ಬಿಗ್ ಬಾಸ್ ಪ್ರಾರಂಭವಾಗಿ 5ನೇ ದಿನ
ಮನೆಯಿಂದ ಹೊರ ಹೋಗಲು ನಿರ್ಧರಿಸಿದ ಸ್ಪರ್ಧಿ
ಡೋರ್ ಮುರಿದು ಹೊರಬರುತ್ತೇನೆಂದ BBK11 ಸ್ಪರ್ಧಿ
ಬಿಗ್ ಬಾಸ್ ಕನ್ನಡ ಸೀಸನ್ 11 ಪ್ರಾರಂಭವಾಗಿ 4 ದಿನಗಳು ಉರುಳಿ 5ನೇ ದಿನದತ್ತ ಕಾಲಿಟ್ಟಿದೆ. ಪ್ರಾರಂಭದಲ್ಲಿ ನಗು ಮೊಗದಿಂದ ಮಾತನಾಡುತ್ತಿದ್ದ ಮನೆಮಂದಿಯ ನಡುವೆ ಇದೀಗ ಕೊಂಚ ವೈಮನಸ್ಸು ಕಾಣಿಸಿಕೊಂಡಿದೆ. ಜಗಳ, ಕಿತ್ತಾಟ ಶುರುವಾಗಿದೆ. ಹೀಗಿರುವಾಗ ಸ್ಪರ್ಧಿಯೊಬ್ಬರು ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ನಿರ್ಧರಿಸಿದ್ದಾರೆ. ನನಗೆ ಇರೋಕೆ ಇಷ್ಟವಿಲ್ಲ, ಬಿಗ್ ಬಾಸ್ನಿಂದ ಹೊರ ಹೋಗುತ್ತೇನೆ ಎಂದು ಹೇಳಿದ್ದಾರೆ.
ಈ ಬಾರಿಯ ಬಿಗ್ ಬಾಸ್ ಸೀಸನ್ 11ನಲ್ಲಿ ಲಾಯರ್ಯೊಬ್ಬರು ಕಾಣಿಸಿಕೊಂಡಿದ್ದಾರೆ. ಬೆಂಗಳೂರು ಮೂಲಕ ಜಗದೀಶ್ ಬಿಗ್ ಬಾಸ್ ಮನೆಯಲ್ಲಿದ್ದಾರೆ. ಆದರೀಗ ಮನೆಯ ಮಂದಿ ಮತ್ತು ಅವರ ನಡುವೆ ಜಗಳ ಶುರುವಾಗಿದ್ದು, ಈ ವೇಳೆ ಕೆಂಡಾಮಂಡಲರಾಗಿದ್ದಾರೆ.
ಇದನ್ನೂ ಓದಿ: ದಯವಿಟ್ಟು ನಿಮ್ಮ ರಾಜಕೀಯ ಜಗಳದಿಂದ ನನ್ನ ಹೆಸರು ಹೊರಗಿಡಿ.. ಸಚಿವೆಯ ವಿವಾದಿತ ಹೇಳಿಕೆಗೆ ನಟಿ ಸಮಂತಾ ಬೇಸರ
ಕ್ಯಾಮೆರಾ ಮುಂದೆ ಹೋಗಿ ಲಾಯರ್ ಜಗದೀಶ್ ಮಾತನಾಡಿದ್ದಾರೆ. ಬಿಗ್ ಬಾಸ್ ನನಗೆ ಇಲ್ಲಿ ಇರೋಕೆ ಇಷ್ಟವಿಲ್ಲ. ನಾನು ಹೊರ ಹೋಗುತ್ತೇನೆ ಎಂದಿದ್ದಾರೆ.
ಇದಲ್ಲದೆ ಬಿಗ್ ಬಾಸ್ಗೂ ಅವಾಜ್ ಹಾಕಿದ ಜಗದೀಶ್. ನಾನು ಈ ಪ್ರೋಗ್ರಾಂ ಹಾಳು ಮಾಡದಿದ್ದರೆ ನನ್ನ ಹೆಸರು ಜಗದೀಶ್ ಅಲ್ಲ ಎಂದಿದ್ದಾರೆ. ಯಾವನು ಕಾಲು ಇಡಬಾರದು ಇಲ್ಲಿ. ಮನಸ್ಸು ಮಾಡಿದ್ರೆ ನಾನು ಹೆಲಿಕಾಪ್ಟರ್ ತರಿಸುತ್ತೇನೆ. ಈ ಡೋರನ್ನೇ ಉಡಾಯಿಸಿ ಬಿಡುತ್ತೇನೆ. ನನ್ನನ್ನು ಎದುರಾಕಿಕೊಂಡು ಕರ್ನಾಟಕದಲ್ಲಿ ಬಿಗ್ ಬಾಸ್ ಓಡಿಸುತ್ತೀರಾ? ಓಡ್ಸಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಟ ದರ್ಶನ್ ಕೇಸ್ಗೆ ಟ್ವಿಸ್ಟ್; ಈ ಮೂವರು ಆರೋಪಿಗಳ ನಿಜವಾದ ಪಾತ್ರವೇನು?
ಸದ್ಯ ಬಿಗ್ ಬಾಸ್ ಜಗದೀಶ್ ಅವರನ್ನು ಮನೆಯಿಂದ ಹೊರಗೆ ಕಲಿಸುತ್ತಾರಾ? ಅಥವಾ ನರಕಕ್ಕೆ ಕಲಿಸುತ್ತಾರಾ ಎಂದು ಕಾದು ನೋಡಬೇಕಿದೆ. ಇದಲ್ಲದೆ ನಾಮಿನೇಟ್ ಆಗಿರುವ ಜಗದೀಶ್ ಮೊದಲ ದಿನವೇ ಎಲಿಮಿನೇಟ್ ಆಗುತ್ತಾರಾ ಎಂಬುದು ಎಲ್ಲರ ಕುತೂಹಲವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಬಿಗ್ ಬಾಸ್ ಪ್ರಾರಂಭವಾಗಿ 5ನೇ ದಿನ
ಮನೆಯಿಂದ ಹೊರ ಹೋಗಲು ನಿರ್ಧರಿಸಿದ ಸ್ಪರ್ಧಿ
ಡೋರ್ ಮುರಿದು ಹೊರಬರುತ್ತೇನೆಂದ BBK11 ಸ್ಪರ್ಧಿ
ಬಿಗ್ ಬಾಸ್ ಕನ್ನಡ ಸೀಸನ್ 11 ಪ್ರಾರಂಭವಾಗಿ 4 ದಿನಗಳು ಉರುಳಿ 5ನೇ ದಿನದತ್ತ ಕಾಲಿಟ್ಟಿದೆ. ಪ್ರಾರಂಭದಲ್ಲಿ ನಗು ಮೊಗದಿಂದ ಮಾತನಾಡುತ್ತಿದ್ದ ಮನೆಮಂದಿಯ ನಡುವೆ ಇದೀಗ ಕೊಂಚ ವೈಮನಸ್ಸು ಕಾಣಿಸಿಕೊಂಡಿದೆ. ಜಗಳ, ಕಿತ್ತಾಟ ಶುರುವಾಗಿದೆ. ಹೀಗಿರುವಾಗ ಸ್ಪರ್ಧಿಯೊಬ್ಬರು ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ನಿರ್ಧರಿಸಿದ್ದಾರೆ. ನನಗೆ ಇರೋಕೆ ಇಷ್ಟವಿಲ್ಲ, ಬಿಗ್ ಬಾಸ್ನಿಂದ ಹೊರ ಹೋಗುತ್ತೇನೆ ಎಂದು ಹೇಳಿದ್ದಾರೆ.
ಈ ಬಾರಿಯ ಬಿಗ್ ಬಾಸ್ ಸೀಸನ್ 11ನಲ್ಲಿ ಲಾಯರ್ಯೊಬ್ಬರು ಕಾಣಿಸಿಕೊಂಡಿದ್ದಾರೆ. ಬೆಂಗಳೂರು ಮೂಲಕ ಜಗದೀಶ್ ಬಿಗ್ ಬಾಸ್ ಮನೆಯಲ್ಲಿದ್ದಾರೆ. ಆದರೀಗ ಮನೆಯ ಮಂದಿ ಮತ್ತು ಅವರ ನಡುವೆ ಜಗಳ ಶುರುವಾಗಿದ್ದು, ಈ ವೇಳೆ ಕೆಂಡಾಮಂಡಲರಾಗಿದ್ದಾರೆ.
ಇದನ್ನೂ ಓದಿ: ದಯವಿಟ್ಟು ನಿಮ್ಮ ರಾಜಕೀಯ ಜಗಳದಿಂದ ನನ್ನ ಹೆಸರು ಹೊರಗಿಡಿ.. ಸಚಿವೆಯ ವಿವಾದಿತ ಹೇಳಿಕೆಗೆ ನಟಿ ಸಮಂತಾ ಬೇಸರ
ಕ್ಯಾಮೆರಾ ಮುಂದೆ ಹೋಗಿ ಲಾಯರ್ ಜಗದೀಶ್ ಮಾತನಾಡಿದ್ದಾರೆ. ಬಿಗ್ ಬಾಸ್ ನನಗೆ ಇಲ್ಲಿ ಇರೋಕೆ ಇಷ್ಟವಿಲ್ಲ. ನಾನು ಹೊರ ಹೋಗುತ್ತೇನೆ ಎಂದಿದ್ದಾರೆ.
ಇದಲ್ಲದೆ ಬಿಗ್ ಬಾಸ್ಗೂ ಅವಾಜ್ ಹಾಕಿದ ಜಗದೀಶ್. ನಾನು ಈ ಪ್ರೋಗ್ರಾಂ ಹಾಳು ಮಾಡದಿದ್ದರೆ ನನ್ನ ಹೆಸರು ಜಗದೀಶ್ ಅಲ್ಲ ಎಂದಿದ್ದಾರೆ. ಯಾವನು ಕಾಲು ಇಡಬಾರದು ಇಲ್ಲಿ. ಮನಸ್ಸು ಮಾಡಿದ್ರೆ ನಾನು ಹೆಲಿಕಾಪ್ಟರ್ ತರಿಸುತ್ತೇನೆ. ಈ ಡೋರನ್ನೇ ಉಡಾಯಿಸಿ ಬಿಡುತ್ತೇನೆ. ನನ್ನನ್ನು ಎದುರಾಕಿಕೊಂಡು ಕರ್ನಾಟಕದಲ್ಲಿ ಬಿಗ್ ಬಾಸ್ ಓಡಿಸುತ್ತೀರಾ? ಓಡ್ಸಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಟ ದರ್ಶನ್ ಕೇಸ್ಗೆ ಟ್ವಿಸ್ಟ್; ಈ ಮೂವರು ಆರೋಪಿಗಳ ನಿಜವಾದ ಪಾತ್ರವೇನು?
ಸದ್ಯ ಬಿಗ್ ಬಾಸ್ ಜಗದೀಶ್ ಅವರನ್ನು ಮನೆಯಿಂದ ಹೊರಗೆ ಕಲಿಸುತ್ತಾರಾ? ಅಥವಾ ನರಕಕ್ಕೆ ಕಲಿಸುತ್ತಾರಾ ಎಂದು ಕಾದು ನೋಡಬೇಕಿದೆ. ಇದಲ್ಲದೆ ನಾಮಿನೇಟ್ ಆಗಿರುವ ಜಗದೀಶ್ ಮೊದಲ ದಿನವೇ ಎಲಿಮಿನೇಟ್ ಆಗುತ್ತಾರಾ ಎಂಬುದು ಎಲ್ಲರ ಕುತೂಹಲವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ