ಸ್ಥಳೀಯ ಮಂಜುನಾಥ ಅಪಾರ್ಟ್ಮೆಂಟ್ನಲ್ಲಿ ಇದ್ದ ಯುವಕ
ರೂಮ್ ಒಳಗೆ ಹೋಗಲು ಬಿಡದೇ ಎಳೆದು ಅಟ್ಟಾಡಿಸಿ ಹಲ್ಲೆ
ಯುವಕನನ್ನು ಠಾಣೆಗೆ ಕರೆಸಿ ದೂರು ದಾಖಲಿಸಿದ ಪೊಲೀಸರು
ಉಡುಪಿ: ಬಾರ್ನಲ್ಲಿ ಮದ್ಯಪಾನ ಮಾಡುವಾಗ ಕಾಲು ತಾಗಿತು ಎಂದು 6 ಮಂದಿ ಸೇರಿ ಯುವಕನನ್ನ ಅಟ್ಟಾಡಿಸಿ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಮಣಿಪಾಲ ಸರಳೆಬೆಟ್ಟು ಬಳಿ ನಡೆದಿದೆ.
ಮುಂಬೈ ಮೂಲದ ಆರುಷ್ ಕುಮಾರ್ (21) ಹಲ್ಲೆಗೊಳಗಾದ ಯುವಕ. ಮಣಿಪಾಲ ಎಂಐಟಿ ಕಾಲೇಜಿನ ಆರುಷ್ ವಿದ್ಯಾರ್ಥಿಯಾಗಿದ್ದಾರೆ. ಡಿ ಆಂಡ್ ಟಿ ಬಾರ್ನಲ್ಲಿ ಮದ್ಯಪಾನ ಮಾಡುವಾಗ ಪುಂಡರ ಗುಂಪಿನ ಓರ್ವನಿಗೆ ಯುವಕನ ಕಾಲು ತಾಗಿದೆ. ಇದೇ ವಿಚಾರಕ್ಕೆ ಬಾರ್ನಲ್ಲೇ ಯುವಕನ ಮೇಲೆ ಹಲ್ಲೆ ಮಾಡಲಾಗಿದೆ. ಇದಾದ ಬಳಿಕ ಮಂಜುನಾಥ್ ಅಪಾರ್ಟ್ಮೆಂಟ್ವರೆಗೂ ಯುವಕನನ್ನು ಅಟ್ಟಾಡಿಸಿಕೊಂಡು ಹೊಡೆದಿದ್ದಾರೆ. ರೂಮ್ ಒಳಗೆ ಹೋಗಲು ಬಿಡದೇ ಎಳೆದುಕೊಂಡು ಬಂದು ಥಳಿಸಿದ್ದಾರೆ.
ಇದನ್ನೂ ಓದಿ: ಮರಳಿ ಗೂಡಿಗೆ ಬಂದ ಗಾಲಿ.. ಜನಾರ್ದನ ರೆಡ್ಡಿ, ಪತ್ನಿ ಅರುಣಾ ಲಕ್ಷ್ಮಿ ಬಿಜೆಪಿ ಪಕ್ಷಕ್ಕೆ ಅಧಿಕೃತ ಸೇರ್ಪಡೆ
ಇದೇ ವೇಳೆ ಸ್ನೇಹಿತರು ಯುವಕನನ್ನು ರಕ್ಷಣೆಗೆ ಬಂದಿದ್ದಾರೆ. ಆ ಬಳಿಕ ಮೊಬೈಲ್ಗೆ ಕರೆ ಮಾಡಿ ಮತ್ತೊಮ್ಮೆ ಹಲ್ಲೆ ನಡೆಸುವುದಾಗಿ ಪುಂಡರು ಬೆದರಿಕೆ ಹಾಕಿದ್ದಾರೆ. ಸದ್ಯ ಈ ಘಟನೆ ಸಂಬಂಧ ಯುವಕನನ್ನ ಮಣಿಪಾಲ ಠಾಣೆಗೆ ಕರೆಯಿಸಿಕೊಂಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಸಿಸಿಟಿವಿ ದೃಶ್ಯ ಹಾಗೂ ಯುವಕರ ಮೊಬೈಲ್ ಸಂಖ್ಯೆ ಆಧರಿಸಿ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಸ್ಥಳೀಯ ಮಂಜುನಾಥ ಅಪಾರ್ಟ್ಮೆಂಟ್ನಲ್ಲಿ ಇದ್ದ ಯುವಕ
ರೂಮ್ ಒಳಗೆ ಹೋಗಲು ಬಿಡದೇ ಎಳೆದು ಅಟ್ಟಾಡಿಸಿ ಹಲ್ಲೆ
ಯುವಕನನ್ನು ಠಾಣೆಗೆ ಕರೆಸಿ ದೂರು ದಾಖಲಿಸಿದ ಪೊಲೀಸರು
ಉಡುಪಿ: ಬಾರ್ನಲ್ಲಿ ಮದ್ಯಪಾನ ಮಾಡುವಾಗ ಕಾಲು ತಾಗಿತು ಎಂದು 6 ಮಂದಿ ಸೇರಿ ಯುವಕನನ್ನ ಅಟ್ಟಾಡಿಸಿ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಮಣಿಪಾಲ ಸರಳೆಬೆಟ್ಟು ಬಳಿ ನಡೆದಿದೆ.
ಮುಂಬೈ ಮೂಲದ ಆರುಷ್ ಕುಮಾರ್ (21) ಹಲ್ಲೆಗೊಳಗಾದ ಯುವಕ. ಮಣಿಪಾಲ ಎಂಐಟಿ ಕಾಲೇಜಿನ ಆರುಷ್ ವಿದ್ಯಾರ್ಥಿಯಾಗಿದ್ದಾರೆ. ಡಿ ಆಂಡ್ ಟಿ ಬಾರ್ನಲ್ಲಿ ಮದ್ಯಪಾನ ಮಾಡುವಾಗ ಪುಂಡರ ಗುಂಪಿನ ಓರ್ವನಿಗೆ ಯುವಕನ ಕಾಲು ತಾಗಿದೆ. ಇದೇ ವಿಚಾರಕ್ಕೆ ಬಾರ್ನಲ್ಲೇ ಯುವಕನ ಮೇಲೆ ಹಲ್ಲೆ ಮಾಡಲಾಗಿದೆ. ಇದಾದ ಬಳಿಕ ಮಂಜುನಾಥ್ ಅಪಾರ್ಟ್ಮೆಂಟ್ವರೆಗೂ ಯುವಕನನ್ನು ಅಟ್ಟಾಡಿಸಿಕೊಂಡು ಹೊಡೆದಿದ್ದಾರೆ. ರೂಮ್ ಒಳಗೆ ಹೋಗಲು ಬಿಡದೇ ಎಳೆದುಕೊಂಡು ಬಂದು ಥಳಿಸಿದ್ದಾರೆ.
ಇದನ್ನೂ ಓದಿ: ಮರಳಿ ಗೂಡಿಗೆ ಬಂದ ಗಾಲಿ.. ಜನಾರ್ದನ ರೆಡ್ಡಿ, ಪತ್ನಿ ಅರುಣಾ ಲಕ್ಷ್ಮಿ ಬಿಜೆಪಿ ಪಕ್ಷಕ್ಕೆ ಅಧಿಕೃತ ಸೇರ್ಪಡೆ
ಇದೇ ವೇಳೆ ಸ್ನೇಹಿತರು ಯುವಕನನ್ನು ರಕ್ಷಣೆಗೆ ಬಂದಿದ್ದಾರೆ. ಆ ಬಳಿಕ ಮೊಬೈಲ್ಗೆ ಕರೆ ಮಾಡಿ ಮತ್ತೊಮ್ಮೆ ಹಲ್ಲೆ ನಡೆಸುವುದಾಗಿ ಪುಂಡರು ಬೆದರಿಕೆ ಹಾಕಿದ್ದಾರೆ. ಸದ್ಯ ಈ ಘಟನೆ ಸಂಬಂಧ ಯುವಕನನ್ನ ಮಣಿಪಾಲ ಠಾಣೆಗೆ ಕರೆಯಿಸಿಕೊಂಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಸಿಸಿಟಿವಿ ದೃಶ್ಯ ಹಾಗೂ ಯುವಕರ ಮೊಬೈಲ್ ಸಂಖ್ಯೆ ಆಧರಿಸಿ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ