newsfirstkannada.com

BIG BREAKING: ಸಾವು ಗೆದ್ದು ಬಂದ ಸಾತ್ವಿಕ್; ಸತತ 20 ಗಂಟೆಗಳ ಕಾರ್ಯಾಚರಣೆ ಯಶಸ್ವಿ..!

Share :

Published April 4, 2024 at 1:43pm

Update April 4, 2024 at 1:44pm

    ಕೊಳವೆ ಬಾವಿಯಿಂದ ಹೊರ ತೆಗೆಯುವ ಕಾರ್ಯಾಚರಣೆ ಯಶಸ್ವಿ ಆಗಿದೆ

    ಫಲಿಸಿದ ಕೋಟ್ಯಾಂತರ ಕನ್ನಡಿಗರ ಪ್ರಾರ್ಥನೆ, ಕರುಣೆ ತೋರಿಸಿದ ದೇವ್ರು

    SDRF, NDRF, ಅಗ್ನಿಶಾಮಕ ಸಿಬ್ಬಂದಿ ಶ್ರಮಕ್ಕೆ ನಿಮಗೊಂದು ಸಲಾಂ

ವಿಜಯಪುರ: ಕೊಳವೆ ಬಾವಿಗೆ ಬಿದ್ದಿರುವ 2 ವರ್ಷದ ಕಂದ ಸಾತ್ವಿಕ್​​ನನ್ನು ಕೊನೆಗೂ ರಕ್ಷಣಾ ಪಡೆಯ ಸಿಬ್ಬಂದಿ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಇಂಡಿಯ ಲಚ್ಯಾನ ಗ್ರಾಮದ ತೋಟದಲ್ಲಿ ಆಟವಾಡುತ್ತಿದ್ದಾಗ ಮಗು ಕೊಳವೆ ಬಾವಿಗೆ ಬಿದ್ದಿತ್ತು. ಈ ಸಂಬಂಧ NDRF, SDRF ತಂಡಗಳು ನಿನ್ನೆಯಿಂದಲೇ ರಕ್ಷಣಾ ಕಾರ್ಯಾಚರಣೆ ನಡೆಸಿ ಸಾತ್ವಿಕ್​ನನ್ನು ಹೊರಗೆ ತೆಗಿದಿದ್ದಾರೆ. ಇದರಿಂದ ಮಗುವಿನ ಪೋಷಕರು, ಸಂಬಂಧಿಗಳು ಹಾಗೂ ಗ್ರಾಮಸ್ಥರೆಲ್ಲ ಫುಲ್ ಖುಷಿಯಾಗಿದ್ದಾರೆ.

ಇದನ್ನೂ ಓದಿ: ಮಗು ಅಳುವ ವಿಚಾರ ತಿಳಿದು ಸಾತ್ವಿಕ್ ತಾಯಿ ಪೂಜಾ ಹೇಳಿದ್ದೇನು?

ಇವರಷ್ಟೆ ಅಲ್ಲ, ಸತತ 20 ಗಂಟೆಯಿಂದಲೂ ಕಾರ್ಯಾಚರಣೆ ಮಾಡಿ ಮಗುವನ್ನ ಹೊರ ತೆಗೆದಿರುವ ಸ್ವತಹ ಅಧಿಕಾರಿಗಳ ಖುಷಿ ಕೂಡ ಹೇಳತೀರದಾಗಿದೆ. ಮಗುವನ್ನ ಕಾಪಾಡಿದ್ದು ನಮಗೆ ತುಂಬಾ ಆನಂದವನ್ನು ನೀಡುತ್ತಿದೆ ಎಂದು ಸಿಬ್ಬಂದಿ ಹೇಳುತ್ತಿದ್ದಾರೆ. ಭೂಮಿಯನ್ನು ಅಗೆಯುವ ವೇಳೆ ಕಲ್ಲು ಬಂಡೆ ಅಡ್ಡಿಯಾಗಿದ್ರಿಂದ ರಕ್ಷಣಾ ಕಾರ್ಯದಲ್ಲಿ ಕೊಂಚ ವಿಳಂಬವಾಗಿತ್ತು. ಅದು ಬಿಟ್ಟರೇ ಎಲ್ಲ ಕಾರ್ಯ ಚೆನ್ನಾಗಿ ನಡೆದಿದೆ.

​ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BIG BREAKING: ಸಾವು ಗೆದ್ದು ಬಂದ ಸಾತ್ವಿಕ್; ಸತತ 20 ಗಂಟೆಗಳ ಕಾರ್ಯಾಚರಣೆ ಯಶಸ್ವಿ..!

https://newsfirstlive.com/wp-content/uploads/2024/04/VIJ_BABY_BOY.jpg

    ಕೊಳವೆ ಬಾವಿಯಿಂದ ಹೊರ ತೆಗೆಯುವ ಕಾರ್ಯಾಚರಣೆ ಯಶಸ್ವಿ ಆಗಿದೆ

    ಫಲಿಸಿದ ಕೋಟ್ಯಾಂತರ ಕನ್ನಡಿಗರ ಪ್ರಾರ್ಥನೆ, ಕರುಣೆ ತೋರಿಸಿದ ದೇವ್ರು

    SDRF, NDRF, ಅಗ್ನಿಶಾಮಕ ಸಿಬ್ಬಂದಿ ಶ್ರಮಕ್ಕೆ ನಿಮಗೊಂದು ಸಲಾಂ

ವಿಜಯಪುರ: ಕೊಳವೆ ಬಾವಿಗೆ ಬಿದ್ದಿರುವ 2 ವರ್ಷದ ಕಂದ ಸಾತ್ವಿಕ್​​ನನ್ನು ಕೊನೆಗೂ ರಕ್ಷಣಾ ಪಡೆಯ ಸಿಬ್ಬಂದಿ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಇಂಡಿಯ ಲಚ್ಯಾನ ಗ್ರಾಮದ ತೋಟದಲ್ಲಿ ಆಟವಾಡುತ್ತಿದ್ದಾಗ ಮಗು ಕೊಳವೆ ಬಾವಿಗೆ ಬಿದ್ದಿತ್ತು. ಈ ಸಂಬಂಧ NDRF, SDRF ತಂಡಗಳು ನಿನ್ನೆಯಿಂದಲೇ ರಕ್ಷಣಾ ಕಾರ್ಯಾಚರಣೆ ನಡೆಸಿ ಸಾತ್ವಿಕ್​ನನ್ನು ಹೊರಗೆ ತೆಗಿದಿದ್ದಾರೆ. ಇದರಿಂದ ಮಗುವಿನ ಪೋಷಕರು, ಸಂಬಂಧಿಗಳು ಹಾಗೂ ಗ್ರಾಮಸ್ಥರೆಲ್ಲ ಫುಲ್ ಖುಷಿಯಾಗಿದ್ದಾರೆ.

ಇದನ್ನೂ ಓದಿ: ಮಗು ಅಳುವ ವಿಚಾರ ತಿಳಿದು ಸಾತ್ವಿಕ್ ತಾಯಿ ಪೂಜಾ ಹೇಳಿದ್ದೇನು?

ಇವರಷ್ಟೆ ಅಲ್ಲ, ಸತತ 20 ಗಂಟೆಯಿಂದಲೂ ಕಾರ್ಯಾಚರಣೆ ಮಾಡಿ ಮಗುವನ್ನ ಹೊರ ತೆಗೆದಿರುವ ಸ್ವತಹ ಅಧಿಕಾರಿಗಳ ಖುಷಿ ಕೂಡ ಹೇಳತೀರದಾಗಿದೆ. ಮಗುವನ್ನ ಕಾಪಾಡಿದ್ದು ನಮಗೆ ತುಂಬಾ ಆನಂದವನ್ನು ನೀಡುತ್ತಿದೆ ಎಂದು ಸಿಬ್ಬಂದಿ ಹೇಳುತ್ತಿದ್ದಾರೆ. ಭೂಮಿಯನ್ನು ಅಗೆಯುವ ವೇಳೆ ಕಲ್ಲು ಬಂಡೆ ಅಡ್ಡಿಯಾಗಿದ್ರಿಂದ ರಕ್ಷಣಾ ಕಾರ್ಯದಲ್ಲಿ ಕೊಂಚ ವಿಳಂಬವಾಗಿತ್ತು. ಅದು ಬಿಟ್ಟರೇ ಎಲ್ಲ ಕಾರ್ಯ ಚೆನ್ನಾಗಿ ನಡೆದಿದೆ.

​ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More