ಮಾತು ನಿಲ್ಲಿಸಿದ ಕರುನಾಡು ಕಂಡ ಅಪರೂಪದ ನಿರೂಪಕಿ
ಕನ್ನಡಿಗರನ್ನ ನಗಿಸಿ ಮರೆಯಾದ ‘ಒನ್ ಆ್ಯಂಡ್ ಓನ್ಲಿ ವರಲಕ್ಷ್ಮೀ’
ಶಾಶ್ವತವಾಗಿ ಮಾತನಾಡುವುದನ್ನ ನಿಲ್ಲಿಸಿದ ‘ಕನ್ನಡದ ಕಂಠ’
ರಾತ್ರಿ ಆದ್ರೂ ನಮ್ಮ ಮೆಟ್ರೋ ಅನೌನ್ಸ್ಮೆಂಟ್ ಕೇಳಿಸ್ತಿತ್ತು. ಬಾಗಿಲು ಎಡಕ್ಕೆ ತೆರೆಯಲಿದೆ. ಮುಂದಿನ ನಿಲ್ದಾಣ.. ಹೀಗೆ ಪ್ರಯಾಣಿಕರಿಗೆ ಈ ಅಗೋಚರ ಧ್ವನಿ ದಾರಿ ತೋರಿಸ್ತಿತ್ತು. ಅಂದ್ಹಾಗೆ ಈ ಧ್ವನಿಯ ಹಿಂದಿನ ಶರೀರವೇ ಅಪರ್ಣಾ. ಕ್ಯಾನ್ಸರ್ನಿಂದ ಬಳಲುತ್ತಿದ್ದ ಅಪರ್ಣಾ ಅವರು ನಿಧನರಾಗಿದ್ದಾರೆ.
ಮೆಟ್ರೋ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ, ಬಿಎಸ್ಎನ್ಎಲ್, ಏರ್ಟೆಲ್ ಮುಂತಾದ ಸಂಸ್ಥೆಗಳಿಗೂ ಧ್ವನಿ ನೀಡಿದ್ದ ಅಪರ್ಣಾ ಅವರಿಗೆ ಮೆಟ್ರೋದಲ್ಲಿ ತಮ್ಮ ಧ್ವನಿ ಹೇಗೆ ಕೇಳಿಸುತ್ತೆ ಅನ್ನೂ ಕುತೂಹಲ ಇತ್ತಂತೆ. ಅದೇ ಕಾರಣಕ್ಕೆ ಒಂದು ದಿನ ಮೆಟ್ರೋ ಪ್ರಯಾಣ ಮಾಡಲು ನಿರ್ಧರಿಸಿದ್ದರು. ಈ ವೇಳೆ ತಮಗೆ ಆಗಿದ್ದ ಅನುಭವವನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದರು.
ಇದನ್ನೂ ಓದಿ:ಮಿಂಚಿ ಮರೆಯಾದ ಅಪರ್ಣಾ.. ಕಂಬನಿ ಮಿಡಿದ ಗಣ್ಯರು.. ಅಪರೂಪದ ನಿರೂಪಕಿ ಬಗ್ಗೆ ಏನಂದ್ರು..?
ಸಂದರ್ಶನದಲ್ಲಿ ಅವರೇ ಹೇಳಿದಂತೆ.. ಒಂದು ದಿನ ಮೆಟ್ರೋ ಶುರುವಾಗುತ್ತದೆ. ಬಯ್ಯಪ್ಪನಹಳ್ಳಿಯಿಂದ ಎಂಜಿ ರೋಡ್ಗೆ. ಅದೇ ಫಸ್ಟ್. ಖುಷಿ ಏನೆಂದರೆ ನನ್ನ ಧ್ವನಿ ಬರುತ್ತದೆ ಎಂದು. ಅಷ್ಟಾದರೂ ನಾನು ಮೆಟ್ರೋದಲ್ಲಿ ಹೋಗಿರಲಿಲ್ಲ. ನನ್ನ ಧ್ವನಿ ಮೆಟ್ರೋದಲ್ಲಿ ಹೇಗಿರುತ್ತೆ ಅನ್ನೋ ಕುತೂಹಲ ನನಗೆ ಇತ್ತು.
ಅದು ದೀಪಾವಳಿಯ ದಿನ.. ಜಾಸ್ತಿ ಜನ ಇರಲ್ಲ ಎಂದು ನಮ್ಮ ಮನೆಯವರು ಹೇಳಿದರು. ಅಂದೇ ಹೋಗಲು ನಿರ್ಧರಿಸಿದೇವು. ಬನಶಂಕರಿಯಿಂದ ಎಂಜಿ ರೋಡ್ ತನಕ ಹೋಗಿದ್ದೆ. ಎಂಜಿ ರಸ್ತೆಯಿಂದ ಬಯ್ಯಪ್ಪನಹಳ್ಳಿಗೆ ಮೆಟ್ರೋದಲ್ಲಿ ಹೋದೆ. ಮೆಟ್ರೋ ಪ್ರಯಾಣ ಹೇಗಿರುತ್ತೆ ಅಂತಾ ನಾನು ನೋಡಿದೆ. ನನ್ನ ಪ್ರಯಾಣ ಹೇಗಿರುತ್ತೆ? ನನ್ನ ಧ್ವನಿ ಹೇಗಿರುತ್ತೆ ಎಂದು ನೋಡಲು ಹೋಗಿದ್ದೆ. ನನಗೆ ತುಂಬಾ ಖುಷಿ ಆಯಿತು, ತುಂಬಾ ಹೆಮ್ಮೆ ಆಯಿತು.
ಇದನ್ನೂ ಓದಿ:ವೈದ್ಯರ ಗಡುವು ಮೀರಿ ಅಪರ್ಣಾ ಬದುಕಿದ್ದೇ ಚಮತ್ಕಾರ.. ಕೊನೆಗಾಲದಲ್ಲಿ ಪಟ್ಟ ಕಷ್ಟಗಳು ಅಷ್ಟಿಷ್ಟಲ್ಲ..
ಇವತ್ತು ಕಾರು ಬೇಕಾ? ಮೆಟ್ರೋದಲ್ಲಿ ಹೊರಟು ಹೋಗೋಣ ಅನ್ನೋ ರೀತಿಯಲ್ಲಿ ಜನ ಮಾತನಾಡುತ್ತಿದ್ದಾರೆ. ನಾನು ಕೂಡ ಅದನ್ನೇ ಸುಮಾರು ಸಲ ಮಾಡಿದ್ದೇನೆ. ಇಂಥ ಮೆಟ್ರೋದ ಜೊತೆ ನಾನು ಧ್ವನಿಯಾಗಿದ್ದೇನೆ ಅನ್ನೋದೇ ನನ್ನ ಹೆಮ್ಮೆ ಎಂದು ಸಂದರ್ಶನದಲ್ಲಿ ಹೇಳಿದ್ದರು.
ಇದನ್ನೂ ಓದಿ:ಮೌನಕ್ಕೆ ಜಾರಿತು ಅಕ್ಷರಗಳಿಗೂ ಭಾವ ತುಂಬುತ್ತಿದ್ದ ದನಿ.. ಅಪರ್ಣಾ ಅವರ 7 ಅಪೂರ್ವ ದಾಖಲೆಗಳು.. ಇಲ್ಲಿವೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಮಾತು ನಿಲ್ಲಿಸಿದ ಕರುನಾಡು ಕಂಡ ಅಪರೂಪದ ನಿರೂಪಕಿ
ಕನ್ನಡಿಗರನ್ನ ನಗಿಸಿ ಮರೆಯಾದ ‘ಒನ್ ಆ್ಯಂಡ್ ಓನ್ಲಿ ವರಲಕ್ಷ್ಮೀ’
ಶಾಶ್ವತವಾಗಿ ಮಾತನಾಡುವುದನ್ನ ನಿಲ್ಲಿಸಿದ ‘ಕನ್ನಡದ ಕಂಠ’
ರಾತ್ರಿ ಆದ್ರೂ ನಮ್ಮ ಮೆಟ್ರೋ ಅನೌನ್ಸ್ಮೆಂಟ್ ಕೇಳಿಸ್ತಿತ್ತು. ಬಾಗಿಲು ಎಡಕ್ಕೆ ತೆರೆಯಲಿದೆ. ಮುಂದಿನ ನಿಲ್ದಾಣ.. ಹೀಗೆ ಪ್ರಯಾಣಿಕರಿಗೆ ಈ ಅಗೋಚರ ಧ್ವನಿ ದಾರಿ ತೋರಿಸ್ತಿತ್ತು. ಅಂದ್ಹಾಗೆ ಈ ಧ್ವನಿಯ ಹಿಂದಿನ ಶರೀರವೇ ಅಪರ್ಣಾ. ಕ್ಯಾನ್ಸರ್ನಿಂದ ಬಳಲುತ್ತಿದ್ದ ಅಪರ್ಣಾ ಅವರು ನಿಧನರಾಗಿದ್ದಾರೆ.
ಮೆಟ್ರೋ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ, ಬಿಎಸ್ಎನ್ಎಲ್, ಏರ್ಟೆಲ್ ಮುಂತಾದ ಸಂಸ್ಥೆಗಳಿಗೂ ಧ್ವನಿ ನೀಡಿದ್ದ ಅಪರ್ಣಾ ಅವರಿಗೆ ಮೆಟ್ರೋದಲ್ಲಿ ತಮ್ಮ ಧ್ವನಿ ಹೇಗೆ ಕೇಳಿಸುತ್ತೆ ಅನ್ನೂ ಕುತೂಹಲ ಇತ್ತಂತೆ. ಅದೇ ಕಾರಣಕ್ಕೆ ಒಂದು ದಿನ ಮೆಟ್ರೋ ಪ್ರಯಾಣ ಮಾಡಲು ನಿರ್ಧರಿಸಿದ್ದರು. ಈ ವೇಳೆ ತಮಗೆ ಆಗಿದ್ದ ಅನುಭವವನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದರು.
ಇದನ್ನೂ ಓದಿ:ಮಿಂಚಿ ಮರೆಯಾದ ಅಪರ್ಣಾ.. ಕಂಬನಿ ಮಿಡಿದ ಗಣ್ಯರು.. ಅಪರೂಪದ ನಿರೂಪಕಿ ಬಗ್ಗೆ ಏನಂದ್ರು..?
ಸಂದರ್ಶನದಲ್ಲಿ ಅವರೇ ಹೇಳಿದಂತೆ.. ಒಂದು ದಿನ ಮೆಟ್ರೋ ಶುರುವಾಗುತ್ತದೆ. ಬಯ್ಯಪ್ಪನಹಳ್ಳಿಯಿಂದ ಎಂಜಿ ರೋಡ್ಗೆ. ಅದೇ ಫಸ್ಟ್. ಖುಷಿ ಏನೆಂದರೆ ನನ್ನ ಧ್ವನಿ ಬರುತ್ತದೆ ಎಂದು. ಅಷ್ಟಾದರೂ ನಾನು ಮೆಟ್ರೋದಲ್ಲಿ ಹೋಗಿರಲಿಲ್ಲ. ನನ್ನ ಧ್ವನಿ ಮೆಟ್ರೋದಲ್ಲಿ ಹೇಗಿರುತ್ತೆ ಅನ್ನೋ ಕುತೂಹಲ ನನಗೆ ಇತ್ತು.
ಅದು ದೀಪಾವಳಿಯ ದಿನ.. ಜಾಸ್ತಿ ಜನ ಇರಲ್ಲ ಎಂದು ನಮ್ಮ ಮನೆಯವರು ಹೇಳಿದರು. ಅಂದೇ ಹೋಗಲು ನಿರ್ಧರಿಸಿದೇವು. ಬನಶಂಕರಿಯಿಂದ ಎಂಜಿ ರೋಡ್ ತನಕ ಹೋಗಿದ್ದೆ. ಎಂಜಿ ರಸ್ತೆಯಿಂದ ಬಯ್ಯಪ್ಪನಹಳ್ಳಿಗೆ ಮೆಟ್ರೋದಲ್ಲಿ ಹೋದೆ. ಮೆಟ್ರೋ ಪ್ರಯಾಣ ಹೇಗಿರುತ್ತೆ ಅಂತಾ ನಾನು ನೋಡಿದೆ. ನನ್ನ ಪ್ರಯಾಣ ಹೇಗಿರುತ್ತೆ? ನನ್ನ ಧ್ವನಿ ಹೇಗಿರುತ್ತೆ ಎಂದು ನೋಡಲು ಹೋಗಿದ್ದೆ. ನನಗೆ ತುಂಬಾ ಖುಷಿ ಆಯಿತು, ತುಂಬಾ ಹೆಮ್ಮೆ ಆಯಿತು.
ಇದನ್ನೂ ಓದಿ:ವೈದ್ಯರ ಗಡುವು ಮೀರಿ ಅಪರ್ಣಾ ಬದುಕಿದ್ದೇ ಚಮತ್ಕಾರ.. ಕೊನೆಗಾಲದಲ್ಲಿ ಪಟ್ಟ ಕಷ್ಟಗಳು ಅಷ್ಟಿಷ್ಟಲ್ಲ..
ಇವತ್ತು ಕಾರು ಬೇಕಾ? ಮೆಟ್ರೋದಲ್ಲಿ ಹೊರಟು ಹೋಗೋಣ ಅನ್ನೋ ರೀತಿಯಲ್ಲಿ ಜನ ಮಾತನಾಡುತ್ತಿದ್ದಾರೆ. ನಾನು ಕೂಡ ಅದನ್ನೇ ಸುಮಾರು ಸಲ ಮಾಡಿದ್ದೇನೆ. ಇಂಥ ಮೆಟ್ರೋದ ಜೊತೆ ನಾನು ಧ್ವನಿಯಾಗಿದ್ದೇನೆ ಅನ್ನೋದೇ ನನ್ನ ಹೆಮ್ಮೆ ಎಂದು ಸಂದರ್ಶನದಲ್ಲಿ ಹೇಳಿದ್ದರು.
ಇದನ್ನೂ ಓದಿ:ಮೌನಕ್ಕೆ ಜಾರಿತು ಅಕ್ಷರಗಳಿಗೂ ಭಾವ ತುಂಬುತ್ತಿದ್ದ ದನಿ.. ಅಪರ್ಣಾ ಅವರ 7 ಅಪೂರ್ವ ದಾಖಲೆಗಳು.. ಇಲ್ಲಿವೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ