ಅರ್ಜುನ್ ಶಿರೂರು ಗುಡ್ಡ ಕುಸಿತದಲ್ಲಿ ಸಿಲುಕಿರೋದು ಕನ್ಫರ್ಮ್​​.. CCTV ದೃಶ್ಯದಲ್ಲಿ ಸೆರೆ

author-image
AS Harshith
Updated On
ಅರ್ಜುನ್ ಶಿರೂರು ಗುಡ್ಡ ಕುಸಿತದಲ್ಲಿ ಸಿಲುಕಿರೋದು ಕನ್ಫರ್ಮ್​​.. CCTV ದೃಶ್ಯದಲ್ಲಿ ಸೆರೆ
Advertisment
  • ಇಸ್ರೋದ ಉಪಗ್ರಹ ಸಹಾಯದಿಂದ ಅರ್ಜುನ್​ಗಾಗಿ ಹುಡುಕಾಟ
  • ಅರ್ಜುನ್​ ಶಿರೂರು ಗುಡ್ಡ ಕುಸಿತದಲ್ಲಿ ಸಿಲುಕಿರೋದು ಪಕ್ಕಾ
  • ಇಂದಿಗೆ 8 ದಿನ ಕಳೆದರೂ ಅರ್ಜುನ್​ಗಾಗಿ ಮುಂದುವರೆದ ಹುಡುಕಾಟ

ಅಂಕೋಲಾ: ಶಿರೂರು ಗುಡ್ಡ ಪ್ರಕರಣದಲ್ಲಿ ಕೋಝಿಕ್ಕೋಡ್‌ ಮೂಲದ ಅರ್ಜುನ್ ನಾಪತ್ತೆಯಾಗಿದ್ದಾರೆ ಎನ್ನಲಾಗಿತ್ತು. ಲಾರಿ ಚಾಲಕನಾಗಿರುವ ಅರ್ಜುನ್​ಗಾಗಿ ಹುಡುಕಾಟವು ನಡೆಯುತ್ತಿದೆ. ಸದ್ಯ ಪೊಲೀಸರು ಗುಡ್ಡ ಕುಸಿತದ ವೇಳೆ ಅರ್ಜುನ್​ ಆ ಸ್ಥಳದಲ್ಲಿದ್ದರು ಎಂಬ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿದ್ದಾರೆ.

ಕಾರವಾರ ಎಸ್ಪಿ ಎಂ ನಾರಾಯಣರವರು ಮಾತನಾಡಿದ್ದು, ಶಿರೂರಿನಲ್ಲಿ ಭೂಕುಸಿತದಲ್ಲಿ ಅರ್ಜುನ್​ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಲಾರಿಯ ದೃಶ್ಯಾವಳಿಗಳು ಸಿಕ್ಕಿವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಜೆಟ್​ನಲ್ಲಿ ಕೃಷಿಗೆ 1.52 ಲಕ್ಷ ಕೋಟಿ ಮೀಸಲು! ರೈತರಿಗೆ ಇದೇನಾ ಬಂಪರ್​ ಆಫರ್​?

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅರ್ಜುನ್ ಚಲಾಯಿಸುತ್ತಿದ್ದ ಲಾರಿ ಮೇಲೆ ಮಣ್ಣು ಕುಸಿದಿದೆ. ಮಂಗಳವಾರ ಬೆಳಗ್ಗೆ 8:30ರ ಸುಮಾರಿಗೆ ಅಪಘಾತ ಸಂಭವಿಸಿದೆ. ಸದ್ಯ ಪೊಲೀಸರಿಗೆ ಸಿಕ್ಕ ದೃಶ್ಯಾವಳಿ ಪ್ರಕಾರ ಅರ್ಜುನ್​ ಚಲಾಯಿಸುತ್ತಿದ್ದ ಲಾರಿ ಮಣ್ಣಿನಡಿಯಲ್ಲಿ ಸಿಲುಕಿದೆ ಎನ್ನಲಾಗುತ್ತಿದೆ.

publive-image

ಇದನ್ನೂ ಓದಿ: Budget2024: ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌.. ಎಜುಕೇಷನ್ ಲೋನ್ ಎಷ್ಟು ಸಿಗುತ್ತೆ ಗೊತ್ತಾ?

40 ಜನರ ಸೇನಾ ತಂಡ ಅರ್ಜುನ್​ ಪತ್ತೆಗಾಗಿ ನಿರಂತರ ಕೆಲಸ ಮಾಡುತ್ತಿದ್ದಾರೆ. ಅರ್ಜುನ್ ಮತ್ತು ಲಾರಿ ಗಂಗಾವಳಿ ನದಿಯ ಕೆಸರು ಮತ್ತು ಮಣ್ಣಿನಡಿಯಲ್ಲಿರಬಹುದೆಂಬ ಸೂಚನೆಯನ್ನು ಸೇನೆ ನೀಡಿದೆ. ಆಧುನಿಕ ರಾಡಾರ್ ವ್ಯವಸ್ಥೆಗಳು ಮತ್ತು ಇಸ್ರೋದ ಉಪಗ್ರಹ ಚಿತ್ರಣಗಳ ಸಹಾಯದಿಂದ ಅರ್ಜುನ್​ಗಾಗಿ ಹುಡುಕಾಟ ನಡೆಯುತ್ತಿದೆ. ಇಂದಿಗೆ 8 ದಿನ ಕಳೆದರು 3 ಮೃತದೇಹಗಳಿಗಾಗಿ ಹುಡುಕಾಟ ನಡೆಯುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment