/newsfirstlive-kannada/media/post_attachments/wp-content/uploads/2024/08/darshan-1-1.jpg)
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್​ಗೆ ಜೈಲಿನಲ್ಲಿ ರಾಜಾತಿಥ್ಯ ನೀಡುತ್ತಿರುವ ಎನ್ನಲಾದ ಮತ್ತೊಂದು ಫೋಟೋ ಇದೀಗ ನ್ಯೂಸ್​​ಫಸ್ಟ್​ಗೆ ಸಿಕ್ಕಿದೆ. ಸದ್ಯ ಇದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ದರ್ಶನ್​​ ಬೆಡ್​ ಮೇಲೆ ಕೈದಿ ಜೊತೆ ಕುಳಿತುಕೊಂಡಿರುವ ಫೋಟೋ ಇದೀಗ ಎಲ್ಲೆಡೆ ಹರಿದಾಡುತ್ತಿದೆ. ​​ಕೈಯಲ್ಲಿ ಸಿಗರೇಟ್ ಸೇದುತ್ತಾ ಬೆಡ್​ ಮೇಲೆ ಕುಳಿತಿರುವ ನಟನ ಮತ್ತೊಂದು ಫೋಟೋ ಇದಾಗಿದೆ. ಸದ್ಯ ಪರಪ್ಪನ ಅಗ್ರಹಾರ ಜೈಲು ಕೈದಿಗಳು ಮತ್ತು ಆರೋಪಿಗಳಿಗೆ ಅರಮನೆಯಾ? ಅಥವಾ ಕಾರಾಗೃಹವಾ ಎಂಬ ಅನುಮಾನಕ್ಕೆ ಮತ್ತಷ್ಟು ಕುಮ್ಮಕ್ಕು ನೀಡಿದೆ.
ಇದನ್ನೂ ಓದಿ: BREAKING: ದರ್ಶನ್​ಗೆ ಆತಿಥ್ಯ ನೀಡಿದ್ದಕ್ಕೆ 7 ಅಧಿಕಾರಿಗಳು ಅಮಾನತು
ಕಳೆದ ಮೂರು ತಿಂಗಳಿನಿಂದ ದರ್ಶನ್​​ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಆದರೆ ನಿನ್ನೆ ದರ್ಶನ್​ಗೆ ಜೈಲಿನಲ್ಲಿ ರಾಜಾತಿಥ್ಯ ನೀಡುತ್ತಿರುವ ದೃಶ್ಯ ಸಮೇತ ಸುದ್ದಿ ಬೆಳಕಿಗೆ ಬಂದಿದೆ. ಚೇರ್​ ಮೇಲೆ ಕುಳಿತುಕೊಂಡು ದರ್ಶನ್​ ಕೈಯಲ್ಲಿ ಟೀ ಕಪ್​ ಮತ್ತು ಸಿಗರೇಟು ಸೇದುತ್ತಾ ರೌಡಿಗಳೊಂದಿಗೆ ಮಾತನಾಡುವ ಫೋಟೋವನ್ನು ಮಾಧ್ಯಮಗಳು ಬಿತ್ತರಿಸಿದ್ದವು. ವಿಲ್ಸನ್​ ಗಾರ್ಡನ್​​ ​ ನಾಗ, ಕುಳ್ಳ ಸೀನ ಮತ್ತು ಮ್ಯಾನೇಜರ್​ ನಾಗರಾಜ್ ಜೊತೆಗೆ ಹರಟೆ ಹೊಡೆಯುತ್ತಿರುವ ಫೋಟೋ ವೈರಲ್​ ಆಗಿತ್ತು.
/newsfirstlive-kannada/media/post_attachments/wp-content/uploads/2024/08/darshan-video-call2.jpg)
ಇದಾದ ಬಳಿಕ ರೌಡಿ ಶೀಟರ್​ ಜೊತೆಗೆ ವಿಡಿಯೋ ಕಾಲ್​ನಲ್ಲಿ ಮಾತನಾಡುತ್ತಿರುವ ದೃಶ್ಯವು ವೈರಲ್​ ಆಗಿತ್ತು. ಆದರೀಗ ಬೆಡ್​ ಮೇಲೆ ಕೈದಿ ಜೊತೆ ಕುಳಿತುಕೊಂಡಿರುವ ಫೋಟೋ ಹರಿದಾಡುತ್ತಿದೆ. ಕೈಯಲ್ಲಿ ಸಿಗರೇಟು ಸೇದುತ್ತಾ ಆರಾಮಾಗಿ ಜೈಲಿನಲ್ಲಿ ಎಂಜಾಯ್​ ಮಾಡುತ್ತಿರುವ ದೃಶ್ಯ ಸಿಕ್ಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us