newsfirstkannada.com

ಕುಡಿಯುವ ನೀರಿಗಾಗಿ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ.. 21 ವರ್ಷದ ಯುವಕ ಸಾವು

Share :

Published March 28, 2024 at 10:40am

Update March 28, 2024 at 10:41am

    ಕುಡಿಯುವ ನೀರಿಗಾಗಿ ಎರಡು ಕುಟುಂಬಗಳ‌ ಮಧ್ಯೆ ಗಲಾಟೆ

    ಗಲಾಟೆ ವಿಕೋಪಕ್ಕೆ ತಿರುಗಿ ಚಾಕುವಿನಿಂದ ಇರಿದು ಕೊಲೆ

    21 ವರ್ಷದ ಯುವಕನನ್ನು ಕೊಲೆಗೈದ ತಾಯಿ ಮತ್ತು ಮಗ

ಯಾದಗಿರಿ: ಕುಡಿಯುವ ನೀರಿನ ವಿಚಾರಕ್ಕೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾದ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದಲ್ಲಿ ನಡೆದಿದೆ. ನಂದಕುಮಾರ ಕಟ್ಟಿಮನಿ (21)ಕೊಲೆಯಾದ ಯುವಕ.

ಕುಡಿಯುವ ನೀರಿಗಾಗಿ ಎರಡು ಕುಟುಂಬಗಳ‌ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಬಳಿಕ ಘಟನೆ ವಿಕೋಪಕ್ಕೆ ತಿರುಗಿ ನಂದಕುಮಾರ ಕಟ್ಟಿಮನಿ ಎಂಬ ಯುವಕನನ್ನು ಹಣುಮಂತ ಎಂಬಾತ ಕೊಲೆ ಮಾಡಿದ್ದಾನೆ.

ನೀರಿನ ವಿಚಾರಕ್ಕೆ ನೆರೆಯ ಸಂಬಂಧಿಕರು ಕೊಲೆಯಾದ ಯುವಕನ ಅಜ್ಜಿ ಜೊತೆಗೆ ಗಲಾಟೆ ಮಾಡಿಕೊಂಡಿದ್ದರು. ಇಬ್ಬರು ಮನೆಯ ನಡುವೆ ಇದ್ದ ನಲ್ಲಿಯ ನೀರು ತುಂಬಿಕೊಳ್ಳಲು ಹೋದಾಗ ಅಜ್ಜಿಯೊಂದಿಗೆ ಜಗಳ ಶುರುಮಾಡಿಕೊಂಡಿದ್ದರು. ಅಜ್ಜಿಯೊಂದಿಗೆ ಜಗಳ ಮಾಡುತ್ತಿದ್ದನ್ನು ಕಂಡ ಮೊಮ್ಮಗ ನಂದಕುಮಾರ​ ಪ್ರಶ್ನಿಸಲು ಮುಂದಾಗಿದ್ದಾನೆ. ಈ ವೇಳೆ ಹನುಮಂತ ಮೊಮ್ಮಗನಿಗೆ ಚಾಕುವಿನಿಂದ ಇರಿದು ಕೊಲೆಗೈದ.

ಇದನ್ನೂ ಓದಿ: ಊಟ ಕೇಳಿದ್ದೇ ತಪ್ಪಾ? ಅಜ್ಜಿ ಮೇಲೆ ಮನಬಂದಂತೆ ಥಳಿಸಿದ ಗಂಡ-ಹೆಂಡತಿ

ಜಗಳ ಬಿಡಿಸಲು ಹೋದ ನಂದಕುಮಾರ್ ತಾಯಿಯನ್ನ ದೂಡಿದ ಹನುಮಂತ ತನ್ನ ಕೈಯಲ್ಲಿದ್ದ ಚಾಕುವಿನಿಂದ ನಂದಕುಮಾರ್ ಗೆ ಇರಿದಿದ್ದಾನೆ. ಕೊಲೆ ಆರೋಪಿ ಜೊತೆ ಆತನ ತಾಯಿ ಹಣಮವ್ವ ಕೂಡ ಇದಕ್ಕೆ ಸಾಥ್​ ನೀಡಿದ್ದಾರೆ ಎನ್ನಲಾಗಿದೆ.

ಹುಣಸಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕುಡಿಯುವ ನೀರಿಗಾಗಿ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ.. 21 ವರ್ಷದ ಯುವಕ ಸಾವು

https://newsfirstlive.com/wp-content/uploads/2024/03/yadagiri-3.jpg

    ಕುಡಿಯುವ ನೀರಿಗಾಗಿ ಎರಡು ಕುಟುಂಬಗಳ‌ ಮಧ್ಯೆ ಗಲಾಟೆ

    ಗಲಾಟೆ ವಿಕೋಪಕ್ಕೆ ತಿರುಗಿ ಚಾಕುವಿನಿಂದ ಇರಿದು ಕೊಲೆ

    21 ವರ್ಷದ ಯುವಕನನ್ನು ಕೊಲೆಗೈದ ತಾಯಿ ಮತ್ತು ಮಗ

ಯಾದಗಿರಿ: ಕುಡಿಯುವ ನೀರಿನ ವಿಚಾರಕ್ಕೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾದ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದಲ್ಲಿ ನಡೆದಿದೆ. ನಂದಕುಮಾರ ಕಟ್ಟಿಮನಿ (21)ಕೊಲೆಯಾದ ಯುವಕ.

ಕುಡಿಯುವ ನೀರಿಗಾಗಿ ಎರಡು ಕುಟುಂಬಗಳ‌ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಬಳಿಕ ಘಟನೆ ವಿಕೋಪಕ್ಕೆ ತಿರುಗಿ ನಂದಕುಮಾರ ಕಟ್ಟಿಮನಿ ಎಂಬ ಯುವಕನನ್ನು ಹಣುಮಂತ ಎಂಬಾತ ಕೊಲೆ ಮಾಡಿದ್ದಾನೆ.

ನೀರಿನ ವಿಚಾರಕ್ಕೆ ನೆರೆಯ ಸಂಬಂಧಿಕರು ಕೊಲೆಯಾದ ಯುವಕನ ಅಜ್ಜಿ ಜೊತೆಗೆ ಗಲಾಟೆ ಮಾಡಿಕೊಂಡಿದ್ದರು. ಇಬ್ಬರು ಮನೆಯ ನಡುವೆ ಇದ್ದ ನಲ್ಲಿಯ ನೀರು ತುಂಬಿಕೊಳ್ಳಲು ಹೋದಾಗ ಅಜ್ಜಿಯೊಂದಿಗೆ ಜಗಳ ಶುರುಮಾಡಿಕೊಂಡಿದ್ದರು. ಅಜ್ಜಿಯೊಂದಿಗೆ ಜಗಳ ಮಾಡುತ್ತಿದ್ದನ್ನು ಕಂಡ ಮೊಮ್ಮಗ ನಂದಕುಮಾರ​ ಪ್ರಶ್ನಿಸಲು ಮುಂದಾಗಿದ್ದಾನೆ. ಈ ವೇಳೆ ಹನುಮಂತ ಮೊಮ್ಮಗನಿಗೆ ಚಾಕುವಿನಿಂದ ಇರಿದು ಕೊಲೆಗೈದ.

ಇದನ್ನೂ ಓದಿ: ಊಟ ಕೇಳಿದ್ದೇ ತಪ್ಪಾ? ಅಜ್ಜಿ ಮೇಲೆ ಮನಬಂದಂತೆ ಥಳಿಸಿದ ಗಂಡ-ಹೆಂಡತಿ

ಜಗಳ ಬಿಡಿಸಲು ಹೋದ ನಂದಕುಮಾರ್ ತಾಯಿಯನ್ನ ದೂಡಿದ ಹನುಮಂತ ತನ್ನ ಕೈಯಲ್ಲಿದ್ದ ಚಾಕುವಿನಿಂದ ನಂದಕುಮಾರ್ ಗೆ ಇರಿದಿದ್ದಾನೆ. ಕೊಲೆ ಆರೋಪಿ ಜೊತೆ ಆತನ ತಾಯಿ ಹಣಮವ್ವ ಕೂಡ ಇದಕ್ಕೆ ಸಾಥ್​ ನೀಡಿದ್ದಾರೆ ಎನ್ನಲಾಗಿದೆ.

ಹುಣಸಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More