ಕೊಲೆ ಕೇಸಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ ಅವರಿಗೆ ಪೊಲೀಸ್ ಕಸ್ಟಡಿ
ಕೋರ್ಟ್ ಮಹತ್ವದ ಆದೇಶದ ಬಳಿಕ ದರ್ಶನ್ ಪರ ವಕೀಲರು ಹೇಳಿದ್ದೇನು?
ತನಿಖೆ ಮುಗಿದ ಮೇಲೆ ಎಲ್ಲಾ ಸತ್ಯಾಂಶ ಹೊರಬರಲಿದೆ ಎಂದ ವಕೀಲರು..!
ಬೆಂಗಳೂರು: ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿರೋ ಯುವಕನ ಕೊಲೆ ಕೇಸಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ ಅವರಿಗೆ 24ನೇ ಎಸಿಎಂಎಂ ಕೋರ್ಟ್ ಬಿಗ್ ಶಾಕ್ ನೀಡಿದೆ. ದರ್ಶನ್ ಮತ್ತು ಗ್ಯಾಂಗ್ಗೆ ಬರೋಬ್ಬರಿ 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ. ಕೋರ್ಟ್ ಮಹತ್ವದ ಆದೇಶದ ಬಳಿಕ ದರ್ಶನ್ ಪರ ವಕೀಲರು ಮಾತಾಡಿದ್ದಾರೆ.
ನನಗೆ ರಾಜಕೀಯವೋ, ವೈಯಕ್ತಿಕವೋ ಖಂಡಿತಾ ಗೊತ್ತಿಲ್ಲ. ನಟ ದರ್ಶನ್ ಮತ್ತು ಪವಿತ್ರಾ ಗೌಡ ಇಬ್ಬರು ಅಮಾಯಕರು. ಕೊಲೆ ಖಂಡನೀಯ, ಹಂತಕರಿಗೆ ಶಿಕ್ಷೆಯಾಗಲಿ. ಕೊಲೆಗೂ ದರ್ಶನ್ ಅವರಿಗೂ ಸಂಬಂಧ ಇಲ್ಲ. ಭವಿಷ್ಯ ಕೊಲೆ ಕೇಸಲ್ಲಿ ಬೇಕಂತಲೇ ದರ್ಶನ್ ಹೆಸರು ಸೇರಿಸಲಾಗಿದೆ ಎಂದು ದರ್ಶನ್ ಪರ ವಕೀಲರು ಹೇಳಿದ್ದಾರೆ.
ತನಿಖೆ ಮುಗಿದ ಮೇಲೆ ಎಲ್ಲಾ ಸತ್ಯಾಂಶ ಹೊರಬರಲಿದೆ. ಕೋರ್ಟ್ ಕೂಡ 2 ದಿನಕ್ಕೊಮ್ಮೆ ತನಿಖಾ ವರದಿ ಸಲ್ಲಿಕೆ ಮಾಡಬೇಕು ಎಂದು ಆದೇಶಿಸಿದೆ. ಪ್ರತಿದಿನ ಆರೋಪಿಗಳ ಭೇಟಿಗೆ ಅವಕಾಶ ನೀಡಲಾಗಿದೆ. ಯಾರು ತಪ್ಪಿತಸ್ಥರು ಎಂದು ಕೋರ್ಟ್ ನಿರ್ಧಾರ ಮಾಡುತ್ತೆ. ಯಾವಾಗಲೂ ದರ್ಶನ್ ಮೇಲೆ ಆರೋಪಗಳು ಕೇಳಿ ಬರ್ತಿವೆ. ಪಾಪ! ದರ್ಶನ್ ಅವರಿಗೆ ನಿಜವಾಗಲೂ ಕೇಸ್ ಬಗ್ಗೆ ಗೊತ್ತೇ ಇಲ್ಲ ಎಂದರು.
ಇದನ್ನೂ ಓದಿ: ‘ನನ್ನ ಗಂಡ ದರ್ಶನ್ ಅಭಿಮಾನಿ ಅಲ್ಲ, ನ್ಯಾಯ ಕೊಡಿಸಿ’- ಮೃತ ಯುವಕನ ಪತ್ನಿ ಕಣ್ಣೀರು!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಕೊಲೆ ಕೇಸಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ ಅವರಿಗೆ ಪೊಲೀಸ್ ಕಸ್ಟಡಿ
ಕೋರ್ಟ್ ಮಹತ್ವದ ಆದೇಶದ ಬಳಿಕ ದರ್ಶನ್ ಪರ ವಕೀಲರು ಹೇಳಿದ್ದೇನು?
ತನಿಖೆ ಮುಗಿದ ಮೇಲೆ ಎಲ್ಲಾ ಸತ್ಯಾಂಶ ಹೊರಬರಲಿದೆ ಎಂದ ವಕೀಲರು..!
ಬೆಂಗಳೂರು: ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿರೋ ಯುವಕನ ಕೊಲೆ ಕೇಸಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ ಅವರಿಗೆ 24ನೇ ಎಸಿಎಂಎಂ ಕೋರ್ಟ್ ಬಿಗ್ ಶಾಕ್ ನೀಡಿದೆ. ದರ್ಶನ್ ಮತ್ತು ಗ್ಯಾಂಗ್ಗೆ ಬರೋಬ್ಬರಿ 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ. ಕೋರ್ಟ್ ಮಹತ್ವದ ಆದೇಶದ ಬಳಿಕ ದರ್ಶನ್ ಪರ ವಕೀಲರು ಮಾತಾಡಿದ್ದಾರೆ.
ನನಗೆ ರಾಜಕೀಯವೋ, ವೈಯಕ್ತಿಕವೋ ಖಂಡಿತಾ ಗೊತ್ತಿಲ್ಲ. ನಟ ದರ್ಶನ್ ಮತ್ತು ಪವಿತ್ರಾ ಗೌಡ ಇಬ್ಬರು ಅಮಾಯಕರು. ಕೊಲೆ ಖಂಡನೀಯ, ಹಂತಕರಿಗೆ ಶಿಕ್ಷೆಯಾಗಲಿ. ಕೊಲೆಗೂ ದರ್ಶನ್ ಅವರಿಗೂ ಸಂಬಂಧ ಇಲ್ಲ. ಭವಿಷ್ಯ ಕೊಲೆ ಕೇಸಲ್ಲಿ ಬೇಕಂತಲೇ ದರ್ಶನ್ ಹೆಸರು ಸೇರಿಸಲಾಗಿದೆ ಎಂದು ದರ್ಶನ್ ಪರ ವಕೀಲರು ಹೇಳಿದ್ದಾರೆ.
ತನಿಖೆ ಮುಗಿದ ಮೇಲೆ ಎಲ್ಲಾ ಸತ್ಯಾಂಶ ಹೊರಬರಲಿದೆ. ಕೋರ್ಟ್ ಕೂಡ 2 ದಿನಕ್ಕೊಮ್ಮೆ ತನಿಖಾ ವರದಿ ಸಲ್ಲಿಕೆ ಮಾಡಬೇಕು ಎಂದು ಆದೇಶಿಸಿದೆ. ಪ್ರತಿದಿನ ಆರೋಪಿಗಳ ಭೇಟಿಗೆ ಅವಕಾಶ ನೀಡಲಾಗಿದೆ. ಯಾರು ತಪ್ಪಿತಸ್ಥರು ಎಂದು ಕೋರ್ಟ್ ನಿರ್ಧಾರ ಮಾಡುತ್ತೆ. ಯಾವಾಗಲೂ ದರ್ಶನ್ ಮೇಲೆ ಆರೋಪಗಳು ಕೇಳಿ ಬರ್ತಿವೆ. ಪಾಪ! ದರ್ಶನ್ ಅವರಿಗೆ ನಿಜವಾಗಲೂ ಕೇಸ್ ಬಗ್ಗೆ ಗೊತ್ತೇ ಇಲ್ಲ ಎಂದರು.
ಇದನ್ನೂ ಓದಿ: ‘ನನ್ನ ಗಂಡ ದರ್ಶನ್ ಅಭಿಮಾನಿ ಅಲ್ಲ, ನ್ಯಾಯ ಕೊಡಿಸಿ’- ಮೃತ ಯುವಕನ ಪತ್ನಿ ಕಣ್ಣೀರು!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ