/newsfirstlive-kannada/media/post_attachments/wp-content/uploads/2024/06/dboss25.jpg)
ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಜೈಲು ಸೇರಿರೋ ದರ್ಶನ್​ ರಾಜ್ಯಾತಿಥ್ಯದ ವೈರಲ್ ಫೋಟೋಗಳು ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ. ಇದೇ ಕೇಸ್​ಗೆ ಸಂಬಂಧಪಟ್ಟಂತೆ ಕೋರ್ಟ್​ ನಿರ್ದೇಶನದಂತೆ ಈಗಾಗಲೇ ನಟ ದರ್ಶನ್​ನನ್ನು ಬಳ್ಳಾರಿಗೆ ಜೈಲಿಗೆ ಸ್ಥಳಾಂತರ ಮಾಡಲಿದ್ದಾರೆ. ದರ್ಶನ್​ ಶಿಫ್ಟ್​ ಹಿನ್ನೆಲೆ ಬಳ್ಳಾರಿ ಜೈಲಿನ ಸಿಬ್ಬಂದಿ ಮತ್ತು ಪೊಲೀಸರು ಫುಲ್​ ಅಲರ್ಟ್​ ಆಗಿದ್ದಾರೆ.
ಇದನ್ನೂ ಓದಿ: ಫೋಟೋ ರಿಲೀಸ್ಗೆ ಗ್ಯಾಂಗ್ ವಾರ್ ಕಾರಣ.. ನಾಗನಿಗೂ ಬೇಕರಿ ರಘುಗೂ ದುಷ್ಮನಿ ಯಾಕೆ? ಇಲ್ಲಿದೆ ಡಿಟೇಲ್ ಸ್ಟೋರಿ!
/newsfirstlive-kannada/media/post_attachments/wp-content/uploads/2024/06/dboss27.jpg)
ದರ್ಶನ್​ನನ್ನು ನೋಡಲು ಜನರು ಸೇರುವ ಸಾಧ್ಯತೆ ಇದ್ದು, ಮುಂಜಾಗ್ರತಾ ಕ್ರಮವಾಗಿ ಬಳ್ಳಾರಿ ಜೈಲಿನ ಬಳಿ ರಾತ್ರಿಯಿಂದಲೇ ಬಿಗಿ ಬಂದೋಬಸ್ತ್ ಮಾಡಿದ್ದಾರೆ. ಜೈಲು ಸಂಪರ್ಕದ ಎಸ್ಪಿ ಸರ್ಕಲ್ ರಸ್ತೆ, ಕನಕ ದುರ್ಗಮ್ಮ ದೇಗಲ ರಸ್ತೆಯ ಬದಿಗಳಲ್ಲಿ ಬ್ಯಾರಿಕೇಟ್​ ಅಳವಡಿಕೆ ಮಾಡಲಾಗಿದೆ. ಬಳ್ಳಾರಿ ಜೈಲಿನ ಹೊರಗೆ ಮಾತ್ರವಲ್ಲ, ಒಳಗೂ ಕೂಡ ಜೈಲು ಸಿಬ್ಬಂದಿ ಹದ್ದಿನ ಕಣ್ಣಿಟ್ಟಿದ್ದು, ಸಿದ್ಧತೆಯನ್ನು ಪರಿಶೀಲಿಸಿದ್ದಾರೆ.
ಕೈದಿ ನಂ. 6160 ಬಳ್ಳಾರಿಗೆ ಶಿಫ್ಟ್​!
ಒಟ್ಟು 9 ಬ್ಯಾರಕ್​ಗಳಿರುವ ಬಳ್ಳಾರಿ ಜೈಲಿನಲ್ಲಿ 385 ಖೈದಿಗಳಿದ್ದಾರೆ. ಕೋರ್ಟ್ ಕಲಾಪಕ್ಕೆ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಕೂಡ ಈ ಜೈಲಿನಲ್ಲಿ ಇದೆ. ಇನ್ನು ಭದ್ರತೆ ವಿಚಾರಕ್ಕೆ ಬಂದ್ರೆ, ಬಳ್ಳಾರಿ ಸೆಂಟ್ರಲ್ ಜೈಲ್​ಗೆ ಸಿಸಿ ಕ್ಯಾಮರಾಗಳ ಕಣ್ಗಾವಲಿದೆ. ಕೆಲವೊಂದು ಸೆಲ್​ಗಳಿಗೆ ಅಟ್ಯಾಚ್ ಬಾತ್ ರೂಂ ವ್ಯವಸ್ಥೆ ಇದ್ದು, ಅಟ್ಯಾಚ್ ಬಾತ್ ರೂಂನ ಸೆಲ್​ನಲ್ಲಿ ದರ್ಶನ್​ನನ್ನು ಇರಿಸುವ ಸಾಧ್ಯತೆ ಇದೆ.
/newsfirstlive-kannada/media/post_attachments/wp-content/uploads/2024/06/dboss2.jpg)
ಇನ್ನು, ಬಳ್ಳಾರಿ ಜೈಲಿಗೆ ನಟ ದರ್ಶನ್​ ಶಿಫ್ಟ್​ ಆಗ್ತಿರುವ ವಿಷ್ಯ ತಿಳಿದು ಬಳ್ಳಾರಿ ಜೈಲಿನಲ್ಲಿರುವ ಕೈದಿಗಳು ಖುಷಿ ಆಗಿದ್ದಾರಂತೆ. ಜೈಲಿನಲ್ಲಿ ದರ್ಶನ್​ನನ್ನು ನೋಡಬಹುದು ಎಂದು ಕೈದಿಗಳು ದರ್ಶನ್​ ಬರುವ ದಾರಿಯನ್ನೇ ಕಾಯ್ತಿದ್ದಾರೆ. ಅದೇನೆ ಇರಲಿ ಕೊಲೆ ಆರೋಪಿಗೆ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ನೀಡಿದ ಪ್ರಕರಣ ಇಡೀ ವ್ಯವಸ್ಥೆಯನ್ನೇ ಅನುಮಾನ ಕಣ್ಣಿನಿಂದ ನೋಡುವಂತಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us