ಇಂದು ಟೀಂ ಇಂಡಿಯಾ, ಅಫ್ಘಾನ್ ಮಧ್ಯೆ ಟಿ20
ಅಫ್ಘಾನ್ ತಂಡಕ್ಕೆ ಎಬಿಡಿ ಫುಲ್ ವಾರ್ನಿಂಗ್!
ವಿರಾಟ್ ಬಗ್ಗೆ ಡಿವಿಲಿಯರ್ಸ್ ಹೇಳಿದ್ದೇನು ಗೊತ್ತಾ?
ಇಂದು ಟೀಂ ಇಂಡಿಯಾ, ಅಫ್ಘಾನಿಸ್ತಾನದ ಮಧ್ಯೆ ಕೊನೇ ಟಿ20 ಪಂದ್ಯ. ಅದು ಬೆಂಗಳೂರು ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯುತ್ತಿದೆ. ಬಹಳ ದಿನಗಳ ಬಳಿಕ ವಿರಾಟ್ ಕೊಹ್ಲಿ ತನ್ನ ತವರು ಚಿನ್ನಸ್ವಾಮಿ ಸ್ಟೇಡಿಯಮ್ನಲ್ಲಿ ಮ್ಯಾಚ್ ಆಡುತ್ತಿದ್ದಾರೆ. ಈ ಮಧ್ಯೆ 360 ಡಿಗ್ರಿ ಖ್ಯಾತಿಯ ಎಬಿಡಿ ವಿಲಿಯರ್ಸ್ ಅಫ್ಘಾನ್ ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ.
ಇತ್ತೀಚೆಗೆ ಎಬಿಡಿ ಪಿಟಿಐಗೆ ಸಂದರ್ಶನ ನೀಡಿದ್ದರು. ಈ ವೇಳೆ ವಿರಾಟ್ ಟಿ20 ಕ್ರಿಕೆಟ್ಗೆ ಮರಳಿದ್ದು ಅಚ್ಚರಿ ಏನಲ್ಲ ಎಂದಿದ್ದಾರೆ. ವಿರಾಟ್, ರೋಹಿತ್ ಟಿ20 ಕ್ರಿಕೆಟ್ ಆಡುತ್ತಿರುವುದು ತುಂಬಾ ಸಂತೋಷ ತಂದಿದೆ. ಟಿ20 ವಿಶ್ವಕಪ್ನಲ್ಲಿ ಭಾರತ ಗೆಲ್ಲಬೇಕು ಅಂದರೆ ರೋಹಿತ್, ಕೊಹ್ಲಿ ಬೇಕೇ ಬೇಕು ಎಂದರು.
ಕೊಹ್ಲಿ ನರ ನಾಡಿಯಲ್ಲೂ ಕ್ರಿಕೆಟ್ ಇದೆ, ರಕ್ತ ನಾಳಗಳಲ್ಲೂ ಕ್ರಿಕೆಟ್ ಇದೆ. ಇದು ಅವರ ಸ್ಫೂರ್ತಿ. ನಾನು ಕ್ರಿಕೆಟ್ ಬಹಳ ಉತ್ಸಾಹದಿಂದಲೇ ಆಡುತ್ತೇನೆ. ಒಳಗಿನ ಬೆಂಕಿ ತಣ್ಣಗಾಗಲಿದೆ ಎಂದು ಅನಿಸಿದ ಕೂಡಲೇ ನಿವೃತ್ತಿ ಹೊಂದಿದ್ದೇನೆ. ಕೊಹ್ಲಿ ಜೀವನದಲ್ಲಿ ಸಾಕಷ್ಟು ಸಮತೋಲನ ಕಾಯ್ದುಕೊಂಡಿದ್ದಾರೆ. ಆತನ ರಕ್ತದ ಕಣ ಕಣದಲ್ಲೂ ಕ್ರಿಕೆಟ್ ಎಂದರು ಎಬಿಡಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಇಂದು ಟೀಂ ಇಂಡಿಯಾ, ಅಫ್ಘಾನ್ ಮಧ್ಯೆ ಟಿ20
ಅಫ್ಘಾನ್ ತಂಡಕ್ಕೆ ಎಬಿಡಿ ಫುಲ್ ವಾರ್ನಿಂಗ್!
ವಿರಾಟ್ ಬಗ್ಗೆ ಡಿವಿಲಿಯರ್ಸ್ ಹೇಳಿದ್ದೇನು ಗೊತ್ತಾ?
ಇಂದು ಟೀಂ ಇಂಡಿಯಾ, ಅಫ್ಘಾನಿಸ್ತಾನದ ಮಧ್ಯೆ ಕೊನೇ ಟಿ20 ಪಂದ್ಯ. ಅದು ಬೆಂಗಳೂರು ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯುತ್ತಿದೆ. ಬಹಳ ದಿನಗಳ ಬಳಿಕ ವಿರಾಟ್ ಕೊಹ್ಲಿ ತನ್ನ ತವರು ಚಿನ್ನಸ್ವಾಮಿ ಸ್ಟೇಡಿಯಮ್ನಲ್ಲಿ ಮ್ಯಾಚ್ ಆಡುತ್ತಿದ್ದಾರೆ. ಈ ಮಧ್ಯೆ 360 ಡಿಗ್ರಿ ಖ್ಯಾತಿಯ ಎಬಿಡಿ ವಿಲಿಯರ್ಸ್ ಅಫ್ಘಾನ್ ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ.
ಇತ್ತೀಚೆಗೆ ಎಬಿಡಿ ಪಿಟಿಐಗೆ ಸಂದರ್ಶನ ನೀಡಿದ್ದರು. ಈ ವೇಳೆ ವಿರಾಟ್ ಟಿ20 ಕ್ರಿಕೆಟ್ಗೆ ಮರಳಿದ್ದು ಅಚ್ಚರಿ ಏನಲ್ಲ ಎಂದಿದ್ದಾರೆ. ವಿರಾಟ್, ರೋಹಿತ್ ಟಿ20 ಕ್ರಿಕೆಟ್ ಆಡುತ್ತಿರುವುದು ತುಂಬಾ ಸಂತೋಷ ತಂದಿದೆ. ಟಿ20 ವಿಶ್ವಕಪ್ನಲ್ಲಿ ಭಾರತ ಗೆಲ್ಲಬೇಕು ಅಂದರೆ ರೋಹಿತ್, ಕೊಹ್ಲಿ ಬೇಕೇ ಬೇಕು ಎಂದರು.
ಕೊಹ್ಲಿ ನರ ನಾಡಿಯಲ್ಲೂ ಕ್ರಿಕೆಟ್ ಇದೆ, ರಕ್ತ ನಾಳಗಳಲ್ಲೂ ಕ್ರಿಕೆಟ್ ಇದೆ. ಇದು ಅವರ ಸ್ಫೂರ್ತಿ. ನಾನು ಕ್ರಿಕೆಟ್ ಬಹಳ ಉತ್ಸಾಹದಿಂದಲೇ ಆಡುತ್ತೇನೆ. ಒಳಗಿನ ಬೆಂಕಿ ತಣ್ಣಗಾಗಲಿದೆ ಎಂದು ಅನಿಸಿದ ಕೂಡಲೇ ನಿವೃತ್ತಿ ಹೊಂದಿದ್ದೇನೆ. ಕೊಹ್ಲಿ ಜೀವನದಲ್ಲಿ ಸಾಕಷ್ಟು ಸಮತೋಲನ ಕಾಯ್ದುಕೊಂಡಿದ್ದಾರೆ. ಆತನ ರಕ್ತದ ಕಣ ಕಣದಲ್ಲೂ ಕ್ರಿಕೆಟ್ ಎಂದರು ಎಬಿಡಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ