ತಿತಿಮತಿ ದೇವಸ್ಥಾನ ಬಳಿ ಬಸ್ಗೆ ಎದುರಾದ ಒಂಟಿ ಸಲಗ
ಬಸ್ ಮುಂಭಾಗದ ಹೂ ಕಿತ್ತು ತಲೆ ಮೇಲೆ ಹಾಕಿಕೊಂಡ ಆನೆ
ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆದ ವಿಡಿಯೋ
ಕೊಡಗು: ಒಂಟಿ ಸಲಗವೊಂದು ಮಧ್ಯರಾತ್ರಿ ಶಬರಿಮಲೆಗೆ ತೆರಳುತ್ತಿದ್ದವರನ್ನ ತಡೆದಿರುವ ಘಟನೆ ಪೊನ್ನಂಪೇಟೆ ತಾಲೂಕಿನ ತಿತಿಮತಿ ದೇವಸ್ಥಾನದ ಬಳಿ ನಡೆದಿದೆ. ಇನ್ನೂ ಆಶ್ಚರ್ಯ ಏನಂದ್ರೆ ದಾಳಿ ಮಾಡಲು ಬಂದ ಕಾಡಾನೆ ಮಿನಿ ಬಸ್ಗೆ ಹಾಕಲಾಗಿದ್ದ ಹೂವಿನ ಹಾರಗಳನ್ನ ಕಿತ್ತುಕೊಂಡು ತಲೆ ಮೇಲೆ ಹಾಕಿಕೊಂಡು ಹೋಗಿದೆ.
ಸೋಮವಾರಪೇಟೆಯಿಂದ ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಿಗೆ ಅಯ್ಯಪ್ಪ ಮಾಲಾಧಾರಿಗಳ ಮಿನಿ ಬಸ್ನಲ್ಲಿ ತೆರಳುತ್ತಿದ್ದರು. ಬಸ್ ತಿತಿಮತಿ ದೇವಸ್ಥಾನ ಬಳಿ ರಾತ್ರಿ ಬರುತ್ತಿದ್ದಂತೆ ಏಕಾಏಕಿ ಎದುರಾದ ಕಾಡಾನೆ ಬಸ್ ಬಳಿಗೆ ಬಂದಿದೆ. ಬಸ್ನಲ್ಲಿದ್ದ ಅಯ್ಯಪ್ಪನ ಭಕ್ತರು ಕಾಡಾನೆ ಹತ್ತಿರ ಬರುತ್ತಿದ್ದಂತೆ ಸ್ವಾಮಿಯೇ ಶರಣಂ ಅಯ್ಯಪ್ಪ ಅನ್ನೋ ಮಂತ್ರ ಜಪಿಸಿದ್ದಾರೆ. ಬಳಿಕ ಕಾಡಾನೆಗೆ ಅದು ಏನಾಯ್ತೋ ಗೊತ್ತಿಲ್ಲ. ಬಸ್ ಮುಂಭಾಗ ಹಾಕಲಾಗಿದ್ದ ಹೂವಿನ ಹಾರಗಳನ್ನು ತನ್ನ ಸೊಂಡಿಲಿನಿಂದ ಕಿತ್ತು ತಲೆ ಮೇಲೆ ಹಾಕಿಕೊಂಡಿದೆ. ಹೂವಿನ ಹಾರಗಳನ್ನು ತಲೆ ಮೇಲೆ ಹಾಕಿಕೊಂಡ ಆನೆ ಅಯ್ಯಪ್ಪನ ಭಕ್ತರಿಗೆ ಆಶೀರ್ವಾದ ಮಾಡಿ ಸುಮ್ಮನೆ ಹೊರಟಿದೆ.
A wild elephant walks upto a bus carrying pilgrims from Somwarpet to Sabarimala near Thithimathi. It removes a flower garland from Lord Ayyappa’s photo on the bus’s front and places it on its head. Without troubling devotees, the elephant allows the bus to proceed.
VC: WhatsApp pic.twitter.com/xX8hjOPLE7
— Kodagu Connect (@KodaguConnect) January 12, 2024
ಆನೆ ಬರುತ್ತಿದ್ದಂತೆ ಬಸ್ನಲ್ಲಿದ್ದ 25 ರಿಂದ 30 ಮಾಲಾಧಾರಿಗಳು ಭಯಭೀತರಾಗಿದ್ದರು. ಸದ್ಯ ಕಾಡಾನೆ ಅಯ್ಯಪ್ಪ ಮಾಲಾಧಾರಿಗಳಿಗೆ ಎದುರಾದ ದೃಶ್ಯ ಮೊಬೈಲ್ನಲ್ಲಿ ಸೆರೆ ಹಿಡಿಯಲಾಗಿದೆ. ಇದು ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ. ಈ ದೃಶ್ಯವನ್ನು ನೋಡಿದ ಅಯ್ಯಪ್ಪನ ಭಕ್ತರು, ಇದೆಲ್ಲಾ ಸ್ವಾಮಿ ಅಯ್ಯಪ್ಪನ ಮಹಿಮೆ ಎಂದು ಕೊಂಡಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ತಿತಿಮತಿ ದೇವಸ್ಥಾನ ಬಳಿ ಬಸ್ಗೆ ಎದುರಾದ ಒಂಟಿ ಸಲಗ
ಬಸ್ ಮುಂಭಾಗದ ಹೂ ಕಿತ್ತು ತಲೆ ಮೇಲೆ ಹಾಕಿಕೊಂಡ ಆನೆ
ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆದ ವಿಡಿಯೋ
ಕೊಡಗು: ಒಂಟಿ ಸಲಗವೊಂದು ಮಧ್ಯರಾತ್ರಿ ಶಬರಿಮಲೆಗೆ ತೆರಳುತ್ತಿದ್ದವರನ್ನ ತಡೆದಿರುವ ಘಟನೆ ಪೊನ್ನಂಪೇಟೆ ತಾಲೂಕಿನ ತಿತಿಮತಿ ದೇವಸ್ಥಾನದ ಬಳಿ ನಡೆದಿದೆ. ಇನ್ನೂ ಆಶ್ಚರ್ಯ ಏನಂದ್ರೆ ದಾಳಿ ಮಾಡಲು ಬಂದ ಕಾಡಾನೆ ಮಿನಿ ಬಸ್ಗೆ ಹಾಕಲಾಗಿದ್ದ ಹೂವಿನ ಹಾರಗಳನ್ನ ಕಿತ್ತುಕೊಂಡು ತಲೆ ಮೇಲೆ ಹಾಕಿಕೊಂಡು ಹೋಗಿದೆ.
ಸೋಮವಾರಪೇಟೆಯಿಂದ ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಿಗೆ ಅಯ್ಯಪ್ಪ ಮಾಲಾಧಾರಿಗಳ ಮಿನಿ ಬಸ್ನಲ್ಲಿ ತೆರಳುತ್ತಿದ್ದರು. ಬಸ್ ತಿತಿಮತಿ ದೇವಸ್ಥಾನ ಬಳಿ ರಾತ್ರಿ ಬರುತ್ತಿದ್ದಂತೆ ಏಕಾಏಕಿ ಎದುರಾದ ಕಾಡಾನೆ ಬಸ್ ಬಳಿಗೆ ಬಂದಿದೆ. ಬಸ್ನಲ್ಲಿದ್ದ ಅಯ್ಯಪ್ಪನ ಭಕ್ತರು ಕಾಡಾನೆ ಹತ್ತಿರ ಬರುತ್ತಿದ್ದಂತೆ ಸ್ವಾಮಿಯೇ ಶರಣಂ ಅಯ್ಯಪ್ಪ ಅನ್ನೋ ಮಂತ್ರ ಜಪಿಸಿದ್ದಾರೆ. ಬಳಿಕ ಕಾಡಾನೆಗೆ ಅದು ಏನಾಯ್ತೋ ಗೊತ್ತಿಲ್ಲ. ಬಸ್ ಮುಂಭಾಗ ಹಾಕಲಾಗಿದ್ದ ಹೂವಿನ ಹಾರಗಳನ್ನು ತನ್ನ ಸೊಂಡಿಲಿನಿಂದ ಕಿತ್ತು ತಲೆ ಮೇಲೆ ಹಾಕಿಕೊಂಡಿದೆ. ಹೂವಿನ ಹಾರಗಳನ್ನು ತಲೆ ಮೇಲೆ ಹಾಕಿಕೊಂಡ ಆನೆ ಅಯ್ಯಪ್ಪನ ಭಕ್ತರಿಗೆ ಆಶೀರ್ವಾದ ಮಾಡಿ ಸುಮ್ಮನೆ ಹೊರಟಿದೆ.
A wild elephant walks upto a bus carrying pilgrims from Somwarpet to Sabarimala near Thithimathi. It removes a flower garland from Lord Ayyappa’s photo on the bus’s front and places it on its head. Without troubling devotees, the elephant allows the bus to proceed.
VC: WhatsApp pic.twitter.com/xX8hjOPLE7
— Kodagu Connect (@KodaguConnect) January 12, 2024
ಆನೆ ಬರುತ್ತಿದ್ದಂತೆ ಬಸ್ನಲ್ಲಿದ್ದ 25 ರಿಂದ 30 ಮಾಲಾಧಾರಿಗಳು ಭಯಭೀತರಾಗಿದ್ದರು. ಸದ್ಯ ಕಾಡಾನೆ ಅಯ್ಯಪ್ಪ ಮಾಲಾಧಾರಿಗಳಿಗೆ ಎದುರಾದ ದೃಶ್ಯ ಮೊಬೈಲ್ನಲ್ಲಿ ಸೆರೆ ಹಿಡಿಯಲಾಗಿದೆ. ಇದು ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ. ಈ ದೃಶ್ಯವನ್ನು ನೋಡಿದ ಅಯ್ಯಪ್ಪನ ಭಕ್ತರು, ಇದೆಲ್ಲಾ ಸ್ವಾಮಿ ಅಯ್ಯಪ್ಪನ ಮಹಿಮೆ ಎಂದು ಕೊಂಡಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ