newsfirstkannada.com

×

ಮತದಾನ ದಿನವೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಕೌಸ್ತುಭ; ನನ್ನರಸಿ ರಾಧೆ ವರಿಸಿದ ಹುಡುಗ ಯಾರು?

Share :

Published April 26, 2024 at 4:51pm

Update April 26, 2024 at 4:45pm

    ಬಹಳ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ನನ್ನರಸಿ ರಾಧೆ ನಟಿ

    ನನ್ನರಸಿ ರಾಧೆ ಸೀರಿಯಲ್​​ ಮೂಲಕ ಖ್ಯಾತಿ ಪಡೆದುಕೊಂಡಿದ್ದ ನಟಿ ಇವರು

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ ಗ್ರ್ಯಾಂಡ್​ ಮದುವೆ ಫೋಟೋಸ್​

ನನ್ನರಸಿ ರಾಧೆ ಸೀರಿಯಲ್​​ ಖ್ಯಾತ ನಟಿ ಕೌಸ್ತುಭ ಮಣಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೌಸ್ತುಭ ಮಣಿ ಅವರು ನನ್ನರಿಸಿ ರಾಧೆ ಧಾರಾವಾಹಿಯಲ್ಲಿ ಇಂಚರಾ ಪಾತ್ರದ ಮೂಲಕ ಗುರುತಿಸಿಕೊಂಡಿದ್ದರು. ಈ ಪಾತ್ರದ ಮೂಲಕ ಅತೀ ಹೆಚ್ಚು ಫ್ಯಾನ್ಸ್​ಗಳನ್ನು ಸಂಪಾದಿಸಿಕೊಂಡ ನಟಿ ಇವರಾಗಿದ್ದರು.

ಇದೀಗ ಕೌಸ್ತುಭ ಮಣಿ ಅವರು ಸಿದ್ದಾಂತ್ ಸತೀಶ್ ಎಂಬುವವರ ಜೊತೆ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಂದಹಾಗೆ, ಸಿದ್ದಾಂತ್ ಸತೀಶ್ ಕೆನಡಾದಲ್ಲಿ ಎಂಬಿಎ ಪದವಿ ಪಡೆದಿದ್ದಾರೆ. ವಿದೇಶದಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಗುರು ಹಿರಿಯರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಸಿದ್ಧಾಂತ ಸತೀಶ್ ಜೊತೆ ಕೌಸ್ತುಭ ಮಣಿ ಪುಟ್ಟ ವಿಮಾನದಲ್ಲಿ ಬಹಳ ವಿಭಿನ್ನವಾಗಿ ಪ್ರಿ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿವೆ.

ಇದನ್ನೂ ಓದಿ: ಉದ್ಯಮಿ ದೀಪಕ್ ಚೌವ್ಹಾಣ್ ಜೊತೆ ಸಪ್ತಪದಿ ತುಳಿದ ಮಾಜಿ ಬಿಗ್​ಬಾಸ್​ ಸ್ಟಾರ್..!

ಇದೀಗ ಕಿರುತೆರೆ ನಟ ಹಾಗೂ ನಟಿಯರು ನಟಿ ಕೌಸ್ತುಭ ಮಣಿ ಮದುವೆಗೆ ಬಂದು ಶುಭ ಹಾರೈಸಿದ್ದಾರೆ. ಸದ್ಯ ನಟಿ ಕೌಸ್ತುಭ ಮಣಿ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ಈ ಫೋಟೋ ನೋಡಿದ ಅಭಿಮಾನಿ ನಟಿ ಕೌಸ್ತುಭ ಅವರಿಗೆ ಶುಭ ಹಾರೈಸುತ್ತಿದ್ದಾರೆ.

ಸದ್ಯ ನಟಿ ಕೌಸ್ತುಭ ಮಣಿ ಹ್ಯಾಟ್ರಿಕ್ ಹೀರೋ, ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಈ ಚಿತ್ರಕ್ಕೆ ಕೌಸ್ತುಭ ಮಣಿ ನಾಯಕಿಯಾಗಿ ಆಯ್ಕೆ ಮಾಡಲಾಗಿದೆ. ಕನ್ನಡದ ರಾಮಾಚಾರಿ 2.0 ಚಿತ್ರದಲ್ಲಿ ಕೌಸ್ತುಭ ಮಣಿ ನಟಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

ಮತದಾನ ದಿನವೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಕೌಸ್ತುಭ; ನನ್ನರಸಿ ರಾಧೆ ವರಿಸಿದ ಹುಡುಗ ಯಾರು?

https://newsfirstlive.com/wp-content/uploads/2024/04/Kaustubha-Mani.jpg

    ಬಹಳ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ನನ್ನರಸಿ ರಾಧೆ ನಟಿ

    ನನ್ನರಸಿ ರಾಧೆ ಸೀರಿಯಲ್​​ ಮೂಲಕ ಖ್ಯಾತಿ ಪಡೆದುಕೊಂಡಿದ್ದ ನಟಿ ಇವರು

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ ಗ್ರ್ಯಾಂಡ್​ ಮದುವೆ ಫೋಟೋಸ್​

ನನ್ನರಸಿ ರಾಧೆ ಸೀರಿಯಲ್​​ ಖ್ಯಾತ ನಟಿ ಕೌಸ್ತುಭ ಮಣಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೌಸ್ತುಭ ಮಣಿ ಅವರು ನನ್ನರಿಸಿ ರಾಧೆ ಧಾರಾವಾಹಿಯಲ್ಲಿ ಇಂಚರಾ ಪಾತ್ರದ ಮೂಲಕ ಗುರುತಿಸಿಕೊಂಡಿದ್ದರು. ಈ ಪಾತ್ರದ ಮೂಲಕ ಅತೀ ಹೆಚ್ಚು ಫ್ಯಾನ್ಸ್​ಗಳನ್ನು ಸಂಪಾದಿಸಿಕೊಂಡ ನಟಿ ಇವರಾಗಿದ್ದರು.

ಇದೀಗ ಕೌಸ್ತುಭ ಮಣಿ ಅವರು ಸಿದ್ದಾಂತ್ ಸತೀಶ್ ಎಂಬುವವರ ಜೊತೆ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಂದಹಾಗೆ, ಸಿದ್ದಾಂತ್ ಸತೀಶ್ ಕೆನಡಾದಲ್ಲಿ ಎಂಬಿಎ ಪದವಿ ಪಡೆದಿದ್ದಾರೆ. ವಿದೇಶದಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಗುರು ಹಿರಿಯರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಸಿದ್ಧಾಂತ ಸತೀಶ್ ಜೊತೆ ಕೌಸ್ತುಭ ಮಣಿ ಪುಟ್ಟ ವಿಮಾನದಲ್ಲಿ ಬಹಳ ವಿಭಿನ್ನವಾಗಿ ಪ್ರಿ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿವೆ.

ಇದನ್ನೂ ಓದಿ: ಉದ್ಯಮಿ ದೀಪಕ್ ಚೌವ್ಹಾಣ್ ಜೊತೆ ಸಪ್ತಪದಿ ತುಳಿದ ಮಾಜಿ ಬಿಗ್​ಬಾಸ್​ ಸ್ಟಾರ್..!

ಇದೀಗ ಕಿರುತೆರೆ ನಟ ಹಾಗೂ ನಟಿಯರು ನಟಿ ಕೌಸ್ತುಭ ಮಣಿ ಮದುವೆಗೆ ಬಂದು ಶುಭ ಹಾರೈಸಿದ್ದಾರೆ. ಸದ್ಯ ನಟಿ ಕೌಸ್ತುಭ ಮಣಿ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ಈ ಫೋಟೋ ನೋಡಿದ ಅಭಿಮಾನಿ ನಟಿ ಕೌಸ್ತುಭ ಅವರಿಗೆ ಶುಭ ಹಾರೈಸುತ್ತಿದ್ದಾರೆ.

ಸದ್ಯ ನಟಿ ಕೌಸ್ತುಭ ಮಣಿ ಹ್ಯಾಟ್ರಿಕ್ ಹೀರೋ, ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಈ ಚಿತ್ರಕ್ಕೆ ಕೌಸ್ತುಭ ಮಣಿ ನಾಯಕಿಯಾಗಿ ಆಯ್ಕೆ ಮಾಡಲಾಗಿದೆ. ಕನ್ನಡದ ರಾಮಾಚಾರಿ 2.0 ಚಿತ್ರದಲ್ಲಿ ಕೌಸ್ತುಭ ಮಣಿ ನಟಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

Load More