DRS ನಿಯಮ ಬಳಸಿ ಮೊದಲು ಔಟ್ ಆಗಿದ್ದು ಯಾರು ಗೊತ್ತಾ?
DRS ಬಳಸಿದ ಮೊದಲ ಎರಡು ದೇಶಗಳು ಅಂದ್ರೆ ಭಾರತ, ಶ್ರೀಲಂಕಾ
ಡಿಸಿಷನ್ ರಿವ್ಯೂ ಸಿಸ್ಟಮ್ ಜಾರಿಯಾಗಿ ಎಷ್ಟು ವರ್ಷಗಳಾಗಿವೆ?
ಡಿಸಿಷನ್ ರಿವ್ಯೂ ಸಿಸ್ಟಮ್. ಅಂದ್ರೆ ಡಿಆರ್ಎಸ್ ಜಾರಿಗೆ ಬಂದು ಬರೋಬ್ಬರಿ 15 ವರ್ಷಗಳಾಯ್ತು. ಹಾಗಾದ್ರೆ, ಅಂಪೈರ್ ತೀರ್ಪನ್ನ ಮೊದಲು ಮರುಪರಿಶೀಲನೆ ಮಾಡಿದ್ದು ಯಾರು, ಈ ನಿಯಮದಿಂದ ಮೊದಲು ಔಟ್ ಆಗಿರೋದು ಯಾರು ಅನ್ನೋದನ್ನ ನೋಡೋಣ ಇವತ್ತಿನ ಸಖತ್ ಸ್ಟೋರಿಯಲ್ಲಿ.
DRS ಎಂದರೆ ಡಿಸಿಷನ್ ರಿವ್ಯೂ ಸಿಸ್ಟಮ್. ವಿವಾದಾತ್ಮಕ ತೀರ್ಪುಗಳ ತಡೆಗಾಗಿ ಬಳಸುವ ಈ ತಂತ್ರಜ್ಞಾನ ಜಾರಿಯಾಗಿ ಬರೋಬ್ಬರಿ 15 ವರ್ಷಗಳು ಕಳೆದಿವೆ. 2008 ಜುಲೈ 23ರಂದು ಅಧಿಕೃತವಾಗಿ ಜಾರಿಗೆ ಬಂದ ಈ ತಂತ್ರಜ್ಞಾನಕ್ಕೆ ಇಂಡೋ-ಲಂಕಾ ಟೆಸ್ಟ್ ಪಂದ್ಯ ಸಾಕ್ಷಿಯಾಗಿತ್ತು.
ಈ ಪಂದ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಡಿಆರ್ಎಸ್ ನಿಯಮವನ್ನ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಬಳಸಿದರು. ಇನ್ನು, ಡಿಆರ್ಎಸ್ಗೆ ಬಲಿಯಾದ ಮೊದಲ ಬ್ಯಾಟ್ಸ್ಮನ್ ಟೀಮ್ ಇಂಡಿಯಾದ ಓಪನರ್ ವಿರೇಂದ್ರ ಸೆಹ್ವಾಗ್. ಇನ್ನು, ಇದೇ ಪಂದ್ಯದಲ್ಲಿ ಅಂಪೈರ್ ತೀರ್ಪಿಗೆ ಮೇಲ್ಮನವಿ ಸಲ್ಲಿಸಿ ಶ್ರೀಲಂಕಾ ಮಾಜಿ ಕ್ರಿಕೆಟರ್ ತಿಲಕರತ್ನೆ ದಿಲ್ಶಾನ್ ಬಚಾವ್ ಕೂಡ ಆಗಿದ್ರು. ಇಷ್ಟೇ ಅಲ್ಲ, ಡಿಆರ್ಎಸ್ನಿಂದ ಬಚಾವ್ ಆಗಿದ್ದ ದಿಲ್ಶಾನ್ ಅಜೇಯ 125 ರನ್ ಬಾರಿಸುವಲ್ಲಿ ಯಶಸ್ವಿಯಾಗಿದ್ದರು.
ಈ ಪಂದ್ಯವನ್ನ ಟೀಮ್ ಇಂಡಿಯಾ ಇನ್ನಿಂಗ್ಸ್ ಹಾಗೂ 239 ರನ್ಗಳ ಹೀನಾಯ ಸೋಲು ಕಂಡಿತ್ತು. ಈ ಪಂದ್ಯದ ಬಳಿಕ ಈ ಡಿಆರ್ಎಸ್ನ್ನ ಏಕದಿನ ಹಾಗೂ ಟಿ20 ಫಾರ್ಮೆಟ್ಗೆ ವಿಸ್ತರಿಸಲಾಯಿತು. ಸದ್ಯ ಈ ನಿಯಮ ಸೋಲು- ಗೆಲುವಿನಲ್ಲಿ ಮೇಜರ್ ರೋಲ್ ಪ್ಲೇ ಮಾಡ್ತಿದೆ. ಹಾಗಿದ್ದರೂ ವಿವಾದಾತ್ಮಕ ತೀರ್ಪಿಗೆ ಮಾತ್ರ ಬ್ರೇಕ್ ಬಿದ್ದಿಲ್ಲ ಅನ್ನೋದು ವಿಪರ್ಯಾಸ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
DRS ನಿಯಮ ಬಳಸಿ ಮೊದಲು ಔಟ್ ಆಗಿದ್ದು ಯಾರು ಗೊತ್ತಾ?
DRS ಬಳಸಿದ ಮೊದಲ ಎರಡು ದೇಶಗಳು ಅಂದ್ರೆ ಭಾರತ, ಶ್ರೀಲಂಕಾ
ಡಿಸಿಷನ್ ರಿವ್ಯೂ ಸಿಸ್ಟಮ್ ಜಾರಿಯಾಗಿ ಎಷ್ಟು ವರ್ಷಗಳಾಗಿವೆ?
ಡಿಸಿಷನ್ ರಿವ್ಯೂ ಸಿಸ್ಟಮ್. ಅಂದ್ರೆ ಡಿಆರ್ಎಸ್ ಜಾರಿಗೆ ಬಂದು ಬರೋಬ್ಬರಿ 15 ವರ್ಷಗಳಾಯ್ತು. ಹಾಗಾದ್ರೆ, ಅಂಪೈರ್ ತೀರ್ಪನ್ನ ಮೊದಲು ಮರುಪರಿಶೀಲನೆ ಮಾಡಿದ್ದು ಯಾರು, ಈ ನಿಯಮದಿಂದ ಮೊದಲು ಔಟ್ ಆಗಿರೋದು ಯಾರು ಅನ್ನೋದನ್ನ ನೋಡೋಣ ಇವತ್ತಿನ ಸಖತ್ ಸ್ಟೋರಿಯಲ್ಲಿ.
DRS ಎಂದರೆ ಡಿಸಿಷನ್ ರಿವ್ಯೂ ಸಿಸ್ಟಮ್. ವಿವಾದಾತ್ಮಕ ತೀರ್ಪುಗಳ ತಡೆಗಾಗಿ ಬಳಸುವ ಈ ತಂತ್ರಜ್ಞಾನ ಜಾರಿಯಾಗಿ ಬರೋಬ್ಬರಿ 15 ವರ್ಷಗಳು ಕಳೆದಿವೆ. 2008 ಜುಲೈ 23ರಂದು ಅಧಿಕೃತವಾಗಿ ಜಾರಿಗೆ ಬಂದ ಈ ತಂತ್ರಜ್ಞಾನಕ್ಕೆ ಇಂಡೋ-ಲಂಕಾ ಟೆಸ್ಟ್ ಪಂದ್ಯ ಸಾಕ್ಷಿಯಾಗಿತ್ತು.
ಈ ಪಂದ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಡಿಆರ್ಎಸ್ ನಿಯಮವನ್ನ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಬಳಸಿದರು. ಇನ್ನು, ಡಿಆರ್ಎಸ್ಗೆ ಬಲಿಯಾದ ಮೊದಲ ಬ್ಯಾಟ್ಸ್ಮನ್ ಟೀಮ್ ಇಂಡಿಯಾದ ಓಪನರ್ ವಿರೇಂದ್ರ ಸೆಹ್ವಾಗ್. ಇನ್ನು, ಇದೇ ಪಂದ್ಯದಲ್ಲಿ ಅಂಪೈರ್ ತೀರ್ಪಿಗೆ ಮೇಲ್ಮನವಿ ಸಲ್ಲಿಸಿ ಶ್ರೀಲಂಕಾ ಮಾಜಿ ಕ್ರಿಕೆಟರ್ ತಿಲಕರತ್ನೆ ದಿಲ್ಶಾನ್ ಬಚಾವ್ ಕೂಡ ಆಗಿದ್ರು. ಇಷ್ಟೇ ಅಲ್ಲ, ಡಿಆರ್ಎಸ್ನಿಂದ ಬಚಾವ್ ಆಗಿದ್ದ ದಿಲ್ಶಾನ್ ಅಜೇಯ 125 ರನ್ ಬಾರಿಸುವಲ್ಲಿ ಯಶಸ್ವಿಯಾಗಿದ್ದರು.
ಈ ಪಂದ್ಯವನ್ನ ಟೀಮ್ ಇಂಡಿಯಾ ಇನ್ನಿಂಗ್ಸ್ ಹಾಗೂ 239 ರನ್ಗಳ ಹೀನಾಯ ಸೋಲು ಕಂಡಿತ್ತು. ಈ ಪಂದ್ಯದ ಬಳಿಕ ಈ ಡಿಆರ್ಎಸ್ನ್ನ ಏಕದಿನ ಹಾಗೂ ಟಿ20 ಫಾರ್ಮೆಟ್ಗೆ ವಿಸ್ತರಿಸಲಾಯಿತು. ಸದ್ಯ ಈ ನಿಯಮ ಸೋಲು- ಗೆಲುವಿನಲ್ಲಿ ಮೇಜರ್ ರೋಲ್ ಪ್ಲೇ ಮಾಡ್ತಿದೆ. ಹಾಗಿದ್ದರೂ ವಿವಾದಾತ್ಮಕ ತೀರ್ಪಿಗೆ ಮಾತ್ರ ಬ್ರೇಕ್ ಬಿದ್ದಿಲ್ಲ ಅನ್ನೋದು ವಿಪರ್ಯಾಸ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ