ಟೀಮ್ ಇಂಡಿಯಾ, ಬಾಂಗ್ಲಾದೇಶ ನಡುವಿನ ಟೆಸ್ಟ್ ಸೀರೀಸ್ ಮುಕ್ತಾಯ!
ಅಕ್ಟೋಬರ್ 16ನೇ ತಾರೀಕಿನಿಂದ ಶುರುವಾಗಲಿದೆ ಮತ್ತೊಂದು ಟೆಸ್ಟ್ ಸರಣಿ
ನ್ಯೂಜಿಲೆಂಡ್ ಮತ್ತು ಟೀಮ್ ಇಂಡಿಯಾ ನಡುವೆ ಮಹತ್ವದ ಟೆಸ್ಟ್ ಸೀರೀಸ್
ಕ್ಯಾಪ್ಟನ್ ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ 2 ಟೆಸ್ಟ್ಗಳ ಸರಣಿಯಲ್ಲಿ ಬಾಂಗ್ಲಾದೇಶವನ್ನು 2-0 ಅಂತರದಿಂದ ಸೋಲಿಸುವ ಮೂಲಕ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ. ಈಗ ಟೀಮ್ ಇಂಡಿಯಾ ತವರಿನಲ್ಲಿ ಅಕ್ಟೋಬರ್ 16ನೇ ತಾರೀಕಿನಿಂದ ನ್ಯೂಜಿಲೆಂಡ್ ತಂಡವನ್ನು ಎದುರಿಸಲು ಸಜ್ಜಾಗಿದೆ. ನ್ಯೂಜಿಲೆಂಡ್ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿಗೆ ಇನ್ನೇನು ಬಲಿಷ್ಠ ಟೀಮ್ ಇಂಡಿಯಾ ಪ್ರಕಟವಾಗಬೇಕಿದೆ. ಇದರ ಮಧ್ಯೆ ಟೀಮ್ ಇಂಡಿಯಾದ ಯುವ ಬ್ಯಾಟರ್ ಬಿಸಿಸಿಐ ಸೆಲೆಕ್ಷನ್ ಕಮಿಟಿ ಕದ ತಟ್ಟಿದ್ದಾರೆ.
ಇರಾನಿ ಕಪ್ನಲ್ಲಿ ಅಭಿಮನ್ಯು ಈಶ್ವರನ್ ಅಬ್ಬರ
ಟೀಮ್ ಇಂಡಿಯಾದ ಯುವ ಬ್ಯಾಟರ್ ಅಭಿಮನ್ಯು ಈಶ್ವರನ್ ಇರಾನಿ ಕಪ್ನಲ್ಲಿ ಅಮೋಘ ಶತಕ ಸಿಡಿಸಿದ್ರು. ಮುಂಬೈ ವಿರುದ್ಧದ ಮಹತ್ವದ ಪಂದ್ಯದಲ್ಲಿ ರೆಸ್ಟ್ ಆಫ್ ಇಂಡಿಯಾ ಪರ ಬ್ಯಾಟ್ ಬೀಸಿದ ಅಭಿಮನ್ಯು ಎದುರಾಳಿಗಳಿಗೆ ಪ್ರತ್ಯುತ್ತರ ನೀಡಿದ್ರು. ರೆಸ್ಟ್ ಆಫ್ ಇಂಡಿಯಾ ತಂಡದ ಪರ ಓಪನರ್ ಆಗಿ ಬಂದ ಅಭಿಮನ್ಯು ಈಶ್ವರನ್ ಅಮೋಘ ಬ್ಯಾಟಿಂಗ್ ಮಾಡಿದ್ರು. ಇವರು ಎದುರಿಸಿದ 292 ಎಸೆತಗಳಲ್ಲಿ ಬರೋಬ್ಬರಿ 191 ರನ್ ಚಚ್ಚಿದ್ರು. ಬ್ಯಾಕ್ ಟು ಬ್ಯಾಕ್ 16 ಫೋರ್, 1 ಸಿಕ್ಸರ್ ಸಿಡಿಸಿದ್ರು.
ಬಿಸಿಸಿಐ ಕದ ತಟ್ಟಿದ ಯುವ ಬ್ಯಾಟರ್
ಇನ್ನು, ಅಭಿಮನ್ಯು ಈಶ್ವರನ್ ಟೀಮ್ ಇಂಡಿಯಾದ ಪ್ರತಿಭಾವಂತ ಬ್ಯಾಟರ್. ಇವರು ಇರಾನಿ ಕಪ್ನಲ್ಲಿ ಅಮೋಘ ಶತಕ ಸಿಡಿಸೋ ಮೂಲಕ ಬಿಸಿಸಿಐ ಸೆಲೆಕ್ಷನ್ ಕಮಿಟಿ ಗಮನ ಸೆಳೆದರು. ಮುಂದಿನ ಟೆಸ್ಟ್ ಸೀರೀಸ್ಗೆ ಟೀಮ್ ಇಂಡಿಯಾಗೆ ಆಯ್ಕೆ ಮಾಡಿ ಎಂದು ಸೂಚನೆ ಕೊಟ್ರು.
ಬಾರ್ಡರ್ ಗವಾಸ್ಕರ್ ಕಪ್
ನವೆಂಬರ್ನಿಂದ ಜನವರಿ ತಿಂಗಳವರಗೆ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್ ಗವಾಸ್ಕರ್ ಟ್ರೋಫಿ ಆಡಲಿದೆ. ಇದು 5 ಪಂದ್ಯಗಳ ಟೆಸ್ಟ್ ಸರಣಿ ಆಗಿದೆ. ನವೆಂಬರ್ 22 ರಿಂದಲೇ ಪರ್ತ್ ಸ್ಟೇಡಿಯಮ್ನಲ್ಲಿ ಮೊದಲ ಟೆಸ್ಟ್ ಶುರುವಾಗಲಿದೆ. ಹಾಗಾಗಿ ಇದು ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡಕ್ಕೆ ದೊಡ್ಡ ಸವಾಲು ಎದುರಾಗಲಿದೆ. ಈ ಸೀರೀಸ್ಗೆ ಆಯ್ಕೆ ಮಾಡಿ ಎಂದು ಅಭಿಮನ್ಯು ಪರೋಕ್ಷ ಸಂದೇಶ ಸಾರಿಸಿದ್ದಾರೆ.
ಇದನ್ನೂ ಓದಿ: ಮೆಗಾ ಆಕ್ಷನ್ಗೆ ಮುನ್ನವೇ ಬಿಗ್ ಟ್ರೇಡ್.. ಆರ್ಸಿಬಿಗೆ ಸ್ಟಾರ್ ಪ್ಲೇಯರ್ ರೀ ಎಂಟ್ರಿ!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಟೀಮ್ ಇಂಡಿಯಾ, ಬಾಂಗ್ಲಾದೇಶ ನಡುವಿನ ಟೆಸ್ಟ್ ಸೀರೀಸ್ ಮುಕ್ತಾಯ!
ಅಕ್ಟೋಬರ್ 16ನೇ ತಾರೀಕಿನಿಂದ ಶುರುವಾಗಲಿದೆ ಮತ್ತೊಂದು ಟೆಸ್ಟ್ ಸರಣಿ
ನ್ಯೂಜಿಲೆಂಡ್ ಮತ್ತು ಟೀಮ್ ಇಂಡಿಯಾ ನಡುವೆ ಮಹತ್ವದ ಟೆಸ್ಟ್ ಸೀರೀಸ್
ಕ್ಯಾಪ್ಟನ್ ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ 2 ಟೆಸ್ಟ್ಗಳ ಸರಣಿಯಲ್ಲಿ ಬಾಂಗ್ಲಾದೇಶವನ್ನು 2-0 ಅಂತರದಿಂದ ಸೋಲಿಸುವ ಮೂಲಕ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ. ಈಗ ಟೀಮ್ ಇಂಡಿಯಾ ತವರಿನಲ್ಲಿ ಅಕ್ಟೋಬರ್ 16ನೇ ತಾರೀಕಿನಿಂದ ನ್ಯೂಜಿಲೆಂಡ್ ತಂಡವನ್ನು ಎದುರಿಸಲು ಸಜ್ಜಾಗಿದೆ. ನ್ಯೂಜಿಲೆಂಡ್ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿಗೆ ಇನ್ನೇನು ಬಲಿಷ್ಠ ಟೀಮ್ ಇಂಡಿಯಾ ಪ್ರಕಟವಾಗಬೇಕಿದೆ. ಇದರ ಮಧ್ಯೆ ಟೀಮ್ ಇಂಡಿಯಾದ ಯುವ ಬ್ಯಾಟರ್ ಬಿಸಿಸಿಐ ಸೆಲೆಕ್ಷನ್ ಕಮಿಟಿ ಕದ ತಟ್ಟಿದ್ದಾರೆ.
ಇರಾನಿ ಕಪ್ನಲ್ಲಿ ಅಭಿಮನ್ಯು ಈಶ್ವರನ್ ಅಬ್ಬರ
ಟೀಮ್ ಇಂಡಿಯಾದ ಯುವ ಬ್ಯಾಟರ್ ಅಭಿಮನ್ಯು ಈಶ್ವರನ್ ಇರಾನಿ ಕಪ್ನಲ್ಲಿ ಅಮೋಘ ಶತಕ ಸಿಡಿಸಿದ್ರು. ಮುಂಬೈ ವಿರುದ್ಧದ ಮಹತ್ವದ ಪಂದ್ಯದಲ್ಲಿ ರೆಸ್ಟ್ ಆಫ್ ಇಂಡಿಯಾ ಪರ ಬ್ಯಾಟ್ ಬೀಸಿದ ಅಭಿಮನ್ಯು ಎದುರಾಳಿಗಳಿಗೆ ಪ್ರತ್ಯುತ್ತರ ನೀಡಿದ್ರು. ರೆಸ್ಟ್ ಆಫ್ ಇಂಡಿಯಾ ತಂಡದ ಪರ ಓಪನರ್ ಆಗಿ ಬಂದ ಅಭಿಮನ್ಯು ಈಶ್ವರನ್ ಅಮೋಘ ಬ್ಯಾಟಿಂಗ್ ಮಾಡಿದ್ರು. ಇವರು ಎದುರಿಸಿದ 292 ಎಸೆತಗಳಲ್ಲಿ ಬರೋಬ್ಬರಿ 191 ರನ್ ಚಚ್ಚಿದ್ರು. ಬ್ಯಾಕ್ ಟು ಬ್ಯಾಕ್ 16 ಫೋರ್, 1 ಸಿಕ್ಸರ್ ಸಿಡಿಸಿದ್ರು.
ಬಿಸಿಸಿಐ ಕದ ತಟ್ಟಿದ ಯುವ ಬ್ಯಾಟರ್
ಇನ್ನು, ಅಭಿಮನ್ಯು ಈಶ್ವರನ್ ಟೀಮ್ ಇಂಡಿಯಾದ ಪ್ರತಿಭಾವಂತ ಬ್ಯಾಟರ್. ಇವರು ಇರಾನಿ ಕಪ್ನಲ್ಲಿ ಅಮೋಘ ಶತಕ ಸಿಡಿಸೋ ಮೂಲಕ ಬಿಸಿಸಿಐ ಸೆಲೆಕ್ಷನ್ ಕಮಿಟಿ ಗಮನ ಸೆಳೆದರು. ಮುಂದಿನ ಟೆಸ್ಟ್ ಸೀರೀಸ್ಗೆ ಟೀಮ್ ಇಂಡಿಯಾಗೆ ಆಯ್ಕೆ ಮಾಡಿ ಎಂದು ಸೂಚನೆ ಕೊಟ್ರು.
ಬಾರ್ಡರ್ ಗವಾಸ್ಕರ್ ಕಪ್
ನವೆಂಬರ್ನಿಂದ ಜನವರಿ ತಿಂಗಳವರಗೆ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್ ಗವಾಸ್ಕರ್ ಟ್ರೋಫಿ ಆಡಲಿದೆ. ಇದು 5 ಪಂದ್ಯಗಳ ಟೆಸ್ಟ್ ಸರಣಿ ಆಗಿದೆ. ನವೆಂಬರ್ 22 ರಿಂದಲೇ ಪರ್ತ್ ಸ್ಟೇಡಿಯಮ್ನಲ್ಲಿ ಮೊದಲ ಟೆಸ್ಟ್ ಶುರುವಾಗಲಿದೆ. ಹಾಗಾಗಿ ಇದು ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡಕ್ಕೆ ದೊಡ್ಡ ಸವಾಲು ಎದುರಾಗಲಿದೆ. ಈ ಸೀರೀಸ್ಗೆ ಆಯ್ಕೆ ಮಾಡಿ ಎಂದು ಅಭಿಮನ್ಯು ಪರೋಕ್ಷ ಸಂದೇಶ ಸಾರಿಸಿದ್ದಾರೆ.
ಇದನ್ನೂ ಓದಿ: ಮೆಗಾ ಆಕ್ಷನ್ಗೆ ಮುನ್ನವೇ ಬಿಗ್ ಟ್ರೇಡ್.. ಆರ್ಸಿಬಿಗೆ ಸ್ಟಾರ್ ಪ್ಲೇಯರ್ ರೀ ಎಂಟ್ರಿ!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್