newsfirstkannada.com

‘ಆರ್​​​ಸಿಬಿ ಫ್ಯಾನ್ಸ್​ಗಾಗಿ ನನ್ನ ಹೃದಯ ಮಿಡಿಯುತ್ತೆ’- ಅಂಬಾಟಿ ರಾಯುಡು ಹೊಸ ಡ್ರಾಮಾ!

Share :

Published May 27, 2024 at 8:48pm

    2ನೇ ಬಾರಿಗೆ ಆರೆಂಜ್​ ಕ್ಯಾಪ್​ ಗೆದ್ದ ಆರ್​​ಸಿಬಿ ಮಾಜಿ ಕ್ಯಾಪ್ಟನ್​​ ಕೊಹ್ಲಿ

    ಮತ್ತೆ ಆರ್​​ಸಿಬಿ ಮತ್ತು ಕೊಹ್ಲಿ ಕಾಲೆಳೆದ ಮಾಜಿ ಕ್ರಿಕೆಟರ್​ ರಾಯುಡು

    ಈ ಬೆನ್ನಲ್ಲೇ ಆರ್​​ಸಿಬಿ ಫ್ಯಾನ್ಸ್​ಗಾಗಿ ನನ್ನ ಹೃದಯ ಮಿಡಿಯುತ್ತೆ ಎಂದ್ರು!

ಬರೋಬ್ಬರಿ 17 ವರ್ಷಗಳಿಂದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡವನ್ನು ಬೆಂಬಲಿಸಿದ ಎಲ್ಲಾ ಆರ್​​ಸಿಬಿ ಫ್ಯಾನ್ಸ್​ಗಾಗಿ ನನ್ನ ಹೃದಯ ನಿಜವಾಗಿ ಮಿಡಿಯುತ್ತದೆ ಎಂದು ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಮಾಜಿ ಕ್ರಿಕೆಟರ್​ ಅಂಬಾಟಿ ರಾಯುಡು ಹೊಸ ಡ್ರಾಮಾ ಶುರು ಮಾಡಿದ್ದಾರೆ.

ವಿರಾಟ್​​​ ಕೊಹ್ಲಿಯನ್ನು ವಿಮರ್ಶೆ ಮಾಡಿದ ಬೆನ್ನಲ್ಲೇ ಮತ್ತೆ ಮಾತಾಡಿದ ಅಂಬಾಟಿ ರಾಯುಡು, ವೈಯಕ್ತಿಕ ಮೈಲಿಗಲ್ಲುಗಳಿಗಿಂತ ಮುಂಚಿತವಾಗಿ ಮ್ಯಾನೇಜ್‌ಮೆಂಟ್ ತಂಡದ ಬಗ್ಗೆ ಹಿತಾಸಕ್ತಿ ಹೊಂದಿರಬೇಕು. ಆ ರೀತಿಯ ನಾಯಕನನ್ನು ಮ್ಯಾನೇಜ್​ಮೆಂಟ್​ ತರಬೇಕು. ಆಗ ಆರ್‌ಸಿಬಿ ಹಲವು ಪ್ರಶಸ್ತಿಗಳನ್ನು ಗೆಲ್ಲಲಿದೆ ಎಂದರು.

ಆರ್​​ಸಿಬಿ ಎಷ್ಟು ಅದ್ಭುತ ಆಟಗಾರರನ್ನು ಕೈ ಬಿಡಲಾಗಿದೆ ಎಂಬುದನ್ನು ನೆನಪಿಸಿಕೊಳ್ಳಲಿ. ತಂಡದ ಹಿತಾಸಕ್ತಿಗಳನ್ನು ಕಾಪಾಡುವ ಆಟಗಾರರನ್ನು ತರಲು ಮ್ಯಾನೇಜ್‌ಮೆಂಟ್ ಪ್ರಯತ್ನ ಮಾಡಲಿ. ಮುಂದಿನ ಸೀಸನ್​​ನಿಂದಲೇ ಈ ಕೆಲಸ ಶುರುವಾಗಲಿ ಎಂದರು.

ಈ ಹಿಂದೆ ಆರೆಂಜ್ ಕ್ಯಾಪ್‌ ಗೆಲ್ಲೋದು ವೈಯಕ್ತಿಕ. ಯಾವಾಗಲೂ ವೈಯಕ್ತಿಕ ಪ್ರಶಸ್ತಿಗಳನ್ನು ಗೆದ್ದರೆ ಫ್ರಾಂಚೈಸಿಗೆ ಐಪಿಎಲ್ ಟ್ರೋಫಿ ಗೆಲ್ಲಲು ಸಾಧ್ಯವಿಲ್ಲ. ಐಪಿಎಲ್​ ಟ್ರೋಫಿ ತಂಡದ ಸಾಮೂಹಿಕ ಪ್ರಯತ್ನದಿಂದ ಮಾತ್ರ ಸಾಧ್ಯ ಎಂದು ಆರೇಂಜ್​ ಕ್ಯಾಪ್​ ಗೆದ್ದಿದ್ದ ವಿರಾಟ್​​ ಕೊಹ್ಲಿಯನ್ನು ಅಂಬಾಟಿ ರಾಯುಡು ಹೀಯಾಳಿಸಿದ್ದರು.

ಇದನ್ನೂ ಓದಿ: ಮತ್ತೆ ಆರ್​​ಸಿಬಿಯನ್ನ ಕೆಣಕಿದ ಧೋನಿ ಶಿಷ್ಯ.. ಕೊಹ್ಲಿಯನ್ನ ಕಂಡ್ರೆ ರಾಯಡುಗೆ ಉರಿ ಯಾಕೆ?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

‘ಆರ್​​​ಸಿಬಿ ಫ್ಯಾನ್ಸ್​ಗಾಗಿ ನನ್ನ ಹೃದಯ ಮಿಡಿಯುತ್ತೆ’- ಅಂಬಾಟಿ ರಾಯುಡು ಹೊಸ ಡ್ರಾಮಾ!

https://newsfirstlive.com/wp-content/uploads/2024/05/Ambati-Rayudu_Kohli1.jpg

    2ನೇ ಬಾರಿಗೆ ಆರೆಂಜ್​ ಕ್ಯಾಪ್​ ಗೆದ್ದ ಆರ್​​ಸಿಬಿ ಮಾಜಿ ಕ್ಯಾಪ್ಟನ್​​ ಕೊಹ್ಲಿ

    ಮತ್ತೆ ಆರ್​​ಸಿಬಿ ಮತ್ತು ಕೊಹ್ಲಿ ಕಾಲೆಳೆದ ಮಾಜಿ ಕ್ರಿಕೆಟರ್​ ರಾಯುಡು

    ಈ ಬೆನ್ನಲ್ಲೇ ಆರ್​​ಸಿಬಿ ಫ್ಯಾನ್ಸ್​ಗಾಗಿ ನನ್ನ ಹೃದಯ ಮಿಡಿಯುತ್ತೆ ಎಂದ್ರು!

ಬರೋಬ್ಬರಿ 17 ವರ್ಷಗಳಿಂದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡವನ್ನು ಬೆಂಬಲಿಸಿದ ಎಲ್ಲಾ ಆರ್​​ಸಿಬಿ ಫ್ಯಾನ್ಸ್​ಗಾಗಿ ನನ್ನ ಹೃದಯ ನಿಜವಾಗಿ ಮಿಡಿಯುತ್ತದೆ ಎಂದು ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಮಾಜಿ ಕ್ರಿಕೆಟರ್​ ಅಂಬಾಟಿ ರಾಯುಡು ಹೊಸ ಡ್ರಾಮಾ ಶುರು ಮಾಡಿದ್ದಾರೆ.

ವಿರಾಟ್​​​ ಕೊಹ್ಲಿಯನ್ನು ವಿಮರ್ಶೆ ಮಾಡಿದ ಬೆನ್ನಲ್ಲೇ ಮತ್ತೆ ಮಾತಾಡಿದ ಅಂಬಾಟಿ ರಾಯುಡು, ವೈಯಕ್ತಿಕ ಮೈಲಿಗಲ್ಲುಗಳಿಗಿಂತ ಮುಂಚಿತವಾಗಿ ಮ್ಯಾನೇಜ್‌ಮೆಂಟ್ ತಂಡದ ಬಗ್ಗೆ ಹಿತಾಸಕ್ತಿ ಹೊಂದಿರಬೇಕು. ಆ ರೀತಿಯ ನಾಯಕನನ್ನು ಮ್ಯಾನೇಜ್​ಮೆಂಟ್​ ತರಬೇಕು. ಆಗ ಆರ್‌ಸಿಬಿ ಹಲವು ಪ್ರಶಸ್ತಿಗಳನ್ನು ಗೆಲ್ಲಲಿದೆ ಎಂದರು.

ಆರ್​​ಸಿಬಿ ಎಷ್ಟು ಅದ್ಭುತ ಆಟಗಾರರನ್ನು ಕೈ ಬಿಡಲಾಗಿದೆ ಎಂಬುದನ್ನು ನೆನಪಿಸಿಕೊಳ್ಳಲಿ. ತಂಡದ ಹಿತಾಸಕ್ತಿಗಳನ್ನು ಕಾಪಾಡುವ ಆಟಗಾರರನ್ನು ತರಲು ಮ್ಯಾನೇಜ್‌ಮೆಂಟ್ ಪ್ರಯತ್ನ ಮಾಡಲಿ. ಮುಂದಿನ ಸೀಸನ್​​ನಿಂದಲೇ ಈ ಕೆಲಸ ಶುರುವಾಗಲಿ ಎಂದರು.

ಈ ಹಿಂದೆ ಆರೆಂಜ್ ಕ್ಯಾಪ್‌ ಗೆಲ್ಲೋದು ವೈಯಕ್ತಿಕ. ಯಾವಾಗಲೂ ವೈಯಕ್ತಿಕ ಪ್ರಶಸ್ತಿಗಳನ್ನು ಗೆದ್ದರೆ ಫ್ರಾಂಚೈಸಿಗೆ ಐಪಿಎಲ್ ಟ್ರೋಫಿ ಗೆಲ್ಲಲು ಸಾಧ್ಯವಿಲ್ಲ. ಐಪಿಎಲ್​ ಟ್ರೋಫಿ ತಂಡದ ಸಾಮೂಹಿಕ ಪ್ರಯತ್ನದಿಂದ ಮಾತ್ರ ಸಾಧ್ಯ ಎಂದು ಆರೇಂಜ್​ ಕ್ಯಾಪ್​ ಗೆದ್ದಿದ್ದ ವಿರಾಟ್​​ ಕೊಹ್ಲಿಯನ್ನು ಅಂಬಾಟಿ ರಾಯುಡು ಹೀಯಾಳಿಸಿದ್ದರು.

ಇದನ್ನೂ ಓದಿ: ಮತ್ತೆ ಆರ್​​ಸಿಬಿಯನ್ನ ಕೆಣಕಿದ ಧೋನಿ ಶಿಷ್ಯ.. ಕೊಹ್ಲಿಯನ್ನ ಕಂಡ್ರೆ ರಾಯಡುಗೆ ಉರಿ ಯಾಕೆ?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Load More