ಉಗ್ರ ಟಿ. ನಸೀರ್ ಮಾಡಿರುವ ಪ್ಲಾನ್ ಒಂದೆರಡಲ್ಲ
ಜೈಲಿನಲ್ಲಿದ್ದುಕೊಂಡೇ ಪ್ಲಾನ್ ಹೆಣೆದಿದ್ದ ಶಂಕಿತ ಉಗ್ರ
ಅಮೆರಿಕದಿಂದ ಬಂತು ಟಿ. ನಸೀರ್ ಮಾಡುತ್ತಿದ್ದ ಕಿತಾಪತಿ ಮಾಹಿತಿ
ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಐವರು ಶಂಕಿತ ಉಗ್ರರನ್ನು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ A1 ಆರೋಪಿ ಟಿ ನಜೀರ್ ಸಹಾಯದಿಂದಲೇ ಶಂಕಿತ ಉಗ್ರರು ಪ್ಲಾನ್ ಹೆಣೆದಿದ್ದಾರೆ ಎಂದು ತಿಳಿದುಬಂದಿದೆ. ಅಂದಹಾಗೆಯೇ ಟಿ.ನಸೀರ್ ಇತಿಹಾಸವೇ ಭಯಾನಕವಾಗಿದ್ದು, ಈತನ ಮೇಲೆ ಸಾಲು ಸಾಲು ಪ್ರಕರಣಗಳಿವೆ. ಈ ಬಗ್ಗೆ ಮಾಹಿತಿ ಇಲ್ಲಿದೆ.
ನಜೀರ್ ಅಲಿಯಾಸ್ ತಂಡಿಯಾಂತಾವಿಡೆ ಯಾರು? ಎಲ್ಲಿಯವನು?
ಟಿ. ನಜೀರ್ ಕರ್ನಾಟಕದವನಲ್ಲ. ಈತ ಕೇರಳದ ಕಣ್ಣೂರು ಮೂಲದವನು. ಈತನ ಮತ್ತೊಂದು ಹೆಸರು ಉಮ್ಮರ್ ಹಜಿ. ಪಿಡಿಪಿಯ ಸಂಘಟನೆಯ ಮಾಜಿ ಕಾರ್ಯಕರ್ತನು ಆಗಿದ್ದ, ಕಣ್ಣೂರಿನಲ್ಲಿ ಕಚೇರಿಯನ್ನು ಹೊಂದಿದ್ದ. ಕೇರಳದ ರಾಜಕಾರಣಿ ಅಬ್ದುಲ್ ನಜೀರ್ ಮದಾನಿ ಜೊತೆಗೆ ಈತನ ಸಂಪರ್ಕವಿತ್ತು. ಮಾತ್ರವಲ್ಲದೆ ಅಬ್ದುಲ್ ನಜೀರ್ ಮದಾನಿ ಹೆಂಡತಿ ಕೂಡ ಈತನನಿಗೆ ಸಂಪರ್ಕ ಇರುವುದು ಬೆಳಕಿಗೆ ಬಂದಿತ್ತು.
2008ರ ಬೆಂಗಳೂರು ಸರಣಿ ಬಾಂಬ್ ಬ್ಲಾಸ್ಟ್ ಪ್ರಕರಣ
ಟಿ ನಜೀರ್ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ. ಆದರೆ ಉಗ್ರ 2008ರ ಬೆಂಗಳೂರು ಸರಣಿ ಬಾಂಬ್ ಬ್ಲಾಸ್ಟ್ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ಅಂದು ಜುಲೈ 25ರಂದು ಮಧ್ಯಾಹ್ನ 1.20 ಬೆಂಗಳೂರು ಮಡಿವಾಳ ಬಸ್ ಡಿಪೋದಲ್ಲಿ ಬಾಂಬ್ ಬ್ಲಾಸ್ಟ್ ಮಾಡಿಸಿದ್ದನು. ಬಳಿಕ 2.35ಕ್ಕೆ ರಾಜಧಾನಿಯ ವಿವಿಧ ಸ್ಥಳಗಳಲ್ಲಿ ಸರಣಿ ಬಾಂಬ್ ಸ್ಫೋಟಗೊಂಡಿತ್ತು. ಈ ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದರೆ, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಇಷ್ಟೆಲ್ಲಾ ಮಾಡಿದ್ದ ನಜೀರ್ ಲಷ್ಕರ್- ಇ-ತೋಯ್ಬಾ ಸಂಘಟನೆಯ ಪ್ರಮುಖನಾಗಿದ್ದು, ದಕ್ಷಿಣ ಭಾರತದ ಕಮಾಂಡರ್ ಕೂಡ ಆಗಿದ್ದನು.
ಅವಳಿ ಬಾಂಬ್ ಬ್ಲಾಸ್ಟ್
ಇನ್ನು ಕೇರಳದ ಕೋಜಿಕೋಡೆಯಲ್ಲಿ ನಡೆದ ಅವಳಿ ಬಾಂಬ್ ಬ್ಲಾಸ್ಟ್ನಲ್ಲೂ ಈತನ ಹೆಸರು ಕೇಳಿಬಂದಿತ್ತು. ಆದರೆ ಈ ಬಾಂಬ್ ಬ್ಲಾಸ್ಟ್ ಕೇಸ್ನಲ್ಲಿ ಖುಲಾಸೆಯಾಯ್ತು. ಇವಿಷ್ಟು ಮಾತ್ರವಲ್ಲದೆ, ಟಿ.ನಜೀರ್ ಕಾಲಮಸ್ಸಿ ಬಸ್ ಗೆ ಬೆಂಕಿ ಹಚ್ಚಿದ ಪ್ರಕರಣದ ಆರೋಪಿಯಾಗಿದ್ದನು. ಈ ಪ್ರಕರಣದ ಆರೋಪ ಸಾಬೀತಾಗಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ.
ಉಗ್ರರ ನೇಮಕಾತಿ ಪ್ರಕರಣ
2006ರಲ್ಲಿ ಕಾಶ್ಮೀರದಲ್ಲಿ ಉಗ್ರರ ನೇಮಕಾತಿ ಪ್ರಕರಣ ಬೆಳಕಿಗೆ ಬಂದಿತ್ತು. ಈ ಪ್ರಕರಣದಲ್ಲೂ ಟಿ.ನಜೀರ್ ಆರೋಪಿಯಾಗಿದ್ದು, ಶಿಕ್ಷೆಯಾಗಿದೆ. ಇದೀಗ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಎ1 ಆರೋಪಿ ನಜೀರ್ ಸರಣಿ ಬ್ಲಾಸ್ಟ್ ನಡೆಸಲು ಈತನ ಕೈವಾಡವಿರುವುದು ಕೇಳಿಬಂದಿದೆ.
ಈತನನ್ನು ಬಂಧಿಸಿದ್ದು ಬಾಂಗ್ಲಾದೇಶ ಪೊಲೀಸರು!
ಇಷ್ಟೆಲ್ಲಾ ಖತರ್ನಾಕ್ ಪ್ಲಾನ್ ಹೆಣೆದಿದ್ದ ನಜೀರ್ನನ್ನು 2009ರಲ್ಲಿ ಬಂಧಿಸಲಾಯಿತು. ಬಾಂಗ್ಲಾದೇಶ ಪೊಲೀಸರು ಬಾಂಗ್ಲಾ ಮತ್ತು ಮಯನ್ಮಾರ್ ಗಡಿಯಲ್ಲಿ ನವೆಂಬರ್ ತಿಂಗಳಿನಲ್ಲಿ ಬಂಧಿಸುತ್ತಾರೆ.
ಮುಂಬೈ ದಾಳಿಗೆ ಒಂದು ವರ್ಷ ತುಂಬಿದಕ್ಕೆ ಪ್ಲಾನ್ ಹೆಣೆದಿದ್ದ ಟಿ ನಜೀರ್ ಬಾಂಗ್ಲಾದೇಶದಲ್ಲಿದ್ದ ಭಾರತ ಮತ್ತು ಅಮೆರಿಕ ರಾಯಭಾರಿ ಕಚೇರಿ ಮೇಲೆ ದಾಳಿ ಮಾಡಲು ಸಂಚು ರೂಪಿಸಿದ್ದ. ಆದರೆ ಇವೆಲ್ಲ ವಿಚಾರವನ್ನು ಉಗ್ರ ಡೇವಿಡ್ ಹೇಡ್ಲಿಯನ್ನು ತನಿಖೆ ನಡೆಸಿದಾಗ ಬಾಯಿ ಬಿಟ್ಟಿದ್ದ.
ಡೇವಿಡ್ ಹೇಡ್ಲಿ ಅಮೆರಿಕದಲ್ಲಿ ಬಂಧನವಾದ ಲಷ್ಕರ್ ಆಪರೇಟರ್ ಆಗಿದ್ದನು. ಈತನನನ್ನು ಬಂಧಿಸಿದ ಅಮೆರಿಕ ಪೊಲೀಸರು ಸರಿಯಾಗಿ ಬಾಯಿ ಬಿಡಿಸಿದಾಗ ನಿಜ ಸಂಗತಿಯನ್ನು ಹೇಳಿಕೊಂಡಿದ್ದನು. ಈ ವೇಳೆ ನಜೀರ್ ಅಲಿಯಾಸ್ ತಂಡಿಯಾಂತಾವಿಡೆ ಹೆಸರು ಹೇಳಿದ್ದನು.
ನಜೀರ್ ಬಂಧನವಾದ ಬಳಿಕ ಕೇರಳದಲ್ಲಿ ಉಗ್ರರ ಜೊತೆ ನಂಟು ಹೊಂದಿದ್ದ ಹಲವು ಮುಸ್ಲಿಂ ಯುವಕರನ್ನು ಬಂಧಿಸಲಾಯಿತು. ತನಿಖೆಗೆ ಒಳಪಡಿಸಲಾಯಿತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಉಗ್ರ ಟಿ. ನಸೀರ್ ಮಾಡಿರುವ ಪ್ಲಾನ್ ಒಂದೆರಡಲ್ಲ
ಜೈಲಿನಲ್ಲಿದ್ದುಕೊಂಡೇ ಪ್ಲಾನ್ ಹೆಣೆದಿದ್ದ ಶಂಕಿತ ಉಗ್ರ
ಅಮೆರಿಕದಿಂದ ಬಂತು ಟಿ. ನಸೀರ್ ಮಾಡುತ್ತಿದ್ದ ಕಿತಾಪತಿ ಮಾಹಿತಿ
ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಐವರು ಶಂಕಿತ ಉಗ್ರರನ್ನು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ A1 ಆರೋಪಿ ಟಿ ನಜೀರ್ ಸಹಾಯದಿಂದಲೇ ಶಂಕಿತ ಉಗ್ರರು ಪ್ಲಾನ್ ಹೆಣೆದಿದ್ದಾರೆ ಎಂದು ತಿಳಿದುಬಂದಿದೆ. ಅಂದಹಾಗೆಯೇ ಟಿ.ನಸೀರ್ ಇತಿಹಾಸವೇ ಭಯಾನಕವಾಗಿದ್ದು, ಈತನ ಮೇಲೆ ಸಾಲು ಸಾಲು ಪ್ರಕರಣಗಳಿವೆ. ಈ ಬಗ್ಗೆ ಮಾಹಿತಿ ಇಲ್ಲಿದೆ.
ನಜೀರ್ ಅಲಿಯಾಸ್ ತಂಡಿಯಾಂತಾವಿಡೆ ಯಾರು? ಎಲ್ಲಿಯವನು?
ಟಿ. ನಜೀರ್ ಕರ್ನಾಟಕದವನಲ್ಲ. ಈತ ಕೇರಳದ ಕಣ್ಣೂರು ಮೂಲದವನು. ಈತನ ಮತ್ತೊಂದು ಹೆಸರು ಉಮ್ಮರ್ ಹಜಿ. ಪಿಡಿಪಿಯ ಸಂಘಟನೆಯ ಮಾಜಿ ಕಾರ್ಯಕರ್ತನು ಆಗಿದ್ದ, ಕಣ್ಣೂರಿನಲ್ಲಿ ಕಚೇರಿಯನ್ನು ಹೊಂದಿದ್ದ. ಕೇರಳದ ರಾಜಕಾರಣಿ ಅಬ್ದುಲ್ ನಜೀರ್ ಮದಾನಿ ಜೊತೆಗೆ ಈತನ ಸಂಪರ್ಕವಿತ್ತು. ಮಾತ್ರವಲ್ಲದೆ ಅಬ್ದುಲ್ ನಜೀರ್ ಮದಾನಿ ಹೆಂಡತಿ ಕೂಡ ಈತನನಿಗೆ ಸಂಪರ್ಕ ಇರುವುದು ಬೆಳಕಿಗೆ ಬಂದಿತ್ತು.
2008ರ ಬೆಂಗಳೂರು ಸರಣಿ ಬಾಂಬ್ ಬ್ಲಾಸ್ಟ್ ಪ್ರಕರಣ
ಟಿ ನಜೀರ್ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ. ಆದರೆ ಉಗ್ರ 2008ರ ಬೆಂಗಳೂರು ಸರಣಿ ಬಾಂಬ್ ಬ್ಲಾಸ್ಟ್ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ಅಂದು ಜುಲೈ 25ರಂದು ಮಧ್ಯಾಹ್ನ 1.20 ಬೆಂಗಳೂರು ಮಡಿವಾಳ ಬಸ್ ಡಿಪೋದಲ್ಲಿ ಬಾಂಬ್ ಬ್ಲಾಸ್ಟ್ ಮಾಡಿಸಿದ್ದನು. ಬಳಿಕ 2.35ಕ್ಕೆ ರಾಜಧಾನಿಯ ವಿವಿಧ ಸ್ಥಳಗಳಲ್ಲಿ ಸರಣಿ ಬಾಂಬ್ ಸ್ಫೋಟಗೊಂಡಿತ್ತು. ಈ ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದರೆ, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಇಷ್ಟೆಲ್ಲಾ ಮಾಡಿದ್ದ ನಜೀರ್ ಲಷ್ಕರ್- ಇ-ತೋಯ್ಬಾ ಸಂಘಟನೆಯ ಪ್ರಮುಖನಾಗಿದ್ದು, ದಕ್ಷಿಣ ಭಾರತದ ಕಮಾಂಡರ್ ಕೂಡ ಆಗಿದ್ದನು.
ಅವಳಿ ಬಾಂಬ್ ಬ್ಲಾಸ್ಟ್
ಇನ್ನು ಕೇರಳದ ಕೋಜಿಕೋಡೆಯಲ್ಲಿ ನಡೆದ ಅವಳಿ ಬಾಂಬ್ ಬ್ಲಾಸ್ಟ್ನಲ್ಲೂ ಈತನ ಹೆಸರು ಕೇಳಿಬಂದಿತ್ತು. ಆದರೆ ಈ ಬಾಂಬ್ ಬ್ಲಾಸ್ಟ್ ಕೇಸ್ನಲ್ಲಿ ಖುಲಾಸೆಯಾಯ್ತು. ಇವಿಷ್ಟು ಮಾತ್ರವಲ್ಲದೆ, ಟಿ.ನಜೀರ್ ಕಾಲಮಸ್ಸಿ ಬಸ್ ಗೆ ಬೆಂಕಿ ಹಚ್ಚಿದ ಪ್ರಕರಣದ ಆರೋಪಿಯಾಗಿದ್ದನು. ಈ ಪ್ರಕರಣದ ಆರೋಪ ಸಾಬೀತಾಗಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ.
ಉಗ್ರರ ನೇಮಕಾತಿ ಪ್ರಕರಣ
2006ರಲ್ಲಿ ಕಾಶ್ಮೀರದಲ್ಲಿ ಉಗ್ರರ ನೇಮಕಾತಿ ಪ್ರಕರಣ ಬೆಳಕಿಗೆ ಬಂದಿತ್ತು. ಈ ಪ್ರಕರಣದಲ್ಲೂ ಟಿ.ನಜೀರ್ ಆರೋಪಿಯಾಗಿದ್ದು, ಶಿಕ್ಷೆಯಾಗಿದೆ. ಇದೀಗ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಎ1 ಆರೋಪಿ ನಜೀರ್ ಸರಣಿ ಬ್ಲಾಸ್ಟ್ ನಡೆಸಲು ಈತನ ಕೈವಾಡವಿರುವುದು ಕೇಳಿಬಂದಿದೆ.
ಈತನನ್ನು ಬಂಧಿಸಿದ್ದು ಬಾಂಗ್ಲಾದೇಶ ಪೊಲೀಸರು!
ಇಷ್ಟೆಲ್ಲಾ ಖತರ್ನಾಕ್ ಪ್ಲಾನ್ ಹೆಣೆದಿದ್ದ ನಜೀರ್ನನ್ನು 2009ರಲ್ಲಿ ಬಂಧಿಸಲಾಯಿತು. ಬಾಂಗ್ಲಾದೇಶ ಪೊಲೀಸರು ಬಾಂಗ್ಲಾ ಮತ್ತು ಮಯನ್ಮಾರ್ ಗಡಿಯಲ್ಲಿ ನವೆಂಬರ್ ತಿಂಗಳಿನಲ್ಲಿ ಬಂಧಿಸುತ್ತಾರೆ.
ಮುಂಬೈ ದಾಳಿಗೆ ಒಂದು ವರ್ಷ ತುಂಬಿದಕ್ಕೆ ಪ್ಲಾನ್ ಹೆಣೆದಿದ್ದ ಟಿ ನಜೀರ್ ಬಾಂಗ್ಲಾದೇಶದಲ್ಲಿದ್ದ ಭಾರತ ಮತ್ತು ಅಮೆರಿಕ ರಾಯಭಾರಿ ಕಚೇರಿ ಮೇಲೆ ದಾಳಿ ಮಾಡಲು ಸಂಚು ರೂಪಿಸಿದ್ದ. ಆದರೆ ಇವೆಲ್ಲ ವಿಚಾರವನ್ನು ಉಗ್ರ ಡೇವಿಡ್ ಹೇಡ್ಲಿಯನ್ನು ತನಿಖೆ ನಡೆಸಿದಾಗ ಬಾಯಿ ಬಿಟ್ಟಿದ್ದ.
ಡೇವಿಡ್ ಹೇಡ್ಲಿ ಅಮೆರಿಕದಲ್ಲಿ ಬಂಧನವಾದ ಲಷ್ಕರ್ ಆಪರೇಟರ್ ಆಗಿದ್ದನು. ಈತನನನ್ನು ಬಂಧಿಸಿದ ಅಮೆರಿಕ ಪೊಲೀಸರು ಸರಿಯಾಗಿ ಬಾಯಿ ಬಿಡಿಸಿದಾಗ ನಿಜ ಸಂಗತಿಯನ್ನು ಹೇಳಿಕೊಂಡಿದ್ದನು. ಈ ವೇಳೆ ನಜೀರ್ ಅಲಿಯಾಸ್ ತಂಡಿಯಾಂತಾವಿಡೆ ಹೆಸರು ಹೇಳಿದ್ದನು.
ನಜೀರ್ ಬಂಧನವಾದ ಬಳಿಕ ಕೇರಳದಲ್ಲಿ ಉಗ್ರರ ಜೊತೆ ನಂಟು ಹೊಂದಿದ್ದ ಹಲವು ಮುಸ್ಲಿಂ ಯುವಕರನ್ನು ಬಂಧಿಸಲಾಯಿತು. ತನಿಖೆಗೆ ಒಳಪಡಿಸಲಾಯಿತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ