ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿದ್ದ ಅರ್ಜುನ
ಮೈಸೂರು ದಸಾರಾದಲ್ಲಿ ಅಂಬಾರಿಯನ್ನ 8 ಬಾರಿ ಹೊತ್ತಿದ್ದ ಅರ್ಜುನ ಆನೆ
ಶಾಶ್ವತ ಸ್ಮಾರಕ ನಿರ್ಮಾಣದ ಸಮಯದಲ್ಲೂ ನಟ ದರ್ಶನ್ ಸಹಾಯಹಸ್ತ
ಹಾಸನ: ಕಾಡಾನೆಯನ್ನು ಸೆರೆ ಹಿಡಿಯುವಾಗ ಸಾವನ್ನಪ್ಪಿದ್ದ ಅರ್ಜುನ್ ಆನೆಯ ಸ್ಮಾರಕ ನಿರ್ಮಾಣಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮುಂದಾಗಿದ್ದಾರೆ.
ಅರ್ಜುನನ ಸ್ಮಾರಕ ಮಾಡೋದಾಗಿ ರಾಜ್ಯ ಸರ್ಕಾರ ತಿಳಿಸಿದರೂ ಈವರೆಗೂ ಯಾವುದೇ ಕಾಮಗಾರಿ ನಡೆಯದೇ ನೆನೆಗುದಿಗೆ ಬಿದ್ದಿದೆ. ಹೀಗಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅರ್ಜುನನಿಗೆ ತಾತ್ಕಾಲಿಕ ಸ್ಮಾರಕ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಸ್ಮಾರಕಕ್ಕೆ ಬೇಕಾದ ಕಲ್ಲು, ಮಾರ್ಬಲ್ಸ್ ಎಲ್ಲ ಕಳಿಸಿಕೊಟ್ಟಿದ್ದಾರೆ. ಮುಂದೆ ಶಾಶ್ವತ ಸ್ಮಾರಕ ನಿರ್ಮಾಣದ ಸಮಯದಲ್ಲೂ ಸಹಾಯಹಸ್ತ ನೀಡಲಿದ್ದಾರೆ. ಇತ್ತೀಚೆಗೆ ಸೂಪರ್ ಹಿಟ್ ಆಗಿದ್ದ ಕಾಟೇರ ಸಿನಿಮಾವನ್ನ ಅರ್ಜುನನಿಗೆ ಅರ್ಪಿಸಿದ್ದು ಇಲ್ಲಿ ನೆನಪಿಸಿಕೊಳ್ಳಬಹುದು.
ಇದನ್ನೂ ಓದಿ: ಮುಂಬೈ ಹೋರ್ಡಿಂಗ್ ಬಿದ್ದ ಕೇಸ್ಗೆ ಹೊಸ ಟ್ವಿಸ್ಟ್.. ದುರಂತದ ಸ್ಥಳದಲ್ಲಿಂದು ಮೋದಿ ರೋಡ್ ಶೋ
ಅದ್ಧೂರಿ ಮೈಸೂರು ದಸಾರಾದ ಅಂಬಾರಿಯನ್ನು ಅರ್ಜುನ ಆನೆಯು 8 ಬಾರಿ ಹೊತ್ತುಕೊಂಡು ರಾಜಗಾಂಭೀರ್ಯದಿಂದ ಹೆಜ್ಜೆ ಹಾಕಿತ್ತು. ಆದರೆ ಹಾಸನದ ಸಕಲೇಶಪುರ ಬಳಿಯ ಯಸಳೂರು ಹತ್ತಿರ ಕಾಡಾನೆಯೊಂದನ್ನು ಸೆರೆ ಹಿಡಿಯುವ ಕಾರ್ಯಾಚರಣೆ ನಡೆಯುತ್ತಿತ್ತು. ಈ ವೇಳೆ ಕಾಡಾನೆ ದಾಳಿ ಮಾಡಿ ಅರ್ಜುನನ್ನ ಕೊಂದಿತ್ತು. ಈ ಸುದ್ದಿ ಇಡೀ ರಾಜ್ಯದ್ಯಾಂತ ಬಾರೀ ಸಂಚಲನ ಮೂಡಿಸಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿದ್ದ ಅರ್ಜುನ
ಮೈಸೂರು ದಸಾರಾದಲ್ಲಿ ಅಂಬಾರಿಯನ್ನ 8 ಬಾರಿ ಹೊತ್ತಿದ್ದ ಅರ್ಜುನ ಆನೆ
ಶಾಶ್ವತ ಸ್ಮಾರಕ ನಿರ್ಮಾಣದ ಸಮಯದಲ್ಲೂ ನಟ ದರ್ಶನ್ ಸಹಾಯಹಸ್ತ
ಹಾಸನ: ಕಾಡಾನೆಯನ್ನು ಸೆರೆ ಹಿಡಿಯುವಾಗ ಸಾವನ್ನಪ್ಪಿದ್ದ ಅರ್ಜುನ್ ಆನೆಯ ಸ್ಮಾರಕ ನಿರ್ಮಾಣಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮುಂದಾಗಿದ್ದಾರೆ.
ಅರ್ಜುನನ ಸ್ಮಾರಕ ಮಾಡೋದಾಗಿ ರಾಜ್ಯ ಸರ್ಕಾರ ತಿಳಿಸಿದರೂ ಈವರೆಗೂ ಯಾವುದೇ ಕಾಮಗಾರಿ ನಡೆಯದೇ ನೆನೆಗುದಿಗೆ ಬಿದ್ದಿದೆ. ಹೀಗಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅರ್ಜುನನಿಗೆ ತಾತ್ಕಾಲಿಕ ಸ್ಮಾರಕ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಸ್ಮಾರಕಕ್ಕೆ ಬೇಕಾದ ಕಲ್ಲು, ಮಾರ್ಬಲ್ಸ್ ಎಲ್ಲ ಕಳಿಸಿಕೊಟ್ಟಿದ್ದಾರೆ. ಮುಂದೆ ಶಾಶ್ವತ ಸ್ಮಾರಕ ನಿರ್ಮಾಣದ ಸಮಯದಲ್ಲೂ ಸಹಾಯಹಸ್ತ ನೀಡಲಿದ್ದಾರೆ. ಇತ್ತೀಚೆಗೆ ಸೂಪರ್ ಹಿಟ್ ಆಗಿದ್ದ ಕಾಟೇರ ಸಿನಿಮಾವನ್ನ ಅರ್ಜುನನಿಗೆ ಅರ್ಪಿಸಿದ್ದು ಇಲ್ಲಿ ನೆನಪಿಸಿಕೊಳ್ಳಬಹುದು.
ಇದನ್ನೂ ಓದಿ: ಮುಂಬೈ ಹೋರ್ಡಿಂಗ್ ಬಿದ್ದ ಕೇಸ್ಗೆ ಹೊಸ ಟ್ವಿಸ್ಟ್.. ದುರಂತದ ಸ್ಥಳದಲ್ಲಿಂದು ಮೋದಿ ರೋಡ್ ಶೋ
ಅದ್ಧೂರಿ ಮೈಸೂರು ದಸಾರಾದ ಅಂಬಾರಿಯನ್ನು ಅರ್ಜುನ ಆನೆಯು 8 ಬಾರಿ ಹೊತ್ತುಕೊಂಡು ರಾಜಗಾಂಭೀರ್ಯದಿಂದ ಹೆಜ್ಜೆ ಹಾಕಿತ್ತು. ಆದರೆ ಹಾಸನದ ಸಕಲೇಶಪುರ ಬಳಿಯ ಯಸಳೂರು ಹತ್ತಿರ ಕಾಡಾನೆಯೊಂದನ್ನು ಸೆರೆ ಹಿಡಿಯುವ ಕಾರ್ಯಾಚರಣೆ ನಡೆಯುತ್ತಿತ್ತು. ಈ ವೇಳೆ ಕಾಡಾನೆ ದಾಳಿ ಮಾಡಿ ಅರ್ಜುನನ್ನ ಕೊಂದಿತ್ತು. ಈ ಸುದ್ದಿ ಇಡೀ ರಾಜ್ಯದ್ಯಾಂತ ಬಾರೀ ಸಂಚಲನ ಮೂಡಿಸಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ