/newsfirstlive-kannada/media/post_attachments/wp-content/uploads/2024/06/Vinish-darshan-1.jpg)
ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಕೇಸ್​ನಲ್ಲಿ ನಟ ದರ್ಶನ್ ಆ್ಯಂಡ್ ಗ್ಯಾಂಗ್ ಅನ್ನು ಪೊಲೀಸರು ಅರೆಸ್ಟ್ ಮಾಡಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಜೈಲಿನಲ್ಲಿರುವ ನಟ ದರ್ಶನ್ ಸರಿಯಾಗಿ ಊಟ ಮಾಡದೇ ಚಿಂತೆಗೆ ಒಳಗಾಗಿದ್ದಾರೆ. ಆದರೆ ಅಪ್ಪನಿಲ್ಲದಕ್ಕೆ ಮಗ ವಿನೀಶ್ ಮನೆ ತೊರೆದು ತನ್ನ ಅಜ್ಜಿ ಮನೆಗೆ ಹೋಗಿದ್ದಾರೆ.
ಕೊಲೆ ಕೇಸ್​​ನಲ್ಲಿ ಎ2 ಆರೋಪಿಯಾಗಿರುವ ದರ್ಶನ್ ಅವರು ಸದ್ಯ ಜೈಲಿನಲ್ಲಿ ಏಕಾಂಗಿಯಾಗಿ ಇದ್ದಾರೆ. ಅಪ್ಪನಿಲ್ಲದ ಮನೆಯಲ್ಲಿ ನಾನೂ ಇರಲ್ಲ ಎಂದು ಅಪ್ಪನಿಲ್ಲದ ಬೇಸರದಲ್ಲಿರುವ ಮಗ ವಿನೀಶ್ ತಮ್ಮ ಮನೆಯಲ್ಲಿ ಇಲ್ಲದೆ ಅಜ್ಜಿ ಮನೆಗೆ ಹೋಗಿದ್ದಾರೆ. ಅಪ್ಪ ಜೊತೆಗಿದ್ದಾಗ ಎಷ್ಟು ಖುಷಿ, ಖುಷಿಯಾಗಿರುತ್ತಿದ್ದ ವಿನೀಶ್​ ಮುಖದಲ್ಲಿ ಈಗ ಖುಷಿ ಮಾಯವಾಗಿದೆ. ಬೇಸರದಲ್ಲೇ ದಿನ ಕಳೆಯುತ್ತಿದ್ದಾನೆ.
ಇದನ್ನೂ ಓದಿ:ದರ್ಶನ್ ಗ್ಯಾಂಗ್​ನಿಂದ ಕೊಲೆಯಾದ ಯುವಕನ ಪತ್ನಿಗೆ ಸರ್ಕಾರಿ ಕೆಲಸ? ರೇಣುಕಾಸ್ವಾಮಿ ತಾಯಿ ಏನಂದ್ರು?
/newsfirstlive-kannada/media/post_attachments/wp-content/uploads/2024/06/Vinish-darshan.jpg)
ಫಾದರ್ಸ್​ ಡೇಯಂದು ಅಪ್ಪನ ಕುರಿತು ಭಾವುಕ ಪೋಸ್ಟ್ ಶೇರ್ ಮಾಡಿದ್ದ ವಿನೀಶ್ ತನ್ನ ಪ್ರೀತಿಯ ಡ್ಯಾಡಿಗೆ ಫಾದರ್ಸ್ ಡೇ ಶುಭಾಶಯ ತಿಳಿಸಿದ್ದರು. ಐ ಮಿಸ್ ಯೂ, ಐ ಲವ್ ಯೂ, ನೀನು ಯಾವತ್ತಿದ್ದರೂ ನನ್ನ ಹೀರೋ ಎಂದು ಅಪ್ಪನ ಜತೆಗಿನ ಫೋಟೋಗಳ ಜತೆಗೆ ಪೋಸ್ಟ್ ಶೇರ್ ಮಾಡಿದ್ದನು.
ಇದಕ್ಕೂ ಮೊದಲು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್​ವೊಂದನ್ನ​ ಶೇರ್ ಮಾಡಿದ್ದ ವಿನೀಶ್​, ನನ್ನ ತಂದೆಯ ಬಗ್ಗೆ ಕೆಟ್ಟ ಕಾಮೆಂಟ್ಗಳನ್ನು ಮಾಡಿ, ಅಶ್ಲೀಲ ಭಾಷೆಯಲ್ಲಿ ನಿಂದಿಸಿದ್ದಕ್ಕೆ ನಿಮಗೆಲ್ಲರಿಗು ಧನ್ಯವಾದಗಳು. ನಾನು ಈಗಿನ್ನೂ 15 ವರ್ಷದ ಬಾಲಕ ನನಗೂ ಭಾವನೆಗಳಿವೆ ಎಂಬುದನ್ನು ನೀವು ಪರಿಗಣಿಸಲಿಲ್ಲ ಎಂದು ವಿನೀಶ್ ಬೇಸರ ವ್ಯಕ್ತಪಡಿಸಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us