/newsfirstlive-kannada/media/post_attachments/wp-content/uploads/2024/08/darshan-6-2.jpg)
ಬಳ್ಳಾರಿ: ಇತ್ತೀಚೆಗಷ್ಟೇ ನಟ ದರ್ಶನ್​ಗೆ ​ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಕ್ಕ ರಾಜಾತಿಥ್ಯದ ಬಗ್ಗೆ ಭಾರೀ ಚರ್ಚೆ ನಡೆದಿತ್ತು. ಈ ಬೆನ್ನಲ್ಲೇ ಎಚ್ಚೆತ್ತ ರಾಜ್ಯ ಸರ್ಕಾರ ಕೋರ್ಟ್​ ಆದೇಶದ ಮೇರೆಗೆ ದರ್ಶನ್​ ಅವರನ್ನು ಬಳ್ಳಾರಿ ಕೇಂದ್ರೀಯ ಕಾರಗೃಹಕ್ಕೆ ವರ್ಗಾವಣೆ ಮಾಡಿದೆ. ಗುರುವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಬಳ್ಳಾರಿ ಜೈಲಿಗೆ ನಟ ದರ್ಶನ್ ಅವರನ್ನು ಪೊಲೀಸರು ಕರೆತಂದರು.
ಇನ್ನು, ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಬಂದ ನಟ ದರ್ಶನ್ ಧರಿಸಿದ್ದ ಟೀಶರ್ಟ್ ಭಾರೀ ಸದ್ದು ಮಾಡಿತ್ತು. ಇದಕ್ಕೆ ಕಾರಣ ಟೀಶರ್ಟ್​ ಮೇಲೆ ಬರೆದಿದ್ದ 4 ಪ್ರಮುಖ ಸಂದೇಶಗಳು. ಈಗ ಟೀಶರ್ಟ್​​ ಮೇಲಿದ್ದ ಸಂದೇಶದ ಬಗ್ಗೆ ಚರ್ಚೆಯಾಗುತ್ತಿದೆ.
/newsfirstlive-kannada/media/post_attachments/wp-content/uploads/2024/08/Darshan-Puma-T-Shirt-1.jpg)
ದರ್ಶನ್ ಕಪ್ಪು ಬಣ್ಣದ ಪೂಮಾ ಟೀಶರ್ಟ್ ಧರಿಸಿದ್ದರು. ಜತೆಗೆ ಕಾಲರ್ಗೆ ಕೂಲಿಂಗ್ ಗ್ಲಾಸ್, ಕೈಯಲ್ಲಿ ಜರ್ಕಿನ್ ವಾಟರ್ ಬಾಟಲ್ ಹಿಡಿದು ಬಂದಿದ್ದರು. ಬಿಗಿ ಬಂದೋಬಸ್ತ್​​ನಲ್ಲೇ 20ಕ್ಕೂ ಹೆಚ್ಚು ಪೊಲೀಸ್ರು ದರ್ಶನ್​ ಅವರನ್ನು ಜೈಲಿನ ಒಳಗೆ ಕರೆದುಕೊಂಡು ಹೋದರು.
ಟೀಶರ್ಟ್ ಮೇಲಿದ್ದ ಸಂದೇಶವೇನು?
ನಟ ದರ್ಶನ್ ಧರಿಸಿದ್ದ ಟೀ ಶರ್ಟ್ ಮೇಲೆ ಜಸ್ಟೀಸ್ (ನ್ಯಾಯ), ಡಿಗ್ನಿಟಿ (ಘನತೆ) ಇಕ್ವಾಲಿಟಿ (ಸಮಾನತೆ), ಪೀಸ್ (ಶಾಂತಿ) ಎಂಬ ನಾಲ್ಕು ಪದಗಳ ಸಂದೇಶ ಇತ್ತು. ಈ ಟೀಶರ್ಟ್ ಮೂಲಕವೇ ನಟ ದರ್ಶನ್​​ ಅಭಿಮಾನಿಗಳು ದೊಡ್ಡ ಸಂದೇಶ ಸಾರಿದ್ರು.
ಇದನ್ನೂ ಓದಿ:ದರ್ಶನ್​ ಬ್ಯಾಗ್​ನಲ್ಲಿ 20 ಪುಸ್ತಕಗಳು.. ಅವು ಯಾವ್ಯಾವುವು? ಮನಸು ಬದಲಾಯಿಸಬಹುದೇ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us