newsfirstkannada.com

ಪುಷ್ಪಾ-2 ಕ್ರೇಜ್ ಹೊತ್ತಲ್ಲೇ ಐಕಾನ್​ ಸ್ಟಾರ್​ಗೆ ಬಿಗ್ ಶಾಕ್​​.. ಅಲ್ಲು ಅರ್ಜುನ್​ ವಿರುದ್ಧ ಕೇಸ್ ದಾಖಲು

Share :

Published May 12, 2024 at 8:58am

    ಅಲ್ಲು ಅರ್ಜುನ್​ ವಿರುದ್ಧ ಟೂಟೌನ್​ ಪೊಲೀಸ್ರು ಕೇಸ್ ಹಾಕಿದ್ದೇಕೆ?​

    ಪುಷ್ಪಾ ಭಾಗ-1 ಸಕ್ಸಸ್​ ಮೂಡ್​ನಲ್ಲಿರುವ ನಟ ಅಲ್ಲು ಅರ್ಜುನ್

    ರಾಜಕಾರಣಿ ಮನೆಗೆ ಭೇಟಿ ನೀಡಿದ್ದಕ್ಕೆ ಕೇಸ್ ದಾಖಲು ಆಯ್ತಾ?

ಪುಷ್ಪಾ-2 ರಿಲೀಸ್​ ಕ್ರೇಜ್​ನಲ್ಲಿರೋ ಐಕಾನ್​ ಸ್ಟಾರ್ ಅಲ್ಲು ಅರ್ಜುನ್​ಗೆ ಆಂಧ್ರ ಪ್ರದೇಶ ಪೊಲೀಸರು ಬಿಗ್ ಶಾಕ್ ನೀಡಿದ್ದು, ಅಲ್ಲು ಅರ್ಜುನ್ ವಿರುದ್ಧ ಕೇಸ್​ ದಾಖಲು ಮಾಡಿದ್ದಾರೆ.

ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿ ಇದ್ದರೂ ಪೊಲೀಸರ ಅನುಮತಿ ಪಡೆಯದೇ ಅಲ್ಲು ಅರ್ಜುನ್ ಅವರು ತಮ್ಮ ಸ್ನೇಹಿತ ಹಾಗೂ ವೈಎಸ್​​ಆರ್​​ಸಿಪಿ ಶಾಸಕ ಶಿಲ್ಪಾ ರವಿಯವರ ಮನೆಗೆ ಭೇಟಿ ನೀಡಿದ್ದಾರೆ. ಆಂಧ್ರಪ್ರದೇಶದ ನಂದ್ಯಾಲದಲ್ಲಿರುವ ಶಿಲ್ಪಾ ರವಿಯವರ ಮನೆಗೆ ದಿಢೀರ್ ಭೇಟಿ ನೀಡಿದ್ದಾರೆ. ಈ ವೇಳೆ ಭಾರೀ ಮಟ್ಟದಲ್ಲಿ ಸ್ಟೈಲೀಶ್ ಸ್ಟಾರ್​ ಅಭಿಮಾನಿಗಳು ಸೇರಿದ್ದರಿಂದ ಸಾಮಾನ್ಯ ಜನರಿಗೆ ತೀವ್ರ ತೊಂದರೆಯಾಗಿದೆ. ಅಲ್ಲದೇ ಟ್ರಾಫಿಕ್ ಕೂಡ ಉಂಟಾಗಿದ್ದು ಕೆಲಸದ ನಿಮಿತ್ತ ತೆರಳುವ ಚಾಲಕರಿಗೆ, ಸವಾರರಿಗೆ ತೊಂದರೆಯಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: ಪೆನ್​ಡ್ರೈವ್​ ಕೇಸ್​ಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್.. ಜಿಲ್ಲಾ ಕಾರಾಗೃಹಕ್ಕೆ ಬಿಜೆಪಿ ಮುಖಂಡ ಶಿಫ್ಟ್‌

ಇದನ್ನೂ ಓದಿ: ಇವಳು ತಾಯಿಯೋ, ರಾಕ್ಷಸಿಯೋ.. ಪುಟ್ಟ ಬಾಲಕಿ ಮೇಲೆ ಯಮನಂತೆ ವರ್ತಿಸಿದ ಅಮ್ಮ

ನಾಳೆ ಅಂದರೆ ಮೇ 13ರಂದು ಆಂಧ್ರಪ್ರದೇಶದ 25 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಹೀಗಾಗಿ ಕೊನೆಯದಾಗಿ ಕಾಂಪೇನ್ ಮಾಡಲೆಂದು ಅಲ್ಲು ಅರ್ಜುನ್ ನಂದ್ಯಾಲದಲ್ಲಿನ ಶಾಸಕ ಶಿಲ್ಪಾ ರವಿ ನಿವಾಸಕ್ಕೆ ತೆರಳಿದ್ದಾರೆ. ಅನುಮತಿ ಪಡೆಯದೇ ತೆರಳಿದ್ದರಿಂದ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಟೂಟೌನ್​ ಪೊಲೀಸ್​ ಠಾಣೆಯ ಪೊಲೀಸರು ನಟ ಅಲ್ಲು ಅರ್ಜುನ್ ಹಾಗೂ ಶಾಸಕ ಶಿಲ್ಪಾ ರವಿ ವಿರುದ್ಧ ಕೇಸ್ ದಾಖಲು ಮಾಡಿದ್ದಾರೆ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪುಷ್ಪಾ-2 ಕ್ರೇಜ್ ಹೊತ್ತಲ್ಲೇ ಐಕಾನ್​ ಸ್ಟಾರ್​ಗೆ ಬಿಗ್ ಶಾಕ್​​.. ಅಲ್ಲು ಅರ್ಜುನ್​ ವಿರುದ್ಧ ಕೇಸ್ ದಾಖಲು

https://newsfirstlive.com/wp-content/uploads/2024/05/ALLU_ARJUN.jpg

    ಅಲ್ಲು ಅರ್ಜುನ್​ ವಿರುದ್ಧ ಟೂಟೌನ್​ ಪೊಲೀಸ್ರು ಕೇಸ್ ಹಾಕಿದ್ದೇಕೆ?​

    ಪುಷ್ಪಾ ಭಾಗ-1 ಸಕ್ಸಸ್​ ಮೂಡ್​ನಲ್ಲಿರುವ ನಟ ಅಲ್ಲು ಅರ್ಜುನ್

    ರಾಜಕಾರಣಿ ಮನೆಗೆ ಭೇಟಿ ನೀಡಿದ್ದಕ್ಕೆ ಕೇಸ್ ದಾಖಲು ಆಯ್ತಾ?

ಪುಷ್ಪಾ-2 ರಿಲೀಸ್​ ಕ್ರೇಜ್​ನಲ್ಲಿರೋ ಐಕಾನ್​ ಸ್ಟಾರ್ ಅಲ್ಲು ಅರ್ಜುನ್​ಗೆ ಆಂಧ್ರ ಪ್ರದೇಶ ಪೊಲೀಸರು ಬಿಗ್ ಶಾಕ್ ನೀಡಿದ್ದು, ಅಲ್ಲು ಅರ್ಜುನ್ ವಿರುದ್ಧ ಕೇಸ್​ ದಾಖಲು ಮಾಡಿದ್ದಾರೆ.

ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿ ಇದ್ದರೂ ಪೊಲೀಸರ ಅನುಮತಿ ಪಡೆಯದೇ ಅಲ್ಲು ಅರ್ಜುನ್ ಅವರು ತಮ್ಮ ಸ್ನೇಹಿತ ಹಾಗೂ ವೈಎಸ್​​ಆರ್​​ಸಿಪಿ ಶಾಸಕ ಶಿಲ್ಪಾ ರವಿಯವರ ಮನೆಗೆ ಭೇಟಿ ನೀಡಿದ್ದಾರೆ. ಆಂಧ್ರಪ್ರದೇಶದ ನಂದ್ಯಾಲದಲ್ಲಿರುವ ಶಿಲ್ಪಾ ರವಿಯವರ ಮನೆಗೆ ದಿಢೀರ್ ಭೇಟಿ ನೀಡಿದ್ದಾರೆ. ಈ ವೇಳೆ ಭಾರೀ ಮಟ್ಟದಲ್ಲಿ ಸ್ಟೈಲೀಶ್ ಸ್ಟಾರ್​ ಅಭಿಮಾನಿಗಳು ಸೇರಿದ್ದರಿಂದ ಸಾಮಾನ್ಯ ಜನರಿಗೆ ತೀವ್ರ ತೊಂದರೆಯಾಗಿದೆ. ಅಲ್ಲದೇ ಟ್ರಾಫಿಕ್ ಕೂಡ ಉಂಟಾಗಿದ್ದು ಕೆಲಸದ ನಿಮಿತ್ತ ತೆರಳುವ ಚಾಲಕರಿಗೆ, ಸವಾರರಿಗೆ ತೊಂದರೆಯಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: ಪೆನ್​ಡ್ರೈವ್​ ಕೇಸ್​ಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್.. ಜಿಲ್ಲಾ ಕಾರಾಗೃಹಕ್ಕೆ ಬಿಜೆಪಿ ಮುಖಂಡ ಶಿಫ್ಟ್‌

ಇದನ್ನೂ ಓದಿ: ಇವಳು ತಾಯಿಯೋ, ರಾಕ್ಷಸಿಯೋ.. ಪುಟ್ಟ ಬಾಲಕಿ ಮೇಲೆ ಯಮನಂತೆ ವರ್ತಿಸಿದ ಅಮ್ಮ

ನಾಳೆ ಅಂದರೆ ಮೇ 13ರಂದು ಆಂಧ್ರಪ್ರದೇಶದ 25 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಹೀಗಾಗಿ ಕೊನೆಯದಾಗಿ ಕಾಂಪೇನ್ ಮಾಡಲೆಂದು ಅಲ್ಲು ಅರ್ಜುನ್ ನಂದ್ಯಾಲದಲ್ಲಿನ ಶಾಸಕ ಶಿಲ್ಪಾ ರವಿ ನಿವಾಸಕ್ಕೆ ತೆರಳಿದ್ದಾರೆ. ಅನುಮತಿ ಪಡೆಯದೇ ತೆರಳಿದ್ದರಿಂದ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಟೂಟೌನ್​ ಪೊಲೀಸ್​ ಠಾಣೆಯ ಪೊಲೀಸರು ನಟ ಅಲ್ಲು ಅರ್ಜುನ್ ಹಾಗೂ ಶಾಸಕ ಶಿಲ್ಪಾ ರವಿ ವಿರುದ್ಧ ಕೇಸ್ ದಾಖಲು ಮಾಡಿದ್ದಾರೆ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More