newsfirstkannada.com

The Goat Life: ಪೃಥ್ವಿರಾಜ್​ ಸುಕುಮಾರನ್ ನಟನೆಗೆ ದಂಗಾದ ಸ್ಟಾರ್​​ ನಟರು: ಕಮಲ್​ ಹಾಸನ್ ಶಾಕಿಂಗ್ ರಿಯಾಕ್ಷನ್!

Share :

Published March 27, 2024 at 3:17pm

    ಆಡುಜೀವಿತಂ ಸಿನಿಮಾಗಾಗಿ 16 ವರ್ಷಗಳನ್ನು ಮೀಸಲಿಟ್ಟಿದ್ದ ನಟ ಪೃಥ್ವಿರಾಜ್

    ಈ ಸಿನಿಮಾ ನಡುವೆಯೇ ಹೆಚ್ಚು ನೀರು ಕುಡಿಯಬೇಕು ಅಂತ ಅನಿಸುತ್ತದೆ

    ಸಿನಿಮಾ ರಿಲೀಸ್​ಗೂ ಮುನ್ನವೇ ಕಮಾಲ್​ ಮಾಡಿದ ನಟ ಪೃಥ್ವಿರಾಜ್ ಸಿನಿಮಾ

ಬಹುಭಾಷಾ ನಟ ಪೃಥ್ವಿರಾಜ್​ ಸುಕುಮಾರನ್​ ಅವರ ಬಹುನಿರೀಕ್ಷಿತ ಸಿನಿಮಾ ‘ಆಡುಜೀವಿತಂ’ ನಾಳೆ ಎಂದರೆ ಮಾರ್ಚ್​ 28ರಂದು ಅದ್ಧೂರಿಯಾಗಿ ತೆರೆ ಮೇಲೆ ಅಪ್ಪಳಿಸಲು ಸಜ್ಜಾಗಿದೆ. ಈ ಚಿತ್ರ ಟ್ರೇಲರ್ ನೋಡಿದ ಅಭಿಮಾನಿಗಳಲ್ಲಿ ನಿರೀಕ್ಷೆ ದುಪ್ಪಟ್ಟಾಗಿದೆ. ಈ ಸಿನಿಮಾ ಬಿಡುಗಡೆಗೂ ಮುನ್ನವೇ ಸಾಕಷ್ಟು ಸುದ್ದಿ ಮಾಡಿತ್ತು.

ನಟ ಪೃಥ್ವಿರಾಜ್​ ಸುಕುಮಾರ್​ ಅವರು ನ್ಯೂಸ್‌ ಫಸ್ಟ್ ಪ್ರೈಮ್‌ ಜೊತೆ ಆಡುಜೀವಿತಂ ಸಿನಿಮಾದ ಬಗ್ಗೆ ಕುತೂಹಲಕಾರಿ ಅಂಶದ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದರು. ಸಂದರ್ಶನದ ವೇಳೆ ‘ಆಡುಜೀವಿತಂ’ ಸಿನಿಮಾಗಾಗಿ 16 ವರ್ಷಗಳನ್ನು ಮೀಸಲಿಟ್ಟಿದ್ದೇನೆ. ಇದು ಕಾದಂಬರಿ ಮಾತ್ರವಲ್ಲ, ನೈಜ್ಯ ಘಟನೆಯಾದರಿತ ಸಿನಿಮಾ. ನಜೀಬ್​ ಮೊಹಮ್ಮದ್​ ಅವರು ಈ ನಿಜ ಘಟನೆ ಕರ್ತೃ ಎಂದು ಹೇಳಿದ್ದರು.

ಇದನ್ನೂ ಓದಿ: The Goat Life ಸಿನಿಮಾಗಾಗಿ 16 ವರ್ಷಗಳನ್ನು ಮೀಸಲಿಟ್ಟಿದ್ದೇನೆ; ನಟ ಪೃಥ್ವಿರಾಜ್ ಸುಕುಮಾರನ್

ಇದೀಗ ಈ ಸಿನಿಮಾವನ್ನು ನೋಡಿದ ಖ್ಯಾತ ನಟ ಕಮಲ್​ ಹಾಸನ್​ ಅವರು ನಟ ಪೃಥ್ವಿರಾಜ್​ ಅವರ ಅಭಿನಯಕ್ಕೆ ಫುಲ್ ಫಿದಾ ಆಗಿದ್ದಾರೆ. ಆಡುಜೀವಿತಂ ಸಿನಿಮಾ ರಿಲೀಸ್​ಗೂ ಮುನ್ನ ಸೆಲೆಬ್ರಿಟಿ ಶೋ ಏರ್ಪಡಿಸಲಾಗಿತ್ತು. ಈ ಸಿನಿಮಾವನ್ನು ಕಣ್ತುಂಬಿಕೊಂಡ ಹಿರಿಯ ನಟ ಕಮಲ್ ಹಾಸನ್ ಅವರಿಂದ ಅದ್ಭುತವಾದ ಪ್ರತಿಕ್ರಿಯೆ ಸಿಕ್ಕಿದೆ. ಈ ಸಿನಿಮಾವನ್ನು ನೋಡಿದ ಅವರು ಆಡುಜೀವಿತಂ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ನಿದೇರ್ಶಕ ಬ್ಲೆಸ್ಸಿ ಮತ್ತು ಪೃಥ್ವಿರಾಜ್ ಅವರ ಪ್ರಯತ್ನಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಆಡುಜೀವಿತಂ ಸಿನಿಮಾ ವೀಕ್ಷಣೆ ಬಳಿಕ ಈ ಬಗ್ಗೆ ಮಾತಾಡಿದ ಕಮಲ್​ ಹಾಸನ್​ ಅವರು, ನಾನು ಮೊದಲು ಬ್ಲೆಸ್ಸಿಗೆ ಧನ್ಯವಾದ ತಿಳಿಸುತ್ತೇನೆ. ಇದು ನಿಜಕ್ಕೂ ಕಷ್ಟದ ಕೆಲಸ. ಈ ಸಿನಿಮಾ ವೀಕ್ಷಣೆಯ ನಡುವೆ ನಿಮ್ಮೆಲ್ಲರಿಗೂ ಹೆಚ್ಚು ನೀರು ಕುಡಿಯಬೇಕು ಅಂತ ಅನಿಸುತ್ತದೆ. ವಿಭಿನ್ನ ರೀತಿಯಲ್ಲಿ ಸಿನಿಮಾ ಮಾಡುವ ನಿಮ್ಮ ಬಾಯಾರಿಕೆಯೂ ಇಲ್ಲಿ ಎದ್ದು ಕಾಣುತ್ತಿದೆ ಎಂದಿದ್ದಾರೆ.

ಪೃಥ್ವಿರಾಜ್ ಈ ಸಿನಿಮಾಕ್ಕಾಗಿ ತುಂಬಾ ಕಷ್ಟಪಟ್ಟಿದ್ದಾರೆ. ವಿಶೇಷವಾಗಿ ಅವರು ಸ್ನಾನ ಮಾಡುವ ಕ್ಲಿಪ್​. ಅವನು ಇಷ್ಟು ದೂರ ಹೋಗುತ್ತಾನೆ ಎಂದು ನಾನು ಭಾವಿಸಿರಲಿಲ್ಲ. ಕ್ಯಾಮರಾಮನ್ ಕೆಲಸ ಕೂಡ ಅದ್ಭುತವಾಗಿ. ಇದನ್ನು ಸೆರೆ ಹಿಡಿಯುವುದು ತುಂಬಾ ಕಷ್ಟದ ವಿಚಾರ. ಸಿನಿಮಾ ನಿರ್ಮಾಪಕರಾಗಿ ನಾವು ಇದನ್ನು ಅರ್ಥ ಮಾಡಿಕೊಳ್ಳುತ್ತೇವೆ. ಈ ಸಿನಿಮಾಗಾಗಿ ಅವರು ಎಷ್ಟು ಪ್ರಯತ್ನ ಮಾಡಿದ್ದಾರೆ ಎಂದು ಪ್ರೇಕ್ಷಕರು ಸಹ ಅರ್ಥಮಾಡಿಕೊಳ್ಳಬೇಕೆಂದು ನಾನು ಬಯಸುತ್ತೇನೆ. ಅತ್ಯುತ್ತಮ ಚಿತ್ರ. ಜನರು ಈ ಚಿತ್ರಕ್ಕೆ ಬೆಂಬಲ ನೀಡಬೇಕೆಂದು ನಾನು ಬಯಸುತ್ತೇನೆ ಎಂದು ಹೇಳಿದ್ದಾರೆ. ಈ ಸಿನಿಮಾ ನೋಡಿದ ಮಣಿರತ್ನಂ ಅವರು ಕೂಡ ತೆರೆ ಹಿಂದೆ ಪಟ್ಟ ಕಷ್ಟದ ಬಗ್ಗೆ ಆಶ್ಚರ್ಯಪಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

The Goat Life: ಪೃಥ್ವಿರಾಜ್​ ಸುಕುಮಾರನ್ ನಟನೆಗೆ ದಂಗಾದ ಸ್ಟಾರ್​​ ನಟರು: ಕಮಲ್​ ಹಾಸನ್ ಶಾಕಿಂಗ್ ರಿಯಾಕ್ಷನ್!

https://newsfirstlive.com/wp-content/uploads/2024/03/The-GoatLife.jpg

    ಆಡುಜೀವಿತಂ ಸಿನಿಮಾಗಾಗಿ 16 ವರ್ಷಗಳನ್ನು ಮೀಸಲಿಟ್ಟಿದ್ದ ನಟ ಪೃಥ್ವಿರಾಜ್

    ಈ ಸಿನಿಮಾ ನಡುವೆಯೇ ಹೆಚ್ಚು ನೀರು ಕುಡಿಯಬೇಕು ಅಂತ ಅನಿಸುತ್ತದೆ

    ಸಿನಿಮಾ ರಿಲೀಸ್​ಗೂ ಮುನ್ನವೇ ಕಮಾಲ್​ ಮಾಡಿದ ನಟ ಪೃಥ್ವಿರಾಜ್ ಸಿನಿಮಾ

ಬಹುಭಾಷಾ ನಟ ಪೃಥ್ವಿರಾಜ್​ ಸುಕುಮಾರನ್​ ಅವರ ಬಹುನಿರೀಕ್ಷಿತ ಸಿನಿಮಾ ‘ಆಡುಜೀವಿತಂ’ ನಾಳೆ ಎಂದರೆ ಮಾರ್ಚ್​ 28ರಂದು ಅದ್ಧೂರಿಯಾಗಿ ತೆರೆ ಮೇಲೆ ಅಪ್ಪಳಿಸಲು ಸಜ್ಜಾಗಿದೆ. ಈ ಚಿತ್ರ ಟ್ರೇಲರ್ ನೋಡಿದ ಅಭಿಮಾನಿಗಳಲ್ಲಿ ನಿರೀಕ್ಷೆ ದುಪ್ಪಟ್ಟಾಗಿದೆ. ಈ ಸಿನಿಮಾ ಬಿಡುಗಡೆಗೂ ಮುನ್ನವೇ ಸಾಕಷ್ಟು ಸುದ್ದಿ ಮಾಡಿತ್ತು.

ನಟ ಪೃಥ್ವಿರಾಜ್​ ಸುಕುಮಾರ್​ ಅವರು ನ್ಯೂಸ್‌ ಫಸ್ಟ್ ಪ್ರೈಮ್‌ ಜೊತೆ ಆಡುಜೀವಿತಂ ಸಿನಿಮಾದ ಬಗ್ಗೆ ಕುತೂಹಲಕಾರಿ ಅಂಶದ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದರು. ಸಂದರ್ಶನದ ವೇಳೆ ‘ಆಡುಜೀವಿತಂ’ ಸಿನಿಮಾಗಾಗಿ 16 ವರ್ಷಗಳನ್ನು ಮೀಸಲಿಟ್ಟಿದ್ದೇನೆ. ಇದು ಕಾದಂಬರಿ ಮಾತ್ರವಲ್ಲ, ನೈಜ್ಯ ಘಟನೆಯಾದರಿತ ಸಿನಿಮಾ. ನಜೀಬ್​ ಮೊಹಮ್ಮದ್​ ಅವರು ಈ ನಿಜ ಘಟನೆ ಕರ್ತೃ ಎಂದು ಹೇಳಿದ್ದರು.

ಇದನ್ನೂ ಓದಿ: The Goat Life ಸಿನಿಮಾಗಾಗಿ 16 ವರ್ಷಗಳನ್ನು ಮೀಸಲಿಟ್ಟಿದ್ದೇನೆ; ನಟ ಪೃಥ್ವಿರಾಜ್ ಸುಕುಮಾರನ್

ಇದೀಗ ಈ ಸಿನಿಮಾವನ್ನು ನೋಡಿದ ಖ್ಯಾತ ನಟ ಕಮಲ್​ ಹಾಸನ್​ ಅವರು ನಟ ಪೃಥ್ವಿರಾಜ್​ ಅವರ ಅಭಿನಯಕ್ಕೆ ಫುಲ್ ಫಿದಾ ಆಗಿದ್ದಾರೆ. ಆಡುಜೀವಿತಂ ಸಿನಿಮಾ ರಿಲೀಸ್​ಗೂ ಮುನ್ನ ಸೆಲೆಬ್ರಿಟಿ ಶೋ ಏರ್ಪಡಿಸಲಾಗಿತ್ತು. ಈ ಸಿನಿಮಾವನ್ನು ಕಣ್ತುಂಬಿಕೊಂಡ ಹಿರಿಯ ನಟ ಕಮಲ್ ಹಾಸನ್ ಅವರಿಂದ ಅದ್ಭುತವಾದ ಪ್ರತಿಕ್ರಿಯೆ ಸಿಕ್ಕಿದೆ. ಈ ಸಿನಿಮಾವನ್ನು ನೋಡಿದ ಅವರು ಆಡುಜೀವಿತಂ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ನಿದೇರ್ಶಕ ಬ್ಲೆಸ್ಸಿ ಮತ್ತು ಪೃಥ್ವಿರಾಜ್ ಅವರ ಪ್ರಯತ್ನಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಆಡುಜೀವಿತಂ ಸಿನಿಮಾ ವೀಕ್ಷಣೆ ಬಳಿಕ ಈ ಬಗ್ಗೆ ಮಾತಾಡಿದ ಕಮಲ್​ ಹಾಸನ್​ ಅವರು, ನಾನು ಮೊದಲು ಬ್ಲೆಸ್ಸಿಗೆ ಧನ್ಯವಾದ ತಿಳಿಸುತ್ತೇನೆ. ಇದು ನಿಜಕ್ಕೂ ಕಷ್ಟದ ಕೆಲಸ. ಈ ಸಿನಿಮಾ ವೀಕ್ಷಣೆಯ ನಡುವೆ ನಿಮ್ಮೆಲ್ಲರಿಗೂ ಹೆಚ್ಚು ನೀರು ಕುಡಿಯಬೇಕು ಅಂತ ಅನಿಸುತ್ತದೆ. ವಿಭಿನ್ನ ರೀತಿಯಲ್ಲಿ ಸಿನಿಮಾ ಮಾಡುವ ನಿಮ್ಮ ಬಾಯಾರಿಕೆಯೂ ಇಲ್ಲಿ ಎದ್ದು ಕಾಣುತ್ತಿದೆ ಎಂದಿದ್ದಾರೆ.

ಪೃಥ್ವಿರಾಜ್ ಈ ಸಿನಿಮಾಕ್ಕಾಗಿ ತುಂಬಾ ಕಷ್ಟಪಟ್ಟಿದ್ದಾರೆ. ವಿಶೇಷವಾಗಿ ಅವರು ಸ್ನಾನ ಮಾಡುವ ಕ್ಲಿಪ್​. ಅವನು ಇಷ್ಟು ದೂರ ಹೋಗುತ್ತಾನೆ ಎಂದು ನಾನು ಭಾವಿಸಿರಲಿಲ್ಲ. ಕ್ಯಾಮರಾಮನ್ ಕೆಲಸ ಕೂಡ ಅದ್ಭುತವಾಗಿ. ಇದನ್ನು ಸೆರೆ ಹಿಡಿಯುವುದು ತುಂಬಾ ಕಷ್ಟದ ವಿಚಾರ. ಸಿನಿಮಾ ನಿರ್ಮಾಪಕರಾಗಿ ನಾವು ಇದನ್ನು ಅರ್ಥ ಮಾಡಿಕೊಳ್ಳುತ್ತೇವೆ. ಈ ಸಿನಿಮಾಗಾಗಿ ಅವರು ಎಷ್ಟು ಪ್ರಯತ್ನ ಮಾಡಿದ್ದಾರೆ ಎಂದು ಪ್ರೇಕ್ಷಕರು ಸಹ ಅರ್ಥಮಾಡಿಕೊಳ್ಳಬೇಕೆಂದು ನಾನು ಬಯಸುತ್ತೇನೆ. ಅತ್ಯುತ್ತಮ ಚಿತ್ರ. ಜನರು ಈ ಚಿತ್ರಕ್ಕೆ ಬೆಂಬಲ ನೀಡಬೇಕೆಂದು ನಾನು ಬಯಸುತ್ತೇನೆ ಎಂದು ಹೇಳಿದ್ದಾರೆ. ಈ ಸಿನಿಮಾ ನೋಡಿದ ಮಣಿರತ್ನಂ ಅವರು ಕೂಡ ತೆರೆ ಹಿಂದೆ ಪಟ್ಟ ಕಷ್ಟದ ಬಗ್ಗೆ ಆಶ್ಚರ್ಯಪಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More