newsfirstkannada.com

ಮರೆಯಾದ ಅಪರ್ಣಾ.. ಎಂದೆಂದಿಗೂ ಅಪರ್ಣಾರನ್ನು ನೆನಪಿಸುತ್ತವೆ ಆ 7 ದಾಖಲೆಗಳು..!

Share :

Published July 12, 2024 at 6:40am

Update July 12, 2024 at 11:45am

    ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ ಇನ್ನೂ ನೆನಪು ಮಾತ್ರ

    ಕೊನೆ ನಿಲ್ದಾಣ ತಲುಪಿದ ‘ನಮ್ಮ ಮೆಟ್ರೋ’ದ ಮಧುರ ಕಂಠ

    ಅಪರ್ಣಾ ಅವರಿಗೆ ಗಣ್ಯರಿಂದ ಭಾವಪೂರ್ಣ ಶ್ರದ್ಧಾಂಜಲಿ

ಹುಟ್ಟಿದ್ದು ಶುದ್ಧಗನ್ನಡದ ನೆಲೆ, ಮಲೆನಾಡಿನ ಚಿಕ್ಕಮಗಳೂರು ಜಲ್ಲೆ ಪಂಚನಹಳ್ಳಿ. ಬೆಳೆಸಿದ್ದು ಬೆಂಗಳೂರು ಎಂಬ ಮಾಯಾನಗರ ಸಪ್ತಕೋಟಿ ಕನ್ನಡಿಗರ ಪ್ರೀತಿ ತುಂಬಿದ ಹೃದಯ. ದೂರದರ್ಶನದ ಕಲಾವಿದೆಯಾಗುವ ಹೆಬ್ಬಯಕೆಯಿಂದ ಬಂದಾಕೆಗೆ ಬಣ್ಣದ ಲೋಕ ಬರ ಸೆಳೆದಿತ್ತು. ಚಿತ್ರಬ್ರಹ್ಮ ಪುಟ್ಟಣ ಕಣಗಾಲ್​ ಸಿನಿಮಾದಲ್ಲಿ ನಟಿಸಿದ್ದ ಅಪರ್ಣಾಗೆ ಸಿಕ್ಕ ಚಾನ್ಸ್​ಗಳು ಕಮ್ಮಿ. ಆದ್ರೆ, ಬದುಕು ಮಾತ್ರ ನಿರೂಪಣೆಯತ್ತ ಕರೆತಂದಿತ್ತು. ಅದೇ ಸರ್ವಸ್ವವೂ ಆಯ್ತು..

ಚಿತ್ರಬ್ರಹ್ಮನ ಗರಡಿಯಲ್ಲಿ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ ಅಪರ್ಣಾ, ಮಸಣದ ಹೂವಾಗಿ ಚಿರಪರಿಚಿತ. 1984ರಲ್ಲಿ ಮಸಣದ ಹೂವು ಸಿನಿಮಾ ಅಪರ್ಣಾರಿಗೆ ಮೊದಲ ಸಿನಿಮಾವಾದ್ರೆ, ಪುಟ್ಟಣ್ಣ ಕಣಗಾಲ್​ರ ಕೊನೇ ಚಿತ್ರ.. ಆದ್ರೆ ಅಪರ್ಣಾ ಸಿನಿಯಾನ ತುಂಬಾ ದೂರವೇನಲ್ಲ.. ಅದು 10ಕ್ಕೆ ನಿಂತಿತ್ತು. ಈ ಸಿನಿ ಯಾತ್ರೆ ಬಳಿಕ ದೂರದರ್ಶನ ಹತ್ತಿರವಾಗಿತ್ತು.

ಇದನ್ನೂ ಓದಿ:ಗಂಭೀರ್ ಕೋಚ್ ಆದ ಬೆನ್ನಲ್ಲೇ ಟೆನ್ಷನ್ ಟೆನ್ಷನ್.. ಆತಂಕ ಹುಟ್ಟಿಸಿದ ಆ ಮೂರು ಘಟನೆಗಳು..!

1990.. ದೂರದರ್ಶನದಲ್ಲಿ ಅಪರ್ಣಾ ನಿರೂಪಕಿಯಾಗಿ ಕಾಣಿಸಿಕೊಂಡ್ರು.. ಸದಾ ಕಲಿಕೆ, ಅಪ್ಪಟ ಕನ್ನಡ ಪದಗಳ ಮುತ್ತು ಪೋಣಿಸಿದ ಅಪರ್ಣಾರ ಭಾಷಾ ಶುದ್ಧಿಯೇ ಅಪೂರ್ವ. ಸರ್ಕಾರಿ ಕಾರ್ಯಕ್ರಮದಿಂದ, ಸಾಹಿತ್ಯ ಸಮ್ಮೇಳನ ಸೇರಿ ಬಹುತೇಕ ಕಾರ್ಯಕ್ರಮಗಳಲ್ಲಿ ಆ ಧ್ವನಿ ಇಲ್ಲದಿದ್ರೆ ಅದು ಅಪೂರ್ಣ ಅನ್ನೋ ಮಟ್ಟಿಗೆ ಅಪರ್ಣಾ ಬೆಳೆದು ನಿಂತಿದ್ರು..

ಅಪರ್ಣಾ ಅಪೂರ್ವ ದಾಖಲೆ!

  1. 1993ರಲ್ಲಿ ಆಲ್ ಇಂಡಿಯಾ ರೇಡಿಯೋದಲ್ಲಿ ರೇಡಿಯೋ ಜಾಕಿ
  2. 1998ರಲ್ಲಿ ದೀಪಾವಳಿ ಪ್ರಯುಕ್ತ 8 ಗಂಟೆಗಳ ಕಾಲ ನಿರೂಪಣೆ
  3. 90ರ ದಶಕದಿಂದ ಶುರುವಾಗಿ 7000ಕ್ಕೂ ಅಧಿಕ ಕಾರ್ಯಕ್ರಮ
  4. ಬಿಗ್ ಬಾಸ್ ಕನ್ನಡ ಸೀಸನ್-1ರ ಸ್ಪರ್ಧಿ ಆಗಿ 41 ದಿನ ರಂಜನೆ
  5. 2015ರ ನಂತ್ರ ಮಜಾ ಟಾಕೀಸ್​​ನಲ್ಲಿ ವರಲಕ್ಷ್ಮೀಯಾಗಿ ನಟನೆ
  6. 20 ವರ್ಷಗಳ ಬಳಿಕ ‘ಗ್ರೇ ಗೇಮ್ಸ್’ ಸಿನಿಮಾಕ್ಕೆ ಬಣ್ಣ ಹಚ್ಚಿದ್ರು
  7. ನಮ್ಮ ಮೆಟ್ರೋ, KSRTC, BSNL ಮತ್ತು ಏರ್​ಟೆಲ್​ಗೂ ಧ್ವನಿ

ಕನ್ನಡ ಚಿತ್ರರಂಗದಲ್ಲಿ ಅದ್ಭುತವಾದ ಕನ್ನಡ ಸಂಭಾಷಣೆಯಿಂದ ನಟಿ, ನಿರೂಪಕಿ ಅಪರ್ಣಾ ಗಮನ ಸೆಳೆದವರು. ಅಪರ್ಣಾ ಅಂದ್ರೆ ಕನ್ನಡ, ನಟನೆ, ಅವರ ಗುಣ ಎಲ್ಲವೂ ನೆನಪು. ಕಳೆದ ಕೆಲ ದಿನಗಳಿಂದ ಅಪರ್ಣಾ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಚಿಕ್ಕಮಗಳೂರಿನ ಪಂಚನಹಳ್ಳಿಯಿಂದ ಶುರುವಾದ ಅಪರ್ಣಾ ಪಯಣ, ಬೆಂಗಳೂರಿನ ಬಸವನಗುಡಿಯಲ್ಲಿ ಅಂತ್ಯ ಕಂಡಿದೆ. ಕ್ಯಾನ್ಸರ್ ಕಾಯಿಲೆಯಿಂದ ಅಪರ್ಣಾ ನಿಧನರಾಗಿದ್ದಾರೆ.

ಇದನ್ನೂ ಓದಿ:ಡಿವೋರ್ಸ್ ವದಂತಿ ಬೆನ್ನಲ್ಲೇ ಪಾಂಡ್ಯ ಹೆಸರಿನ ಜೊತೆ ತಳುಕು ಹಾಕಿಕೊಂಡ ಸುಂದರಿ..!

ಪ್ರೀತಿ ಇಲ್ಲದ ಮೇಲೆ ಎಂಬ ಧಾರಾವಾಹಿಯಲ್ಲಿ ಪಲ್ಲವಿ ಪಾತ್ರಕ್ಕೆ ಶ್ರೇಷ್ಠ ನಟಿ ಪ್ರಶಸ್ತಿ.. ಕಿರುತೆರೆಯ ಮಾಧ್ಯಮದ ಈವರೆಗೆಗಿನ ಕೆಲಸಕ್ಕೆ ಸರ್ವೋಚ್ಛ ಪ್ರಶಸ್ತಿ ಸಿಕ್ಕಿದೆ. ಒಟ್ಟಾರೆ, ಭಾಷೆಗೆ ತಕ್ಕ ಭಾವನೆ, ಅಚ್ಚ ಕನ್ನಡವನ್ನು‌ ಸ್ವಚ್ಛವಾಗಿ ಮಾತನಾಡುವ ಶೈಲಿ, ಪದಕ್ಕೆ ಪದ ಸೇರಿಸಿ ಅಕ್ಷರಗಳಿಗೂ ಭಾವ ತುಂಬುತ್ತಿದ್ದ ದನಿ ಚಿರಮೌನಕ್ಕೆ ಜಾರಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮರೆಯಾದ ಅಪರ್ಣಾ.. ಎಂದೆಂದಿಗೂ ಅಪರ್ಣಾರನ್ನು ನೆನಪಿಸುತ್ತವೆ ಆ 7 ದಾಖಲೆಗಳು..!

https://newsfirstlive.com/wp-content/uploads/2024/07/APARNA-1-1.jpg

    ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ ಇನ್ನೂ ನೆನಪು ಮಾತ್ರ

    ಕೊನೆ ನಿಲ್ದಾಣ ತಲುಪಿದ ‘ನಮ್ಮ ಮೆಟ್ರೋ’ದ ಮಧುರ ಕಂಠ

    ಅಪರ್ಣಾ ಅವರಿಗೆ ಗಣ್ಯರಿಂದ ಭಾವಪೂರ್ಣ ಶ್ರದ್ಧಾಂಜಲಿ

ಹುಟ್ಟಿದ್ದು ಶುದ್ಧಗನ್ನಡದ ನೆಲೆ, ಮಲೆನಾಡಿನ ಚಿಕ್ಕಮಗಳೂರು ಜಲ್ಲೆ ಪಂಚನಹಳ್ಳಿ. ಬೆಳೆಸಿದ್ದು ಬೆಂಗಳೂರು ಎಂಬ ಮಾಯಾನಗರ ಸಪ್ತಕೋಟಿ ಕನ್ನಡಿಗರ ಪ್ರೀತಿ ತುಂಬಿದ ಹೃದಯ. ದೂರದರ್ಶನದ ಕಲಾವಿದೆಯಾಗುವ ಹೆಬ್ಬಯಕೆಯಿಂದ ಬಂದಾಕೆಗೆ ಬಣ್ಣದ ಲೋಕ ಬರ ಸೆಳೆದಿತ್ತು. ಚಿತ್ರಬ್ರಹ್ಮ ಪುಟ್ಟಣ ಕಣಗಾಲ್​ ಸಿನಿಮಾದಲ್ಲಿ ನಟಿಸಿದ್ದ ಅಪರ್ಣಾಗೆ ಸಿಕ್ಕ ಚಾನ್ಸ್​ಗಳು ಕಮ್ಮಿ. ಆದ್ರೆ, ಬದುಕು ಮಾತ್ರ ನಿರೂಪಣೆಯತ್ತ ಕರೆತಂದಿತ್ತು. ಅದೇ ಸರ್ವಸ್ವವೂ ಆಯ್ತು..

ಚಿತ್ರಬ್ರಹ್ಮನ ಗರಡಿಯಲ್ಲಿ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ ಅಪರ್ಣಾ, ಮಸಣದ ಹೂವಾಗಿ ಚಿರಪರಿಚಿತ. 1984ರಲ್ಲಿ ಮಸಣದ ಹೂವು ಸಿನಿಮಾ ಅಪರ್ಣಾರಿಗೆ ಮೊದಲ ಸಿನಿಮಾವಾದ್ರೆ, ಪುಟ್ಟಣ್ಣ ಕಣಗಾಲ್​ರ ಕೊನೇ ಚಿತ್ರ.. ಆದ್ರೆ ಅಪರ್ಣಾ ಸಿನಿಯಾನ ತುಂಬಾ ದೂರವೇನಲ್ಲ.. ಅದು 10ಕ್ಕೆ ನಿಂತಿತ್ತು. ಈ ಸಿನಿ ಯಾತ್ರೆ ಬಳಿಕ ದೂರದರ್ಶನ ಹತ್ತಿರವಾಗಿತ್ತು.

ಇದನ್ನೂ ಓದಿ:ಗಂಭೀರ್ ಕೋಚ್ ಆದ ಬೆನ್ನಲ್ಲೇ ಟೆನ್ಷನ್ ಟೆನ್ಷನ್.. ಆತಂಕ ಹುಟ್ಟಿಸಿದ ಆ ಮೂರು ಘಟನೆಗಳು..!

1990.. ದೂರದರ್ಶನದಲ್ಲಿ ಅಪರ್ಣಾ ನಿರೂಪಕಿಯಾಗಿ ಕಾಣಿಸಿಕೊಂಡ್ರು.. ಸದಾ ಕಲಿಕೆ, ಅಪ್ಪಟ ಕನ್ನಡ ಪದಗಳ ಮುತ್ತು ಪೋಣಿಸಿದ ಅಪರ್ಣಾರ ಭಾಷಾ ಶುದ್ಧಿಯೇ ಅಪೂರ್ವ. ಸರ್ಕಾರಿ ಕಾರ್ಯಕ್ರಮದಿಂದ, ಸಾಹಿತ್ಯ ಸಮ್ಮೇಳನ ಸೇರಿ ಬಹುತೇಕ ಕಾರ್ಯಕ್ರಮಗಳಲ್ಲಿ ಆ ಧ್ವನಿ ಇಲ್ಲದಿದ್ರೆ ಅದು ಅಪೂರ್ಣ ಅನ್ನೋ ಮಟ್ಟಿಗೆ ಅಪರ್ಣಾ ಬೆಳೆದು ನಿಂತಿದ್ರು..

ಅಪರ್ಣಾ ಅಪೂರ್ವ ದಾಖಲೆ!

  1. 1993ರಲ್ಲಿ ಆಲ್ ಇಂಡಿಯಾ ರೇಡಿಯೋದಲ್ಲಿ ರೇಡಿಯೋ ಜಾಕಿ
  2. 1998ರಲ್ಲಿ ದೀಪಾವಳಿ ಪ್ರಯುಕ್ತ 8 ಗಂಟೆಗಳ ಕಾಲ ನಿರೂಪಣೆ
  3. 90ರ ದಶಕದಿಂದ ಶುರುವಾಗಿ 7000ಕ್ಕೂ ಅಧಿಕ ಕಾರ್ಯಕ್ರಮ
  4. ಬಿಗ್ ಬಾಸ್ ಕನ್ನಡ ಸೀಸನ್-1ರ ಸ್ಪರ್ಧಿ ಆಗಿ 41 ದಿನ ರಂಜನೆ
  5. 2015ರ ನಂತ್ರ ಮಜಾ ಟಾಕೀಸ್​​ನಲ್ಲಿ ವರಲಕ್ಷ್ಮೀಯಾಗಿ ನಟನೆ
  6. 20 ವರ್ಷಗಳ ಬಳಿಕ ‘ಗ್ರೇ ಗೇಮ್ಸ್’ ಸಿನಿಮಾಕ್ಕೆ ಬಣ್ಣ ಹಚ್ಚಿದ್ರು
  7. ನಮ್ಮ ಮೆಟ್ರೋ, KSRTC, BSNL ಮತ್ತು ಏರ್​ಟೆಲ್​ಗೂ ಧ್ವನಿ

ಕನ್ನಡ ಚಿತ್ರರಂಗದಲ್ಲಿ ಅದ್ಭುತವಾದ ಕನ್ನಡ ಸಂಭಾಷಣೆಯಿಂದ ನಟಿ, ನಿರೂಪಕಿ ಅಪರ್ಣಾ ಗಮನ ಸೆಳೆದವರು. ಅಪರ್ಣಾ ಅಂದ್ರೆ ಕನ್ನಡ, ನಟನೆ, ಅವರ ಗುಣ ಎಲ್ಲವೂ ನೆನಪು. ಕಳೆದ ಕೆಲ ದಿನಗಳಿಂದ ಅಪರ್ಣಾ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಚಿಕ್ಕಮಗಳೂರಿನ ಪಂಚನಹಳ್ಳಿಯಿಂದ ಶುರುವಾದ ಅಪರ್ಣಾ ಪಯಣ, ಬೆಂಗಳೂರಿನ ಬಸವನಗುಡಿಯಲ್ಲಿ ಅಂತ್ಯ ಕಂಡಿದೆ. ಕ್ಯಾನ್ಸರ್ ಕಾಯಿಲೆಯಿಂದ ಅಪರ್ಣಾ ನಿಧನರಾಗಿದ್ದಾರೆ.

ಇದನ್ನೂ ಓದಿ:ಡಿವೋರ್ಸ್ ವದಂತಿ ಬೆನ್ನಲ್ಲೇ ಪಾಂಡ್ಯ ಹೆಸರಿನ ಜೊತೆ ತಳುಕು ಹಾಕಿಕೊಂಡ ಸುಂದರಿ..!

ಪ್ರೀತಿ ಇಲ್ಲದ ಮೇಲೆ ಎಂಬ ಧಾರಾವಾಹಿಯಲ್ಲಿ ಪಲ್ಲವಿ ಪಾತ್ರಕ್ಕೆ ಶ್ರೇಷ್ಠ ನಟಿ ಪ್ರಶಸ್ತಿ.. ಕಿರುತೆರೆಯ ಮಾಧ್ಯಮದ ಈವರೆಗೆಗಿನ ಕೆಲಸಕ್ಕೆ ಸರ್ವೋಚ್ಛ ಪ್ರಶಸ್ತಿ ಸಿಕ್ಕಿದೆ. ಒಟ್ಟಾರೆ, ಭಾಷೆಗೆ ತಕ್ಕ ಭಾವನೆ, ಅಚ್ಚ ಕನ್ನಡವನ್ನು‌ ಸ್ವಚ್ಛವಾಗಿ ಮಾತನಾಡುವ ಶೈಲಿ, ಪದಕ್ಕೆ ಪದ ಸೇರಿಸಿ ಅಕ್ಷರಗಳಿಗೂ ಭಾವ ತುಂಬುತ್ತಿದ್ದ ದನಿ ಚಿರಮೌನಕ್ಕೆ ಜಾರಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More