ಹೋಳಿ ಹಬ್ಬದ ದಿನ ಹೇರ್ ಕಟ್ ಮಾಡಿಸಿಕೊಂಡು ಬರಲು ಹೇಳಿದ ಅಪ್ಪ
ಮಕ್ಕಳ ಜೊತೆ ಜಗಳಕ್ಕಿಳಿದ ಯುಪಿ ಉದ್ಯಮಿ ಶಿವ ಪ್ರಕಾಶ್ ಸಿಂಗ್!
ಮನೆಯಲ್ಲಿದ್ದ ಗನ್ನಿಂದ ಗುಂಡು ಹಾರಿಸಿಕೊಂಡು ಆಸ್ಪತ್ರೆ ಸೇರಿದ ಅಪ್ಪ
ವಾರಾಣಸಿ: ತನ್ನ ಮಕ್ಕಳು ಹೇರ್ ಕಟ್ ಮಾಡಿಸಿಕೊಳ್ಳಲು ನಿರಾಕರಿಸಿದ್ದಕ್ಕೆ ಉದ್ಯಮಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಮಕ್ಕಳ ಜೊತೆ ಜಗಳಕ್ಕಿಳಿದ ಉದ್ಯಮಿ ಶಿವ ಪ್ರಕಾಶ್ ಸಿಂಗ್ ಮನೆಯಲ್ಲಿದ್ದ ಗನ್ನಿಂದ ಗುಂಡು ಹಾರಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
45 ವರ್ಷದ ಶಿವಪ್ರಕಾಶ್ ಸಿಂಗ್ ಅವರು ಪ್ರತಿ ದಿನ ಮದ್ಯಪಾನ ಮಾಡುತ್ತಿದ್ದರು. ತಂದೆ ಕುಡಿಯುವುದನ್ನು ನೋಡಿ, ನೋಡಿ ಸಿಟ್ಟಿಗೆದ್ದ ಅವರ ಇಬ್ಬರು ಮಕ್ಕಳು ನೀವು ಕುಡಿಯೋದನ್ನ ಬಿಡೋವರೆಗೂ ನಾವು ಹೇರ್ ಕಟ್ ಮಾಡಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಕಳೆದ ಮಾರ್ಚ್ 25ರಂದು ಹೇರ್ ಕಟ್ ವಿಚಾರಕ್ಕೆ ತಂದೆ, ಮಕ್ಕಳ ಜೊತೆ ವಾಗ್ವಾದ ನಡೆದಿದೆ.
ಇದನ್ನೂ ಓದಿ: ₹33,000 ದಂಡ ಸಾಕಾಗಲಿಲ್ಲ, ಮತ್ತೆ ಹೆಚ್ಚುವರಿಯಾಗಿ ₹47,500 ಸಾವಿರ ಫೈನ್ ಹಾಕಿದ ಟ್ರಾಫಿಕ್ ಪೊಲೀಸ್..!
ವಾರಣಾಸಿ ಪೊಲೀಸರ ಮಾಹಿತಿ ಪ್ರಕಾರ ಶಿವಪ್ರಕಾಶ್ ಸಿಂಗ್ ಹೋಳಿ ಹಬ್ಬದ ದಿನ ತನ್ನ ಇಬ್ಬರು ಮಕ್ಕಳಿಗೆ ಹೇರ್ ಕಟ್ ಮಾಡಿಸಿಕೊಂಡು ಬರಲು ಹೇಳಿದ್ದಾರೆ. ಆಗ ಮಕ್ಕಳು ನೀವು ಕುಡಿಯೋದನ್ನ ಬಿಡೋವರೆಗೂ ನಾವು ಹೇರ್ ಕಟ್ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ತಂದೆ, ಮಕ್ಕಳ ಜೊತೆ ವಾಗ್ವಾದ ನಡೆದು ಜಗಳ ತಾರಕಕ್ಕೇರಿದೆ.
ಅಪ್ಪ-ಮಕ್ಕಳ ಜಗಳದಲ್ಲಿ ಶಿವಪ್ರಕಾಶ್ ಸಿಂಗ್ ಮನೆಯಲ್ಲಿದ್ದ ಲೈಸೆನ್ಸ್ ಗನ್ ಅನ್ನು ತಂದು ಹೆದರಿಸಿದ್ದಾರೆ. ಕಿತ್ತಾಟದ ಮಧ್ಯೆ ಶಿವಪ್ರಕಾಶ್ ಸಿಂಗ್ ತನಗೆ ತಾನೇ ಶೂಟ್ ಮಾಡಿಕೊಂಡಿದ್ದಾರೆ. ಕೂಡಲೇ ಮನೆಯಲ್ಲಿದ್ದವರು ಉದ್ಯಮಿಯನ್ನ ಆಸ್ಪತ್ರೆಗೆ ಸೇರಿಸಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ಕುಡಿತದ ಚಟಕ್ಕೆ ದಾಸರಾಗಿದ್ದ ತಂದೆಗೆ ಮಕ್ಕಳು ಬುದ್ಧಿ ಕಲಿಸಲು ಹೋಗಿ ಈ ದುರ್ಘಟನೆ ನಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಹೋಳಿ ಹಬ್ಬದ ದಿನ ಹೇರ್ ಕಟ್ ಮಾಡಿಸಿಕೊಂಡು ಬರಲು ಹೇಳಿದ ಅಪ್ಪ
ಮಕ್ಕಳ ಜೊತೆ ಜಗಳಕ್ಕಿಳಿದ ಯುಪಿ ಉದ್ಯಮಿ ಶಿವ ಪ್ರಕಾಶ್ ಸಿಂಗ್!
ಮನೆಯಲ್ಲಿದ್ದ ಗನ್ನಿಂದ ಗುಂಡು ಹಾರಿಸಿಕೊಂಡು ಆಸ್ಪತ್ರೆ ಸೇರಿದ ಅಪ್ಪ
ವಾರಾಣಸಿ: ತನ್ನ ಮಕ್ಕಳು ಹೇರ್ ಕಟ್ ಮಾಡಿಸಿಕೊಳ್ಳಲು ನಿರಾಕರಿಸಿದ್ದಕ್ಕೆ ಉದ್ಯಮಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಮಕ್ಕಳ ಜೊತೆ ಜಗಳಕ್ಕಿಳಿದ ಉದ್ಯಮಿ ಶಿವ ಪ್ರಕಾಶ್ ಸಿಂಗ್ ಮನೆಯಲ್ಲಿದ್ದ ಗನ್ನಿಂದ ಗುಂಡು ಹಾರಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
45 ವರ್ಷದ ಶಿವಪ್ರಕಾಶ್ ಸಿಂಗ್ ಅವರು ಪ್ರತಿ ದಿನ ಮದ್ಯಪಾನ ಮಾಡುತ್ತಿದ್ದರು. ತಂದೆ ಕುಡಿಯುವುದನ್ನು ನೋಡಿ, ನೋಡಿ ಸಿಟ್ಟಿಗೆದ್ದ ಅವರ ಇಬ್ಬರು ಮಕ್ಕಳು ನೀವು ಕುಡಿಯೋದನ್ನ ಬಿಡೋವರೆಗೂ ನಾವು ಹೇರ್ ಕಟ್ ಮಾಡಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಕಳೆದ ಮಾರ್ಚ್ 25ರಂದು ಹೇರ್ ಕಟ್ ವಿಚಾರಕ್ಕೆ ತಂದೆ, ಮಕ್ಕಳ ಜೊತೆ ವಾಗ್ವಾದ ನಡೆದಿದೆ.
ಇದನ್ನೂ ಓದಿ: ₹33,000 ದಂಡ ಸಾಕಾಗಲಿಲ್ಲ, ಮತ್ತೆ ಹೆಚ್ಚುವರಿಯಾಗಿ ₹47,500 ಸಾವಿರ ಫೈನ್ ಹಾಕಿದ ಟ್ರಾಫಿಕ್ ಪೊಲೀಸ್..!
ವಾರಣಾಸಿ ಪೊಲೀಸರ ಮಾಹಿತಿ ಪ್ರಕಾರ ಶಿವಪ್ರಕಾಶ್ ಸಿಂಗ್ ಹೋಳಿ ಹಬ್ಬದ ದಿನ ತನ್ನ ಇಬ್ಬರು ಮಕ್ಕಳಿಗೆ ಹೇರ್ ಕಟ್ ಮಾಡಿಸಿಕೊಂಡು ಬರಲು ಹೇಳಿದ್ದಾರೆ. ಆಗ ಮಕ್ಕಳು ನೀವು ಕುಡಿಯೋದನ್ನ ಬಿಡೋವರೆಗೂ ನಾವು ಹೇರ್ ಕಟ್ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ತಂದೆ, ಮಕ್ಕಳ ಜೊತೆ ವಾಗ್ವಾದ ನಡೆದು ಜಗಳ ತಾರಕಕ್ಕೇರಿದೆ.
ಅಪ್ಪ-ಮಕ್ಕಳ ಜಗಳದಲ್ಲಿ ಶಿವಪ್ರಕಾಶ್ ಸಿಂಗ್ ಮನೆಯಲ್ಲಿದ್ದ ಲೈಸೆನ್ಸ್ ಗನ್ ಅನ್ನು ತಂದು ಹೆದರಿಸಿದ್ದಾರೆ. ಕಿತ್ತಾಟದ ಮಧ್ಯೆ ಶಿವಪ್ರಕಾಶ್ ಸಿಂಗ್ ತನಗೆ ತಾನೇ ಶೂಟ್ ಮಾಡಿಕೊಂಡಿದ್ದಾರೆ. ಕೂಡಲೇ ಮನೆಯಲ್ಲಿದ್ದವರು ಉದ್ಯಮಿಯನ್ನ ಆಸ್ಪತ್ರೆಗೆ ಸೇರಿಸಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ಕುಡಿತದ ಚಟಕ್ಕೆ ದಾಸರಾಗಿದ್ದ ತಂದೆಗೆ ಮಕ್ಕಳು ಬುದ್ಧಿ ಕಲಿಸಲು ಹೋಗಿ ಈ ದುರ್ಘಟನೆ ನಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ