/newsfirstlive-kannada/media/post_attachments/wp-content/uploads/2024/10/Lawrence.jpg)
ಎನ್ಸಿಪಿ ನಾಯಕ ಮತ್ತು ಮಾಜಿ ಸಚಿವ ಬಾಬಾ ಸಿದ್ದಿಕಿಯ ಹತ್ಯೆಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿದೆ. ಸದ್ಯ ಲಾರೆನ್ಸ್ ಬಿಷ್ಣೋಯ್ನನ್ನು ಗುಜರಾತ್ ಸಬರಮತಿ ಆಶ್ರಮದಲ್ಲಿ ಇರಿಸಲಾಗಿದೆ.
ಲಾರೆನ್ಸ್ ಬಿಷ್ಣೋಯ್ ಹೆಸರಿನಲ್ಲಿ ಅನೇಕ ಪ್ರಕರಣಗಳಿವೆ. ಈ ಹಿಂದೆ ಸಲ್ಮಾನ್ ಖಾನ್ ಮತ್ತು ದಾವೂದ್ ಗ್ಯಾಂಗ್ಗೆ ಸಹಾಯ ಮಾಡುವವರು ತಮ್ಮ ಖಾತೆಗಳನ್ನು ಇಟ್ಟುಕೊಳ್ಳಬೇಕು ಎಂದು ಬೆದರಿಕೆ ಹಾಕಿದ್ದನು. ಆ ಬಳಿಕ ಬಾಬಾ ಸಿದ್ಧಿಕಿ ಮತ್ತು ಸಲ್ಮಾನ್ ಖಾನ್ ಜೊತೆಗಿನ ಆಪ್ತತೆ ಕಂಡು ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಲಾರೆನ್ಸ್ ಬಿಷ್ಮೋಯ್ ಕೈಯಲ್ಲಿ ಪಂಜಾಬ್ನ ಗಾಯಕ ಸಿಧು ಮೂಸೆವಾಲಾ, ಕರ್ಣಿ ಸೇನಾ ಅಧ್ಯಕ್ಷ ಸುಖದೇವ್ ಸಿಂಗ್ ಗೋಗಮೆಡ ಹತ್ಯೆಯಾಗಿದ್ದಾರೆ. ಇದೀಗ ಬಾಬಾ ಸಿದ್ಧಿಕಿ ಕೂಡ ಸಾವನ್ನಪ್ಪಿದ್ದಾರೆ. ಸದ್ಯ ಲಾರೆನ್ಸ್ ಗ್ಯಾಂಗ್ನಲ್ಲಿ ದೇಶ ಮತ್ತು ವಿದೇಶದಲ್ಲಿ ಸುಮಾರು 700ಕ್ಕೂ ಹೆಚ್ಚು ಶೂಟರ್ಗಳು ಇದ್ದಾರೆ ಎಂದು ಹೇಳಲಾಗುತ್ತಿದೆ.
ಲಾರೆನ್ಸ್ ಬಿಷ್ಣೋಯ್ ಯಾರು? ಎಲ್ಲಿಯವನು?
ಲಾರೆನ್ಸ್ ಪಂಜಾಬ್ ಮೂಲದ ಫಿರೋಜ್ಪುದ ಜಿಲ್ಲೆಯವನು. ತಂದೆ ಹರಿಯಾಣ ಪೊಲೀಸ್ಠಾಣೆಯಲ್ಲಿ ಕಾನ್ಸ್ಸ್ಟೇಬಲ್ ಆಗಿದ್ದರು. ನಂತರ ಪೊಲೀಸ್ ನೌಕರಿ ತೊರೆದು ಕೃಷಿ ಆರಂಭಿಸಿದರು. ಲಾರೆನ್ಸ್ ಅಬೋಹರ್ ಜಿಲ್ಲೆಯಲ್ಲಿ ಪಿಯುಸಿವರೆಗೆ ಓದಿದ್ದಾರೆ. ಬಳಿಕ ಚಂಡೀಗಢದ ಡಿಎವಿ ಕಾಲೇಜಿನಲ್ಲಿ ಹೆಚ್ಚಿನ ಅಧ್ಯಯನ ಮಾಡಿದರು. ಬಳಿಕ ರಾಜಕೀಯದಲ್ಲಿ ಆಸಕ್ತಿ ಬೆಳೆಸಿಕೊಂಡನು.
ಇದನ್ನೂ ಓದಿ: ಬಾಬಾ ಸಿದ್ದಿಕಿ ಕೇಸ್ ಬೆನ್ನಲ್ಲೇ ಸಲ್ಮಾನ್ ಖಾನ್ ನಿವಾಸಕ್ಕೆ ಭಾರೀ ಭದ್ರತೆ; ಏನಿದು ಲಿಂಕ್..?
ರಾಜಕೀಯ ಆಸಕ್ತಿ ಹೊಂದಿದ್ದ ಲಾರೆನ್ಸ್ಗೆ ಕೆನಡಾ ಮೂಲದ ದರೋಡೆಕೋರ ಗೋಲ್ಡಿ ಬ್ರಾರ್ ಅಲಿಯಾಸ್ ಸತೀಂದರ್ಜೀತ್ ಸಿಂಗ್ ಪರಿಚಯವಾಗುತ್ತದೆ. ಇಬ್ಬರು ರಾಜಕೀಯ ವಿದ್ಯಾರ್ಥಿಯಾಗಿ ಗುರುತಿಸಿಕೊಳ್ಳುತ್ತಾರೆ.
ನಂತರ ಲಾರೆನ್ಸ್ ಎಲ್ಎಲ್ಬಿ ಮಾಡಲು ಮುಂದಾಗುತ್ತಾರೆ. ಈ ವೇಳೆ ಹಲ್ಲೆ, ಕೊಲೆ, ದರೋಡೆ ಸೇರಿದಂತೆ ಹಲವು ಪ್ರಕರಣಗಳು ಲಾರೆನ್ಸ್ ಮೇಲೆ ದಾಖಲಾಗುತ್ತದೆ. ಹಲವು ಪ್ರಕರಣಗಳು ಖುಲಾಸೆಗೊಂಡರು, ಇನ್ನೂ ಹಲವು ಪ್ರಕರಣಗಳು ನಡೆಯುತ್ತಿವೆ.
ಇದನ್ನೂ ಓದಿ: ಜೈಲಿನಲ್ಲಿ ಬೆಳಗ್ಗಿನ ಉಪಹಾರ ಸೇವಿಸದ ದರ್ಶನ್; ಟೆನ್ಷನ್ನಲ್ಲಿ ಸಿಬ್ಬಂದಿಗೆ ಇಟ್ಟ ಬೇಡಿಕೆ ಏನು..?
ಹಲವು ಪ್ರಕರಣದಲ್ಲಿ ಜೈಲಿಗೆ ಸೇರಿದ ಲಾರೆನ್ಸ್ಗೆ ಅದು ಲಾಭದಾಯಕ ವ್ಯವಹಾರವಾಯ್ತು. ಹೊರಗಡೆ ಮಾಡಲಾಗದಂತೆ ಕೆಲಸವನ್ನು ಜೈಲಿನ ಒಳಗೆ ಕುಳಿತು ಲಾರೆನ್ಸ್ ಮಾಡಲು ಮುಂದಾದನು. ಜೈಲಿನ ಒಳಕ್ಕೂ ಅನೇಕ ದರೋಡೆಕೋರರ ಪರಿಚಯವಾಗುತ್ತದೆ. ಜೊತೆಗೆ ಶಸ್ತ್ರಾಸ್ತ್ರ ಖರೀದಿ, ವ್ಯಾಪಾರಿಗಳ ಪರಿಚಯವಾಗುತ್ತದೆ. ಬಳಿಕ ತನ್ನ ಪ್ರಭಾವವನ್ನು ಸಾಬೀತು ಪಡಿಸಲು ಲಾರೆನ್ಸ್ ಕೊಲೆ ಮಾಡಲು ಮುಂದಾಗುತ್ತಾನೆ. ಲೂಧೀಯಾನದಲ್ಲಿ ಮುನ್ಸಿಪಲ್ ಕಾರ್ಪೋರೇಷನ್ ಚುನಾವಣೆ ವೇಳೆ ಸ್ಪರ್ಧಿಸಿದ್ದ ಅಭ್ಯರ್ಥಿಯನ್ನು ಕೊಲೆ ಮಾಡುತ್ತಾನೆ. 2014ರಲ್ಲಿ ರಾಜಸ್ಥಾನ ಪೊಲೀಸರ ಕೈಯಲ್ಲಿ ಬಂಧನವಾಗುತ್ತಾನೆ.
[caption id="attachment_91779" align="alignnone" width="800"] ಲಾರೆನ್ಸ್ ಬಿಷ್ಣೋಯ್ ಮತ್ತು ಗೋಲ್ಡ್ ಬ್ರಾರ್[/caption]
ತಿಹಾರ್ ಜೈಲಿಗೆ ಲಾರೆನ್ಸ್
ಲಾರೆನ್ಸ್ನನ್ನು 2021ರಲ್ಲಿ ತಿಹಾರ್ ಜೈಲಿಗೆ ಸ್ಥಳಾಂತರಿಸಲಾಯಿತು. ಅದಕ್ಕೂ ಮುನ್ನ ಜಸ್ವಿಂದರ್ ಸಿಂಗ್ ಅಲಿಯಾಸ್ ರಾಕಿ ಜೊತೆ ಸ್ನೇಹ ಬೆಳೆಯುತ್ತದೆ. 2016ರಲ್ಲಿ ರಾಜಿಯನ್ನು ಜೈಪಾಲ್ ಭುಲ್ಲರ್ ಹತ್ಯೆ ಮಾಡುತ್ತಾನೆ. 2020ರಲ್ಲಿ ಅದರ ಸೇಡು ತೀರಿಸಲು ಭುಲ್ಲರ್ನನ್ನು ಕೊಲೆ ಮಾಡುತ್ತಾನೆ.
ಬಳಿಕ ಪಂಜಾಬ್ ಗಾಯಕ ಸಿದ್ದು ಮೂಸೆವಾಲನನ್ನು ಕೊಲೆ ಮಾಡಲಾಗುತ್ತದೆ. ಮತ್ತೋರ್ವ ಪಂಜಾಬಿ ಗಾಯಕ ಗಿಪ್ಪಿ ಗ್ರೆವಾಲ್ ಮನೆ ಮೇಲೆ ಗುಂಡು ಹಾರಿಸಲಾಗುತ್ತದೆ. ಗಾಯಕನು ಸಲ್ಮಾನ್ ಖಾನ್ ಜೊತೆ ಸಂಬಂಧ ಹೊಂದಿದ್ದಾನೆಂದು ಗುಂಡು ಹಾರಿಸಲಾಗುತ್ತದೆ.
[caption id="attachment_10976" align="alignnone" width="800"] ಸಿಧು ಮೂಸೆವಾಲ[/caption]
700ಕ್ಕೂ ಅಧಿಕ ಶೂಟರ್ಗಳು!
ಲಾರೆನ್ಸ್ ಗ್ಯಾಂಗನ್ನು ಗೋಲ್ಡಿ ಬ್ರಾರ್ ಅಲಿಯಾಸ್ ಸತೀಂದರ್ಜೀತ್ ಮುನ್ನಡೆಸುತ್ತಿದ್ದಾರೆ. ಅತ್ತ ಕೆನಡಾ ಪೊಲೀಸರಿಗೆ ಇವರು ಬೇಕಾಗಿದ್ದಾರೆ. ಲಾರೆನ್ಸ್ ಗ್ಯಾಂಗ್ 700 ಶೂಟರ್ಗಳನ್ನು ಹೊಂದಿದ್ದು, 300 ಜನರು ಪಂಜಾಬ್ ರಾಜ್ಯದಲ್ಲಿ ಸಂಪರ್ಕ ಹೊಂದಿದ್ದಾರೆ ಎಂದು ಎನ್ಐಎ ಚಾರ್ಜ್ಶೀಟ್ನಲ್ಲಿ ತಿಳಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ