newsfirstkannada.com

BJP ಅಂದ್ರೆ ಬ್ರಾಹ್ಮಣರ ಪಕ್ಷ ಅಂತಿದ್ರು.. ಸಂಕಲ್ಪ ಮತ್ತು ಸವಾಲುಗಳ ಬಗ್ಗೆ ಮನಬಿಚ್ಚಿ ಮಾತನಾಡಿದ ಬಿ ವೈ ವಿಜಯೇಂದ್ರ

Share :

Published April 24, 2024 at 1:13pm

    ನನ್ನ ಮುಂದಿನ ಗುರಿ ಸ್ವಷ್ಟವಾಗಿದೆ ಎಂಬ ವಿಜಯೇಂದ್ರ

    ಬಿ ವೈ ವಿಜಯೇಂದ್ರ ಅವರಿಗಿರುವ ಸವಾಲುಗಳೇನು ಗೊತ್ತಾ?

    ಹಳೇ ಮೈಸೂರು ಭಾಗಕ್ಕೆ ಇಷ್ಟೇಕೆ ಸಮಯವನ್ನು ಕೊಡುತ್ತಿದ್ದಾರೆ?

ಭಾರತೀಯ ಜನತಾ ಪಾರ್ಟಿ ಅಂದ್ರೆ ಬ್ರಾಹ್ಮಣರ ಪಕ್ಷಾ ಅಂತಿದ್ರು. ಭಾರತೀಯ ಪಕ್ಷ ಅಂದ್ರೆ ಮುಂದುಳಿದ ವರ್ಗಗಳಿಗೆ ಸೇರಿದ ಪಕ್ಷಾ ಅಂತ ಹೇಳ್ತಾ ಇದ್ರು. ನಗರಕ್ಕೆ ಸೇರಿರತಕ್ಕಂತ ಪಾರ್ಟಿಯನ್ನ ಇವತ್ತು ಹಳ್ಳಿ ಹಳ್ಳಿಗೆ ತಲುಪಿಸಿದ ಕೆಲಸ ಮಾಡೋದರಲ್ಲಿ ಯಡಿಯೂರಪ್ಪನವರು ಯಶಸ್ವಿಯಾಗಿದ್ದಾರೆ ಅಂತಂದ್ರೆ ಅದು ಯಡಿಯೂರಪ್ಪನವರ ಅವೀರತ ಹೋರಾಟ. ಅದೆಷ್ಟೋ ಪಾದಾಯಾತ್ರೆಗಳು, ಸೈಕಲ್​ ಜಾಥಾ, ಸತ್ಯಾಗ್ರಹಗಳು, ಇವೆಲ್ಲದರ ನಡುವೆ ಹಿರಿಯರ ಒಂದು ಶ್ರಮ, ಕಾರ್ಯಕರ್ತರ ಪರಿಶ್ರಮ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ.

ಇದನ್ನೂ ಓದಿ: ಡಿಕೆಶಿ ಸಸ್ಯಹಾರಿಯಾಗಲು ಕಾರಣ ಯಾರು ಗೊತ್ತಾ? ತಿಹಾರ್​ ಜೈಲಿಂದ ಬಂದ ಮೇಲೆ ಈ ನಿರ್ಣಯ ತೆಗೆದುಕೊಂಡಿದ್ದೇಕೆ?

ತಂದೆಗೆ ಹೋಳಿಕೆ ಮಾಡಿದ್ರೆ ವಿಜಯೇಂದ್ರ ಅವರಿಗಿರುವ ಸವಾಲುಗಳೇನು?

ನ್ಯೂಸ್​ಫಸ್ಟ್​ ಜೊತೆಗೆ ಮಾತನಾಡಿದ ಬಿ ವೈ ವಿಜಯೇಂದ್ರ, ಹಳೇ ಮೈಸೂರು ಭಾಗ. ವಿಶೇಷವಾಗಿ ನಾನು ಯಾಕೆ ಇಷ್ಟು ಸಮಯವನ್ನು ಕೊಡುತ್ತಿದ್ದೇನೆ. ನಾನು ಕೂಡ ಸಮಾಲಾಗಿ ತೆಗೆದುಕೊಂಡಿದ್ದೇನೆ. ನನ್ನ ಕಾರ್ಯಕರ್ತರು ಕೂಡ ಸವಾಲಾಗಿ ತೆಗೆದುಕೊಂಡಿದ್ದೇನೆ. ಮೈಸೂರು ಲೋಕ ಸಭಾ ಕ್ಷೇತ್ರ, ಕೊಡಗು ಲೋಕಸಭಾ ಕ್ಷೇತ್ರ, ಇವೆರಡು ಕ್ಷೇತ್ರ ಬಿಜೆಪಿ ಗೆಲ್ಲಲೇಬೇಕು ಎಂಬ ಛಲವನ್ನು ತೊಟ್ಟು ಕಾರ್ಯಕರ್ತರು ಶ್ರಮವನ್ನು ಹಾಕ್ತಾ ಇದ್ದಾರೆ. ಮತ್ತೊಂದು ಕಡೆ ಜೆಡಿಎಸ್​ ಪಕ್ಷದ ಸಹಕಾರನು ಇದೆ. ಮಾನ್ಯ ದೇವೇಗೌಡರು ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನ ಮಂತ್ರಿ ಆಗಬೇಕು ಎಂಬ ಸದುದ್ದೇಶ ಇಟ್ಟುಕೊಂಡಿದ್ದಾರೆ. ನನ್ನ ಮುಂದಿನ ಗುರು ಸ್ಪಷ್ಟವಾಗಿದೆ. ಚುನಾವಣೆಯಲ್ಲಿ ಗೆಲ್ಲಬೇಕು, ಪಕ್ಷವನ್ನ ಮುನ್ನಡೆಸಬೇಕು. ಹಳೇ ಮೈಸೂರು ಭಾಗದಲ್ಲಿ ಶಕ್ತಿ ಸ್ವಲ್ಪ ಕಡಿಮೆ ಇದೆ. ಆ ಭಾಗದಲ್ಲೂ ಹೆಚ್ಚು ಒತ್ತುಕೊಡಬೇಕಾಗಿದೆ. ಮುಂದಿನ ದಿನಗಳಲ್ಲಿ ಬಿಜೆಪಿಯನ್ನ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ತರಬೇಕು ಎಂಬ ಸಂಕಲ್ಪ ಇಟ್ಟುಕೊಂಡು ಹೊರಟಿದ್ದೇನೆ ಎಂದು ಬಿವೈ ವಿಜಯೇಂದ್ರ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BJP ಅಂದ್ರೆ ಬ್ರಾಹ್ಮಣರ ಪಕ್ಷ ಅಂತಿದ್ರು.. ಸಂಕಲ್ಪ ಮತ್ತು ಸವಾಲುಗಳ ಬಗ್ಗೆ ಮನಬಿಚ್ಚಿ ಮಾತನಾಡಿದ ಬಿ ವೈ ವಿಜಯೇಂದ್ರ

https://newsfirstlive.com/wp-content/uploads/2024/04/B-Y-vijayendra.jpg

    ನನ್ನ ಮುಂದಿನ ಗುರಿ ಸ್ವಷ್ಟವಾಗಿದೆ ಎಂಬ ವಿಜಯೇಂದ್ರ

    ಬಿ ವೈ ವಿಜಯೇಂದ್ರ ಅವರಿಗಿರುವ ಸವಾಲುಗಳೇನು ಗೊತ್ತಾ?

    ಹಳೇ ಮೈಸೂರು ಭಾಗಕ್ಕೆ ಇಷ್ಟೇಕೆ ಸಮಯವನ್ನು ಕೊಡುತ್ತಿದ್ದಾರೆ?

ಭಾರತೀಯ ಜನತಾ ಪಾರ್ಟಿ ಅಂದ್ರೆ ಬ್ರಾಹ್ಮಣರ ಪಕ್ಷಾ ಅಂತಿದ್ರು. ಭಾರತೀಯ ಪಕ್ಷ ಅಂದ್ರೆ ಮುಂದುಳಿದ ವರ್ಗಗಳಿಗೆ ಸೇರಿದ ಪಕ್ಷಾ ಅಂತ ಹೇಳ್ತಾ ಇದ್ರು. ನಗರಕ್ಕೆ ಸೇರಿರತಕ್ಕಂತ ಪಾರ್ಟಿಯನ್ನ ಇವತ್ತು ಹಳ್ಳಿ ಹಳ್ಳಿಗೆ ತಲುಪಿಸಿದ ಕೆಲಸ ಮಾಡೋದರಲ್ಲಿ ಯಡಿಯೂರಪ್ಪನವರು ಯಶಸ್ವಿಯಾಗಿದ್ದಾರೆ ಅಂತಂದ್ರೆ ಅದು ಯಡಿಯೂರಪ್ಪನವರ ಅವೀರತ ಹೋರಾಟ. ಅದೆಷ್ಟೋ ಪಾದಾಯಾತ್ರೆಗಳು, ಸೈಕಲ್​ ಜಾಥಾ, ಸತ್ಯಾಗ್ರಹಗಳು, ಇವೆಲ್ಲದರ ನಡುವೆ ಹಿರಿಯರ ಒಂದು ಶ್ರಮ, ಕಾರ್ಯಕರ್ತರ ಪರಿಶ್ರಮ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ.

ಇದನ್ನೂ ಓದಿ: ಡಿಕೆಶಿ ಸಸ್ಯಹಾರಿಯಾಗಲು ಕಾರಣ ಯಾರು ಗೊತ್ತಾ? ತಿಹಾರ್​ ಜೈಲಿಂದ ಬಂದ ಮೇಲೆ ಈ ನಿರ್ಣಯ ತೆಗೆದುಕೊಂಡಿದ್ದೇಕೆ?

ತಂದೆಗೆ ಹೋಳಿಕೆ ಮಾಡಿದ್ರೆ ವಿಜಯೇಂದ್ರ ಅವರಿಗಿರುವ ಸವಾಲುಗಳೇನು?

ನ್ಯೂಸ್​ಫಸ್ಟ್​ ಜೊತೆಗೆ ಮಾತನಾಡಿದ ಬಿ ವೈ ವಿಜಯೇಂದ್ರ, ಹಳೇ ಮೈಸೂರು ಭಾಗ. ವಿಶೇಷವಾಗಿ ನಾನು ಯಾಕೆ ಇಷ್ಟು ಸಮಯವನ್ನು ಕೊಡುತ್ತಿದ್ದೇನೆ. ನಾನು ಕೂಡ ಸಮಾಲಾಗಿ ತೆಗೆದುಕೊಂಡಿದ್ದೇನೆ. ನನ್ನ ಕಾರ್ಯಕರ್ತರು ಕೂಡ ಸವಾಲಾಗಿ ತೆಗೆದುಕೊಂಡಿದ್ದೇನೆ. ಮೈಸೂರು ಲೋಕ ಸಭಾ ಕ್ಷೇತ್ರ, ಕೊಡಗು ಲೋಕಸಭಾ ಕ್ಷೇತ್ರ, ಇವೆರಡು ಕ್ಷೇತ್ರ ಬಿಜೆಪಿ ಗೆಲ್ಲಲೇಬೇಕು ಎಂಬ ಛಲವನ್ನು ತೊಟ್ಟು ಕಾರ್ಯಕರ್ತರು ಶ್ರಮವನ್ನು ಹಾಕ್ತಾ ಇದ್ದಾರೆ. ಮತ್ತೊಂದು ಕಡೆ ಜೆಡಿಎಸ್​ ಪಕ್ಷದ ಸಹಕಾರನು ಇದೆ. ಮಾನ್ಯ ದೇವೇಗೌಡರು ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನ ಮಂತ್ರಿ ಆಗಬೇಕು ಎಂಬ ಸದುದ್ದೇಶ ಇಟ್ಟುಕೊಂಡಿದ್ದಾರೆ. ನನ್ನ ಮುಂದಿನ ಗುರು ಸ್ಪಷ್ಟವಾಗಿದೆ. ಚುನಾವಣೆಯಲ್ಲಿ ಗೆಲ್ಲಬೇಕು, ಪಕ್ಷವನ್ನ ಮುನ್ನಡೆಸಬೇಕು. ಹಳೇ ಮೈಸೂರು ಭಾಗದಲ್ಲಿ ಶಕ್ತಿ ಸ್ವಲ್ಪ ಕಡಿಮೆ ಇದೆ. ಆ ಭಾಗದಲ್ಲೂ ಹೆಚ್ಚು ಒತ್ತುಕೊಡಬೇಕಾಗಿದೆ. ಮುಂದಿನ ದಿನಗಳಲ್ಲಿ ಬಿಜೆಪಿಯನ್ನ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ತರಬೇಕು ಎಂಬ ಸಂಕಲ್ಪ ಇಟ್ಟುಕೊಂಡು ಹೊರಟಿದ್ದೇನೆ ಎಂದು ಬಿವೈ ವಿಜಯೇಂದ್ರ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More