newsfirstkannada.com

BBK11 ಸ್ಪರ್ಧಿಯ ಜೊತೆ ಹುಲಿ ಉಗುರಿನ ಪೆಂಡೆಂಟ್​​! ಅರೆಸ್ಟ್​ ಆಗ್ತಾರಾ ಗೋಲ್ಡ್​​ ಸುರೇಶ್​?

Share :

Published October 1, 2024 at 9:53am

Update October 1, 2024 at 2:21pm

    ಬಿಗ್​ ಬಾಸ್​ಗೆ ಮತ್ತೆ ಕಾಡುತ್ತಾ ಹುಲಿ ಉಗುರಿನ ಕಂಟಕ?

    ಗೋಲ್ಡ್​ ಸುರೇಶ್​ ಕುತ್ತಿಗೆಯಲ್ಲಿ ಹುಲಿ ಉಗುರಿನ ಪೆಂಡೆಂಟ್​​

    ಅಲರ್ಟ್ ಆದ ಅರಣ್ಯ ಇಲಾಖೆ.. ಬಿಗ್​ ಬಾಸ್​​ ಮನೆ ಹೊಕ್ಕಲು ರೆಡಿ?

ಕಿಚ್ಚ ಸುದೀಪ್​ ನಿರೂಪಣೆಯ ಬಿಗ್​ ಬಾಸ್​ ಸೀಸನ್​ 10 ಕಾರ್ಯಕ್ರಮದಲ್ಲಿ ಹುಲಿ ಉಗುರು ಧರಿಸಿದ್ದ ಎಂಬ ಕಾರಣಕ್ಕೆ ಸ್ಪರ್ಧಿ ವರ್ತೂರು ಸಂತೋಷ್​ ಅವರನ್ನು ಅರೆಸ್ಟ್​ ಮಾಡಲಾಗಿತ್ತು. ಬಿಗ್​ ಮನೆಗೆ ಬಂದು ಪೊಲೀಸರು ಅರೆಸ್ಟ್​ ಮಾಡಿದ್ದರು. ಬಳಿಕ ತನಿಖೆ ಎದುರಿಸಿ ಬಿಗ್​ ಬಾಸ್​ ಮನೆಯನ್ನು ವಾಪಾಸ್​​ ಹೊಕ್ಕರು. ಆದರೀಗ ಮತ್ತದೇ ಘಟನೆಯೊಂದು ಈ ಬಾರಿಯ ಬಿಗ್​ ಬಾಸ್​ನಲ್ಲಿ ಬೆಳಕಿಗೆ ಬಂದಿದೆ.

ಬಿಗ್​ ಬಾಸ್​​ ಸೀಸನ್​ 11 ಪ್ರಾರಂಭವಾಗಿದೆ. ಬೆಳಗಾವಿ ಮೂಲದ ಗೋಲ್ಡ್​​ ಸುರೇಶ್ ಎಂಬವರು ದೊಡ್ಮನೆಯೊಳಕ್ಕೆ ಹೋಗಿದ್ದಾರೆ. ಆದರೀಗ ಬಿಗ್​ ಬಾಸ್​ ಮನೆಹೊಕ್ಕ ಸುರೇಶ್​ಗಿಂತ ಅವರ ಮೈಮೇಲಿರುವ ಗೋಲ್ಡ್​ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಅದರಲ್ಲೂ ಅವರ ಜೊತೆಯಿರುವ ಹುಲಿ ಉಗುರಿನಂತೆ ಕಾಣುತ್ತಿರುವ ಪೆಂಟೆಂಡ್​ ಈಗ ಚರ್ಚೆಗೆ ಗ್ರಾಸವಾಗಿದೆ​.

ಅಸಲಿಯೋ? ನಕಲಿಯೋ?

ವರ್ತೂರ್​ ಸಂತೋಷ್​ ಹುಲಿ ಉಗುರು ಧರಿಸಿ ಸಂಕಷ್ಟಕ್ಕೆ ಒಳಗಾಗಿದ್ದರು. ಆದರೀಗ ಗೋಲ್ಡ್​ ಸುರೇಶ್​ ಕೂಡ ಇದೇ ಸಮಸ್ಯೆಯನ್ನು ಎದುರಿಸುತ್ತಾರಾ? ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಅದರಲ್ಲೂ ಬಿಗ್​ ಬಾಸ್​ ವಿಡಿಯೋ ಟೇಪ್​ನಲ್ಲೂ ಹುಲಿ ಉಗುರಿನ ಪೆಂಟೆಂಟ್​​ ಚಿತ್ರ ಸೆರೆಯಾಗಿದೆ. ಸದ್ಯ ಅರಣ್ಯ ಇಲಾಖೆಯವರು ಅಲರ್ಟ್​​ ಆಗಿದ್ದು, ಇದು ಅಸಲಿಯೋ? ನಕಲಿಯೋ ಎಂಬುದನ್ನು ಬಿಗ್​ ಬಾಸ್​ ಮನೆಗೆ ಹೋಗಿ ಪರಿಶೀಲಿಸಲು ಮುಂದಾಗಿದ್ದಾರೆ.

ಓದಿದ್ದು 10ನೇ ಕ್ಲಾಸ್​ 

ಗೋಲ್ಡ್​ ಸುರೇಶ್​ 10ನೇ ಕ್ಲಾಸ್​ವರೆಗೂ ವ್ಯಾಸಂಗ ಮಾಡಿದ್ದು,  ಬಳಿಕ ತಮ್ಮ ಹುಟ್ಟೂರು ಬಿಟ್ಟು ಓಡಿ ಬಂದಿದ್ದರಂತೆ. RSS ಸಂಘಟನೆ​ಯ ಕಾರ್ಯಕರ್ತನೂ ಹೌದು. ಹಿಂದೆ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಸುರೇಶ್ ಆ ಕೆಲಸ ಬಿಟ್ಟು ಕ್ರಿಯೇಟಿವ್ ಇಂಟೀರಿಯರ್ ಸಂಸ್ಥೆ ಸ್ಥಾಪನೆ ಮಾಡಿ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದಾರೆ.

ಗೋಲ್ಡ್​ ಸುರೇಶ್ ಬೆಳಗಾವಿ ಮೂಲದವರಾಗಿದ್ದು,​​ ಸಾಮಾನ್ಯ ಬಡ ರೈತನ ಮಗ. ದೇಹದ ಪೂರ್ತಿ ಸುಮಾರು ಒಂದೂವರೆಯಿಂದ ಎರಡೂವರೆ ಕೋಟಿ ಚಿನ್ನವನ್ನು ಧರಿಸಿದ್ದಾರೆ. ​ಮಾತ್ರವಲ್ಲದೆ 4ರಿಂದ 5 ಜನರು ಬಾಡಿಗಾರ್ಡ್​ ಮತ್ತು 2 ಜನರು ಗನ್​ ಮ್ಯಾನ್​ ಇಟ್ಟುಕೊಂಡಿದ್ದಾರೆ.

ವಿಷಯ ಸೂಚನೆ: ಹುಲಿ ಬೇಟೆ ಮತ್ತು ಅದರ ಚರ್ಮ, ಉಗುರು ಇತ್ಯಾದಿಗಳನ್ನು ಮಾರಾಟ ಮಾಡುವುದು ಕಾನೂನು ಅಪರಾಧ. ಶಿಕ್ಷೆ ಕಂಡಿತ. ಆದರೆ ಕೆಲವರು ಕಾನೂನಿನ ಬಗ್ಗೆ ಗಂಧಗಾಳಿ ತಿಳಿಯದವರು ಹುಲಿ ಉಗುರು ಧರಿಸುತ್ತಿದ್ದರು. ಯಾವಾಗ ವರ್ತೂರು ಸಂತೋಷ್​​ ಅವರನ್ನು ಪೊಲೀಸ್​ ಅರೆಸ್ಟ್​ ಮಾಡಿ ಹುಲಿ ಉಗುರಿನ ಬಗ್ಗೆ ತನಿಖೆ ನಡೆಸಿದ ಬಳಿಕ ಬಹುತೇಕರು ಪ್ರಾಣಿಗಳಿಂದ ತಯಾರಿಸುವ ಆಭರಣಗಳನ್ನು ಧರಿಸುವುದು ನಿಲ್ಲಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BBK11 ಸ್ಪರ್ಧಿಯ ಜೊತೆ ಹುಲಿ ಉಗುರಿನ ಪೆಂಡೆಂಟ್​​! ಅರೆಸ್ಟ್​ ಆಗ್ತಾರಾ ಗೋಲ್ಡ್​​ ಸುರೇಶ್​?

https://newsfirstlive.com/wp-content/uploads/2024/10/Gold-Suresh.jpg

    ಬಿಗ್​ ಬಾಸ್​ಗೆ ಮತ್ತೆ ಕಾಡುತ್ತಾ ಹುಲಿ ಉಗುರಿನ ಕಂಟಕ?

    ಗೋಲ್ಡ್​ ಸುರೇಶ್​ ಕುತ್ತಿಗೆಯಲ್ಲಿ ಹುಲಿ ಉಗುರಿನ ಪೆಂಡೆಂಟ್​​

    ಅಲರ್ಟ್ ಆದ ಅರಣ್ಯ ಇಲಾಖೆ.. ಬಿಗ್​ ಬಾಸ್​​ ಮನೆ ಹೊಕ್ಕಲು ರೆಡಿ?

ಕಿಚ್ಚ ಸುದೀಪ್​ ನಿರೂಪಣೆಯ ಬಿಗ್​ ಬಾಸ್​ ಸೀಸನ್​ 10 ಕಾರ್ಯಕ್ರಮದಲ್ಲಿ ಹುಲಿ ಉಗುರು ಧರಿಸಿದ್ದ ಎಂಬ ಕಾರಣಕ್ಕೆ ಸ್ಪರ್ಧಿ ವರ್ತೂರು ಸಂತೋಷ್​ ಅವರನ್ನು ಅರೆಸ್ಟ್​ ಮಾಡಲಾಗಿತ್ತು. ಬಿಗ್​ ಮನೆಗೆ ಬಂದು ಪೊಲೀಸರು ಅರೆಸ್ಟ್​ ಮಾಡಿದ್ದರು. ಬಳಿಕ ತನಿಖೆ ಎದುರಿಸಿ ಬಿಗ್​ ಬಾಸ್​ ಮನೆಯನ್ನು ವಾಪಾಸ್​​ ಹೊಕ್ಕರು. ಆದರೀಗ ಮತ್ತದೇ ಘಟನೆಯೊಂದು ಈ ಬಾರಿಯ ಬಿಗ್​ ಬಾಸ್​ನಲ್ಲಿ ಬೆಳಕಿಗೆ ಬಂದಿದೆ.

ಬಿಗ್​ ಬಾಸ್​​ ಸೀಸನ್​ 11 ಪ್ರಾರಂಭವಾಗಿದೆ. ಬೆಳಗಾವಿ ಮೂಲದ ಗೋಲ್ಡ್​​ ಸುರೇಶ್ ಎಂಬವರು ದೊಡ್ಮನೆಯೊಳಕ್ಕೆ ಹೋಗಿದ್ದಾರೆ. ಆದರೀಗ ಬಿಗ್​ ಬಾಸ್​ ಮನೆಹೊಕ್ಕ ಸುರೇಶ್​ಗಿಂತ ಅವರ ಮೈಮೇಲಿರುವ ಗೋಲ್ಡ್​ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಅದರಲ್ಲೂ ಅವರ ಜೊತೆಯಿರುವ ಹುಲಿ ಉಗುರಿನಂತೆ ಕಾಣುತ್ತಿರುವ ಪೆಂಟೆಂಡ್​ ಈಗ ಚರ್ಚೆಗೆ ಗ್ರಾಸವಾಗಿದೆ​.

ಅಸಲಿಯೋ? ನಕಲಿಯೋ?

ವರ್ತೂರ್​ ಸಂತೋಷ್​ ಹುಲಿ ಉಗುರು ಧರಿಸಿ ಸಂಕಷ್ಟಕ್ಕೆ ಒಳಗಾಗಿದ್ದರು. ಆದರೀಗ ಗೋಲ್ಡ್​ ಸುರೇಶ್​ ಕೂಡ ಇದೇ ಸಮಸ್ಯೆಯನ್ನು ಎದುರಿಸುತ್ತಾರಾ? ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಅದರಲ್ಲೂ ಬಿಗ್​ ಬಾಸ್​ ವಿಡಿಯೋ ಟೇಪ್​ನಲ್ಲೂ ಹುಲಿ ಉಗುರಿನ ಪೆಂಟೆಂಟ್​​ ಚಿತ್ರ ಸೆರೆಯಾಗಿದೆ. ಸದ್ಯ ಅರಣ್ಯ ಇಲಾಖೆಯವರು ಅಲರ್ಟ್​​ ಆಗಿದ್ದು, ಇದು ಅಸಲಿಯೋ? ನಕಲಿಯೋ ಎಂಬುದನ್ನು ಬಿಗ್​ ಬಾಸ್​ ಮನೆಗೆ ಹೋಗಿ ಪರಿಶೀಲಿಸಲು ಮುಂದಾಗಿದ್ದಾರೆ.

ಓದಿದ್ದು 10ನೇ ಕ್ಲಾಸ್​ 

ಗೋಲ್ಡ್​ ಸುರೇಶ್​ 10ನೇ ಕ್ಲಾಸ್​ವರೆಗೂ ವ್ಯಾಸಂಗ ಮಾಡಿದ್ದು,  ಬಳಿಕ ತಮ್ಮ ಹುಟ್ಟೂರು ಬಿಟ್ಟು ಓಡಿ ಬಂದಿದ್ದರಂತೆ. RSS ಸಂಘಟನೆ​ಯ ಕಾರ್ಯಕರ್ತನೂ ಹೌದು. ಹಿಂದೆ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಸುರೇಶ್ ಆ ಕೆಲಸ ಬಿಟ್ಟು ಕ್ರಿಯೇಟಿವ್ ಇಂಟೀರಿಯರ್ ಸಂಸ್ಥೆ ಸ್ಥಾಪನೆ ಮಾಡಿ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದಾರೆ.

ಗೋಲ್ಡ್​ ಸುರೇಶ್ ಬೆಳಗಾವಿ ಮೂಲದವರಾಗಿದ್ದು,​​ ಸಾಮಾನ್ಯ ಬಡ ರೈತನ ಮಗ. ದೇಹದ ಪೂರ್ತಿ ಸುಮಾರು ಒಂದೂವರೆಯಿಂದ ಎರಡೂವರೆ ಕೋಟಿ ಚಿನ್ನವನ್ನು ಧರಿಸಿದ್ದಾರೆ. ​ಮಾತ್ರವಲ್ಲದೆ 4ರಿಂದ 5 ಜನರು ಬಾಡಿಗಾರ್ಡ್​ ಮತ್ತು 2 ಜನರು ಗನ್​ ಮ್ಯಾನ್​ ಇಟ್ಟುಕೊಂಡಿದ್ದಾರೆ.

ವಿಷಯ ಸೂಚನೆ: ಹುಲಿ ಬೇಟೆ ಮತ್ತು ಅದರ ಚರ್ಮ, ಉಗುರು ಇತ್ಯಾದಿಗಳನ್ನು ಮಾರಾಟ ಮಾಡುವುದು ಕಾನೂನು ಅಪರಾಧ. ಶಿಕ್ಷೆ ಕಂಡಿತ. ಆದರೆ ಕೆಲವರು ಕಾನೂನಿನ ಬಗ್ಗೆ ಗಂಧಗಾಳಿ ತಿಳಿಯದವರು ಹುಲಿ ಉಗುರು ಧರಿಸುತ್ತಿದ್ದರು. ಯಾವಾಗ ವರ್ತೂರು ಸಂತೋಷ್​​ ಅವರನ್ನು ಪೊಲೀಸ್​ ಅರೆಸ್ಟ್​ ಮಾಡಿ ಹುಲಿ ಉಗುರಿನ ಬಗ್ಗೆ ತನಿಖೆ ನಡೆಸಿದ ಬಳಿಕ ಬಹುತೇಕರು ಪ್ರಾಣಿಗಳಿಂದ ತಯಾರಿಸುವ ಆಭರಣಗಳನ್ನು ಧರಿಸುವುದು ನಿಲ್ಲಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More