ಭೀಕರ ಅಪಘಾತ.. ಅರ್ಧ ಕಿ.ಮೀ ಡೆಡ್‌ಬಾಡಿ ಧರಧರನೇ ಎಳೆದೊಯ್ದ ಕಾರು ಚಾಲಕ; ವಕೀಲ ಸಾವು

author-image
admin
Updated On
ಭೀಕರ ಅಪಘಾತ.. ಅರ್ಧ ಕಿ.ಮೀ ಡೆಡ್‌ಬಾಡಿ ಧರಧರನೇ ಎಳೆದೊಯ್ದ ಕಾರು ಚಾಲಕ; ವಕೀಲ ಸಾವು
Advertisment
  • ವೇಗವಾಗಿ ಬಂದ ಕಾರು ಬೈಕ್‌ಗೆ ಡಿಕ್ಕಿ ಹೊಡೆದ ಕಾರು ಚಾಲಕ
  • ಹಾಡಹಗಲೇ ನಗರದ ಹೃದಯಭಾಗದಲ್ಲೇ ಭೀಕರ ಅಪಘಾತ
  • ಅಪಘಾತದ ಬಳಿಕ ಕಾರು ಚಾಲಕ ಕಾರಿನ ಸಮೇತ ಪರಾರಿ

ವಿಜಯಪುರ: ಅತಿವೇಗ ಸಾವಿಗೆ ಆಹ್ವಾನ ಅನ್ನೋದು ಗೊತ್ತಿದ್ರೂ ವಾಹನ ಸವಾರರು ಬುದ್ಧಿ ಕಲಿಯಲ್ಲ. ಅಪಘಾತದಲ್ಲಿ ಯಾರೋ ಮಾಡಿದ ತಪ್ಪಿಗೆ ಮತ್ಯಾರೋ ಬಲಿಯಾಗುವುದು ಮತ್ತೊಂದು ದುರಂತ. ವಿಜಯಪುರ ನಗರದ ಮನಗೂಳಿ ಅಗಸಿ ಬಳಿ ಇಂತಹದೇ ಘನಘೋರ ಘಟನೆ ಇಂದು ನಡೆದು ಹೋಗಿದೆ.

publive-image

ವೇಗವಾಗಿ ಬಂದ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿರೋ ಭೀಕರ ಅಪಘಾತ ಹಾಡಹಗಲೇ ವಿಜಯಪುರ ನಗರದಲ್ಲಿ ನಡೆದಿದೆ. ಕಾರು ಡಿಕ್ಕಿಯಾದ ಬಳಿಕ ಬೈಕ್‌ನಲ್ಲಿದ್ದ ವಕೀಲನನ್ನು ಅರ್ಧ ಕಿಲೋಮೀಟರ್‌ವರೆಗೂ ಎಳೆದುಕೊಂಡು ಹೋಗಿದೆ. ಈ ಕರುಣಾಜನಕ ದೃಶ್ಯ ನೋಡಿದ ವಿಜಯಪುರದ ಜನ ಬೆಚ್ಚಿ ಬಿದ್ದಿದ್ದಾರೆ.

ಇದನ್ನೂ ಓದಿ: ಮೈ ಮೇಲೆ ಸೀರೆ ಇರಲ್ಲ, ಆದ್ರೂ ರೇಪ್ ಆಗಿರಲ್ಲ; ಒಂದೇ ರೀತಿ 9 ಮಹಿಳೆಯರ ಹತ್ಯೆ; ಬೆಚ್ಚಿ ಬೀಳಿಸಿದ ಸ್ಯಾರಿ ಕಿಲ್ಲರ್‌!

ದಾರುಣವಾಗಿ ಸಾವನ್ನಪ್ಪಿದ ವಕೀಲನನ್ನು ರವಿ ಮೇಲಿನಕೇರಿ ಎಂದು ಗುರುತಿಸಲಾಗಿದೆ. ಇವರಿಗೆ 35 ವರ್ಷ ವಯಸ್ಸು. ರವಿ ಮೇಲಿನಕೇರಿ ಅವರು ಇಂಡಿ ತಾಲ್ಲೂಕಿನ ಅಗರಖೇಡ ಗ್ರಾಮದ ನಿವಾಸಿ.

ಇದನ್ನೂ ಓದಿ: ಫಸ್ಟ್‌ ನೈಟ್‌ನಲ್ಲೇ ಮಚ್ಚಿನಿಂದ ಹೊಡೆದಾಟ.. ವಧು-ವರರ ಸಾವಿನ ಕೇಸ್‌ಗೆ ಹೊಸ ಟ್ವಿಸ್ಟ್‌; ಅಸಲಿಗೆ ಆಗಿದ್ದೇನು?

ಭೀಕರ ಅಪಘಾತದ ಬಳಿಕ ಕಾರು ಚಾಲಕ ಸ್ಥಳದಿಂದ ಕಾರಿನ ಸಮೇತ ಪರಾರಿಯಾಗಿದ್ದಾರೆ. ವಿಜಯಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment