ಮಹಿಳೆ ಮಗುವಿನ ಮೇಲೆ ಆ್ಯಸಿಡ್ ದಾಳಿ ಮಾಡಿದ ಆರೋಪಿ
8 ವರ್ಷದ ಮಗಳ ಮುಖಕ್ಕೂ ಅಲ್ಪ ಪ್ರಮಾಣದಲ್ಲಿ ಸಿಡಿದ ಆ್ಯಸಿಡ್
ಇಬ್ಬರು ಪ್ರತ್ಯೇಕವಾಗಿ ಬೇರೆ ಬೇರೆಯವರನ್ನು ಮದುವೆ ಆಗಿದ್ದರು
ಬಾಗಲಕೋಟೆ: ವಿವಾಹಿತ ಪ್ರಿಯತಮೆ ಮನೆ ಬಾಗಿಲು ತೆರೆಯದ ಕಾರಣ ಪ್ರಿಯಕರ ಕಿಟಕಿಯಿಂದ ನೀರು ಮಿಶ್ರಿತ ಆ್ಯಸಿಡ್ ಎರಚಿರುವ ಘಟನೆ ಬಾಗಲಕೋಟೆ ತಾಲೂಕಿನ ಗದ್ದನಕೇರಿ ಕ್ರಾಸ್ ಬಳಿ ನಡೆದಿದೆ.
ಗದ್ದನಕೇರಿ ಕ್ರಾಸ್ನ ಒಂದೇ ಮನೆಯಲ್ಲಿ ಲಿವಿಂಗ್ ಟುಗೆದರ್ ಇದ್ದ ಲಕ್ಷ್ಮಿ ಬಡಿಗೇರ (33) ಎಂಬ ವಿವಾಹಿತ ಮಹಿಳೆ ಮೇಲೆ ಮೌನೇಶ್ ಪತ್ತಾರ ಎನ್ನುವ ವ್ಯಕ್ತಿ ಆ್ಯಸಿಡ್ ಎರಚಿದ್ದಾನೆ. ಪರಿಣಾಮ ಮಹಿಳೆಯ ಎಡಗಣ್ಣು ಹಾಗೂ ಮುಖದ ಮೇಲೆ ಸುಟ್ಟ ಗಾಯಗಳಾಗಿವೆ. ಮಹಿಳೆಯ 8 ವರ್ಷದ ಮಗಳ ಮೇಲೆಯೂ ಆ್ಯಸಿಡ್ ಬಿದ್ದ ಕಾರಣ ಗಾಯಗಳು ಆಗಿವೆ.
ಇದನ್ನೂ ಓದಿ: ವಿದ್ಯಾರ್ಥಿಗಳ ಜೀವನದ ಜತೆ ಚೆಲ್ಲಾಟ ಆಡ್ತಿದ್ಯಾ ರಾಜ್ಯ ಸರ್ಕಾರ? ಎಲ್ಲರೂ ಓದಲೇಬೇಕಾದ ಸ್ಟೋರಿ!
ಇಬ್ಬರು ವಿಜಯಪುರ ನಗರದ ಮೂರನಕೇರಿ ಮೂಲದವರಾಗಿದ್ದು ಇಬ್ಬರು ಪ್ರತ್ಯೇಕವಾಗಿ ಬೇರೆ ಬೇರೆಯವರನ್ನು ಮದುವೆಯಾಗಿದ್ದರು. ಆರೋಪಿ ಮೂರ್ತಿ ತಯಾರಿಸುವ ಕೆಲಸ ಮಾಡುತ್ತಾನೆ. ಯಾವುದೇ ಡಿವೋರ್ಸ್ ಪಡೆಯದೆ ಲಿವಿಂಗ್ ಟುಗೆದರ್ನಲ್ಲಿದ್ದರು. ಒಂದೂವರೆ ತಿಂಗಳಿಂದ ಗದ್ದನಕೇರಿ ಕ್ರಾಸ್ನ ಮನೆಯೊಂದರಲ್ಲಿ ಇಬ್ಬರು ವಾಸವಿದ್ದರು.
ವ್ಯಕ್ತಿ ಮಹಿಳೆ ಮೇಲೆ ಪದೆ ಪದೇ ಸಂಶಯಪಡುತ್ತಿದ್ದ. ಇದರಿಂದ ಮೇಲಿಂದ ಮೇಲೆ ಜಗಳವಾಗುತ್ತಿತ್ತು. ಇದೇ ಕಾರಣದಿಂದ 1 ವಾರದಿಂದ ಮೌನೇಶ್ ಮನೆ ಬಿಟ್ಟು ಹೋಗಿದ್ದ. ಇತ್ತ ಮಹಿಳೆ ಆತನ ನಂಬರ್ ಬ್ಲಾಕ್ ಮಾಡಿದ್ದಳು. ನಿನ್ನೆ ರಾತ್ರಿ ಮನೆಗೆ ವಾಪಸ್ ಬಂದಿದ್ದ. ಆದರೆ ಲಕ್ಷ್ಮಿ ಬಾಗಿಲು ತೆರೆದಿಲ್ಲ. ಇದರಿಂದ ಕೋಪಗೊಂಡು ಮನೆಯ ಕಿಟಕಿಯಿಂದ ಆ್ಯಸಿಡ್ ದಾಳಿ ನಡೆಸಿದ್ದಾನೆ. ಈ ಸಂಬಂಧ ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಮೌನೇಶ್ ಪತ್ತಾರನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಮಹಿಳೆ ಮಗುವಿನ ಮೇಲೆ ಆ್ಯಸಿಡ್ ದಾಳಿ ಮಾಡಿದ ಆರೋಪಿ
8 ವರ್ಷದ ಮಗಳ ಮುಖಕ್ಕೂ ಅಲ್ಪ ಪ್ರಮಾಣದಲ್ಲಿ ಸಿಡಿದ ಆ್ಯಸಿಡ್
ಇಬ್ಬರು ಪ್ರತ್ಯೇಕವಾಗಿ ಬೇರೆ ಬೇರೆಯವರನ್ನು ಮದುವೆ ಆಗಿದ್ದರು
ಬಾಗಲಕೋಟೆ: ವಿವಾಹಿತ ಪ್ರಿಯತಮೆ ಮನೆ ಬಾಗಿಲು ತೆರೆಯದ ಕಾರಣ ಪ್ರಿಯಕರ ಕಿಟಕಿಯಿಂದ ನೀರು ಮಿಶ್ರಿತ ಆ್ಯಸಿಡ್ ಎರಚಿರುವ ಘಟನೆ ಬಾಗಲಕೋಟೆ ತಾಲೂಕಿನ ಗದ್ದನಕೇರಿ ಕ್ರಾಸ್ ಬಳಿ ನಡೆದಿದೆ.
ಗದ್ದನಕೇರಿ ಕ್ರಾಸ್ನ ಒಂದೇ ಮನೆಯಲ್ಲಿ ಲಿವಿಂಗ್ ಟುಗೆದರ್ ಇದ್ದ ಲಕ್ಷ್ಮಿ ಬಡಿಗೇರ (33) ಎಂಬ ವಿವಾಹಿತ ಮಹಿಳೆ ಮೇಲೆ ಮೌನೇಶ್ ಪತ್ತಾರ ಎನ್ನುವ ವ್ಯಕ್ತಿ ಆ್ಯಸಿಡ್ ಎರಚಿದ್ದಾನೆ. ಪರಿಣಾಮ ಮಹಿಳೆಯ ಎಡಗಣ್ಣು ಹಾಗೂ ಮುಖದ ಮೇಲೆ ಸುಟ್ಟ ಗಾಯಗಳಾಗಿವೆ. ಮಹಿಳೆಯ 8 ವರ್ಷದ ಮಗಳ ಮೇಲೆಯೂ ಆ್ಯಸಿಡ್ ಬಿದ್ದ ಕಾರಣ ಗಾಯಗಳು ಆಗಿವೆ.
ಇದನ್ನೂ ಓದಿ: ವಿದ್ಯಾರ್ಥಿಗಳ ಜೀವನದ ಜತೆ ಚೆಲ್ಲಾಟ ಆಡ್ತಿದ್ಯಾ ರಾಜ್ಯ ಸರ್ಕಾರ? ಎಲ್ಲರೂ ಓದಲೇಬೇಕಾದ ಸ್ಟೋರಿ!
ಇಬ್ಬರು ವಿಜಯಪುರ ನಗರದ ಮೂರನಕೇರಿ ಮೂಲದವರಾಗಿದ್ದು ಇಬ್ಬರು ಪ್ರತ್ಯೇಕವಾಗಿ ಬೇರೆ ಬೇರೆಯವರನ್ನು ಮದುವೆಯಾಗಿದ್ದರು. ಆರೋಪಿ ಮೂರ್ತಿ ತಯಾರಿಸುವ ಕೆಲಸ ಮಾಡುತ್ತಾನೆ. ಯಾವುದೇ ಡಿವೋರ್ಸ್ ಪಡೆಯದೆ ಲಿವಿಂಗ್ ಟುಗೆದರ್ನಲ್ಲಿದ್ದರು. ಒಂದೂವರೆ ತಿಂಗಳಿಂದ ಗದ್ದನಕೇರಿ ಕ್ರಾಸ್ನ ಮನೆಯೊಂದರಲ್ಲಿ ಇಬ್ಬರು ವಾಸವಿದ್ದರು.
ವ್ಯಕ್ತಿ ಮಹಿಳೆ ಮೇಲೆ ಪದೆ ಪದೇ ಸಂಶಯಪಡುತ್ತಿದ್ದ. ಇದರಿಂದ ಮೇಲಿಂದ ಮೇಲೆ ಜಗಳವಾಗುತ್ತಿತ್ತು. ಇದೇ ಕಾರಣದಿಂದ 1 ವಾರದಿಂದ ಮೌನೇಶ್ ಮನೆ ಬಿಟ್ಟು ಹೋಗಿದ್ದ. ಇತ್ತ ಮಹಿಳೆ ಆತನ ನಂಬರ್ ಬ್ಲಾಕ್ ಮಾಡಿದ್ದಳು. ನಿನ್ನೆ ರಾತ್ರಿ ಮನೆಗೆ ವಾಪಸ್ ಬಂದಿದ್ದ. ಆದರೆ ಲಕ್ಷ್ಮಿ ಬಾಗಿಲು ತೆರೆದಿಲ್ಲ. ಇದರಿಂದ ಕೋಪಗೊಂಡು ಮನೆಯ ಕಿಟಕಿಯಿಂದ ಆ್ಯಸಿಡ್ ದಾಳಿ ನಡೆಸಿದ್ದಾನೆ. ಈ ಸಂಬಂಧ ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಮೌನೇಶ್ ಪತ್ತಾರನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ