2ನೇ ಬಾರಿಗೆ ಆರೆಂಜ್ ಕ್ಯಾಪ್ ಗೆದ್ದ ಆರ್ಸಿಬಿ ಮಾಜಿ ಕ್ಯಾಪ್ಟನ್ ಕೊಹ್ಲಿ
ಮತ್ತೆ ಆರ್ಸಿಬಿ ಮತ್ತು ಕೊಹ್ಲಿ ಕಾಲೆಳೆದ ಮಾಜಿ ಕ್ರಿಕೆಟರ್ ರಾಯುಡು
ಈ ಬೆನ್ನಲ್ಲೇ ಆರ್ಸಿಬಿ ಫ್ಯಾನ್ಸ್ಗಾಗಿ ನನ್ನ ಹೃದಯ ಮಿಡಿಯುತ್ತೆ ಎಂದ್ರು!
ಬರೋಬ್ಬರಿ 17 ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಬೆಂಬಲಿಸಿದ ಎಲ್ಲಾ ಆರ್ಸಿಬಿ ಫ್ಯಾನ್ಸ್ಗಾಗಿ ನನ್ನ ಹೃದಯ ನಿಜವಾಗಿ ಮಿಡಿಯುತ್ತದೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಕ್ರಿಕೆಟರ್ ಅಂಬಾಟಿ ರಾಯುಡು ಹೊಸ ಡ್ರಾಮಾ ಶುರು ಮಾಡಿದ್ದಾರೆ.
ವಿರಾಟ್ ಕೊಹ್ಲಿಯನ್ನು ವಿಮರ್ಶೆ ಮಾಡಿದ ಬೆನ್ನಲ್ಲೇ ಮತ್ತೆ ಮಾತಾಡಿದ ಅಂಬಾಟಿ ರಾಯುಡು, ವೈಯಕ್ತಿಕ ಮೈಲಿಗಲ್ಲುಗಳಿಗಿಂತ ಮುಂಚಿತವಾಗಿ ಮ್ಯಾನೇಜ್ಮೆಂಟ್ ತಂಡದ ಬಗ್ಗೆ ಹಿತಾಸಕ್ತಿ ಹೊಂದಿರಬೇಕು. ಆ ರೀತಿಯ ನಾಯಕನನ್ನು ಮ್ಯಾನೇಜ್ಮೆಂಟ್ ತರಬೇಕು. ಆಗ ಆರ್ಸಿಬಿ ಹಲವು ಪ್ರಶಸ್ತಿಗಳನ್ನು ಗೆಲ್ಲಲಿದೆ ಎಂದರು.
ಆರ್ಸಿಬಿ ಎಷ್ಟು ಅದ್ಭುತ ಆಟಗಾರರನ್ನು ಕೈ ಬಿಡಲಾಗಿದೆ ಎಂಬುದನ್ನು ನೆನಪಿಸಿಕೊಳ್ಳಲಿ. ತಂಡದ ಹಿತಾಸಕ್ತಿಗಳನ್ನು ಕಾಪಾಡುವ ಆಟಗಾರರನ್ನು ತರಲು ಮ್ಯಾನೇಜ್ಮೆಂಟ್ ಪ್ರಯತ್ನ ಮಾಡಲಿ. ಮುಂದಿನ ಸೀಸನ್ನಿಂದಲೇ ಈ ಕೆಲಸ ಶುರುವಾಗಲಿ ಎಂದರು.
ಈ ಹಿಂದೆ ಆರೆಂಜ್ ಕ್ಯಾಪ್ ಗೆಲ್ಲೋದು ವೈಯಕ್ತಿಕ. ಯಾವಾಗಲೂ ವೈಯಕ್ತಿಕ ಪ್ರಶಸ್ತಿಗಳನ್ನು ಗೆದ್ದರೆ ಫ್ರಾಂಚೈಸಿಗೆ ಐಪಿಎಲ್ ಟ್ರೋಫಿ ಗೆಲ್ಲಲು ಸಾಧ್ಯವಿಲ್ಲ. ಐಪಿಎಲ್ ಟ್ರೋಫಿ ತಂಡದ ಸಾಮೂಹಿಕ ಪ್ರಯತ್ನದಿಂದ ಮಾತ್ರ ಸಾಧ್ಯ ಎಂದು ಆರೇಂಜ್ ಕ್ಯಾಪ್ ಗೆದ್ದಿದ್ದ ವಿರಾಟ್ ಕೊಹ್ಲಿಯನ್ನು ಅಂಬಾಟಿ ರಾಯುಡು ಹೀಯಾಳಿಸಿದ್ದರು.
ಇದನ್ನೂ ಓದಿ: ಮತ್ತೆ ಆರ್ಸಿಬಿಯನ್ನ ಕೆಣಕಿದ ಧೋನಿ ಶಿಷ್ಯ.. ಕೊಹ್ಲಿಯನ್ನ ಕಂಡ್ರೆ ರಾಯಡುಗೆ ಉರಿ ಯಾಕೆ?
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
2ನೇ ಬಾರಿಗೆ ಆರೆಂಜ್ ಕ್ಯಾಪ್ ಗೆದ್ದ ಆರ್ಸಿಬಿ ಮಾಜಿ ಕ್ಯಾಪ್ಟನ್ ಕೊಹ್ಲಿ
ಮತ್ತೆ ಆರ್ಸಿಬಿ ಮತ್ತು ಕೊಹ್ಲಿ ಕಾಲೆಳೆದ ಮಾಜಿ ಕ್ರಿಕೆಟರ್ ರಾಯುಡು
ಈ ಬೆನ್ನಲ್ಲೇ ಆರ್ಸಿಬಿ ಫ್ಯಾನ್ಸ್ಗಾಗಿ ನನ್ನ ಹೃದಯ ಮಿಡಿಯುತ್ತೆ ಎಂದ್ರು!
ಬರೋಬ್ಬರಿ 17 ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಬೆಂಬಲಿಸಿದ ಎಲ್ಲಾ ಆರ್ಸಿಬಿ ಫ್ಯಾನ್ಸ್ಗಾಗಿ ನನ್ನ ಹೃದಯ ನಿಜವಾಗಿ ಮಿಡಿಯುತ್ತದೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಕ್ರಿಕೆಟರ್ ಅಂಬಾಟಿ ರಾಯುಡು ಹೊಸ ಡ್ರಾಮಾ ಶುರು ಮಾಡಿದ್ದಾರೆ.
ವಿರಾಟ್ ಕೊಹ್ಲಿಯನ್ನು ವಿಮರ್ಶೆ ಮಾಡಿದ ಬೆನ್ನಲ್ಲೇ ಮತ್ತೆ ಮಾತಾಡಿದ ಅಂಬಾಟಿ ರಾಯುಡು, ವೈಯಕ್ತಿಕ ಮೈಲಿಗಲ್ಲುಗಳಿಗಿಂತ ಮುಂಚಿತವಾಗಿ ಮ್ಯಾನೇಜ್ಮೆಂಟ್ ತಂಡದ ಬಗ್ಗೆ ಹಿತಾಸಕ್ತಿ ಹೊಂದಿರಬೇಕು. ಆ ರೀತಿಯ ನಾಯಕನನ್ನು ಮ್ಯಾನೇಜ್ಮೆಂಟ್ ತರಬೇಕು. ಆಗ ಆರ್ಸಿಬಿ ಹಲವು ಪ್ರಶಸ್ತಿಗಳನ್ನು ಗೆಲ್ಲಲಿದೆ ಎಂದರು.
ಆರ್ಸಿಬಿ ಎಷ್ಟು ಅದ್ಭುತ ಆಟಗಾರರನ್ನು ಕೈ ಬಿಡಲಾಗಿದೆ ಎಂಬುದನ್ನು ನೆನಪಿಸಿಕೊಳ್ಳಲಿ. ತಂಡದ ಹಿತಾಸಕ್ತಿಗಳನ್ನು ಕಾಪಾಡುವ ಆಟಗಾರರನ್ನು ತರಲು ಮ್ಯಾನೇಜ್ಮೆಂಟ್ ಪ್ರಯತ್ನ ಮಾಡಲಿ. ಮುಂದಿನ ಸೀಸನ್ನಿಂದಲೇ ಈ ಕೆಲಸ ಶುರುವಾಗಲಿ ಎಂದರು.
ಈ ಹಿಂದೆ ಆರೆಂಜ್ ಕ್ಯಾಪ್ ಗೆಲ್ಲೋದು ವೈಯಕ್ತಿಕ. ಯಾವಾಗಲೂ ವೈಯಕ್ತಿಕ ಪ್ರಶಸ್ತಿಗಳನ್ನು ಗೆದ್ದರೆ ಫ್ರಾಂಚೈಸಿಗೆ ಐಪಿಎಲ್ ಟ್ರೋಫಿ ಗೆಲ್ಲಲು ಸಾಧ್ಯವಿಲ್ಲ. ಐಪಿಎಲ್ ಟ್ರೋಫಿ ತಂಡದ ಸಾಮೂಹಿಕ ಪ್ರಯತ್ನದಿಂದ ಮಾತ್ರ ಸಾಧ್ಯ ಎಂದು ಆರೇಂಜ್ ಕ್ಯಾಪ್ ಗೆದ್ದಿದ್ದ ವಿರಾಟ್ ಕೊಹ್ಲಿಯನ್ನು ಅಂಬಾಟಿ ರಾಯುಡು ಹೀಯಾಳಿಸಿದ್ದರು.
ಇದನ್ನೂ ಓದಿ: ಮತ್ತೆ ಆರ್ಸಿಬಿಯನ್ನ ಕೆಣಕಿದ ಧೋನಿ ಶಿಷ್ಯ.. ಕೊಹ್ಲಿಯನ್ನ ಕಂಡ್ರೆ ರಾಯಡುಗೆ ಉರಿ ಯಾಕೆ?
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ