್​ ಇಂಡಿಯಾಗೆ ಬಿಗ್​ ಶಾಕ್​​; ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್​​ ಸೀರೀಸ್​ನಿಂದ ದ್ರಾವಿಡ್​​ ಪುತ್ರ ಔಟ್​​

https://newsfirstlive.com/wp-content/uploads/2024/09/Dravid_Samit.jpg

    ಟೀಮ್​ ಇಂಡಿಯಾಗೆ ಬಿಗ್​ ಶಾಕ್​ ಕೊಟ್ಟ ದ್ರಾವಿಡ್​​ ಪುತ್ರ

    ಸಮಿತ್​ ದ್ರಾವಿಡ್​ ದಿಢೀರ್​ ಕೈ ಕೊಡಲು ಕಾರಣವೇನು..?

    ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​​ನಿಂದ ಹೊರಬಿದ್ದ ಸಮಿತ್​​​

ಇತ್ತೀಚೆಗೆ ನಡೆದ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಟೀಮ್ ಇಂಡಿಯಾ ಮಾಜಿ ಮುಖ್ಯ ಕೋಚ್​​ ರಾಹುಲ್​ ದ್ರಾವಿಡ್​ ಪುತ್ರ ಭಾರೀ ಸದ್ದು ಮಾಡಿದ್ದರು. ಮೈಸೂರು ವಾರಿಯರ್ಸ್ ಪರ ಸಮಿತ್ ದ್ರಾವಿಡ್ ಅದ್ಭುತ ಪ್ರರ್ದಶನ ನೀಡುವ ಮೂಲಕ ಕ್ರೀಡಾ ಲೋಕದ ಗಮನ ಸೆಳೆದಿದ್ದರು.

ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಕಾರಣಕ್ಕಾಗಿ ಸಮಿತ್ ದ್ರಾವಿಡ್ ಆಸ್ಟ್ರೇಲಿಯಾ ವಿರುದ್ಧದ ಸರಣಿಗಾಗಿ ಭಾರತ ಅಂಡರ್-19 ತಂಡಕ್ಕೆ ಆಯ್ಕೆಯಾಗಿದ್ದರು. ಆದರೀಗ, ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಿಂದ ಹೊರಗುಳಿದಿದ್ದ ಸಮಿತ್​​ ತೀವ್ರ ಗಾಯದಿಂದ ಇನ್ನೂ ಚೇತರಿಕೆ ಕಂಡಿಲ್ಲ. ಇದರ ಪರಿಣಾಮ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಿಂದ ಸಮಿತ್ ಹೊರಬಿದ್ದಿದ್ದಾರೆ.

ಸಮಿತ್​ ಬಗ್ಗೆ ಕೋಚ್​ ಏನಂದ್ರು?

ಇನ್ನು, ಸಮಿತ್ ದ್ರಾವಿಡ್ ಅಲಭ್ಯತೆ ಬಗ್ಗೆ ಭಾರತ ಅಂಡರ್-19 ತಂಡದ ಹೆಡ್ ಕೋಚ್ ಹೃಷಿಕೇಶ್ ಕಾನಿಟ್ಕರ್ ಮಾತಾಡಿದ್ದಾರೆ. ಸಮಿತ್ ಪ್ರಸ್ತುತ ಎನ್‌ಸಿಎಯಲ್ಲಿದ್ದು, ಮೊಣಕಾಲಿನ ಗಾಯದಿಂದ ಬಳಲುತ್ತಿದ್ದಾರೆ. ಅವನು ಸದ್ಯಕ್ಕೆ ಆಡುವುದು ಕಷ್ಟ ಎಂದರು.

ಇದನ್ನೂ ಓದಿ: BBK11: ಬಿಗ್​​ಬಾಸ್​​ನ ಈ ಸ್ಪರ್ಧಿ ರಾಜ್ಯದ ಸಿಎಂ ಆಗಬೇಕಂತೆ; ಯಾರದು ಗೊತ್ತಾ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More