newsfirstkannada.com

‘ದರ್ಶನ್​​ ಸರ್​ಗೋಸ್ಕರ ದೇವರಲ್ಲಿ ಪ್ರಾರ್ಥನೆ ಮಾಡ್ತೀನಿ’.. ನಟಿ ಸಂಜನಾ ಗಲ್ರಾನಿ ವಿಡಿಯೋ ರಿಲೀಸ್​

Share :

Published June 11, 2024 at 5:50pm

    ಕೊಲೆ ಕೇಸ್‌ನಲ್ಲಿ ದರ್ಶನ್ ಅರೆಸ್ಟ್ ಸುದ್ದಿ ಕೇಳಿ ಚಿತ್ರರಂಗವೇ ಫುಲ್ ಶಾಕ್

    ಸ್ಯಾಂಡಲ್​ವುಡ್ ನಟ ದರ್ಶನ್, ಪವಿತ್ರ ಗೌಡ ಸೇರಿ 13 ಮಂದಿ ಅರೆಸ್ಟ್​

    ದಯವಿಟ್ಟು ಅರೆಸ್ಟ್​ ಆಗಬಾರದು ಅಂತ ಈಗಲೇ ದೇವರಲ್ಲಿ ಪ್ರಾರ್ಥಿಸುತ್ತೀನಿ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಅರೆಸ್ಟ್​​ ಮಾಡಿದ್ದಾರೆ. ನಟ ದರ್ಶನ್​ ಜೊತೆಗೆ 13 ಆರೋಪಿಗಳನ್ನು ಕೊಲೆ ಕೇಸ್​ನಲ್ಲಿ ಬಂಧಿಸಲಾಗಿದೆ. ರೇಣುಕಾಸ್ವಾಮಿ ಕ್ರೂರ ಕೊಲೆ ಕೇಸ್‌ಗೆ ದರ್ಶನ್ ಅಭಿಮಾನಿಗಳು ಹಾಗೂ​​ ಇಡೀ ಕನ್ನಡ ಚಿತ್ರರಂಗವೇ ಶಾಕ್​ಗೆ ಒಳಗಾಗಿದೆ.

ಇದನ್ನೂ ಓದಿ: VIDEO: ಛೇ.. ಇದು ನಾಚಿಕೆಗೇಡಿನ ಸಂಗತಿ; ದರ್ಶನ್​ಗೆ ಶಿಕ್ಷೆ ಆಗ್ಲೇಬೇಕು- ಭಾವನಾ ಬೆಳಗೆರೆ ಆಕ್ರೋಶ

ಇದನ್ನೂ ಓದಿ: ಒಂದೆರಡಲ್ಲ.. ನಟ ದರ್ಶನ್​ ಮೇಲಿದೆ ಸಾಲು ಸಾಲು ಆರೋಪ! ಇಲ್ಲಿದೆ ಲಿಸ್ಟ್​

ದರ್ಶನ್ ಅರೆಸ್ಟ್ ಸುದ್ದಿ ಕೇಳಿ ಫುಲ್​ ಶಾಕ್​ ಆಗಿದ್ದಾನೆ ಎಂದು ನಟಿ ಸಂಜನಾ ಗಲ್ರಾನಿ ಹೇಳಿಕೊಂಡಿದ್ದಾರೆ. ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ವಿಡಿಯೋವನ್ನು ಶೇರ್ ಮಾಡಿಕೊಳ್ಳುವ ಮೂಲಕ ದೇವರಲ್ಲಿ ಪ್ರಾರ್ಥಿಸುತ್ತೇನೆ ದರ್ಶನ್​ ಸರ್​ಗೆ ಶಿಕ್ಷೆ ಆಗಬಾರದು ಅಂತ ಹೇಳಿದ್ದಾರೆ. ಇದೇ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

ಸಂಜನಾ ಶೇರ್ ಮಾಡಿಕೊಂಡ ವಿಡಿಯೋದಲ್ಲಿ, ನ್ಯೂಸ್​ನಲ್ಲಿ ನೋಡುತ್ತಿರೋ ಸುದ್ದಿ ನೋಡಿ ನನಗೆ ಶಾಕ್​ ಆಗಿದೆ. ಈ ಬಗ್ಗೆ ನನಗೆ ಚಿಂತೆ ಕಾಡುತ್ತಿದೆ. ಈಗಾಗಲೇ ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ಜೊತೆಗೆ ಪೂಜೆ ಕೂಡ ಮಾಡುತ್ತೇನೆ. ಪೊಲೀಸರು ಕೇವಲ ದರ್ಶನ್​ ಸರ್​ಗೆ ವಿಚಾರಣೆ ಕರೆದುಕೊಂಡು ಹೋಗಿದ್ದಾರೆ ಅಂತ. ದಯವಿಟ್ಟು ಅವರು ಅರೆಸ್ಟ್​ ಆಗಬಾರದು ಅಂತ ಈಗಲೇ ದೇವರಲ್ಲಿ ಕುಳಿತುಕೊಂಡು ಕೇಳಿಕೊಳ್ಳುತ್ತೇನೆ. ದರ್ಶನ್​ ಸರ್​ ಬೇಗ ರಿಲೀಸ್​ ಆಗ್ತಾರೆ ಅಂತ ಕಾಯುತ್ತಿದ್ದೇನೆ ಅಂತ ಹೇಳಿಕೊಂಡಿದ್ದಾರೆ.

ಏನಿದು ಘಟನೆ..?

ನಟ ದರ್ಶನ್ ಅವರ ಮೇಲೆ ಹಲ್ಲೆ ಹಾಗೂ ಕೊಲೆ ಮಾಡಿದ ಆರೋಪ ಕೇಳಿ ಬಂದಿದೆ. ಈ ಸಂಬಂಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ​ನಟ ದರ್ಶನ್​​, ನಟಿ ಪವಿತ್ರ ಗೌಡ ಸೇರಿ ಒಟ್ಟು 13 ಆರೋಪಿಗಳು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಕೊಲೆಯಾದ ರೇಣುಕಾಸ್ವಾಮಿ ಚಿತ್ರದುರ್ಗ ಮೂಲದವನಾಗಿದ್ದು, ನಟ ದರ್ಶನ್​ನ ಅಭಿಮಾನಿಯಾಗಿದ್ದರು ಎಂದು ಹೇಳಲಾಗುತ್ತಿದೆ. ದರ್ಶನ್​ ಮತ್ತು ಪತ್ನಿ ವಿಜಯಲಕ್ಷ್ಮೀ ನಡುವೆ ಪವಿತ್ರಾ ಗೌಡ ಬಂದ ಸಂಬಂಧ ನಟಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಮೆಸೇಜ್​ ಮಾಡಿದ್ದನಂತೆ. ಈ ವಿಚಾರವನ್ನು ಪವಿತ್ರಾ ಗೌಡ ದರ್ಶನ್​ ಬಳಿ ಹೇಳಿಕೊಂಡಿದ್ದು, ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕರೆಸಿಕೊಂಡು ಬಳಿಕ ಆತನಿಗೆ ದರ್ಶನ್​ ಮತ್ತು ಆತನ ಸ್ನೇಹಿತರು ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಅಮಾನುಷವಾಗಿ ಥಳಿಸಿದ್ದಾರೆ. ಥಳಿಸಿದ ಏಟಿಗೆ ಯುವಕ ಸಾವನ್ನಪ್ಪಿದ್ದಾನೆ. ನಂತರ ಮೃತದೇಹವನ್ನು ಸುಮನಹಳ್ಳಿ ಮೋರಿ ಬಳಿ ತಂದು ಎಸೆದಿದ್ದಾರೆ.

ಕೊಲೆಯಾದ ಅಭಿಮಾನಿ ರೇಣುಕಾಸ್ವಾಮಿ ಚಿತ್ರದುರ್ಗ ನಗರದ VRS ಬಡಾವಣೆಯ ನಿವಾಸಿ. ಕೆಇಬಿ ನಿವೃತ್ತ ನೌಕರ ಕಾಶಿನಾಥ್ ಶಿವಣ್ಣ ಗೌಡರ್, ರತ್ನಪ್ರಭಾ ಅವರ ಪುತ್ರ ರೇಣುಕಾಸ್ವಾಮಿ. 2023 ಜೂನ್ 28ರಂದು ರೇಣುಕಾಸ್ವಾಮಿ ವಿವಾಹ ಆಗಿದ್ದ. ಮದುವೆಯಾಗಿ ವರ್ಷ ತುಂಬುವ ಮುನ್ನವೇ ರೇಣುಕಾಸ್ವಾಮಿ ಕೊಲೆಯಾಗಿದ್ದಾನೆ. ಇನ್ನು, ಕೊಲೆಯಾದ ರೇಣುಕಾಸ್ವಾಮಿ ಮೃತದೇಹವು ಸತ್ವ ಅನುಗ್ರಹ ಅಪಾರ್ಟ್​ಮೆಂಟ್​ನ ಮುಂಭಾಗದಲ್ಲಿರುವ ಮೋರಿಯಲ್ಲಿ ಪತ್ತೆಯಾಗಿದೆ. ಸದ್ಯ ಬೌರಿಂಗ್ ಆಸ್ಪತ್ರೆಯಲ್ಲಿ ಮೆಡಿಕಲ್ ಚೆಕಪ್ ನಂತರ ಕೋರಮಂಗಲದ ನ್ಯಾಯಾಧೀಶರ ನಿವಾಸಕ್ಕೆ ನಟ ದರ್ಶನ್ ಸೇರಿ 13 ಮಂದಿ ಹಾಜರಾಗಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ದರ್ಶನ್​​ ಸರ್​ಗೋಸ್ಕರ ದೇವರಲ್ಲಿ ಪ್ರಾರ್ಥನೆ ಮಾಡ್ತೀನಿ’.. ನಟಿ ಸಂಜನಾ ಗಲ್ರಾನಿ ವಿಡಿಯೋ ರಿಲೀಸ್​

https://newsfirstlive.com/wp-content/uploads/2024/06/darshan-13.jpg

    ಕೊಲೆ ಕೇಸ್‌ನಲ್ಲಿ ದರ್ಶನ್ ಅರೆಸ್ಟ್ ಸುದ್ದಿ ಕೇಳಿ ಚಿತ್ರರಂಗವೇ ಫುಲ್ ಶಾಕ್

    ಸ್ಯಾಂಡಲ್​ವುಡ್ ನಟ ದರ್ಶನ್, ಪವಿತ್ರ ಗೌಡ ಸೇರಿ 13 ಮಂದಿ ಅರೆಸ್ಟ್​

    ದಯವಿಟ್ಟು ಅರೆಸ್ಟ್​ ಆಗಬಾರದು ಅಂತ ಈಗಲೇ ದೇವರಲ್ಲಿ ಪ್ರಾರ್ಥಿಸುತ್ತೀನಿ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಅರೆಸ್ಟ್​​ ಮಾಡಿದ್ದಾರೆ. ನಟ ದರ್ಶನ್​ ಜೊತೆಗೆ 13 ಆರೋಪಿಗಳನ್ನು ಕೊಲೆ ಕೇಸ್​ನಲ್ಲಿ ಬಂಧಿಸಲಾಗಿದೆ. ರೇಣುಕಾಸ್ವಾಮಿ ಕ್ರೂರ ಕೊಲೆ ಕೇಸ್‌ಗೆ ದರ್ಶನ್ ಅಭಿಮಾನಿಗಳು ಹಾಗೂ​​ ಇಡೀ ಕನ್ನಡ ಚಿತ್ರರಂಗವೇ ಶಾಕ್​ಗೆ ಒಳಗಾಗಿದೆ.

ಇದನ್ನೂ ಓದಿ: VIDEO: ಛೇ.. ಇದು ನಾಚಿಕೆಗೇಡಿನ ಸಂಗತಿ; ದರ್ಶನ್​ಗೆ ಶಿಕ್ಷೆ ಆಗ್ಲೇಬೇಕು- ಭಾವನಾ ಬೆಳಗೆರೆ ಆಕ್ರೋಶ

ಇದನ್ನೂ ಓದಿ: ಒಂದೆರಡಲ್ಲ.. ನಟ ದರ್ಶನ್​ ಮೇಲಿದೆ ಸಾಲು ಸಾಲು ಆರೋಪ! ಇಲ್ಲಿದೆ ಲಿಸ್ಟ್​

ದರ್ಶನ್ ಅರೆಸ್ಟ್ ಸುದ್ದಿ ಕೇಳಿ ಫುಲ್​ ಶಾಕ್​ ಆಗಿದ್ದಾನೆ ಎಂದು ನಟಿ ಸಂಜನಾ ಗಲ್ರಾನಿ ಹೇಳಿಕೊಂಡಿದ್ದಾರೆ. ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ವಿಡಿಯೋವನ್ನು ಶೇರ್ ಮಾಡಿಕೊಳ್ಳುವ ಮೂಲಕ ದೇವರಲ್ಲಿ ಪ್ರಾರ್ಥಿಸುತ್ತೇನೆ ದರ್ಶನ್​ ಸರ್​ಗೆ ಶಿಕ್ಷೆ ಆಗಬಾರದು ಅಂತ ಹೇಳಿದ್ದಾರೆ. ಇದೇ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

ಸಂಜನಾ ಶೇರ್ ಮಾಡಿಕೊಂಡ ವಿಡಿಯೋದಲ್ಲಿ, ನ್ಯೂಸ್​ನಲ್ಲಿ ನೋಡುತ್ತಿರೋ ಸುದ್ದಿ ನೋಡಿ ನನಗೆ ಶಾಕ್​ ಆಗಿದೆ. ಈ ಬಗ್ಗೆ ನನಗೆ ಚಿಂತೆ ಕಾಡುತ್ತಿದೆ. ಈಗಾಗಲೇ ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ಜೊತೆಗೆ ಪೂಜೆ ಕೂಡ ಮಾಡುತ್ತೇನೆ. ಪೊಲೀಸರು ಕೇವಲ ದರ್ಶನ್​ ಸರ್​ಗೆ ವಿಚಾರಣೆ ಕರೆದುಕೊಂಡು ಹೋಗಿದ್ದಾರೆ ಅಂತ. ದಯವಿಟ್ಟು ಅವರು ಅರೆಸ್ಟ್​ ಆಗಬಾರದು ಅಂತ ಈಗಲೇ ದೇವರಲ್ಲಿ ಕುಳಿತುಕೊಂಡು ಕೇಳಿಕೊಳ್ಳುತ್ತೇನೆ. ದರ್ಶನ್​ ಸರ್​ ಬೇಗ ರಿಲೀಸ್​ ಆಗ್ತಾರೆ ಅಂತ ಕಾಯುತ್ತಿದ್ದೇನೆ ಅಂತ ಹೇಳಿಕೊಂಡಿದ್ದಾರೆ.

ಏನಿದು ಘಟನೆ..?

ನಟ ದರ್ಶನ್ ಅವರ ಮೇಲೆ ಹಲ್ಲೆ ಹಾಗೂ ಕೊಲೆ ಮಾಡಿದ ಆರೋಪ ಕೇಳಿ ಬಂದಿದೆ. ಈ ಸಂಬಂಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ​ನಟ ದರ್ಶನ್​​, ನಟಿ ಪವಿತ್ರ ಗೌಡ ಸೇರಿ ಒಟ್ಟು 13 ಆರೋಪಿಗಳು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಕೊಲೆಯಾದ ರೇಣುಕಾಸ್ವಾಮಿ ಚಿತ್ರದುರ್ಗ ಮೂಲದವನಾಗಿದ್ದು, ನಟ ದರ್ಶನ್​ನ ಅಭಿಮಾನಿಯಾಗಿದ್ದರು ಎಂದು ಹೇಳಲಾಗುತ್ತಿದೆ. ದರ್ಶನ್​ ಮತ್ತು ಪತ್ನಿ ವಿಜಯಲಕ್ಷ್ಮೀ ನಡುವೆ ಪವಿತ್ರಾ ಗೌಡ ಬಂದ ಸಂಬಂಧ ನಟಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಮೆಸೇಜ್​ ಮಾಡಿದ್ದನಂತೆ. ಈ ವಿಚಾರವನ್ನು ಪವಿತ್ರಾ ಗೌಡ ದರ್ಶನ್​ ಬಳಿ ಹೇಳಿಕೊಂಡಿದ್ದು, ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕರೆಸಿಕೊಂಡು ಬಳಿಕ ಆತನಿಗೆ ದರ್ಶನ್​ ಮತ್ತು ಆತನ ಸ್ನೇಹಿತರು ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಅಮಾನುಷವಾಗಿ ಥಳಿಸಿದ್ದಾರೆ. ಥಳಿಸಿದ ಏಟಿಗೆ ಯುವಕ ಸಾವನ್ನಪ್ಪಿದ್ದಾನೆ. ನಂತರ ಮೃತದೇಹವನ್ನು ಸುಮನಹಳ್ಳಿ ಮೋರಿ ಬಳಿ ತಂದು ಎಸೆದಿದ್ದಾರೆ.

ಕೊಲೆಯಾದ ಅಭಿಮಾನಿ ರೇಣುಕಾಸ್ವಾಮಿ ಚಿತ್ರದುರ್ಗ ನಗರದ VRS ಬಡಾವಣೆಯ ನಿವಾಸಿ. ಕೆಇಬಿ ನಿವೃತ್ತ ನೌಕರ ಕಾಶಿನಾಥ್ ಶಿವಣ್ಣ ಗೌಡರ್, ರತ್ನಪ್ರಭಾ ಅವರ ಪುತ್ರ ರೇಣುಕಾಸ್ವಾಮಿ. 2023 ಜೂನ್ 28ರಂದು ರೇಣುಕಾಸ್ವಾಮಿ ವಿವಾಹ ಆಗಿದ್ದ. ಮದುವೆಯಾಗಿ ವರ್ಷ ತುಂಬುವ ಮುನ್ನವೇ ರೇಣುಕಾಸ್ವಾಮಿ ಕೊಲೆಯಾಗಿದ್ದಾನೆ. ಇನ್ನು, ಕೊಲೆಯಾದ ರೇಣುಕಾಸ್ವಾಮಿ ಮೃತದೇಹವು ಸತ್ವ ಅನುಗ್ರಹ ಅಪಾರ್ಟ್​ಮೆಂಟ್​ನ ಮುಂಭಾಗದಲ್ಲಿರುವ ಮೋರಿಯಲ್ಲಿ ಪತ್ತೆಯಾಗಿದೆ. ಸದ್ಯ ಬೌರಿಂಗ್ ಆಸ್ಪತ್ರೆಯಲ್ಲಿ ಮೆಡಿಕಲ್ ಚೆಕಪ್ ನಂತರ ಕೋರಮಂಗಲದ ನ್ಯಾಯಾಧೀಶರ ನಿವಾಸಕ್ಕೆ ನಟ ದರ್ಶನ್ ಸೇರಿ 13 ಮಂದಿ ಹಾಜರಾಗಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More