/newsfirstlive-kannada/media/post_attachments/wp-content/uploads/2024/05/akarshbyramudi.jpg)
ಧಾರಾವಾಹಿಯ ನಟ ನಟಿಯರಿಗೆ ಈ ವರ್ಷ ಕಲ್ಯಾಣ ಯೋಗ ಅಂತಾ ಕಾಣ್ಸುತ್ತೆ. ಮದುವೆಯ ಪವಿತ್ರ ಬಂಧನದಲ್ಲಿ ಹಲವು ಸೀರಿಯಲ್​ ಸ್ಟಾರ್ಸ್​ ಬಂಧಿಯಾಗುತ್ತಿದ್ದಾರೆ. ಈಗ ಆ ಸಾಲಿಗೆ ಸೀತಾವಲ್ಲಭ ನಟ ಕೂಡ ಸೇರ್ಪಡೆಯಾಗಿದ್ದು, ಪ್ರೇಮ ಖೈದಿ ಆಗಿದ್ದ ನಟ ಆಕರ್ಷ್​ ಬೈರಮುಡಿ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ.
/newsfirstlive-kannada/media/post_attachments/wp-content/uploads/2024/05/akarshbyramudi1.jpg)
ಹೌದು, ಸೀತಾವಲ್ಲಭ, ಲಕ್ಷ್ಮೀ ಬಾರಮ್ಮ ಸೇರಿದಂತೆ ಕನ್ನಡದಲ್ಲಿ ಹಲವು ಸೂಪರ್​ ಹಿಟ್​​ ಧಾರಾವಾಹಿಗಳಲ್ಲಿ ನಾಯಕ ನಟನಾಗಿ ಗಮನ ಸೇಳಿದಿದ್ದ ನಟ ಆಕರ್ಷ್​ ಬೈರಮುಡಿ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹು ದಿನದ ಜೀವದ ಗೆಳತಿಯಾಗಿದ್ದ ಐಶ್ವರ್ಯ ಅವರ ಜೊತೆ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
/newsfirstlive-kannada/media/post_attachments/wp-content/uploads/2024/05/akarshbyramudi2.jpg)
ಇದನ್ನೂ ಓದಿ: ಪಶು ವೈದ್ಯರು ಕೊಟ್ಟ ಗುದ್ದಿಗೆ ಜ್ವರದಿಂದ ಬಳಲ್ತಿದ್ದ ವ್ಯಕ್ತಿ ಸಾವು ಆರೋಪ.. ಸಾವು ತಂದ ಆತ್ಮೀಯತೆ..!
ಕನ್ನಡದಿಂದ ತೆಲುಗು, ತಮಿಳು ಭಾಷೆಗಳಿಗೆ ಪರಿಚಿತರಾದ ಆಕರ್ಷ್​ಗೆ ಉತ್ತಮ ಅವಕಾಶಗಳು ಒದಗಿಬಂದವು. ತೆಲುಗಿನಲ್ಲಿ ಯಶಸ್ವಿ, ಜನಪ್ರಿಯ ನಟನಾಗಿ ಗುರುತಿಸಿಕೊಂಡಿದ್ದಾರೆ. ತೆಲುಗು ವೀಕ್ಷಕರ ನೆಚ್ಚಿನ ನಟ ಆಕರ್ಷ್​. ಸಾಂಪ್ರದಾಯಕ ಶೈಲಿಯಲ್ಲಿ ಮದುವೆ ಶಾಸ್ತ್ರಗಳು ಜರುಗಿದ್ದು, ನಟಿ ದೀಪಾ ಮಾನೆ, ನಟ, ನಿರೂಪಕ ಪ್ರದೀಪ್​ ಮಾಚಿರಾಜು ಸೇರಿದಂತೆ ಮೂರು ಭಾಷೆಯ ಕಲಾವಿದರು ಭಾಗಿ ಆಗಿ ನವಜೋಡಿಗೆ ಶುಭಕೊರಿದ್ದಾರೆ.
View this post on Instagram
ಆಕರ್ಷ್​​ ಕೈಹಿಡಿದಿರೋ ಚಲುವೆ ಐಶ್ವರ್ಯ ಮೂಲತಃ ಮೈಸೂರಿನವರು. ಇಬ್ಬರದ್ದು ಲಾಂಗೇಷ್ಟು ಲವ್​ ಸ್ಟೋರಿ. ಸದ್ಯ ಗುರುಹಿರಿಯರ ಸಮ್ಮುಖದಲ್ಲಿ ಬಾಳ ಸಂಗಾತಿ ಆಗಿದ್ದಾರೆ. ಸದ್ಯ ಈ ಮದುವೆಯ ಫೋಟೋಗನ್ನು ನಟ ಆಕರ್ಷ್​ ಬೈರಮುಡಿ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಈ ಫೋಟೋ ನೋಡಿದ ಅಭಿಮಾನಿಗಳು ಹೊಸ ದಂಪತಿಗೆ ಶುಭ ಹಾರೈಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us